ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › sankul ರವರ ಬ್ಲಾಗ್

ಕರ್ನಾಟಕ(ಬೆಂಗಳೂರು)ದಲ್ಲಿ ರಣಜಿ ಕ್ರಿಕೆಟ್

November 26, 2007 - 2:39pm — sankul

ಈ ಸಾಲಿನ ರಣಜಿ ಕ್ರಿಕೆಟ್ಟಿನ ಸುಪರ್ ಲೀಗ್ ಪಂದ್ಯಗಳು ಪ್ರಾರಂಭವಾಗಿವೆ ಮತ್ತು ಮೂರನೆಯ ಸುತ್ತಿನ ಪಂದ್ಯಗಳು ಮುಗಿಯುತ್ತಾ ಬಂದಿವೆ. ಇಲ್ಲ, ನಾನು ಈ ಪಂದ್ಯಗಳ ವಿಶ್ಲೇಷಣೆಯನ್ನು ಮಾಡುವದಿಲ್ಲ. ಆದರೆ ಕರ್ನಾಟಕ ಕ್ರಿಕೆಟನ ಇನ್ನೊಂದು ಮುಖವನ್ನು ಪರಿಚಯ ಮಾಡಲು ಪ್ರಯತ್ನಿಸುತ್ತೇನೆ.

೨೦೦೫-೦೬ನೆಯ ಸಾಲಿನ ರಣಜಿ ಟ್ರೋಫಿ ಸುಪರ್ ಲೀಗಿನಲ್ಲಿ ೬ ಪಂದ್ಯಗಳನ್ನಾಡಿತು, ಅದರಲ್ಲಿ ೪ ಪಂದ್ಯಗಳನ್ನು ತಮ್ಮ ಮನೆಯಂಗಳದಲ್ಲೇ ಆಡುವ ಅವಕಾಶ ಕರ್ನಾಟಕಕ್ಕೆ ಸಿಕ್ಕಿತು. ಆ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳು ಬೆಂಗಳೂರಿನಲ್ಲಿ ಮತ್ತು ಒಂದು ಪಂದ್ಯ ಬೆಂಗಳೂರಿನಿಂದ ಬಹಳಷ್ಟು ದೂರವಿರುವ ಮೈಸೂರಿನಲ್ಲಿ ನಡೆಯಿತು. ಹೋದ ಸಾರೆಯ ಅಂದರೆ ೨೦೦೬-೦೭ನೆಯ ಸಾಲಿನ ಸುಪರ್ ಲೀಗಿನ ಸೆಮಿ ಫೈನಲ್ ಹಂತದವರೆಗೂ ಮುಟ್ಟಿದ ಕರ್ನಾಟಕದ ತಂಡ ಒಟ್ಟು ಎಂಟು ಪಂದ್ಯಗಳನ್ನಾಡಿತು, ಅದರಲ್ಲಿ ಕೇವಲ ಎರಡು ಪಂದ್ಯಗಳು ತವರಿನ ಅಂಗಳದಲ್ಲಿ ನಡೆಸುವ ಯೋಗ ಕರ್ನಾಟಕಕ್ಕಿತ್ತು. ಆ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಬೆಂಗಳೂರಿನಲ್ಲೂ ಮತ್ತೊಂದು ಪಂದ್ಯ ಮೈಸೂರಿನಲ್ಲಿ ನಡೆಯಿತು. ಇದೇ ಸಾಲಿನಲ್ಲಿ ಮಹಾರಾಷ್ಟ್ರ ತಂಡ ಸುಪರ್ ಲೀಗಿನಲ್ಲಿ ೬ ಪಂದ್ಯಗಳನ್ನಾಡಿತು, ಅದರಲ್ಲಿ ೫ ಪಂದ್ಯಗಳನ್ನು ತಮ್ಮ ಮನೆಯಂಗಳದಲ್ಲೇ ಆಡುವ ಅವಕಾಶ ಮಹಾರಾಷ್ಟ್ರಕ್ಕೆ ಸಿಕ್ಕಿತು. ಆ ಐದರಲ್ಲಿ ಒಂದೂ ಪಂದ್ಯವೂ ಕೂಡ ಮಹಾರಾಷ್ಟ್ರ ಕ್ರಿಕೆಟನ ಕೇಂದ್ರ ಸ್ಥಾನವಾದ ಪುಣೆಯಲ್ಲಿ ನಡೆಯಲಿಲ್ಲ. ಪಂದ್ಯಗಳು ಕರಾಡ, ರತ್ನಾಗಿರಿ, ನಾಸಿಕ್ ಮತ್ತು ಕೊಲ್ಹಾಪುರಗಳಲ್ಲಿ ನಡೆದವು. ಇದರ ಹಿಂದಿನ ವರ್ಷ ಅಂದರೆ ೨೦೦೫-೦೬ನೆಯ ಸಾಲಿನಲ್ಲಿ ಕೂಡ ಪಂದ್ಯಗಳು ನಾಸಿಕ್ ಮತ್ತು ಕೊಲ್ಹಾಪುರಗಳಲ್ಲಿ ನಡೆದವು. ಇದರಿಂದ ರಾಜ್ಯದ ಮೂಲೆಗಳ ಜನರಿಗೆ ಒಳ್ಳೆಯ ದರ್ಜೆಯ ಕ್ರಿಕೆಟ ಪಂದ್ಯಗಳನ್ನು ಖುದ್ದಾಗಿ ನೋಡುವ ಅವಕಾಶ ಸಿಕ್ಕಿತು, ಕ್ರಿಕೆಟ್ ಸಂಸ್ಥೆಗೆ ಒಳ್ಳೆಯ ದುಡ್ಡು ಸಿಕ್ಕಿತು ಮತ್ತು ಪಂದ್ಯಗಳನ್ನು ಸರಿಯಾದ ಅರ್ಥದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಆಡಲಾಯಿತು, ಬರೀ ಒಂದೆರಡು ನಗರಗಳಲ್ಲಲ್ಲ. ಬೆಂಗಳೂರು ಮತ್ತು ಮೈಸೂರನ್ನು ಹೊರತುಪಡಿಸಿ ನಡೆದ ಕೊನೆಯ ಪಂದ್ಯ ನವ್ಹೆಂಬರ ೧೫-೧೮, ೨೦೦೦ದಲ್ಲಿ ಬೆಳಗಾವಿಯಲ್ಲಿ ಆಂಧ್ರದ ವಿರುದ್ಧ ನಡೆದಿತ್ತು.

ಇವೆಲ್ಲವನ್ನೂ ಅವಲೋಕಿಸಿದಾಗ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಹೆಸರನ್ನೇಕೆ ಬದಲಾಯಿಸಿ ಬೆಂಗಳೂರು ಕ್ರಿಕೆಟ್ ಸಂಸ್ಥೆ ಎಂತಿಡಬಾರದು? ಬೇರೆ ರಾಜ್ಯಗಳು ಪಂದ್ಯಗಳನ್ನೂ ಹೊಸ ಹೊಸ ಕ್ರೀಡಾಂಗಣಗಳಲ್ಲಿ ತಮ್ಮ ರಾಜ್ಯದ ಮೂಲೆ ಮೂಲೆಯಲ್ಲಿ ಆಡಿಸುತ್ತಿವೆ, ಕರ್ನಾಟಕದಲ್ಲಿ ಏಕೆ ಅಂತಹ ಪ್ರಯತ್ನವಾಗುತ್ತಿಲ್ಲ. ಇದಕ್ಕೇನೂ ಅಸಡ್ಢೆಯೆನಬೇಕೋ ಅಥವಾ ತಾರತಮ್ಯವೆನಬೇಕೋ ಗೊತ್ತಿಲ್ಲ. ಸರಕಾರದಿಂದ ನಡೆಯುವ ಅಭಿವೃದ್ಧಿ ಕೆಲಸಗಳಲ್ಲಿ ಪ್ರಾದೇಶಿಕ ಅಸಮಾನತೆಯಂತೂ ಗೊತ್ತಿರುವ ವಿಷಯ ಇದನ್ನೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡೆಯಲ್ಲೂ ಬೆಳೆಸಿ ತಾನೇನೂ ಸರಕಾರಕ್ಕಿಂತ ಕಡೆಮೆಯಿಲ್ಲ ಎಂದು ತೋರಿಸಿಕೊಡವ ಪ್ರಯತ್ನ ಮಾಡುತ್ತಿದೇಯೋ ಹೇಗೆ?

  • ಕ್ರೀಡೆ
  • ಪ್ರಚಲಿತ ವಿದ್ಯಮಾನ
~.~
  • sankul ರವರ ಬ್ಲಾಗ್
  • Login or register to post comments
  • 275 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 27, 2007 - 1:16am — rajeshnaik111

ಉ: ಕರ್ನಾಟಕ(ಬೆಂಗಳೂರು)ದಲ್ಲಿ ರಣಜಿ ಕ್ರಿಕೆಟ್

rajeshnaik111's picture

ಜಿಲ್ಲಾ ಕೇಂದ್ರಗಳಲ್ಲಿರುವ ಕ್ರೀಡಾಂಗಣಗಳನ್ನು ಉತ್ತಮಗೊಳಿಸಲು ಕೆ.ಎಸ್.ಸಿ.ಎ ಏನೂ ಪ್ರಯತ್ನ ಮಾಡಿಲ್ಲ...ಹಾಗಾಗಿ ಅಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತಿಲ್ಲ ಎನ್ನಬಹುದು. ಒಂದು ರೀತಿಯಲ್ಲಿ ಕರ್ನಾಟಕ ತಂಡ ಅಂದರೆ ಬೆಂಗಳೂರು ಎಂದೇ ಆಗಿದೆ. ಬೆಂಗಳೂರು ಅಥವಾ ಮೈಸೂರುಗಳಲ್ಲಿ ಲೀಗ್ ಕ್ರಿಕೆಟ್ ಆಡಿದರೆ ಮಾತ್ರ ಕೆ.ಎಸ್.ಸಿ.ಎ ದೊರೆಗಳು ಗುರುತಿಸುತ್ತಾರೆ. ಕಳೆದ ದಶಕದಲ್ಲಿ ಅಂದರೆ ೧೯೯೧ ರಿಂದ ೨೦೦೦ ದವರೆಗೆ ತಾಲೂಕು ಕೇಂದ್ರಗಳಲ್ಲೂ ರಣಜಿ ಪಂದ್ಯಗಳು ನಡೆದಿದ್ದವು. ಗೋವಾ ವಿರುದ್ಧ ಪಂದ್ಯವೊಂದು ಶಿರಸಿಯಲ್ಲಿ ನಡೆದಿತ್ತು. ಪಂದ್ಯದ ಎಲ್ಲಾ ದಿನಗಳಲ್ಲೂ ಶಿರಸಿಯಲ್ಲಿ ಜಾತ್ರೆ. ಮಾರಿಕಾಂಬಾ ಜಾತ್ರೆಗೂ ಅಷ್ಟು ಜನರಿರುತ್ತಿರಲಿಲ್ಲ! ಹಾಗೆ ಬಿಜಾಪುರ, ದಾವಣಗೆರೆ, ರಾಯಚೂರು ಇಲ್ಲಿಯೂ ಪಂದ್ಯಗಳು ನಡೆದಿದ್ದವು. ಆದರೆ ೨೦೦೦ದ ಬೆಳಗಾವಿ ಪಂದ್ಯದ ಬಳಿಕ ಮಂಡ್ಯದಲ್ಲಿ ೩ ವರ್ಷಗಳ ಮೊದಲು ಬಂಗಾಲದ ವಿರುದ್ಧ ಪಂದ್ಯ ನಡೆದದ್ದು ಬಿಟ್ಟರೆ, ಬೆಂಗಳೂರಿಗೆ ಮಾತ್ರ ಆದ್ಯತೆ. ಕಳೆದೆರಡು ವರ್ಷಗಳಿಂದ ಮೈಸೂರಿನಲ್ಲಿ ರೆಗ್ಯುಲರ್ ಆಗಿ ಪಂದ್ಯ ನಡೆಸಲಾಗಿತ್ತಿದೆ. ಮೈಸೂರಿನಲ್ಲಿ 'ಗಂಗೋತ್ರಿ ಗ್ಲೇಡ್ಸ್' ಮೈದಾನವನ್ನು ನಿರ್ಮಿಸಿದಂತೆ ರಾಜ್ಯದ ಉಳಿದೆಡೆ ಇದೇ ರೀತಿ ಮಾಡುವ ಸಾಮರ್ಥ್ಯ ಕೆ.ಎಸ್.ಸಿ.ಎ ಗೆ ಇದೆ .... ಆದರೆ ಛಲ ಇಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕರ್ನಾಟಕ ಕ್ರಿಕೆಟ್ - ೮
  • ಕರ್ನಾಟಕ ಮತ್ತು ತಮಿಳನಾಡು ನಡುವಣ ರಣಜಿ ಪಂದ್ಯದ updateಗಳು
  • ಕುಂಬ್ಳೆಗೆ ಒಂದು ಮುಗ್ಧ ಟಾಟಾ
  • ಕರ್ನಾಟಕ ಕ್ರಿಕೆಟ್ - ೧
  • ಕರ್ನಾಟಕ ಕ್ರಿಕೆಟ್ - ೪
Syndicate content

ಲೇಖಕರು

sankul's picture

ಪೂರ್ಣ ಹೆಸರು
ಸಂಜೀವ ಕೃಷ್ಣಾಜಿ ಕುಲಕರ್ಣಿ

ಪರಿಚಯ

ಹುಟ್ಟಿದ್ದು ಸರ್ವಜ್ಞ್ನನ ಊರಾದ ಮದಗ ಮಾಸೂರಿನಲ್ಲಿ. (ಮಾಸೂರು ತಾ: ಹಿರೇಕೆರೂರು)
ವಿದ್ಯಾಭ್ಯಾಸ: ಹುಬ್ಬಳ್ಳಿ ಮತ್ತು ಹಾವೇರಿಯಲ್ಲಿ.
ಮೂರು ವರ್ಷದಿಂದ ಪುಣೆ ನಿವಾಸಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 70 ಅತಿಥಿಗಳು ಆನ್ಲೈನ್ ಇರುವರು.


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator