ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › Rohit ರವರ ಬ್ಲಾಗ್

ರಾಷ್ಟ್ರಕವಿ ಶ್ರೀ ಜಿ ಎಸ್ ಶಿವರುದ್ರಪ್ಪನವರಿಂದ ಕನ್ನಡಸಾಹಿತ್ಯ.ಕಾಂ ಪ್ರಾರಂಭಿಸಿದ ಸಹಿ-ಸಂಗ್ರಹಣಾ ಅಭಿಯಾನಕ್ಕೆ ಬೆಂಬಲ

December 15, 2006 - 12:53am — Rohit

ಕನ್ನಡಕ್ಕೆ ಶಕ್ತಿ ಎಂದರೆ, ನವ ವಿಚಾರಗಳಿಗೆ ಮನಸ್ಸುಗಳನ್ನು ತೆರೆದಿಟ್ಟಿರುವ, ವಿನೂತನವಾಗಿ ಯೋಚಿಸುವ, ಆಲೋಚನೆಗಳನ್ನು ಕ್ರಿಯಾಶೀಲತೆಯ ಮೂಲಕ ಸಾಕಾರಗೊಳಿಸುವ, ಕನ್ನಡಿಗರ ಧನಾತ್ಮಕ ಗುಣಗಳು.

ಈ ರೀತಿಯ ಒಂದು ವಿನೂತನ ಚಿಂತನೆ, ಕರ್ನಾಟಕ ರಾಜ್ಯದ ಎಲ್ಲಾ ಸೈಬರ್‍ ಕೆಫೆಗಳ ಗಣಕಗಳಲ್ಲಿ, ಶಾಲೆಗಳಲ್ಲಿನ ಗಣಕಗಳಲ್ಲಿ ಹಾಗೂ ಮಾರಾಟವಾಗುವ ಎಲ್ಲಾ ಗಣಕಗಳಲ್ಲೂ ಕನ್ನಡದ ತಂತ್ರಾಂಶ ತಜ್ಞರುಗಳಿಂದ, ಕನ್ನಡಕ್ಕಾಗಿಯೇ ರೂಪಿತವಾಗಿರುವ ಉಚಿತ ತಂತ್ರಾಂಶಗಳನ್ನು ಅನುಸ್ಥಾಪಿಸಲು, ಕನ್ನಡ ಜನರ ಅಧಿಕಾರ ಸ್ಥಾನವಾದ, ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಿಗೆ, ಕನ್ನಡ, ಸಂಸ್ಕೃತಿ, ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಖಾತೆಗಳ ಸಚಿವರುಗಳಿಗೆ ಹಾಗೂ, ಇಲಾಖಾ ಕಾರ್ಯದರ್ಶಿಗಳಿಗೆ, ಮನವಿಯೊಂದನ್ನು ಸಲ್ಲಿಸುವುದು. ಇದಕ್ಕೆ ಪೂರಕವಾಗಿ, ಕ್ರಿಯಾತ್ಮಕವಾದ 'ಸಹಿ-ಸಂಗ್ರಹಣಾ ಅಭಿಯಾನ'. ತಂತ್ರಜ್ಞಾನ ಕ್ಷೇತ್ರದ ಹೊರಗಿನ ಪ್ರಪಂಚದೊಂದಿಗೆ ಬೆರೆಯುವ, ಅರಿಯುವ ಹಾಗೂ ಗೌರವಿಸುವ, ಅವಕಾಶವನ್ನು ಒದಗಿಸಿಕೊಡುವ, ಸಾಧ್ಯತೆಗಳನ್ನು ತೆರೆದಿಟ್ಟಿರುವ ಈ ಅಭಿಯಾನದಲ್ಲಿ ತೊಡಗಿಸಿಕೊಂಡವರ ಯಾದಿ ಬೆಳೆಯುತ್ತಾ, ಅದರ ಫಲವಾಗಿ, ಮನವಿಯ ಆಶಯವು ಹೆಚ್ಚು ಹೆಚ್ಚು ಕನ್ನಡಿಗರನ್ನು ತಲುಪಿ, ಅದಕ್ಕೆ ಅಭೂತಪೂರ್ವ ಬೆಂಬಲವು ಹರಿದುಬಂದು, ಕನ್ನಡ ಸಮಾಜದಲ್ಲಿ ಎಚ್ಚರವೊಂದನ್ನು ಮೂಡಿಸುತ್ತಿದೆ.

ಕನ್ನಡಿಗರ ನೆಚ್ಚಿನ ರಾಷ್ಟ್ರಕವಿ, ಹಿರಿಯರೂ ಆದ ಶ್ರೀಯುತ ಜಿ ಎಸ್ ಶಿವರುದ್ರಪ್ಪನವರು, ಮನವಿಗೆ ಬೆಂಬಲವಾಗಿ ತಮ್ಮ ಸಹಿಯನ್ನು ಲಗತ್ತಿಸಿ, ಸ್ವಪ್ರೇರಣೆಯಿಂದ ತಮ್ಮ ಸುತ್ತಲಿದ್ದವರನ್ನು ಉದ್ದೇಶಿಸಿ, ಸಹಿ ಹಾಕುವಂತೆ ಕೇಳಿಕೊಂಡಿರುತ್ತಾರೆ.

ಕವಿ, ಪ್ರಾಧ್ಯಾಪಕ ಪ್ರೊ ದೊಡ್ಡರಂಗೇಗೌಡರು, ಬೆಂಗಳೂರು ಪ್ರೆಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ಎಂ. ಏ. ಪೊನ್ನಪ್ಪರವರು, ಇತ್ತೀಚೆಗೆ ಮನವಿ ಪತ್ರಕ್ಕೆ ತಮ್ಮ ಸಹಿ ಲಗತ್ತಿಸಿ, ಬೆಂಬಲ ಸೂಚಿಸಿರುವ ಇತರ ಪ್ರಮುಖರು.

ಇವರುಗಳನ್ನು ಕಂಡು, ವೈಯುಕ್ತಿಕವಾಗಿ ಅವರುಗಳಿಂದ ಸಹಿ ಸಂಗ್ರಹಿಸುತ್ತಾ ಇರುವ ಸ್ವಯಂಸೇವಕರುಗಳೂ, ವಿವಿಧ ತೆರನಾದಂತಹ ವೃತ್ತಿಗಳಲ್ಲಿರುವವರು. ತಮ್ಮ ಒತ್ತಡದ ಬದುಕಿನ ನಡುವೆ, ಕನ್ನಡದ ಮೇಲಿನ ಅಭಿಮಾನದಿಂದ ಹಾಗೂ ಕ್ರಿಯಾಶೀಲತೆಯ ಮೇಲಿನ ನಂಬುಗೆಯಿಂದ, ಈ ಕಾಯಕದಲ್ಲಿ ತೊಡಗಿಸಿಕೊಂಡವರುಗಳು. ಅಂತಹ ವಿನಯವಂತಿಕೆಯನ್ನು ಹುಟ್ಟುಹಾಕಿರುವುದು ಈ ಅಭಿಯಾನದ ನಿಜವಾದ ಸಾಧನೆ.

ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿಚ್ಛಿಸುವವರುಗಳು, ಮನವಿ ಪತ್ರವನ್ನು ಪಡೆಯಬಹುದಾದ ವಿಳಾಸ
http://www.kanlit.com/manavi.pdf

ವಂದನೆಗಳು

ಕನ್ನಡಸಾಹಿತ್ಯ.ಕಾಂ(http://www.kannadasaahithya.com,http://www.kanlit.com)ನ ಧ್ಯೇಯೋದ್ದೇಶಗಳಿಗೆ ನನ್ನನ್ನು ಸಮರ್ಪಿಸಿಕೊಂಡಿದ್ದೇನೆ

~.~
  • Rohit ರವರ ಬ್ಲಾಗ್
  • Login or register to post comments
  • 1027 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಸಾಹಿತ್ಯ.ಕಾಂ ಮನವಿಗೆ ಬೆಂಬಲ: ಇತ್ತೀಚಿನ ಬೆಳವಣಿಗೆಗಳು
  • ಕನ್ನಡಸಾಹಿತ್ಯ.ಕಾಂ ಮನವಿಗೆ ಪ್ರೊ|| ಯು ಆರ್‍ ರಾವ್ ರವರಿಂದ ಬೆಂಬಲ
  • ಕನ್ನಡಸಾಹಿತ್ಯ.ಕಾಂ ಹೊಸ ಆವೃತ್ತಿ ಹಾಗೂ ಹೊಸ ವಿಳಾಸ
  • ಕನ್ನಡಸಾಹಿತ್ಯ.ಕಾಂ ಅಭಿಯಾನಕ್ಕೆ ಮಹತ್ವದ ತಿರುವು - ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಕನ್ನಡಸಾಹಿತ್ಯ.ಕಾಂ ಮನವಿ....?
  • ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ ರಾಜ್ ಕುಟುಂಬದ ಬೆಂಬಲ, ಜೊತೆಗೆ...
Syndicate content

ಲೇಖಕರು

Rohit's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ನೇಹ ಬ೦ಧನ
  • ಓದಿದ್ದು ಕೇಳಿದ್ದು ನೋಡಿದ್ದು-51 (kann)ADIGA
  • "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
  • ದೊಡ್ಡವರ ದೊಡ್ಡತನ
  • ಕೈ ಕೊಟ್ಟ ಜೆಟ್ ಏರ್
  • ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
  • ಈ ರೀತಿ ನಿಮ್ಮ ಮನೇಲಿ ಆದರೆ ನೀವು ಏನು ಮಾಡ್ತೀರಿ?
  • ನೂರು ಕನ್ನಡಿಗಳ ದೇಗುಲ
  • ಇವತ್ತು ಕೈ ತೊಳೆಯುವ ದಿನವಂತೇ...!!!
  • ನಿಮ್ಮ ಬ್ರೌಸರ್‌ನಲ್ಲಿಯೇ ಬಿಸಿ ಬಿಸಿ ಸುದ್ದಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:34pm
  • uttanka
    ಉ: ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
    October 16, 2008 - 12:33pm
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:32pm
  • gurubaliga
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:29pm
  • mowna
    ಉ: ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
    October 16, 2008 - 12:10pm
  • ASHOKKUMAR
    ಉ: ಸೈಕಲ್ ರಿಕ್ಷಾಗೆ ಸೌರಶಕ್ತಿ
    October 16, 2008 - 12:05pm
  • gurubaliga
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:05pm
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:01pm
  • savithasr
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:00pm
  • gurubaliga
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 11:57am
ಇನ್ನಷ್ಟು
ಈಗಿನಂತೆ 15 ಸದಸ್ಯರು ಮತ್ತು 132 ಅತಿಥಿಗಳು ಆನ್ಲೈನ್ ಇರುವರು.


ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ

— --- ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator