Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ನನ್ನವರಿಗೆ ಕನ್ನಡ ಕಲಿಸಿದ್ದು

April 8, 2008 - 11:19am — roopablrao

ನಾನು ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಅಪ್ಪಟ ಕನ್ನಡತಿ.
ನನ್ನವರೋ ಉಡುಪಿಯಿಂದ ವಲಸೆ ಹೋಗಿ ತಮಿಳುನಾಡಿಗೆ ಸೇರಿದ್ದ ಮಾಧ್ವರ ಸಂತತಿಯ ತುಂಡು.
ಅಲ್ಲಿಯೇ ಹುಟ್ಟಿ ಬೆಳೆದದ್ದರಿಂದ ತಮಿಳಿನ ಗಾಳಿ ಚೆನ್ನಾಗಿ ಆವರಿಗೆ ಚೆನ್ನಾಗಿಯೆ ಹೊಡೆದಿತ್ತು.
ನಮ್ಮದು ಪ್ರೇಮ ವಿವಾಹ.

ಪ್ರೀತಿಸುವಾಗ ಅವರ ತಮಿಳು ಮಿಶ್ರಿತ ಕನ್ನಡ ನನಗೆ ಏನೂ ಅನ್ನಿಸುತ್ತಿರಲಿಲ್ಲ.

ಮದುವೆಗೆ ಮುಂಚೆಯೇ ನಮ್ಮ ಅಮ್ಮ ಹೇಳಿದ್ದರು . ನಿನಗೆ ಅವರಿಗೆ ಕನ್ನಡದ ಬಗ್ಗೆ ಜಗಳ ಜಾಸ್ತಿ ಆಗುತ್ತದೆ ಎಂದು. ಆದರೆ ನಾನು ಒಪ್ಪಿರಲಿಲ್ಲ.

ಹಾಗೂ ಹೀಗೂ ಮದುವೆ ಮುಗಿದು ಅವರ ಮನೆಗೆ ಹೋದಾಗ ಪರಿಸ್ಠಿತಿಯ ಅರಿವು ಆಗಿತ್ತು. ಬರೀ ತಮಿಳು ಚಾನೆಲ್ , ತಮಿಳ್ ಹಾಡು .

ತಮಿಳಿನಲ್ಲಿ ಮಾತಾಡುತ್ತಿದ್ದಾರೊ ಅಥವ ಕನ್ನಡವೋ ಎಂದು ಅರಿವಾಗದ ಸ್ಥಿತಿ. ತಮಿಳು ನಾಡಿಗೆ ಬಂದುಬಿಟ್ಟೆನೋ ಎಂಬ ಗಾಭರಿ

"ಅಲ್ಲಿಗೊಂದು ವರೆ ಇಟ್ಟುಬಿಡು" ಎಂದರು ನಮ್ಮ ಅತ್ತೆ ಹಾಗೆಂದರೇನು ? ತಿಳಿಯಲಿಲ್ಲ ಆಮೇಲೆ ಅದು ಬಟ್ಟೆ ಎಂದು ಗೊತ್ತಯಿತು

"ನಂಗೆ ಹುಳಿ ಸಾರಲ್ಲ" ನಮ್ಮ ಭಾವ ಹೇಳಿದಾಗ ಗೊಂದಲ . "ನಮಗೂ ಅಷ್ಟೆ ಹುಳಿ ಸಾರಲ್ಲ ಅದೇ ಬೇರೆ ಇದೇ ಬೇರೆ " ಎಂದಿದ್ದೆ ನಾನು.
ನಮ್ಮ ವರು ಸಾರಲ್ಲ ಎಂದರೆ ಸೇರೊದಿಲ್ಲ ಎಂದು ಹೇಳಿದಾಗ ನಗು

ಸ್ವಲ್ಪ ಕಾಫಿ ಧೂಳು ಕಡಿಮೆ ಹಾಕು ಎಂದಿದ್ದರು ಇವರು. ಧೂಳು ಎಂದರೆ ಪುಡಿ ಎಂದು ತಿಳಿಯಿತು

ಹಾಗೆ ಗೂಡೆ, ವಾಟೆ ಏನೇನೂ ವಿಚಿತ್ರವದ ಕೇಳರಿಯದ ಶಬ್ದಗಳು.

ಮಾತು ಮಾತಿಗೆ ರಜನಿ, ಜಯಲಲಿತ, ಕರುಣಾನಿಧಿಯ ಮೆರೆಸುವಿಕೆ

ಆಗಲೇ ನಿರ್ಧರಿಸಿದೆ . ಹೇಗಾದರೂ ಮಾಡಿ ಇವರನ್ನು ಕನ್ನಡಿಗರನ್ನಾಗಿ ಮಾಡಬೇಕೆಂದು

ಒಮ್ಮೆ ಹಟ ಮಾಡಿ ಎರೆಡು ಕನ್ನಡ ಚಿತ್ರಗಳಿಗೆ ಕರೆದುಕೊಂಡು ಹೋಗಿದ್ದೆ. ನಂತರ ಮನೆಯಲ್ಲಿ ಗಲಾಟೆ ಮಾಡಿ ಉದಯ ಟಿ.ವಿ ಹಾಕುವಂತೆ ಮಾಡಿದ್ದೆ.
ನನ್ನ ಮಗಳು ಹುಟ್ಟಿದ ನಂತರ ಸ್ವಚ್ಚ ಕನ್ನಡ ಕಲಿತರೇ ಮನೆಗೆ ಬರುವುದಾಗಿ ಹೆದರಿಸಿದೆ.

ನಮ್ಮವರು ನಮ್ಮ ಅಮ್ಮನ ಬಳಿಯಲ್ಲಿ ಕನ್ನಡ ಕಲಿಯಲು ಬರುತ್ತಿದ್ದ ದಿನಗಳು ಈಗಲೂ ನೆನೆಪಿದೆ. ಆಗಲೇ ’ಮುಂಗಾರು ಮಳೆ’ ಯಾಗಿ ಕನ್ನಡದ ಹಾಡುಗಳು ಅತೀ ಮಧುರವಾಗತೊಡಗಿದವು. ಅವರ ಕನ್ನಡ ಆಸಕ್ತಿ ತೀವ್ರವಾಗತೊಡಗಿತು

ಈಗ ನನಗೆ ಆಶ್ಛರ್ಯವಾಗುವಂತೆ ಸ್ವಚ್ಚ ಕನ್ನಡದಲ್ಲಿ ದೊಡ್ಡ ದೊಡ್ಡ ಪದಗಳನ್ನು ನನ್ನ ಮುಂದಷ್ಟೆ ಅಲ್ಲ ಅವರ ನೆಂಟರ ಬಳಿಯೂ ಆಡುತ್ತಾರೆ.

ಅವರು ಕನ್ನಡ ಓದಲೂ ಬರೆಯಲೂ ಕಲಿತಿದ್ದಾರೆಂದು ತಿಳಿದಾಗ ತುಂಬ ಹೆಮ್ಮೆಯಾಯಿತು
ನಾನು ಕನ್ನಡದವನು ನಮ್ಮ ವಂಶದವರು ಇಲ್ಲೇ ಉಡುಪಿಯವರು ಎಂದು ಎದೆ ತಟ್ಟಿ ನುಡಿಯುವಾಗಲೆಲ್ಲಾ ನಾ ಹಿಡಿದ ಪಟ್ಟು ವ್ಯರ್ಥವಾಗಲಿಲ್ಲ ಎಂಬ ನೆಮ್ಮದಿ.
ಒಮ್ಮೊಮ್ಮೆ ನಾನೆ ಹಿಂದಿ ಸಿನಿಮಾ ನೋಡಿದಾಗಲೆಲ್ಲ " ನೀನು ಕನ್ನಡದವಳಾಗಲು ಲಾಯಕಿಲ್ಲ " ಎಂದು ರೇಗಿಸುತ್ತಾರೆ.
ಮೊನ್ನಿನ ಹೊಗೇನ್‌ಕಲ್ ಗಲಾಟೆ ಯಲ್ಲಿ ಅವರು ಸಮರ್ಥಿಸಿದ್ದು ನಮ್ಮನ್ನೇ.

  • ಲಲಿತ ಪ್ರಬಂಧ
Ornamental seperator
  • roopablrao ರವರ ಬ್ಲಾಗ್
  • Login or register to post comments
  • 486 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 8, 2008 - 12:18pm — Sunil Jayaprakash

ಉ: ನನ್ನವರಿಗೆ ಕನ್ನಡ ಕಲಿಸಿದ್ದು

Sunil Jayaprakash's picture

ಚಾಂಗು ಭಳಾ ಭಾಫುರೆ, ಭಾಪು ಭಳಿರೇ. ಅಬ್ಬಬ್ಬಾ, ಗಂಡನನ್ನೇ ತುಂಡಾಗಿಸಿ, ನಿಮ್ಮ 'ಅವರಿಗೆ' ಕನ್ನಡ ಕಲಿಸಿದ್ದಕ್ಕಾಗಿ ಹೆನ್ನನ್ನಿ. ನಿಮ್ಮವರಿಗೇ ಕನ್ನಡ ಕಲಿಸಿರುವಾಗ, ಮಗಳಿಗೂ ಕನ್ನಡ ಕಲಿಸಿಯೇ ಕಲಿಸುತ್ತೀರ, ಬಿಡಿ. ನಿಮ್ಮಂತಹ ನೇರ, ದಿಟ್ಟ ಮಹಿಳೆಯರ ಸಂತತಿ ಹೆಚ್ಚಾಗಲಿ. ಸವಿಗೂ ಮಿಕ್ಕು ಸವಿ.

ಕೇಸರಿ ಹಾಕಿರುವ ಬಾದಾಮಿ ಹಾಲಿನಲ್ಲಿ ಜಿಲೇಬಿಯನ್ನು ಅದ್ದಿ ಮೆದ್ದ ಹಾಗಾಯಿತು Eye-wink

ಹಾಗೆಯೇ, ನೀವು ಕನ್ನಡ ಹಾಡುಗಳ ಪ್ರಸ್ತಾಪ ಮಾಡಿದ್ದೂ ಕೂಡ ಸರಿಯಾಗಿದೆ. ಕನ್ನಡವನ್ನು ನಾವು ಭಾವುಕವಾಗಿ ಸಮರ್ಥಿಸುಕೊಳ್ಳುವುದು ಒಂದುಕಡೆಯಾದರೆ, ಹೀಗೆ ನಮ್ಮ ಬೇರೆ ಬೇರೆ ಉತ್ಪನ್ನಗಳನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿದರೆ ಕನ್ನಡತನ ಇನ್ನೂ ಗಟ್ಟಿಯಾಗುತ್ತದೆ ಅಂತ ನಾನು ನಂಬಿದ್ದೇನೆ. ನೀವು ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೀರಿ. ಸೂಪರ್.

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 2:52pm — vikashegde

ಉ: ನನ್ನವರಿಗೆ ಕನ್ನಡ ಕಲಿಸಿದ್ದು

vikashegde's picture

ವಾಹ್ . ನಿಮ್ಮ ಕೆಲಸವನ್ನು ಮೆಚ್ಚಲೇ ಬೇಕು . ಮನೆಯಲ್ಲಿ ಕನ್ನಡ ಬೆಳೆದರೆ ಸಾಕು, ಬೀದಿಯಲ್ಲೂ ಬೆಳೆದೇ ಬೆಳೆಯುತ್ತೆ.

ನಮ್ಮ ಹೆಮ್ಮೆಯ ’ಸಂಪದತಿ’ ನೀವು Eye-wink

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 3:26pm — girish.rajanal

ಉ: ನನ್ನವರಿಗೆ ಕನ್ನಡ ಕಲಿಸಿದ್ದು

girish.rajanal's picture

ನಿಮ್ಮ ಕನ್ನಡ ಪ್ರೇಮ ನಿಜಕ್ಕೂ ಅಭಿನಂದನಾರ್ಹ..
ನಿಮಗೆ ಒಳ್ಳೆಯದಾಗಲಿ..ನಿಮ್ಮ ’ಅವರಿಗೆ’ ಕನ್ನಡ ಕಲಿಸಿದ್ದಕ್ಕಾಗಿ ನನ್ನಿ.
ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 9:46pm — kalpana

ಉ: ನನ್ನವರಿಗೆ ಕನ್ನಡ ಕಲಿಸಿದ್ದು

kalpana's picture

ಅಬ್ಭಾ! ತಮಿಳುನಾಡಿನಲ್ಲಿ ಹುಟ್ಟಿಬೆಳೆದವರನ್ನು ಕನ್ನಡಿಗರನ್ನಾಗಿ ಪರಿವರ್ತಿಸಿದ್ದೀರ. ಅದು ನಿಜಕ್ಕೂ ಶ್ಲಾಘನೀಯ ಕಣ್ರೀ Smiling ಯಾಕಂದರೆ, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನನ್ನ ತಮಿಳು ಸ್ನೇಹಿತೆಯರಿಗೆ ಕನ್ನಡ ಇವತ್ತಿನ ದಿನವೂ ಸರಿಯಾಗಿ ಬರುವುದಿಲ್ಲ! ಆದರೆ, ತೆಲುಗಿನ ಸ್ನೇಹಿತೆಯರು ಪರವಾಗಿಲ್ಲ, ಕನ್ನಡ ಕಲಿತು ಚೆನ್ನಾಗಿ ಮಾತನಾಡುತ್ತಾರೆ. ಅದೂ ಅಲ್ಲದೆ, ತಮಿಳು ಗಂಡನಿಗೆ ಕನ್ನಡ ಕಲಿಸಲಾರದೆ, englishನಲ್ಲಿ ಮಾತನಾಡುವ ಒಂದಷ್ಟು ಸ್ನೇಹಿತೆಯರಿದ್ದಾರೆ! ಆದ್ದರಿಂದ, ನಿಮ್ಮ ಕನ್ನಡ ಪ್ರೀತಿಗೆ ಜೈ Smiling

  • Login or register to post comments
  • link
  • Email this ಪ್ರತಿಕ್ರಿಯೆ
April 9, 2008 - 8:40am — roopablrao

ಉ: ನನ್ನವರಿಗೆ ಕನ್ನಡ ಕಲಿಸಿದ್ದು

roopablrao's picture

ಕಲ್ಪನರವರೇ
ಫೋಟೊನಲ್ಲಿ cricket ಆಡುತ್ತಿರುವವರು ಯಾರು?

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
April 9, 2008 - 10:30am — kalpana

ಉ: ನನ್ನವರಿಗೆ ಕನ್ನಡ ಕಲಿಸಿದ್ದು

kalpana's picture

ನಿಜಕ್ಕೂ ಗೊತ್ತಿಲ್ಲ Smiling ಅಂತರ್ಜಾಲದಲ್ಲಿ ಎಲ್ಲೋ ಸಿಕ್ಕಿದ್ದು ಇತ್ತು. ಚೆನ್ನಾಗಿದೆ ಅಂತ ಹಾಕಿಕೊಂಡೆ.
ನಿಮ್ಮ ಮಗಳು(?) ಬಹಳ cute ಆಗಿದ್ದಾಳೆ Smiling

  • Login or register to post comments
  • link
  • Email this ಪ್ರತಿಕ್ರಿಯೆ
April 9, 2008 - 12:38pm — roopablrao

ಉ: ನನ್ನವರಿಗೆ ಕನ್ನಡ ಕಲಿಸಿದ್ದು

roopablrao's picture

ನನ್ನ ಮಗಳು ಥ್ಯಾಂಕ್ಸ್ ಹೇಳ್ತಾ ಇದಾಳೆ

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 9:55pm — Narayana

ಉ: ನನ್ನವರಿಗೆ ಕನ್ನಡ ಕಲಿಸಿದ್ದು

Narayana's picture

ಬಹಳ ಚೆನ್ನಾಗಿದೆ. ಅಭಿನಂದನೆಗಳು.

ಈಗ ನೀವೇ ಹೇಳಿ, ಹೆಂಗಸರಿಗೆ ಸ್ವಾತಂತ್ರ ಇಲ್ಲ ಅನ್ನುವುದು ಯಾರು? Smiling

  • Login or register to post comments
  • link
  • Email this ಪ್ರತಿಕ್ರಿಯೆ
April 9, 2008 - 8:51am — roopablrao

ಉ: ನನ್ನವರಿಗೆ ಕನ್ನಡ ಕಲಿಸಿದ್ದು

roopablrao's picture

ತುಂಬಾ ಥ್ಯಾಂಕ್ಸ್ ಆದರೆ
ಇಷ್ತೆಲ್ಲಾ ಹೊಗಳೊ ಅಂತಹ ಕೆಲಸ ಏನು ಮಾಡಿಲ್ಲ
ನನಗೆ ತಮಿಳು ಬರಲ್ಲ
ಮನಸಿನ ಭಾವನೆಗಳನ್ನ ನಮ್ಮ ತಾಯ್ನುಡಿಯಲ್ಲಿ ಹೇಳಿದಷ್ಟು ಚೆನ್ನಾಗಿ ಇಂಗ್ಲೀಷನ್ಅಲ್ಲಿ ಹೇಳಲು ಸಾಧ್ಯವಿಲ್ಲ . ಹಾಗಾಗಿ ನನ್ ಸ್ವಾರ್ಥವೂ ಅಡಗಿತ್ತು.

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
April 9, 2008 - 2:37pm — yebbram

ಉ: ನನ್ನವರಿಗೆ ಕನ್ನಡ ಕಲಿಸಿದ್ದು

yebbram's picture

ಭಳಿರೆ ಕನ್ನಡದ ವೀರ ವನಿತೆ. ನಿಮಗೆ ಕತ್ತಿ ಕುದುರೆ ಕೊಟ್ಟು ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಕೊಡುವ ಕೆಲ್ಸ ಮಾಡಿದ್ದಿರ. ನಿಮ್ಮ ಪತಿ ಕಡೆ ಅವರು ನಿಮ್ಮ ಕನ್ನಡದ ಶಂಖನಾದ ಕೆಳಲಾಗದೆ ಕಿವಿಯಲ್ಲಿ ಹತ್ತಿ ಇಟ್ಟುಗೊಂಡು ನಿಮಗೆ 'ಹತ್ತಿಮಬ್ಬೆ' ಪ್ರಶಸ್ತಿ ಕೊಟ್ಟಾರು ಜೋಕೆ:)

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ತಮಿಳು ಕವಲುಗಳು ಹೀಗಾದವು!
  • ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?
  • ಕನ್ನಡದ ಉಳಿವು ಯಾರಿಂದ
  • ಕರುಣಾನಿಧಿಯ Independence day special article ಹಿಂದು ಪೇಪರಲ್ಲಿ!!! ಎಲ್ರೂ ಓದಿ,!!
  • ತಪ್ಪು ಯಾರದ್ದು?
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಮ್ಮನ ದಿನ
  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 1:38pm
  • vikashegde
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:23pm
  • sushil
    ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
    May 12, 2008 - 1:19pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 21 ಅತಿಥಿಗಳು ಆನ್ಲೈನ್ ಇರುವರು.

ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.

— ಮನುಸ್ಮೃತಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator