ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Rohit ರವರ ಬ್ಲಾಗ್

'ಸಲ್ಲಾಪ' - ಕನ್ನಡಸಾಹಿತ್ಯ.ಕಾಂ ನಿಂದ ಮತ್ತೊಂದು ಪ್ರಥಮ

May 16, 2007 - 1:44am — Rohit

http://www.kannadasaahithya.com                                 http://www.kanlit.com

   ತನ್ನ ಆರಂಭಕಾಲದಿಂದಲೂ, ಕನ್ನಡಸಾಹಿತ್ಯ.ಕಾಂ, ಕನ್ನಡದಲ್ಲಿಯೇ ಅಲ್ಲದೇ, ಅಂತರ್ಜಾಲ ಮಾಧ್ಯಮದಲ್ಲಿನ, ಭಾರತೀಯ ಭಾಷಾ ವಲಯದಲ್ಲಿ ಹಲವು ಪ್ರಥಮಗಳನ್ನು ಯಶಸ್ವಿಯಾಗಿ ಸೃಷ್ಟಿಸುತ್ತಾ ಸಾಗಿದೆ. ಕನ್ನಡ ಸಾಹಿತ್ಯದ ಉತ್ಕೃಷ್ಟ ಕೃತಿಗಳನ್ನು ಅಂತರ್ಜಾಲದಲ್ಲಿ ಲೇಖಕರ ಅನುಮತಿಯೊಂದಿಗೆ, ಮೊಟ್ಟಮೊದಲ ಬಾರಿಗೆ ಒದಗಿಸಿದ್ದಲ್ಲದೆ, ಕನ್ನಡಕ್ಕೆ ಬೇಕಾದ ತಾಂತ್ರಿಕ ಪರಿಕರಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿ 'ಸಂಪೂರ್ಣ' - ಪ್ರಪ್ರಥಮ ಬಹುಭಾಷಾ, CMS ಅನ್ನು ರೂಪಿಸಿತ್ತು. ಕರ್ನಾಟಕದ ಮೂಲೆಮೂಲೆಗೂ, ಈ ಪರಿಕರಗಳ ಮಾಹಿತಿಯನ್ನು ತಲುಪಿಸುವ ನಿಟ್ಟಿನಲ್ಲಿ, ಬೆಂಬಲಿಗರ ಬಳಗಗಳನ್ನು ಹುಟ್ಟುಹಾಕಿ, ಸ್ಥಳೀಯ ಮಟ್ಟದಲ್ಲಿ ಅವು ಸಕ್ರಿಯವಾಗಿರುವಂತೆ, ಕಾರ್ಯಕ್ರಮಗಳನ್ನು ಕೂಡ ಕನ್ನಡಸಾಹಿತ್ಯ.ಕಾಂ ಬಳಗವು ಆಯೋಜಿಸುತ್ತಿದೆ. ಈಗಾಗಲೇ, ಹಾಸನ, ತುಮಕೂರು ನಗರಗಳಲ್ಲಿ ಬೆಂಬಲಿಗರ ಬಳಗದ ವತಿಯಿಂದ ವಿಚಾರಸಂಕಿರಣಗಳು ಯಶಸ್ವಿಯಾಗಿ ನಡೆದಿವೆ. ಇದಲ್ಲದೆ, ಕನ್ನಡದ ತಾಂತ್ರಿಕ ಪರಿಕರಗಳನ್ನು ಕನ್ನಡನಾಡಿನ ಪ್ರತಿಯೊಂದು ಶಾಲೆಯ ಗಣಕಯಂತ್ರಗಳಲ್ಲಿ, ಸೈಬರ್‍ ಕೆಫೆಗಳಲ್ಲಿ ಅನುಸ್ಥಾಪಿಸಲು, ಹಾಗು ಕನ್ನಡದಲ್ಲಿ ತಾಂತ್ರಿಕ ಪಠ್ಯವನ್ನು ಸಿದ್ಧಪಡಿಸಲು, ಸರ್ಕಾರದ ಗಮನಸೆಳೆಯುವ ದಿಸೆಯಲ್ಲಿ, ಮನವಿ ಪತ್ರವೊಂದನ್ನು ಅರ್ಪಿಸಲು, ಹಾಗೂ ಆ ಮನವಿ ಪತ್ರಕ್ಕೆ ನಾಡಿನ ಖ್ಯಾತನಾಮರ ಹಾಗೂ ಜನಸಾಮಾನ್ಯರ ಬೆಂಬಲ ಪಡೆಯಲು ಸಹಿ ಸಂಗ್ರಹಣಾ ಅಭಿಯಾನವನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಇದೀಗ, ಕನ್ನಡಸಾಹಿತ್ಯ.ಕಾಂ ತಾಣದ ಮೂಲಕ ಬೆಳಕು ಕಂಡ ಆರು ಸಣ್ಣಕಥೆಗಳ , ಹಾಗೂ ಕನ್ನಡಸಾಹಿತ್ಯ.ಕಾಂ ಲೇಖಕರ ಬಳಗದ ಶ್ರೀ ವಿಕ್ರಮ್ ಹತ್ವಾರರ ೪೦ ಕವಿತೆಗಳ ಸಂಕಲನವನ್ನು ಪ್ರಕಟಿಸುತ್ತಿದೆ, 'ಸಲ್ಲಾಪ' - ಎಂಬ ತನ್ನದೇ ಆದ ಪ್ರಕಟಣಾ ವಿಭಾಗದಡಿಯಲ್ಲಿ. 'ಕಟ್ ಸೀಟ್ ಮತ್ತು ಇತರ ಕಥೆಗಳು' ಹಾಗೂ 'ಇದೇ ಇರಬೇಕು ಕವಿತೆ' ಎಂಬ ಹೆಸರಿನ ಈ ಎರಡು ಪುಸ್ತಕಗಳು, ಬರುವ ಭಾನುವಾರ, ೨೦, ಮೇ, ೨೦೦೭ರಂದು, ಮೈಸೂರಿನಲ್ಲಿ ಬಿಡುಗಡೆಯಾಗಲಿವೆ.

ಕಾರ್ಯಕ್ರಮದ ವಿವರಗಳು ಇಂತಿವೆ:

ಕನ್ನಡ ಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಮೈಸೂರು.

(ಸಹಯೋಗ, ಸಹಕಾರ: ಎಸ್.ಟಿ.ಸಿ ಇಂಜಿನಿಯರಿಂಗ್ ಕಾಲೇಜು, ಮೈಸೂರು)

ಬೆಂಬಲಿಗರ ಬಳಗದ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭ.

ಉದ್ಘಾಟನೆ: ಶ್ರೀ ಚಿದಾನಂದ ಗೌಡ.

ಮುಖ್ಯ ಅತಿಥಿಗಳು ಹಾಗೂ ಪುಸ್ತಕ ಬಿಡುಗಡೆ : ಶ್ರೀ ಲಿಂಗದೇವರು ಹಳೆಮನೆ.

ಕೃತಿಗಳ ಬಗ್ಗೆ ಮಾತನಾಡುವವರು: ಶ್ರೀ ಸುಚೇಂದ್ರ ಪ್ರಸಾದ್

'ಸಲ್ಲಾಪ' (ಕನ್ನಡಸಾಹಿತ್ಯ.ಕಾಂ ಪ್ರಕಟಣಾ ವಿಭಾಗ) ದಡಿಯಲ್ಲಿ ಬಿಡುಗಡೆಯಾಗಲಿರುವ ಕೃತಿಗಳು:

'ಇದೇ ಇರಬೇಕು ಕವಿತೆ' (ವಿಕ್ರಮ್ ಹತ್ವಾರ್‌ರ ಕವನಗಳು) 'ಕಟ್ ಶೀಟ್ ಮತ್ತು ಇತರ ಕಥೆಗಳು' (ಮೊದಲಬಾರಿಗೆ ಕೆ.ಎಸ್.ಸಿಯಲ್ಲಿ ಪ್ರಕಟವಾದ ಕಥೆಗಳ ಸಂಕಲನ)

ವಿಚಾರ ಸಂಕಿರಣ: 'ಗ್ರಾಮೀಣ ಭಾಗದಲ್ಲಿ ಮಾಹಿತಿ ತಂತ್ರಜ್ಞಾನ'

ವಿಷಯದ ಕುರಿತು ಎಸ್.ಟಿ.ಸಿ ಕಾಲೇಜಿನ ಪ್ರಾಂಶುಪಾಲರಾದ ಡಿ.ಜಿ ಸಂಗಮೇಶ ಅವರು ಮಾತನಾಡುತ್ತಾರೆ.

ಸ್ಥಳ ಮತ್ತು ದಿನಾಂಕ:

ಎಸ್.ಟಿ.ಸಿ ಇಂಜಿನಿಯರಿಂಗ್ ಕಾಲೇಜು ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಕ್ಯಾಂಪಸ್ ಮೈಸೂರು

ಭಾನುವಾರ, ೨೦/೦೫/೦೭

ಬೆಳಿಗ್ಗೆ ೧೦.೩೦ಕ್ಕೆ

     ಕಥಾಸಂಕಲನದಲ್ಲಿ ಆರು ಕಥೆಗಳಿದ್ದು, 'ಕಟ್ ಸೀಟ್' ಒಂದನ್ನು ಹೊರತುಪಡಿಸಿ ಉಳಿದವೆಲ್ಲವೂ ಅನಿವಾಸಿ ಪರಿಸರದಲ್ಲಿ ರಚಿಸಲ್ಪಟ್ಟಿದ್ದು, ಇದೂ ಒಂದು ಪ್ರಥಮವಾಗಿದೆ.

  • ಪುಸ್ತಕ
  • ಸಾಹಿತ್ಯ
~.~
  • Rohit ರವರ ಬ್ಲಾಗ್
  • Login or register to post comments
  • 792 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 16, 2007 - 6:26pm — venkatesh

ಉ: 'ಸಲ್ಲಾಪ' - ಕನ್ನಡಸಾಹಿತ್ಯ.ಕಾಂ ನಿಂದ ಮತ್ತೊಂದು ಪ್ರಥಮ

venkatesh's picture

ರೋಹಿತ್ ರವರಿಗೆ,

ನಮಸ್ಕಾರಗಳು.

’ಸಲ್ಲಾಪ’ -ಸರಸ ಸಲ್ಲಾಪ ವಾಗಲಿ. ಕಟ್ ಪೀಸ್ , ಫುಲ್ ಪೀಸ್ ಆಗಲಿ- ಹೀಗೆ ನೀವು ಮಾಡುವ ಎಲ್ಲಾ ಕಾರ್ಯಕ್ರಮಗಳೂ, ಯಶಸ್ಸಿನ ಶಿಖರವನ್ನು ಮುಟ್ಟಿ, ಮೇಲೇರಲಿ. ಆದರೆ ನಿಮ್ಮ ಸರಸ -ಸಲ್ಲಾಪದ ಪರಿಮಳ ನಮ್ಮಕಡೆಗೂ ಹರಿದು ಬರಲಿ.

ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ-ಮೈಸೂರು ಉದ್ಘಾಟನೆ ಮತ್ತು ‘ಸಲ್ಲಾಪ’ ಪ್ರಕಾಶನದ ಪುಸ್ತಕಗಳ ಬಿಡುಗಡೆ ಸಮಾರಂಭ
  • ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ-ಮೈಸೂರು ಉದ್ಘಾಟನೆ ಮತ್ತು ‘ಸಲ್ಲಾಪ’ ಪ್ರಕಾಶನದ ಪುಸ್ತಕಗಳ ಬಿಡುಗಡೆ ಸಮಾರಂಭ
  • ಕನ್ನಡಸಾಹಿತ್ಯ.ಕಾಂ-ಮೈಸೂರು ಬೆಂಬಲಿಗರ ಬಳಗದ ಉದ್ಘಾಟನೆ ಹಾಗೂ ‘ಸಲ್ಲಾಪ’ ಪ್ರಕಾಶನದ ಎರಡು ಕೃತಿಗಳ ಬಿಡುಗಡೆ
  • ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಹಾಸನ - ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಗೋಷ್ಠಿ
  • ಕನ್ನಡಸಾಹಿತ್ಯ.ಕಾಂ ಅಭಿಯಾನಕ್ಕೆ ಮಹತ್ವದ ತಿರುವು - ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಕನ್ನಡಸಾಹಿತ್ಯ.ಕಾಂ ಮನವಿ....?
Syndicate content

ಲೇಖಕರು

Rohit's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator