ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ನರಳುವಿಕೆ-ಒಂದು ಸ್ವಗತ
ಪ್ರತಿ ದಿನ ಪ್ರತಿ ಕ್ಷಣ ನರಳುವಿಕೆ ಈ ಜೀವನ
ಬಾಳಬೇಕೆಂಬಾಸೆ ಚಿವುಟುತಿರುವಾ ಮನ
ಹುಡುಕಲೆಲ್ಲಿ ನೆಮ್ಮದಿ ಮನದಲಿ ಅರಿಯದ ಬೇಗುದಿ
ಕಂಡ ಕನಸಳಿಯುತಿದೆ ಎಲೆ ಉದುರುವ ತೆರದಿ
ಹಾರಾಡಿ ನಲಿದಾಡಿ ಕುಣಿವಾ ಹಂಬಲ
ಮೌನವಾಗಿದೆ ಕಾಣದೆ ಬೆಂಬಲ
ಬೆಳಕೆಂದು ಭ್ರಮಿಸಿ ತೆರೆದೆ ಬಾಗಿಲ
ಮಿಂಚಂತೆ ಬಂದು ಸೇರಿದೆ ಬಯಲ
ಪೂಜೆಗೆಂದು ತಂದ ಹೂವು ಕಂಡಿತೇಕಿಂತಹ ಸಾವು
ಚೂರು ಚೂರಾದರೂ ಹೃದಯ ಮಾಗದಾ ನೋವು
ಕಾಯಲೇ ನಾ ಚಂದ್ರನಿಗಾಗಿ ? ಬೇಡಲೇ ನಾ ಬೆಳಕಿಗಾಗಿ?
ಬದುಕಲೆಬೇಕಿದೆಯೇ ಈ ಮುಗಿಯದ ಬದುಕಿಗಾಗಿ ?

- roopablrao ರವರ ಬ್ಲಾಗ್
- Login or register to post comments
- 265 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನರಳುವಿಕೆ-ಒಂದು ಸ್ವಗತ
ಸೂಪರ್...
- ನಂದನ್
ನಮ್ಮ ತಾಣ - http://www.satyakagyann.blogspot.com
ಉ: ನರಳುವಿಕೆ-ಒಂದು ಸ್ವಗತ
ಥ್ಯಾಂಕ್ಸ್ ನಂದನ್
http://thereda-mana.blogspot.com/
ರೂಪ
ಉ: ನರಳುವಿಕೆ-ಒಂದು ಸ್ವಗತ
ಪ್ರೀತಿಯ ರೂಪಾ ಅವರೇ,
ಎಲ್ಲರದೂ ಮುಗಿಯುವ ಬದುಕೇ, ಆದರೆ ಅದು ಮುಗಿಯಲು ನಾವು ಕಾಯುವುದಿಲ್ಲ. ಅದರ ಪಾಡಿಗೆ ಅದು ಶುರುವಾಗಿರುತ್ತದೆ. ಅದರ ಲೆಕ್ಕದಂತೆ ಮುಗಿಯುತ್ತದೆ. ಇವೆರಡೂ ಕೊನೆಗಳ ನಡುವೆ ಹರಡಿಕೊಂಡಿರುವ ಬದುಕು ನಮ್ಮದು. ಅದನ್ನು ಬದುಕುವುದೊಂದೇ ನಮ್ಮ ಆಯ್ಕೆ. ಹೀಗಾಗಿ, ಅದನ್ನು ಸಮೃದ್ಧವಾಗಿಸಿಕೊಂಡು ಬದುಕೋಣ. ಏನಂತೀರಿ?
ಕವಿತೆ ಚೆನ್ನಾಗಿದೆ. ಅದರಲ್ಲಿದ್ದ ಭಾವನೆಗಳು ಗಂಭೀರವಾಗಿದ್ದರಿಂದ ಕೊಂಚ ಗಂಭೀರವಾಗಿಯೇ ಪ್ರತಿಕ್ರಿಯೆ ನೀಡಿದೆ.
- ರೇಖಾ ಚಾಮರಾಜ
ಉ: ನರಳುವಿಕೆ-ಒಂದು ಸ್ವಗತ
ರೇಖಾ
ಸುಮ್ಮನೆ ಮನಸಿಗೆ ಬೇಸರವಾದ ಹೊತ್ನಲ್ಲಿ ಬರೆದದ್ದು
ಈಗ ನೋಡಿದರೆ ಅರೆ ಇಷ್ಟೊಂದು ಬೇಜಾರಾಗಿತ್ತಾ ಅಂತ ಆಶ್ಚರ್ಯ ಆಗುತ್ತೆ
http://thereda-mana.blogspot.com/
ರೂಪ
ಉ: ನರಳುವಿಕೆ-ಒಂದು ಸ್ವಗತ
ಮಿಂಚಂತೆ ಬಂದು ಸೇರಿದೆ ಬಯಲ
ಬದುಕಲೆಬೇಕಿದೆಯೇ ಈ ಮುಗಿಯದ ಬದುಕಿಗಾಗಿ ?
ರೂಪಕ್ಕ ತುಂಬಾ ಚೆನ್ನಾಗಿ ಬರೆದಿದ್ದೀರಿ...
ಉ: ನರಳುವಿಕೆ-ಒಂದು ಸ್ವಗತ
ವಂದನೆಗಳು ವಿನಾಯಕರವರೆ
http://thereda-mana.blogspot.com/
ರೂಪ