ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಕೊಲೆಗಾರ(ರ್ತಿ) ಯಾರು ?
ಇಡೀ ವಠಾರ ದಿಗ್ಬ್ರೂಡವಾಗಿತ್ತು . ತಮ್ಮ ಮುಂದೆ ಆಡಿ ಬೆಳೆದ ತಮ್ಮ ಸುಮತಿ ಸಾಯುತ್ತಾಳೆ, ಅದೂ ಇಂತಹಾ ದುರ್ಮರಣಕ್ಕೆ ಈಡಾಗುತ್ತಾಳೆಂದು ಯಾರೂ ತಿಳಿದಿರಲಿಲ್ಲ.
ಆಕೆ ಕೊಲೆಯಾಗಿದ್ದು ಮೇಲ್ನೋಟಕ್ಕೆ ಎದ್ದು ಕಾಣುವಂತಹದ್ದಾಗಿತ್ತು.
ಕುತ್ತಿಗೆಯ ಆಯ ಕಟ್ಟಿಗೆ ಚೂರಿ ಚುಚ್ಚಿ ಕೊಲೆ ಮಾಡಲಾಗಿತ್ತು
ಸುಮತಿಯ ಮದುವೆ ಇನ್ನೊಂದು ವಾರವಿತ್ತು ಲಗ್ನ ಪತ್ರಿಕೆ ಹಂಚಿ ಬರಲೆಂದು ಹೋದವಳು ಶವವಾಗಿ ಮರಳಿದಳು. ರಸ್ತೆಯಲ್ಲಿ ಹೆಣವಾಗಿ ಬಿದ್ದವಳನ್ನು ವಾಹನದಲ್ಲಿ ಹೊತ್ತು ತಂದಿದ್ದರು
ಶೇಖರ್ ಅಂತೂ ಮಾತು ಬಾರದೆ ಮೂಕನಾಗಿ ಹೋಗಿದ್ದ. ನವಜೀವನದ ಕನಸು ನನಸಾಗುವುದರಲ್ಲಿ ನುಚ್ಚು ನೂರಾಗಿತ್ತು.
ಸುಮತಿಯ ಸಂಗೀತದ ಮೇಡಂನ ರೋದನ ಮುಗಿಲು ಮುಟ್ಟಿತ್ತು. ಸುಮತಿ ಅವರ ಅತ್ಯುತ್ತಮ ವಿಧ್ಯಾರ್ಥಿನಿ. ಅವಳು ಸಂಗೀತಕ್ಕೆ ಜೀವನವನ್ನೇ ಮುಡಿಪಾಗಿಡಬೇಕೆಂದ ಆಸೆ ಹೊತ್ತಿದ್ದಳು. ಸುಮತಿಯ ಕಂಠಕ್ಕೆ ಮಾರು ಹೋಗದವರೇ ಇರಲಿಲ್ಲ.
ಸುಮತಿಯ ತಂದೆ ರಾಘವೇಂದರು ಹಣ್ಣಾಗಿ ಹೋಗಿದ್ದರು ಇದ್ದೊಬ್ಬ ಒಬ್ಬಳೇ ಮಗಳನ್ನು ಕಳೆದುಕೊಂಡು ನಿತ್ರಾಣಾರಾಗಿದ್ದರು. ತಾಯಿ ಇಲ್ಲದ ಮಗಳನ್ನು ಅಕ್ಕರೆ ಇಂದ ಬೆಳೆಸಿದ್ದರು.
ಶಾಲಿನಿಯಂತೂ ಪ್ರಜ್ನೆ ತಪ್ಪಿ ಬಿದ್ದಿದ್ದಳು .ಸುಮತಿ ಅವಳ ಜೀವದ ಗೆಳತಿಯಾಗಿದ್ದಳು.
ಯಾರ ಮೇಲೂ ಅನುಮಾನ ಬರುವಂತಿರಲಿಲ್ಲ. ಸುಮತಿ ತನ್ನ ಒಳ್ಳೆಯ ನಡತೆ ಸದ್ಗುಣಗಳಿಂದ ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದಳು.
ಯಾರೋ ಒಡವೆಯ ಆಸೆಗೆ ಕೊಂದಿದ್ದಾರೆ ಎನ್ನುವಂತಿರಲಿಲ್ಲ ಏಕೆಂದರೆ ಸುಮತಿ ಧರಿಸಿದ್ದ ಒಡವೆಗಳು ಹಾಗೆ ಇದ್ದವು.
ಅತ್ಯಾಚಾರದ ಪ್ರಯತ್ನದ ಯಾವ ಪುರಾವೆಗಳು ಕಾಣಲಿಲ್ಲ
ಯಾರೋ ಗೊತ್ತಿರುವವರೇ ಮುಂದಿನಿಂದಲೆ ಆಕ್ರಮಣ ಮಾಡಿರುವುದು ಪೋಲೀಸರನ್ನು ಚಿಂತೆಗೀಡು ಮಾಡಲಾಯಿತು.
ಅವಳು ಯಾರ ಯಾರ ಮನೆಗೆ ಹೋಗಬೇಕೆಂಬ ಯೋಚನೆ ಮಾಡಿದ್ದಳೋ ಒಬ್ಬರಿಗೂ ಗೊತ್ತಿರಲಿಲ್ಲ.
ಅದೂ ಅಂದು ಅವಳು ತಮ್ಮ ಮನೆಗೆ ಬರಲೇ ಇಲ್ಲವೆಂದು ಅವರಿಗೆ ತಿಳಿದವರೆಲ್ಲಾ ಹೇಳಿದರು .
ಅವಳ ಕತ್ತಿನಲ್ಲೇ ಇದ್ದ ಚೂರಿಯ ಮೇಲೂ ಯಾರ ಬೆರಳ ಗುರುತೂ ಇರಲಿಲ್ಲ
ಹಾಗಿದ್ದರೆ ಯಾರು ಕೊಲೆ ಮಾಡಿದವರು?
ಒಬ್ಬರಿಗೆ ಒಂದೇ ಅವಕಾಶ
ಉತ್ತರಿಸುವುದಕ್ಕೆ .
ಉತ್ತರದ ಜೊತೆಗೆ ಕಾರಣವೂ ಬೇಕು
(ಮುಂದುವರೆಯುವುದು)

- roopablrao ರವರ ಬ್ಲಾಗ್
- Login or register to post comments
- 558 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಕೊಲೆಗಾರ ಯಾರು ?
ಗುಱುಱಾಜ
www.kannadaguru.blogspot.com
ಈ ಕಥೆಯಲ್ಲಿ ಅವಳ ಸಾವಿಗೆ ಕಾರಣರಾದವರು.............................ರೂಪಾ ರಾವ್ ಯಾಕೆ೦ದರೆ ಕತೆ ಬರೆದುದ್ದು ಅವರೆ,
ಉ: ಕೊಲೆಗಾರ ಯಾರು ?
ಅದಿರಲಿ
ಸರಿ ಉತ್ತರ ಹುಡುಕಿ ಗುರುರಾಜರೇ
http://thereda-mana.blogspot.com/
ರೂಪ
ಉ: ಕೊಲೆಗಾರ ಯಾರು ?
ಸುಮ್ಮನೆ ಒಂದು ಗೆಸ್,
. ಕಾರಣ, ಯಾರಿಗೇನೂ ಹೆಳದಿದ್ರು, ಜೀವದ ಗೆಳತಿಗೆ ತಾನು ಎಲ್ಲಿಗೆ ಹೋಗ್ತಿದಿನಿ ಅಂತ ಹೇಳಿರಲೇಬೇಕು, ಕೊಲೆಗೆ ಕಾರಣ, ಶಾಲಿನಿ, ಶೇಖರ್ ನ love ಮಾಡ್ತಿರಬಹುದು
(ಅಥವಾ ಇಬ್ರದು affair
).
ಶಾಲಿನಿ ಮಾಡಿರಬಹುದು
ಆದ್ರೂ ಕ್ಲ್ಯೂಗಳು insufficient....
ಉ: ಕೊಲೆಗಾರ ಯಾರು ?
?
ಉ: ಕೊಲೆಗಾರ ಯಾರು ?
ಮುಂದುವರೆಸಿ
http://thereda-mana.blogspot.com/
ರೂಪ
ಉ: ಕೊಲೆಗಾರ ಯಾರು ?
ಸಂಗೀತದ ಮೇಡಂ ತನ್ನ ಶಿಷ್ಯೆಯ ಏಳಿಗೆ/ಪ್ರತಿಭೆಯನ್ನು ಸಹಿಸಲಾರೆದೆ, ಕೊಲೆ ಮಾಡಿರಬಹುದು.
ಉ: ಕೊಲೆಗಾರ ಯಾರು ?
ಹೌದು ಹೌದು..!
ಸಂಗೀತದ ಮೇಡಂಗೆ ಎಲ್ಲಿ ಮದುವೆ ಆದ್ಮೇಲಿ ಸುಮತಿ ಅವರ ಹಾಗೆ ಸಂಗಿತದ ಕ್ಲಾಸ್ ಶುರು ಮಾಡಿ ಬುಸಿನೆಸ್ಸ್ ಡಲ್ ಮಾಡ್ತಾಳೊ ಅಂತ ಸಂಗೀತದ ಮೇಡಮ್ ಹೀಗಿ ಮಾಡಿರ್ತಾರೆ.
-ಯುವಪ್ರೇಮಿ
ಉ: ಕೊಲೆಗಾರ ಯಾರು ?
ಕೊಲೆ ಮಾಡಿದ್ದು ಸಂಗೀತದ ಮೇಡಮ್.
ಶ್ರೀನಿವಾಸ ಬಂಗೋಡಿಯವರ ಅನುಮಾನದ ಎಳೆಗಳು ಸರಿ ಇವೆ..
ಆದರೆ ಕಾರಣ ತನ್ನ ಶಿಷ್ಯೆಯ ಏಳಿಗೆ ಸಹಿಸದೇ ಅಲ್ಲ.., ಸಂಗೀತಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಡುತ್ತಾಳೆ ಎಂದು ತಾನು ನಂಬಿಕೆ ಇರಿಸಿದ್ದ ತನ್ನ ಶಿಷ್ಯೆ ಮದುವೆ ಆಗಲು ನಿಂತಿದ್ದು!!
ಈ ಸಾಲುಗಳನ್ನು ನೋಡಿ,..
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಕೊಲೆಗಾರ ಯಾರು ?
ಸಂಗನ ಗೌಡರ ಉತ್ತರ ಸರಿಯಾಗಿದೆ .
ಕಾರಣವೂ ನಾನು ಅಂದುಕೊಂಡಂತೆ ಇದೆ
http://thereda-mana.blogspot.com/
ರೂಪ
ಉ: ಕೊಲೆಗಾರ ಯಾರು ?
ಓ......! ಕೊಲೆಗಾರ್ತಿ ಸಿಕ್ಕಿಬಿಟ್ರ..! ಮತ್ಯಾಕೆ ತಟ, ಕಳಿಸಿ ಜೈಲಿಗೆ...!



ಆದರು ನನಗೆ ಒಂದು ವಿಷಯ ತಿಳಿಯುತಿಲ್ಲ,
ಸುಮತಿ ಮದುವೆ ಆಗ್ತಾಳೆ ಅಂದ್ರೆ ಅವಳ ಸಂಗೀತದ ಮೇಡಮ್ ಯಾಕೆ ಅವಳ ಕೊಲೆ ಮಾಡಬೇಕು ?
ಮದುವೆ ಆದ್ಮೆಲೆ ಸುಮತಿಗೆ ಮಾತು ನಿಂತೋಗುತ್ತ ? ಸುಮತಿ ಎಂದಿನಂತೆ ಹಾಡಬಹುದು ಅಲ್ಲವೆ..!
ಇದು ನನ್ನ ಕ್ರಿಮಿನಲ್ ಪಾಯ್ಂಟ್....!
ಸುಮತಿಯ ಸಂಗೀತದ ಮೇಡಮ್ ಗೆ ನಾನು ಬೇಕಿದ್ರೆ ಲಾಯರ್ ಆಗ್ತಿನಿ..!

ಅನ್ಯಾಯವಾಗಿ ಒಂದು ಜೀವ ಜೈಲು ಸೇರಬಾರದು ಅಲ್ವ..!
-ಯುವಪ್ರೇಮಿ
ಉ: ಕೊಲೆಗಾರ ಯಾರು ?
ಹೊಃ, ಒರಿಜಿನಲ್ ಕತೆ ಇಲ್ಲಿದೆ..!
ಒಂದು ಗೆಸ್ಸ್ ಮಾಡಿದ್ರೆ,
ಸುಮತಿಯನ್ನ ಮನೆಯ ಹತ್ತಿರದ ಒಬ್ಬ ಹುಡುಗ ಗೊತ್ತಿಲ್ಲದ ಹಾಗೆ ಪ್ರೀತಿಸುತಿದ್ದ.
ಸುಮತಿಯ ಮದುವೆ ನಿರ್ಚಯವಾದ ಸುದ್ದಿ ಕೇಳಿ ತಾನು ಪ್ರೀತಿಸುತಿರುವ ವಿಶಯ ತಿಳಿಸಲು ಸಮಯಕ್ಕಾಗಿ ಹಾತೊರೆಯುತಿದ್ದ.
ಆಂದು ಆವಳು ಮನೆಯಿಂದ ಹೊರ ಹೊರಟಿದ್ದನ್ನು ಕಂಡು ಹಿಂಬಾಲಿಸಿ ದಾರಿಯಲ್ಲಿ ವಿಶಯ ತಿಳಿಸಲು ಅಡ್ಡ ಕಟ್ಟಿದ.
ತನ್ನ ಮದುವೆ ಆಗಲೆ ನಿರ್ಚಯವಾಗಿರುವ ಕಾರಣ, ಆ ಹುಡುಗನ ಪ್ರಪೊಸಲ್ ಒಪ್ಪದ ಸುಮತಿಯನ್ನು ಕುತ್ತಿಗೆಗೆ ಇರುದು ಹುಡುಗ ಓಡಿ ಹೋದ.
-ಯುವಪ್ರೇಮಿ
ಉ: ಕೊಲೆಗಾರ ಯಾರು ?
ನಾನು ಹೇಳಿದ ಪಾತ್ರಧಾರಿಗಳಲ್ಲೇ ಒಬ್ಬರು
http://thereda-mana.blogspot.com/
ರೂಪ
ಉ: ಕೊಲೆಗಾರ ಯಾರು ?
ಶೇಖರ್ ಚಲನಚಿತ್ರ ಕ್ಷೇತ್ರದ ಪ್ರ(ಕು?)ಖ್ಯಾತ ಸಂಗೀತ ನಿರ್ದೇಶಕ. ಅವನ ಇತ್ತೀಚಿನ "ಕಂತ್ರಿ ನಾಯಿನಾ, ನೀನು ಕಂತ್ರಿ ನಾಯಿನಾ", "ತಿಣುಕುತಿಹೆ ಯಾಕೋ ಇಂದು, ಕೂತಲ್ಲೆ ಎದ್ದಾಗ್ಲಿಂದ್ಲೂ" ಹಾಡುಗಳು ಪಡ್ಡೆ ಹುಡುಗರ ನಾಲಿಗೆಯಲ್ಲಿ ನಲಿಯುತ್ತಿದ್ದವು. ಅವನು ಸುಮತಿಯನ್ನು ಮದುವೆಯಾಗಿ ಅವಳನ್ನು ದೊಡ್ಡ ಹಿನ್ನೆಲೆ ಗಾಯಕಿಯನ್ನಾಗಿ ಮಾಡಬೇಕೆಂದು ಪಣ ತೊಟ್ಟಿದ್ದ. ಆಗಲೇ, "ನಾನು ಧಾರ್ವಾಡ್ ಪೇಡ, ನೋಡಿ ಜೊಲ್ಲ್ ಸುರ್ಸ್ಬೇಡ", "ನಾ ಉಗಿಯುವ ಉಗುಳಲ್ಲಿ ನೀ, ನನ್ನ ನೆಗಡಿಯ ಬುರುಗಲ್ಲಿ ನೀ.." ಎನ್ನುವ ಹಾಡುಗಳನ್ನು ಅವಳ ಮಧುರ ಕಂಠದಿಂದ ಹಾಡಿಸಬೇಕೆಂದು ರೆಡಿ ಮಾಡಿಟ್ಟಿದ್ದ. ಹೀಗಿರುವಾಗ...
ನಮ್ಮ ಸುಮತಿಯ ಸಂಗೀತ ಮೇಡಂ, ಮದುವೆಯ ದಿನವೇ ಸುಮತಿಯಿಂದ ಕಛೇರಿ ಇಡಿಸಿ, ಅಲ್ಲಿ ಅವಳಿಂದ "ಬ್ರೋಚೇವಾರೆವರುರಾ..", "ದೇವಾಧಿದೇವಾ.." ಮುಂತಾದವನ್ನು ಹಾಡಿಸಬೇಕೆಂದಿದ್ದರು. ನಂತರ, ಸುಮತಿ, ಎಂ.ಎಸ್.ಎಸ್. ಅವರ ಪಟ್ಟ ಶಿಷ್ಯೆಯ,ಶಿಷ್ಯೆಯ,ಶಿಷ್ಯೆಯ,ಶಿಷ್ಯೆಯ,ಶಿಷ್ಯೆಯ, ಖಾಸಾ ಶಿಷ್ಯೆಯೆಂದು ಪ್ರಚಾರ ಮಾಡಿ ಅವಳಿಗೆ ವಿದೇಶದಲ್ಲಿ ಸಂಗೀತ ಕಛೇರಿಗಳನ್ನು ಸಹ ಏರ್ಪಡಿಸಬೇಕೆಂದಿದ್ದರು. ಆದರೆ....
ಇವರಿಬ್ಬರ ಪಿಲಾನನ್ನೂ ತಿಳಿದ ಸುಮತಿಯ ಮತಿ ಪೂರ್ತಿ ಕಂಗೆಟ್ಟು ಕಪ್ಪಿಟ್ಟು ಹೋಯಿತು. ಈ ದರಿದ್ರ ಕಂಠದ ಹಿಂದಲ್ಲವೇ ನೀವೆಲ್ಲರೂ ಬಿದ್ದಿರುವುದು. ಛೇ! ಎಂದು ಕಳಾಸಿಪಾಳ್ಯದ ದಾರಿಯಲ್ಲಿ "ಮಚ್ಚು ಮಂಜ" ಗ್ಯಾಂಗ್ ಬಿಟ್ಟು ಹೋಗಿದ್ದ ಲಾಂಗ್ ಕೈಯಲ್ಲಿ ಹಿಡಿದು ತನ್ನ ಕೋಮಲ ಕತ್ತನ್ನು ತಾನೇ ಇರಿದು ಕೊಂಡು ಸತ್ತಳು ಎಂಬಲ್ಲಿಗೆ ರೂಪಾ ಮೇಡಂ ಬರೆದು, ಸಂಪದಿಗರಿಗೆ ಕೊರೆದ ಕಥೆಯು ಮುಕ್ತಾಯವಾಯಿತು
ಉ: ಕೊಲೆಗಾರ ಯಾರು ?
are waaah...!!
-ಯುವಪ್ರೇಮಿ
ಉ: ಕೊಲೆಗಾರ ಯಾರು ?
ಥ್ಯಾಂಕ್ಸ್ ಯುವಪ್ರೇಮಿಗಳೇ !
ಉ: ಕೊಲೆಗಾರ ಯಾರು ?
ಕೊನೆಯಲ್ಲಿ ದಯವಿಟ್ಟು "ರೂಪಾ ಮೇಡಂ ಬರೆದು, ಸಂಪದಿಗರಿಗೆ ಕಲ್ಪನಾರವರು ಕೊರೆದ ಕಥೆಯು ಮುಕ್ತಾಯವಾಯಿತು" ಎಂದು ಓದಿಕೊಳ್ಳಿ.
ಉ: ಕೊಲೆಗಾರ ಯಾರು ?
ನಿಜಕ್ಕೂ ನೀವು ಬರೆದದ್ದು ultimate ಆಗಿದೆ., ನಿಮ್ಮ ಹಾಸ್ಯ - ಪ್ರಜ್ಣೆ ಅದುಭುತ.
ಉ: ಕೊಲೆಗಾರ ಯಾರು ?
ಅಪರಾಧಿ ನಾನಲ್ಲ. ಅಪರಾಧ ವೆನಗಿಲ್ಲ.
ಉ: ಕೊಲೆಗಾರ ಯಾರು ?
ಓ, ಗೊತ್ತಾಯ್ತು! ಕೊಲೆ ಮಾಡಿದವನೇ/ಳೇ ಕೊಲೆಗಾರ!
ಅಂದರೆ, ಕೊಲೆ ಮಾಡಿದ್ದು ಗಂಡಸೇ? ಹೆಂಗಸು ಕೊಲೆ ಮಾಡಿದ್ರೆ ಕೊಲೆಗಾರ್ತಿ ಆಗ್ತಾಳಲ್ವಾ?
ಉ: ಕೊಲೆಗಾರ ಯಾರು ?
ಕೊಲೆಗಾರ-ಶೇಖರ್
ಕಾರಣ-ನೀವು ಹೇಳಿರುವುದು ’ಕೊಲೆಗಾರ’ ಎಂದು. ನಿಮ್ಮ ಕತೆಯಲಿ ಇಬ್ಬರೆ ಗಂಡಸರು.ಶಾಲಿನಿಯ ತಂದೆ ಮಗಳ ಕೊಲೆ ಮಾಡಿರುವ ಸಾಧ್ಯತೆಗಳು ತುಂಬ ಕಡಮೆ.