ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ರಾಜ ಮುದ್ದು ರಾಜ
ನನ್ನ ಬಹುದಿನದ ಕನಸು ಇಂದು ನನಸಾಗುವುದರಲ್ಲಿತ್ತು.
ಎಷ್ಟೊ ದಿನದಿಂದ ರಾಜನ ಬಗ್ಗೆ ಕನಸು ಕಂಡಿದ್ದೆ. ಅವನ ಉದ್ದಾದ ಕೂದಲು ಅವನ ಕಣ್ಣು , ಎಲ್ಲಾ ನನ್ನ ಸೆಳೆದಿತ್ತು.
ಅವನ ಮನೆಗೆ ನಾನು ಹೋದಂತೆ , ಅವನನ್ನು ಮುದ್ದಾಡಿದಂತೆ, ನನ್ನ ಮಡಿಲಲಿ ಅವನು ಮಗುವಾದಂತೆ.
ನನ್ನನ್ನು ನೋಡಿದರೆ ಅವನಿಗೂ ಬಹಳ ಇಷ್ಟವಿತ್ತೇನೊ ನಾನು ಅವನ ಮನೆ ಮುಂದೆ ಹೋದಾಗಲೆಲ್ಲಾ ಕಿಟಕಿಯಿಂದ ಲುಕ್ ಕೊಡ್ ತ್ತಿದ್ದ. ಕಣ್ನಲ್ಲಿ ಪ್ರೀತಿ ತೋರಿಸುತ್ತಿದ್ದ
ಆದರೆ ನಮ್ಮ ಮನೆಯಲ್ಲಿದ್ದಾನಲ್ಲ ಶಿವು ಅವನಿಗೆ ನಮ್ಮ ಪ್ರೀತಿಯ ಬಗ್ಗೆ ಮತ್ಸರ . ನಾನು ರಾಜನ ಬಗ್ಗೆ ಹೇಳಿದಾಗಲೆಲ್ಲಾ ಕೋಪಿಸಿಕೊಂಡು ರಾಜನ ಮೇಲೆ ಜಗಳಕ್ಕೆ ಹೋಗ್ತಿದ್ದ.
ಅಮ್ಮನಿಗೂ ಅವನನ್ನು ನೋಡಿದರೆ ಆಗುತ್ತಿರಲಿಲ್ಲ ಯಾವಜಾತೀನೊ ನೀನು ಅವನ ಹತ್ತಿರ ಹೋಗಬೇಡ ಅಂತ ಹೇಳುತ್ತಿದ್ದರು
ಇವತ್ತು ಅಮ್ಮ ಎಲ್ಲರೂ ಎಲ್ಲೋ ಹೊರಗಡೆ ಹೋಗಿದ್ದಾರೆ. ಶಿವು ಪಕ್ಕದ ರೂಮಿನಲ್ಲಿ ಮಲಗಿದ್ದ . ಮೆಲ್ಲನೆ ರೂಮಿನ ಬಾಗಿಲು ಹಾಕಿಕೊಂಡು ಹೊರಗೆ ಬಂದೆ .
ರಾಜ ಪಕ್ಕದ (ಅವನ ) ಮನೆಯ ಹೊರಗಡೆ ಕುಳಿತಿದ್ದ ಅಬ್ಬ ಏನು ಠೀವಿಯಿಂದ ಕುಳಿತಿದ್ದ, ಅವನ ಗಂಭೀರತೆ ಕಂಡು ಮನಸು ತುಂಬಿ ಬಂತು. ಅವನನ್ನು ಸನ್ನೆ ಮಾಡಿ ಕರೆದೆ. ಅವನು ಬರುವುದಿಲ್ಲ ಎನ್ನುವಂತ್ತೆ ಮೂತಿ ಆ ಕಡೆ ತಿರುಗಿಸಿದ .
ನನಗೆ ಗೊತ್ತು ಅವನನ್ನು ಹ್ಯಾಗೆ ಸೆಳೆಯಬೇಕೆಂದು . -------------------------------
ನಂತರ ನಮ್ಮ ಮನೆಗೆ ಬಂದ . ಮನೆಯಲ್ಲಿ ಯಾರೂ ಇರಲಿಲ್ಲ ನನ್ನ ಪ್ರೀತಿಯನ್ನು ಅವನಿಗೆ ತೋರ್ಪಡಿಸಿದೆ. ಅವನೂ ಅಷ್ಟೆ ನನ್ನ ಮಡಿಲ ಮೇಲೆ ಬಂದು ಮಲಗಿದ ನನಗೆ ಮುತ್ತು ಕೊಟ್ಟ . ನಂತರ ಅವನಿಗಾಗೆ ಇಟ್ಟಿದ್ದ ಚಪಾತಿಯನ್ನು ಕೊಟ್ಟೆ .
ನಾನು ಮಾತಾಡುತಿದ್ದ ಶಬ್ದ ಕೇಳಿದ ತಕ್ಷಣ ಅಲ್ಸೇಶಿಯನ ಜಾತಿಯ ಶಿವು ರೂಮಿನ ಒಳಗಿನಿಂದಲೇ ಗುರ್ ಗುರ್ ಎಂದ
ರಾಜನಿಗೆ ಕೋಪ ಬಂತೇನೊ ಬೌ ಬೌ ಎಂದು ಬೊಗಳಿ ಕೂಡಲೆ ಅವನ ಮನೆ ಸೇರಿಕೊಂಡ .

- roopablrao ರವರ ಬ್ಲಾಗ್
- Login or register to post comments
- 176 hits
- Email this blog





RSS: