Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಡಾ.ರಾಜ್‌ರಿಲ್ಲದೇ........... ಎರೆಡು ವರ್ಷ : ಒಂದು ನೆನಪು

April 12, 2008 - 1:37pm — roopablrao

ಮೊನ್ನೆ ಮಡಿಕೇರಿಯಲ್ಲಿ ನಡೆದ ಹೊಗೇನಕಲ್ ಧರಣಿಯ ಬಗ್ಗೆ ಬರೆಯುತ್ತ ವಿಜಯ ಕರ್ನಾಟಕದಲ್ಲಿ ಒಂದು ವಾಕ್ಯ
"ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಹೋರಾಟದಲ್ಲಿ ಒಂದು ನಾಯಕರಿಲ್ಲದ ಅನಾಥ ಪ್ರಜ್ನೆ ಕಾಡಿತು."

ಹೌದು ಕನ್ನಡ ಚಿತ್ರರಂಗದ ಗಣ್ಯರು ಎನಿಸಿಕೊಂಡ ಯಾರಿಗೂ ಈ ಹೊಗೇನಕಲ್ ವಿವಾದದ ಬಗ್ಗೆ ಮಾತನಾಡಲು ದೈರ್ಯ ಅಥವ ಮಾತನಾಡುವುದಿರಲಿ ಅಲ್ಲಿಗೆ ಹಾಜಾರಾಗುವುದಕ್ಕೆ ಪೋಲು ಮಾಡುವಷ್ಟು ಸಮಯವಿರಲಿಲ್ಲ.

ಈ ಹಿಂದೆ ಕರ್ನಾಟಕದ ಹಿತಾಸಕ್ತಿಗೆ ಯವುದೇ ರೀತಿಯ ಕುಂದು ಬಂದರೂ . ಒಂದು ಅಚ್ಚ್ಚ ಕನ್ನಡ ಭಾಷಾ ಪ್ರೇಮಿ ಕೈ ಎತ್ತುತ್ತಿತು . ಕೋಟಿ ಕೋಟಿ ಜನರ ಧ್ವನಿಗೆ ಕೊರಳಾಗುತಿತ್ತು. ಜನರನ್ನು ಸಂಘಟನೆ ಮಾಡಲು ಅವರ ಒಂದು ಕರೆ ಸಾಕಾಗುತ್ತಿತ್ತು.

ಅವರು ನಮ್ಮನ್ನು ಅಗಲಿ ೨ ವರ್ಷಗಳಾಗಿವೆ.

ಆದರೆ ಈ ಅವಧಿಯಲ್ಲಿ ಅವರ ಪ್ರತಿನಿಧಿಯಾಗಿ ಅಥವ ಕನ್ನಡನಾಡಿನ ಕೊರಳಾಗಿ ಕೂಗಲು , ಯಾರು ಮುಂದೆ ಬಂದಿಲ್ಲ

ಚಿತ್ರರಂಗದ ಎಲ್ಲರಿಗೂ ಅವರವರ ಹಿತ , ಪರ, ಸಮಸ್ಯೆಗಳೆ ಮುಖ್ಯವಾಗಿದೆ.

ಅಲ್ಲಿಂದ ಡಾ.ರಾಜರಂತೆ ಒಂದು ಶಕ್ಥಿ ಮುಂದೆ ಬಂದಿಲ್ಲ ಎನ್ನುವುದು ಖೇದದ ಸಂಗತಿಯೇ ಸರಿ

ಡಾ.ರಾಜ್‌ರ ನೆನೆಪು ನನ್ನಂತಹ ಈಗಿನ ಪೀಳಿಗೆಯವರಿಗೆ ಇಷ್ಟು ಕಾಡಿರುವಾಗ ಅವರ ಪ್ರಭಾವ ಎಂತಹ ಅಗಾಧವಾದುದು ಎಂದು ಊಹಿಸಬಹುದು.

ಹೋರಾಟ ದಲ್ಲಿ ಬಿಡಿ

ಸಿನಿಮಾದಲ್ಲಿನ ಅವರ ಆದರ್ಶ , ಕನ್ನಡನುಡಿ, ಅಮ್ಮನ ಪ್ರೇಮ, ಸರಳತೆ ,ಸಜ್ಜನಿಕೆಗಳು ಇಂದು ಮಹಾ ನಟರು ಎಂದು ಕರೆಸಿಕೊಳ್ಳುವವರಲ್ಲಿ ಕಾಣ ಸಿಗದು.
ಅವರಿಗೆ ಪರಭಾಷೆಯಿಂದ ಅಹ್ಹಾನ ಬಂದರೂ ಒಪ್ಪಿರಲಿಲ್ಲ. ರಿಮೇಕ ವಿರೋಧಿಗಳಾಗಿದ್ದರು. ಆ ಭಾಷ ಪ್ರಿಯತೆ ಇಂದು ಯಾರಲ್ಲಿ ಇದೆ.
ಪರಭಾಷೆಯ ಒಂದು ಚಿತ್ರದಲ್ಲಿ ಅಭಿನಯಿಸಲು ತಮ್ಮ ಅಭಿಮಾನವನ್ನಾದರೂ ಒತ್ತೆ ಗಿಡುವ ನಟ ನಟರಿದ್ದಾರೆ.
ಇಲ್ಲಿ ಹೀರೊಗಳಾಗಿ ನಟಿಸಿ ಪರಭಾಷೆಯಲ್ಲಿ ನಾಯಕನ ಕೈನಿಂದ ಒದೆ ತಿನ್ನುವ ಎರೆಡನೆ ಅಥವ ಮೂರನೆ ಖಳನಾಯಕರಾಗಿ ಅನುಭವಿಸಿದವರೂ ಇದ್ದಾರೆ.
ಇವರೆಲ್ಲರ ಮಧ್ಯದಲ್ಲಿ ಪ್ರತ್ಯೇಕ ವಾಗಿ ನಿಲ್ಲುವುದೇ ಡಾ.ರಾಜ್‌ ರವರ ಅಮೋಘ ವ್ಯಕ್ತಿತ್ವ.

ಸದಭಿರುಚಿಯ ಚಿತ್ರಗಳು, ಮಧುರ ಗೀತೆಗಳು, ಅರ್ಥಪೂರ್ಣಾ ಸಾಹಿತ್ಯ ಅವರ ಜೊತೆಗೆ ಹೊರಟು ಹೋಯಿತೇನೊಎಂದು ಕೆಲವೊಮ್ಮೆ ಅನ್ನಿಸುವುದುಂಟು.

ಹಾಗಾಗಿ ಕೆಲವೊಮ್ಮೆ ಡಾ. ರಾಜ್‌ರ ನಂತರ ಯಾರು ? ಎಂಬ ಪ್ರಶ್ನೆಗೆ ಉತ್ತರವೆ ಇಲ್ಲ ಎನ್ನಿಸುವುದೂ ಉಂಟು

ಇದೊಂದು ಆ ಮಹಾನ್ ನಟನಿಗೆ, ಆ ಮಹಾನ್ ಸಂಘಟಿಕನಿಗೆ ನನ್ನ ಶ್ರದ್ದಾಂಜಲಿ
ರೂಪ

  • ನೆನಪು
Ornamental seperator
  • roopablrao ರವರ ಬ್ಲಾಗ್
  • Login or register to post comments
  • 395 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 12, 2008 - 11:35pm — ಗಣೇಶ

ಉ: ಡಾ.ರಾಜ್‌ರಿಲ್ಲದೇ........... ಎರೆಡು ವರ್ಷ : ಒಂದು ನೆನಪು

ಗಣೇಶ's picture

ನಾಲ್ಕು ತಲೆಮಾರಿನ ಜನ ಒಟ್ಟಿಗೆ ಕುಳಿತು ಕನ್ನಡ ಸಿನೆಮಾ ನೋಡುತ್ತಿದ್ದಾರೆ ಅಂದರೆ ಅದು ರಾಜ್ ಸಿನೆಮಾ ಮಾತ್ರ
-ಗಣೇಶ.

  • Login or register to post comments
  • link
  • Email this ಪ್ರತಿಕ್ರಿಯೆ
April 13, 2008 - 11:03pm — Sunil Jayaprakash

ಉ: ಡಾ.ರಾಜ್‌ರಿಲ್ಲದೇ........... ಎರೆಡು ವರ್ಷ : ಒಂದು ನೆನಪು

Sunil Jayaprakash's picture

"ಅಣ್ಣಾವ್ರು", ಬಹುಶಃ, ನಾನು ಈ ಪದವನ್ನು ಮುಂಚೆ ಎಲ್ಲಿಯೂ ಬಳಸಿಲ್ಲ. ಆದರೆ, ಆತ ಕನ್ನಡದ ವಿಷಯದಲ್ಲಿ ಮೈಗೂಡಿಸಿಕೊಂಡ ಆದರ್ಶವನ್ನು ವಿಶ್ಲೇಷಿಸುತ್ತಾ ಕೂತರೆ, ಡಾ||ರಾಜ್ಕುಮಾರನ ಮೇಲೆ ಅದೆಷ್ಟು ಗೌರವ ಮೂಡುತ್ತೆ ಗೊತ್ತಾ. ನನಗೆ ಡಾ||ರಾಜನ್ನು "ಅಣ್ಣಾವ್ರು" ಅಂತ ಕರೆಯೋಕ್ಕೆ ಸೌಜನ್ಯವಾಗಲೀ, ಮುಜುಗರವಾಗುವುದೇ ಅಡ್ಡವಾಗುವದೇ ಇಲ್ಲ. ಅದೇಕೋ ಗೊತ್ತಿಲ್ಲ, ನನಗೆ ಡಾ||ರಾಜ್ ಅನ್ನು ಏಕೆವಚನದಲ್ಲಿ ಕೆರೆಯೋದೇ ಇಷ್ಟ. ಬಹುವಚನ ಬಳಸಿಬಿಟ್ಟರೆ, ಅವನು ಯಾರೋ ಬೇರೆಯವನಾಗಿ ನಿಂತು ಬಿಡುತ್ತಾನೆ. ಅಲ್ಲಾ, ರಾಜ್ಕುಮಾರು ನಮಗೆ ಮಾರ್ಗತೋರಿಸಿಕೊಟ್ಟ ಆದರ್ಶವಾದರೂ ಎಂಥಾದ್ರೀ.

"ಜಗವೇ ಒಂದು ರಣರಂಗ". ಎಂಥ ಹಾಡ್ ಕಣ್ರೀ ಇದು. ಹುಚ್ಚೆದ್ದು ಕುಣಿಸುತ್ತದೆ ನನ್ನನ್ನ. ಅದೇನು ಧಾಟಿ, ಅದೇನು ನೀತಿಬೋಧೆ. ಯಪ್ಪಾ!!! ಎಂತಹ ತಾತ್ವಿಕ ನೆಲೆಯನ್ನು ನನಗೆ ತೋರಿಸಿಕೊಟ್ಟಿದೆ ಎಂದರೆ, ನಾನು ಈ ಹಾಡನ್ನು, "ನನ್ನ ನಿತ್ಯಸ್ತುತಿ"ಯನ್ನಾಗಿ ಮಾಡಿಕೊಳ್ಳಬೇಕು ಅಂತ ಇದ್ದೀನಿ.

  • Login or register to post comments
  • link
  • Email this ಪ್ರತಿಕ್ರಿಯೆ
April 13, 2008 - 11:08pm — Sunil Jayaprakash

ಉ: ಡಾ.ರಾಜ್‌ರಿಲ್ಲದೇ........... ಎರೆಡು ವರ್ಷ : ಒಂದು ನೆನಪು

Sunil Jayaprakash's picture

ಅದೇನು ಕಾಕತಾಳೀಯವೋ ಗೊತ್ತಿಲ್ಲ. ಈದಿನವಷ್ಟೇ ಬಸವನಗುಡಿಯಲ್ಲಿ, ಡಾ||ರಾಜ್ ಹಾಡಿರುವ ೪೦ ಹಾಡುಗಳ ಸಿಡಿ ಕೊಂಡುತಂದು, ಮನೆಗೆ ಬಂದರೆ, ನಿಮ್ಮ ಬ್ಲಾಗ್ ಕಣ್ಣಿಗೆ ಬಿತ್ತು.

ರೂಪಾ ಅವರೇ, ನಿಮಗೆ ಹೆಚ್ಚೆಚ್ಚುನನ್ನಿ ಕಣ್ರೀ. ಈದಿನ "ಅಣ್ಣಾವ್ರನ್ನ" ನಮ್ಮನೆಗೆ ಕಳಿಸಿಕೊಟ್ಟಿದ್ದಕ್ಕೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮತ್ತೆ ಮತ್ತೆ ಕಾಡುವ ಶಂಕರ್‌‌ನಾಗ್ ನೆನಪು :ಪ್ರೀತಿಯಿಂದ ಪ್ರೀತಿಗಾಗಿ -ಜಿ.ವಿಜಯ್ ಹೆಮ್ಮರಗಾಲ.
  • ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀತಿಯ ಕಾರಣವೆ ?
  • ತಪ್ಪು ಯಾರದ್ದು?
  • ಒಂದು ಕಹಿ ಅನುಭವ
  • ಅಮ್ಮನ ದಿನ
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಮ್ಮನ ದಿನ
  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • prasannasp
    ಉ: ದೊಡ್ಡದಾದ ಮಂಚ ???
    May 12, 2008 - 4:10pm
  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 1:38pm
  • vikashegde
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:23pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 25 ಅತಿಥಿಗಳು ಆನ್ಲೈನ್ ಇರುವರು.

ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator