ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಅಡಿಗೆಯವರ ಪುರಾಣ - ಭಾಗ -೩

January 7, 2008 - 12:02pm — roopablrao

ಇದರ ಹಿಂದಿನ ಭಾಗ http://www.sampada.net/blog/roopablrao/04/01/2008/6936
ಹೌದು ಬಂದಾಕೆ ಮೀನಾಕ್ಶಿ ನಯ ವಿನಯವೇ ಮೂರ್ತವೆತ್ತಂತೆ. ಇಬ್ಬರು ಮಕ್ಕಳನ್ನು ಹಾಸ್ಟೆಲ್‌ನಲ್ಲಿ ಬಿಟ್ಟಿದ್ದಳು. ಗಂಡ ಇರಲಿಲ್ಲ. ನಮಗದು ಬೇಕಾಗೂ ಇರಲಿಲ್ಲ
ರುಚಿ ರುಚಿ ಅಡಿಗೆ . ಹೊಸ ಹೊಸ ಖಾದ್ಯ .
ಬಂದ ದಿನವೆ ಹೇಳಿದಳು "ಮೇಡಮ್ . ನಿಮಗೆಲ್ಲ ಏನೇನು ಬೇಕು ಅಂತ ಹೇಳಿ ಸಾಕು . ಅದನ್ನ ರೆಡಿ ಮಾಡಿಡ್ತೀನಿ. ನಿಮ್ಮ ಕೆಲಸದ ಕಡೆಗೆ ಗಮನ ಕೊಡಿ."
ನನಗೋ ಸ್ವರ್ಗಕ್ಕೆ ಮೂರೇ ಗೇಣು. ಎಲ್ಲ ಕೆಲಸವನ್ನು ಅವಳಿಗೆ ಒಪ್ಪಿಸಿ. ನನ್ನ ಮಗು ಹಾಗು ಇವರ ಬೇಕು ಬೇಡಗಳನ್ನೆಲ್ಲ ಅವಳಿಗೆ ಹೇಳಿ, ನಿರಾಳವಾಗಿ ನನ್ನ ಕೆಲಸದಲ್ಲಿ ತೊಡಗಿಕೊಂಡೆ.
ಕೆಲವು ದಿನ ಕಳೆದವು. ಮೊದಮೊದಲು ನಮ್ಮೆಲ್ಲರ ಬಗ್ಗೆ ಅವಳಿಗಿದ್ದ ಕಾಳಜಿ ನಂತರ ಇವರೊಬ್ಬರ ಬಗ್ಗೆ ಹೆಚ್ಚಾಯಿತು.
ಅವರಿಗೆ ಉಪಚಾರ ಎಷ್ಟಾಯಿತೆಂದರೆ ಅವರಿಗೆ ಬೇಸರವಾಗುವಷ್ಟರ ಮಟ್ಟಿಗೆ .
ನನ್ನ ಮೇಕ್-ಅಪ್ ಕಿಟ್ ಅವಳ ಮುಖದ ಮೇಲೆ ರಾರಾಜಿಸತೊಡಗಿತು. ನನ್ನ ಸೋಪು ಅವಳದಾಯಿತು. ನಾನು ಗಮನಿಸಿಯೂ ಸುಮ್ಮನೆ ಇದ್ದೆ.
ಒಮ್ಮೆ ರಾತ್ರಿ ಮನೆಗೆ ಬಂದಾಗ ನನಗೆ ಅಡಿಗೆಯೇ ಇರಲಿಲ್ಲ. ಹೇಗೊ ಬ್ರೆಡ್ ತಿಂದು ಮಲಗಿದ್ದಾಯಿತು.
ಇದು ಹೀಗೆ ಮುಂದುವರೆಯುತ್ತಿದ್ದಾಗ ಒಮ್ಮೆ ಪತಿರಾಯ ಕರೆ ಮಾಡಿದ್ದರು. " ಅವಳು ಹೀಗೆ ಇದ್ದರೆ ನೀನು ಪಿ.ಜಿ ಆಗ್ತೀಯ. ಅವಳು ನಿನ್ನ ಜಾಗಕ್ಕೆ ಬರ್ತಾಳೆ. " ನಾನು ನಕ್ಕು ಸುಮ್ಮನಾದೆ.
ಮೀನಾಕ್ಶಿ ಒಮ್ಮೆ ಹೇಳಿದ್ದಳು. " ನಾನಿದ್ದ ಮುಂಚಿನ ಮನೆಯಲ್ಲಿ ಆಯಮ್ಮನ ಯಜಮಾನರು ತುಂಬಾ ಒಳ್ಳೆಯವರು.ನಂಜೊತೆ ಚೆನ್ನ್ನಾಗಿ ಮಾತಾಡಿಕೊಂಡು ನಂಗೆ ತುಂಬಾ ಹೆಲ್ಪ್ ಮಾಡ್ತಿದ್ದರು."

ಆದರೆ ಅವಳಿಗೆ ಅದು ಇಲ್ಲಿ ಆಗಲಿಲ್ಲ ಎಂದು ಕಾಣುತ್ತದೆ. ಹಾಗಾಗಿ ಬಂದ ಮೂರೆ ತಿಂಗಳಿಗೆ ಜಾಗ ಖಾಲಿ ಮಾಡಿದ್ದಳು .
ಹೋದರೆ ಹೋಗಲಿ ಎಂದು ಹೇಗೊ ಇದ್ದೆ.
ಆದರೂ ಕೆಲವು ತಿಂಗಳ ಹಿಂದೆ ನಮ್ಮ ನೆಂಟರೊಬ್ಬರು ೫೫ ವರ್ಷ್ದದ ಮಹಿಳೆಯೊಬ್ಬಳನ್ನು ತಂದು ಬಿಟ್ಟು ಹೋದರು.
ಆಕೆಯ ಹೆಸರು ಗಾಯತ್ರಿ . ಆಕೆ B.A english ಮಾಡಿದ್ದರು.

ನಾನು ವಯಸ್ಸು ಜಾಸ್ಥಿ ಅಡಿಗೆ ಯಲ್ಲಿ ಒಳ್ಳೇ ಅನುಭವ ಇರುತ್ತದೆ ಎಂದುಕೊಂಡು ಖುಶಿ ಪಟ್ಟೆನು.

ಗಾಯತ್ರಿಯವರು ಮದುವೆಯಾಗಿರಲಿಲ್ಲ. ತಂದೆಯ ಮನೆಯಲ್ಲಿ ಚೆನ್ನಾಗಿ ಇದ್ದವರು. ಮಾತೆತ್ತಿದರೆ . MTV, discovary chanel. ಎನ್ನುವರು. ಬಾಯಿ ಬಿಟ್ಟರೆ english ಪದಗಳು ಪುಂಖಾನುಪುಂಖ .
ನಮಗೊ ಖುಶಿ . ಒಳ್ಳೆ ಹೈ -ಟೆಕ್ ಅಡಿಗೆಯವರು ಎಂದು. ಇದೆಲ್ಲ ಮೊದಲ ದಿನ
ಮಾರನೆಯ ದಿನ ಉಪ್ಪಿಟ್ಟು ಮಾಡಿ ಎಂದೆ.
ರವೆ ಹುರಿಯದೆ ಹಾಗೆ ಮಾಡಿಟ್ಟರು. ನಾವ್ಯಾರೊ ತಿನ್ನಲಿಲ್ಲ . ಆದರೂ ಏನೂ ಅನ್ನಲಿಲ್ಲ
ಅಂದು ನಾನು ರಜಾ ಹಾಕಿದ್ದೆ.
ಸರಿ ಹುಳಿ ಮಾಡಲು ತೆಂಗಿನಕಾಯಿ ಹಾಕಿ ಎಂದೆ.
ಅಗೋದಿಲ್ಲ ಎಂದರು ಮುಲ್ಲಾಜಿಲ್ಲದೆ
ನನಗೆ ಆಶ್ಛರ್ಯ . " ಯಾಕೆ " ಅಂದೆ
"ಅದು ಕಷ್ಟ ಅದಕ್ಕೆ "
" ಅದು ಏನು ಕಷ್ಟ . ತೆಂಗಿನಕಾಯಿ ಒಡೆದುಕೊಳ್ಳಿ . ಮಿಕ್ಸಿನಲ್ಲಿ ಹಾಕಿದ್ರಾಯ್ತು"
ಅವರ ಧ್ವನಿಯೆ ಬದಲಾಯಿತು" i can't do that. iam not from a beggar's familiy. i belong to a prestigious family" ಮಾತುಗಳು ಸಂಬಂಧವಿಲ್ಲದಂತೆ ಬರತೊಡಗಿದವು.
ನನಗೋ ದಿಗಿಲು, ಭಯ, ಅವಮಾನ ಒಂದೆ ಸಲ .
" ಅಲ್ಲ ನಾನೇನು ಹೇಳಿದೆ ಅಂತ "
" ಮಾತಾಡಬೇಡ. ಇಲ್ಲಾಂದರೆ " ಎಂದು ನನ್ನೆಡೆಗೆ ತಿರುಗಿದಳು ಆ ಮಹಾಮಾರಿ.
ಅಬ್ಬ ಎಂತಹ ರುದ್ರ ರೂಪ. ನನಗೋ ಮೊದಲೇ ದೆವ್ವ ಪಿಶ್ಹಾಚಿ ಎಂದರೆ ಭಯ
ಮಲಗಿದ್ದ ಮಗುವನ್ನು ಎತ್ತಿಕೊಂಡು, ಹೊರಗೆ ಓಡಿ ಮೊಬೈಲ್ ಒತ್ತಿ ಕೂಡಲೆ ಇವರಿಗೆ ಬರುವಂತೆ ಹೇಳಿದೆ.
ನಂತರ ನಮ್ಮ ಪಕ್ಕದವರೊಬ್ಬರನ್ನು ಮನೆಗೆ ಕರೆದೆ.
ನಮ್ಮ ನೆಂಟರಿಗೆ ಬರಲು ಫೋನ್ ಮಾಡಿದೆ. ಅವರು ಮಾರನೆಯ ದಿನ ಬರುತ್ತೇನೆ ಎಂದರು
ಗಾಯತ್ರಿ ನಂತರ ಸರಿಯಾಗಿಯೆ ಇದ್ದರು.
ಇವರು ಬಂದರು.
ಆದರೂ ಏನೊ ಭ್ಹಯ.
ಗಾಯತ್ರಿಯವರ ನಡುವಳಿಕೆ ಅಬ್ ನಾರ್ಮಲ್ ಎನಿಸಿತು.
ಮಗುವಿಗೆ ಇಟ್ಟಿದ್ದ ಕೆನೆ, ಬಿಸ್ಕಟ್ ಎಲ್ಲವನ್ನು ಎಂಜಲು ಕೈನಲ್ಲೇ ತಿನ್ನುವುದು . ತಮ್ಮೊಳಗೆ ಗೊಣಗಿಕೊಳ್ಳುವುದು,
ನಾವಂತು ಅಂದು ಕಳೆದರೇ ಸಾಕು ಎಂದಿದ್ದೆವು. ಏನು ಕೇಳಲೂ ಭಯ .
ನೆಕ್ಸ್ಟ್ ಡೇ ನಮ್ಮ ನೆಂಟರು ಬಂದರು. ಅವರಿಗೆ ಗೊತ್ತಿರಲಿಲ್ಲವಂತೆ . ಗಾಯಿತ್ರಿ ಮಾನಸಿಕ ಅಸ್ವಸ್ಥಳಾಗಿದ್ದವಳಂತೆ.
ಅಯ್ಯೊ ಎನಿಸಿದರೂ ಅವಳನ್ನು ಇಟ್ಟುಕೊಳ್ಳಲು ಮನಸು ಬರಲಿಲ್ಲ .
ಕೈಗೆ ಒಂದಷ್ಟು ದುಡ್ಡು ಕೊಟ್ಟು ಸಾಗ ಹಾಕಿದೆವು.

ಅದಾದ ನಂತರ ಇವರು ಹೇಳಿದರು." no more experiments"
ನಾನು ಡಿಸೈಡ್ ಮಾಡಿದ್ದೆ. ಅಡಿಗೆ ಕಲಿಯಲೇಬೇಕು ಎಂದು.
ಒಂದಷ್ಟು ಅಡಿಗೆ ಬುಕ್ಸ್ ತಂದಿಟ್ಟುಕೊಂಡಿದ್ದೇನೆ. ಅಂತರ್‍ಜಾಲದಲ್ಲಿ ಕೆಲವು ತಾಣಗಳಲ್ಲಿ ಅಡ್ಡಾಡಿದ್ದೇನೆ.
ಹಾಗು ಹೀಗು ಕೆಲವು ಅಡಿಗೆ ಕಲಿತಿದ್ದೇನೆ
ಕೆಟ್ಟ ಮೇಲೆ ಬುದ್ದಿ ಬಂತು ಅಂತಾರಲ್ಲ ಹಾಗೆ.
ಇದೇ ಕೆಲಸ ಮೊದಲೇ ಮಾಡಿದ್ದರೆ---- ಇಷ್ಟು ಹೊತ್ತಿಗೆ ಅಡಿಗೆ ಪಂಟಳಾಗುತಿದ್ದೆ ಎಂದು ರೇಗಿಸುತ್ತಾರೆ ಎಲ್ಲರೂ
ನಾನು ಮಾತಾಡುವುದಿಲ್ಲ.

  • ಹೀಗೆ ಸುಮ್ಮನೆ
~.~
  • roopablrao ರವರ ಬ್ಲಾಗ್
  • Login or register to post comments
  • 351 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 16, 2008 - 5:53pm — vikashegde

ಉ: ಅಡಿಗೆಯವರ ಪುರಾಣ - ಭಾಗ -೩

vikashegde's picture

ಏನ್ರಿ ಇದು ಕರ್ಮಖಾಂಡ !!! ಅಡುಗೆಗೆ ಇಷ್ಟೆಲ್ಲಾ ಪಾಡು !! Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಡಿಗೆಯವರ ಪುರಾಣ - ಭಾಗ -೨
  • ಅಡಿಗೆಯವರ ಪುರಾಣ
  • ಹೆಣ್ಣಿಗೆ ರೂಪ ಮುಖ್ಯವೋ ಗುಣವೋ
  • ಈ ಹುಡುಗರೇಕೆ ಹೀಗೆ
  • ಹೀಗು ಉಂಟೆ ನಮ್ಮಜ್ಜಿ...!!
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 55 ಅತಿಥಿಗಳು ಆನ್ಲೈನ್ ಇರುವರು.


ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator