Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಚರ್ಚೆ-ಸಂಧಾನ

March 26, 2008 - 12:12pm — roopablrao

"ನಮಿತ ನಿಂಗೆ ಎಷ್ಟು ಸಲ ಹೇಳಿದ್ದೇನೆ ನಂಗೆ ಈ ಬ್ರೆದ್ ಜಾಮ್ ತಿನ್ನೋಕೆ ಇಷ್ಟ ಇಲ್ಲ ಅಂತ . ಯಾಕೆ ಬೆಳಗೆ ಹೊತ್ತು ಬೇರೇನಾದರೂ ಮಾಡಿ ಕೊಡ್ಬಾರದಾ?" ಜೋರು ದನಿ

"ಗಿರಿ ನಿಂಗೆ ಗೊತ್ತಿದೆ ನನ್ನ ಸ್ಟೇಜ್ ಏನು ಅಂತ ಹಾಗಿದ್ದ್ದರೂ ಕೇಳ್ತೀಯಲ್ಲ. ನಿಂಗೆ ತಿಂಡಿ, ಪಾಪುಗೆ ರೆಡಿ ಮಾಡಿ ಕಳಿಸೋಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತೆ ನಾನೇನು ಸುಮ್ಮನೆ ಇರ್ತೀನಾ. 9 ಘಂಟೆಗೆ ಆಫ್ಹೀಸ್ನಲ್ಲಿ ಸೈನ್ ಇನ್ ಮಾಡಿಲ್ಲ ಅಂದರೆ ಎಷ್ಟು ಕಷ್ಟ ಗೊತ್ತಾ."

" ಅದಕ್ಕೆ ನಾನು ಹೇಳೋದು ಸುಮ್ಮನೆ ಕೆಲಸ ಬಿಟ್ಟು ಬಿಡು. ನಾನು ದುಡಿದು ತಂದು ಹಾಕೋದೇ ಬೇಕಾದಷ್ಟು ಆಗುತ್ತೆ."

"ಆ ಮಾತನ್ನ ವಾಪಸ್ ತಗೋ . ನಾನು ನಿನ್ನ ಮದುವೆ ಆಗೋಕಿಂತ ಮುಂಚೆ ಕೆಲಸದಲ್ಲಿ ಇದೀನಿ . ಇನ್‌ಫ್ಯಾಕ್ಟ್, ನೀನು ನನ್ನ ಮದುವೆಯಾದದ್ದೇ ನಾನು ಕೆಲಸದಲ್ಲಿ ಇದೀನಿ ಅಂತ. ನಾನು ಏನು ಮಾಡಿದ್ರ್ರೂ ಕೆಲಸ ಬಿಡಲ್ಲ. ಈಗಲೆ ಇಷ್ಟೊಂದು ದಬ್ಬಾಳಿಕೆ ನಡೆಸ್ತೀಯ. ಆಮೇಲಷ್ಟೆ"

" ನಮಿ ಅವಾಗಿನ ಪರಿಸ್ತಿತಿ ಹಾಗಿತ್ತು. ಇವಾಗ ನಮಗೇನು ಕಡಿಮೆಯಾಗಿದೆ ಹೇಳು.ಹಣ ಇದೆ . ನೆಮ್ಮದಿ ಒಂದೆ ನಮಗೀಗ ಬೇಕಿರೋದು.
ಜಾಬ್ ರೆಸೈನ್ ಮಾಡಿಬಿಡು. "

"ಬೇಕಿದ್ರೆ ನೀನೆ ಕೆಲಸ ಬಿಟ್ಟುಬಿಡು. ನಾನೆ ದುಡಿದು ತಂದು ಹಾಕುತ್ತೇನೆ . ನೀನು ಮನೇಲಿದ್ದು ರುಚಿರುಚಿಯಾಗಿ ಅಡಿಗೆ ಮಾಡ್ಕೊಂಡು ಪಾಪುನ ನೋಡಿಕೊಂಡು ಹಾಯಾಗಿರು"

"ಎಂಥ ಮಾತಾಡ್ತೀಯ ನೀನು. ನೋಡು ನಮಿತ ನಾನು ನಿನ್ನ ಒಳ್ಳೆದಕ್ಕೆ ಹೇಳ್ತೀನಿ. ಮುಂದೆ ಇದು ತುಂಬ ಕಷ್ಟ ಆಗುತ್ತೆ."

"ಏನು ಬ್ಲಾಕ್ ಮೇಲ್ ಮಾಡ್ತೀಯ . ನಾನು ಎಲ್ಲಾದಕ್ಕೂ ರೆಡಿ . ಈಗಲೆ ಹೇಳಿಬಿಡು ನಿನ್ನ ಮನಸಿನಲ್ಲಿ ಏನಿದೆ ಅಂತ . ನಾನು ಲಾಯರ್ ನ ನೋಡ್ತೀನಿ"

" ಇಷ್ಟು ದೂರ ಯಾಕೆ ಮಾತಾಡ್ತೀಯ. ನಾನೆಲಿ ಹಾಗೆ ಹೇಳಿದ"

" ಬೇಡ ನಂಗೆ ಏನೂ ಬೇಡ................................ ನನ್ನನ್ನ ಮುಟ್ಭೆಡ......................... ಮೊದಲು ನಂಗೆ ಡೈವೋರ್ಸ್ ಬೇಕು"

"ಸರಿ ನಿನ್ ಆಸೆ ಏನಿದ್ಯೊ ಹಾಗೆ ಆಗಲಿ"

"ಆಯ್ತು ಬಿಡು"

ಸ್ವಲ್ಪ ಹೊತ್ತು ಮುಸಿ ಮುಸಿ ಅಳು

ಕೊಂಚ ಹೊತ್ತಿನ ನಂತರ

" ನಮಿ ಸ್ವಲ್ಪ ಕಾಫಿ ಕೊಡೆ. ತುಂಬಾ ತಲೆ ನೋವ್ತಿದೆ"

"............" ಮೌನ

" ಪ್ಲೀಸ್ ಕಣೇ. "

"-------" ಮೌನ

" ಅಮ್ಮಾ ತುಂಬಾ ತಲೆ ನೋವು. ಅಮ್ಮನ್ನ ಕರೆಸಿಕೊಳ್ಖ್‌ಬೇಕು"

" ಅತ್ತೆನ್ ಯಾಕೆ ಕರೆಸಿಕೊಳ್ತೀಯ. "

" ಮತ್ತೆ ನೀನು ಬಿಟ್ಟು ಹೋದರೆ ಯಾರಿದಾರೆ ನಂಗೆ"

"ಯಾಕೆ ಮತ್ತೆ ಬೇರೆ ಮದುವೆ ಯಾಗಬಹುದಲ್ಲವಾ?"

" ಬರೋರು ನಿನ್ನ ಥರ ಇರಲ್ಲವಲ್ಲಾ "

" ........ " ಮೌನ

"ಸಾರಿ ನಮಿತಾ"

"---------" ಮೌನ

"ಸಾರಿ ಕಣೆ"

"ಹೋಗಲಿ ಬಿಡು ನಿಂಗೆ ಕಾಫಿ ತಾನೆ ಕೊಡ್ತೀನಿ"

"ಆಮೇಲೆ"

" ನಿಂಗೆ ನವರತ್ನ ಪಲಾವ್ ಮಾಡಿಕೊಡ್ತೀನಿ ಆಯ್ತಾ"

"ಆಮೇಲೆ"

"ಅಮೇಲಿನ ಎಲ್ಲಾನು ಆಮೇಲೆ"

ಅರ್ಥಗರ್ಭಿತ ನಗುವಿನ ಅಲೆ

  • ಹನಿ
Ornamental seperator
  • roopablrao ರವರ ಬ್ಲಾಗ್
  • Login or register to post comments
  • 194 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೂಲಾನಕ್ಷತ್ರದ ಅನಿಷ್ಟದವಳೇ....
  • ಹೊಸ ವರ್ಷದ ಹಳೆಯ ನೆನೆಪು
  • ಪ್ರೇಮಿಗಳ ಸಂಭಾಷಣೆ
  • ಪಾಪು ಮತ್ತು ಚಂದಮಾಮ
  • ನೀರಿಲ್ಲದ ನದಿಯೊಂದಕ್ಕೆ ಹಾರಲು ಹೋಗಿ......
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
  • ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ
  • ಆದದ, ವೋದದ?
  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
    May 14, 2008 - 6:31pm
  • ASHMYA
    ಉ: ಆದದ, ವೋದದ?
    May 14, 2008 - 6:27pm
  • ASHMYA
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 14, 2008 - 6:11pm
  • Shivakumar.Revadi
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 14, 2008 - 5:59pm
  • Shivakumar.Revadi
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 14, 2008 - 5:53pm
  • Shivakumar.Revadi
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 5:40pm
  • ಸಂಗನಗೌಡ
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 5:26pm
  • madhava_hs
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 2:45pm
  • sushil
    ಉ: ಸೃಷ್ಟಿ(ಸುಶೀಲನ ಪದ್ಯಗಳು)
    May 14, 2008 - 2:38pm
  • sushil
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    May 14, 2008 - 2:35pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator