Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › santoshbhatta ರವರ ಬ್ಲಾಗ್

ಎ.ಆರ್.ರೆಹಮಾನ್ ಕನ್ನಡಕ್ಕೆ

January 29, 2007 - 3:41pm — santoshbhatta

ಗೆಳೆಯರೆ ನಿಮಗೆ ಗೊತ್ತಿರಬಹುದು ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಸಜನಿ ಎಂಬ ಕನ್ನಡ ಚಿತ್ರದ ಸಂಗೀತ ನಿರ್ದೇಶನದ ಭಾರವನ್ನು ಹೊತ್ತಿದ್ದಾರೆ.ಎಲ್ಲರ ಹಾಗೆ ನನಗೂ ಹರ್ಷ ಮತ್ತು ಹಾಡುಗಳನ್ನು ಕೇಳುವ ಕುತೂಹಲ ಎರಡೂ ಇತ್ತು. ಮೊನ್ನೆ ಬಾನುಲಿಯಲ್ಲಿ ಆ ಚಿತ್ರದ ಹಾಡೊಂದನ್ನು ಕೇಳಿದೆ ಆದರೆ ಅದು ಪುಕಾರ್ ಎಂಬ ಹಿಂದಿ ಚಿತ್ರದ ಹಾಡೊಂದರ ಕನ್ನಡ ಅವತರಣಿಕೆ ಅಷ್ಟೆ.ಈ ಹಾಡನ್ನು ಕೇಳಿ ನನ್ನ ಆಸೆಗಳಿಗೆ ತಣೀರೆರಚಿದಂತಾಯಿತು. ನಿರ್ಮಾಪಕ ಹಾಗೂ ನಿರ್ದೇಶಕರ ಮೂರ್ಖತನಕ್ಕೆ ಮನದಲ್ಲೇ ನಕ್ಕೆ.ಹಾಗೊಂದು ವೇಳೆ ಅದೇ ಹಾಡನ್ನು ಬಳಸಬೇಕು ಅಂತಿದ್ದರೆ ಅಷ್ಟು ಹಣ ಸುರಿದು ರೆಹಮಾನ್ ಅವರನ್ನು ಯಾಕೆ ಕರೆಸಬೇಕಿತ್ತು?????? ನಮ್ಮ ರಾಜೇಶ್ ರಾಮನಾಥ್ ಅವರು ಆ ಕಾರ್ಯದಲ್ಲಿ ನಿಸ್ಸೀಮರುWink.

Ornamental seperator
  • santoshbhatta ರವರ ಬ್ಲಾಗ್
  • Login or register to post comments
  • 491 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 29, 2007 - 4:45pm — ರಘುನಂದನ

Re: ಎ.ಆರ್.ರೆಹಮಾನ್ ಕನ್ನಡಕ್ಕೆ

ರಘುನಂದನ's picture

ಏಯಾರ್ರೆಹಮಾನ್ ಕನ್ನಡಕ್ಕೆ ಬಂದು ಸಂಗೀತ ನೀಡಿದರೆ ಅದೊಂದು ದೊಡ್ಡ ಭಾಗ್ಯ ಎಂದು ಭ್ರಮೆ ಯಾಕೆ? ಈತನ ಸಂಗೀತ ಒಂದು ಕ್ರೇಜನ್ನು ಹುಟ್ಟಿಸುವುದೇ ವಿನಃ ಜೀವನದುದ್ದಕ್ಕೂ ನೆನಪಿಡುವಂತ ಮಾಧರ್ಯದ ಲಹರಿಯನ್ನು (ಉದಾ ರಾಜನ್-ನಾಗೇಂದ್ರ,ಬರ್ಮನ್ ಇತ್ಯಾದಿ)ಇದುವರೆಗೂ ಹರಿಸಿಲ್ಲ. ಮೇಲಾಗಿ ಇಂತಹವರಿಗೆ ಕನ್ನಡವೆಂದರೆ ಅಸಡ್ಡೆ ಎನ್ನಲು ಈ ರೀತಿಯ ವರ್ತನೆಗಳೇ ಸಾಕ್ಷಿ. ನಾವಾಗಿಯೇ ಹೋಗಿ ಅವರ ಮುಂದೆ ನಿಂತು ದೀನರಾಗಿ ಹಲ್ಲುಗಿಂಜುವುದಕ್ಕಿಂತ ಕನ್ನಡಕ್ಕೆ ಸರಿಹೊಂದುವ ಮಧುರ ಸಂಗೀತಕಾರರನ್ನು ಗೌರವಿಸಿದರೆ ಒಳ್ಳೆಯ ಸಂಗೀತವಾದರೂ ಹುಟ್ಟೀತು.

ತಮಿಳು ತೆಲುಗರನ್ನು ಅನುಸರಿಸಿದರೆ ಅವರಂತೆ ಅಸಂಬದ್ಧ ವಾಕ್ಯಗಳ ಸರಣಿಯೇ ಹಾಡಾಗಿಬಿಡುತ್ತದೆ. ಹಂಸಲೇಖರೂ ಸಿಕ್ಸರಿನಲ್ಲಿ ಈ ತರಹದ ಒಂದು ಹಾಡನ್ನು ಕೊಡಮಾಡಿದ್ದಾರೆ! ಅವರಿಗ್ಯಾಕೆ ಮನಸ್ಸು ಕೆಟ್ಟಿತೋ ಏನೋ? ಕಾಡನೋಡಲು ಹೋಗಿ ಕವಿತೆ ತರೋದನ್ನ ಬಿಟ್ಟು, ಯಾಕೋ ಜೊಳ್ಳು ಶಬ್ದಗಳನ್ನು ಆಯ್ದುಬಿಟ್ಟಿದ್ದಾರೆ.

ವಿ.ಸೂ. ಕನ್ನಡಕ್ಕೆ ಸರಿಹೋಗುವ ಹಾಡುಗಾರಾರು ಎನ್ನುವ ಲೇಖನ ಇದಕ್ಕೆ ಪೂರಕವಾಗಬಲ್ಲದು.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • Email this ಪ್ರತಿಕ್ರಿಯೆ
January 29, 2007 - 6:34pm — hpn

ಉ: ಎ.ಆರ್.ರೆಹಮಾನ್ ಕನ್ನಡಕ್ಕೆ

hpn's picture

ಸಂಗೀತಗಾರರನ್ನು ಬಹುಶಃ ಭಾಷೆಯ ಅಚ್ಚುಕಟ್ಟಿನಲ್ಲಿ ನೋಡುವುದು ತಪ್ಪು. ಕನ್ನಡಿಗನೋ ತಮಿಳನೋ, ಅವನಿಗೆ ಒಂದು ಭಾಷೆ ಎಂದರೆ ಅಸಡ್ಡೆ ಎಂದು ಹೇಗೆ ಹೇಳುತ್ತೀರಿ? Eye-wink

ಬಹುಶಃ ರೆಹಮಾನ್ ಗೆ ಕನ್ನಡದಿಂದ ಬ್ಯುಸಿನೆಸ್ ಬಂದಿಲ್ಲದಿರಬಹುದು, ಆದ್ದರಿಂದ ಕನ್ನಡ ಚಿತ್ರಗಳಿಗೆ ಬಹುಶಃ ಸಂಗೀತ ನೀಡಿಲ್ಲದಿರಬಹುದು.

ಹಿಂದೆ ಕನ್ನಡ ಮಾತೃಭಾಷೆಯಲ್ಲದ ಹಲವು ಸಂಗೀತ ನಿರ್ದೇಶಕರು ಬಹಳ ಒಳ್ಳೆಯ ಹಾಡುಗಳನ್ನು ನಮಗೆ ನೀಡಿದ್ದಾರೆ ಎಂಬುದನ್ನು ನಾವು ಮರೆಯಬಾರದು. Sticking out tongue

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
January 29, 2007 - 7:54pm — ರಘುನಂದನ

Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ

ರಘುನಂದನ's picture

ನಾನು ಹೇಳ್ತಾ ಇರೋದೇನೆಂದ್ರೆ, ಆ ಅಂಟೆ ಅಮಲಾಪುರಂ ಎನ್ನುವ ಕರ್ಣಕಠೋರವಾದ ಹಾಡುಗಳಂಥವುಗಳಿಗೆ ಸಾಟಿಯಾಗುವ ಸಂಗೀತವನ್ನು ಕೊಡುವ ಪ್ರಯತ್ನ ನಮ್ಮವರು ಮಾಡುವುದು ತಪ್ಪು. ಕಳೆದ ಸುಮಾರು ಆರೇಳು ವರ್ಷಗಳಿಂದ ತೆಲುಗು ತಮಿಳುಗಳಲ್ಲಿ ಈ ರೀತಿಯಾದ "ಟೈಮ್ ಬೀಯಿಂಗ್ ಪಾಪ್ಯುಲಾರಿಟಿ" ತತ್ತ್ವದ ಮೇಲೆ ಸಂಗೀತ ನಿರ್ದೇಶನ ಜಾಸ್ತಿಯಾಗ್ತಾ ಇದೆ. ಇವು ತತ್ಕಾಲಕ್ಕೆ ಎಲ್ಲರ ಬಾಯಿಯ ಮೇಲೆ ಎಗರಾಡುತ್ತಿರುತ್ತವೆ. ಹೊಸ ಸಿನಿಮಾ ಬಂತೆಂದರೆ ಹಳೆಯದನ್ನು ಕೇಳುವುದೇ ಇಲ್ಲ. (ಉದಾ: ಊರ್ವಶಿ, ಊರ್ವಶಿ ಎನ್ನುವ ಬಸ್ಸಿನ ಮೇಲೆ ಕುಣಿಯುವ ಹಾಡು) ಮಾಧುರ್ಯಕ್ಕೆ ಹೆಚ್ಚಿನ ಮಹತ್ವ ಕೊಡದೇ ಇರುವುದೇ ಇದಕ್ಕೆ ಕಾರಣವಲ್ಲವೇ? ಕಿವಿಗಿಂಪೆನಿಸುವ ಸಂಗೀತ ಎಲ್ಲ ಕಾಲಕ್ಕೂ ಎಲ್ಲ ಭಾಷೆಗಳಲ್ಲೂ ಹರಿದಾಡುತ್ತಲೇ ಇರುತ್ತದೆ. ದುರ್ದೈವದಿಂದ ಆ ಸಂಗೀತ ಈಗ ಅತಿ ಅಪರೂಪವಾಗಿಹೋಗಿದೆ. ವಿಪರ್ಯಾಸವೆಂದರೆ ಕನ್ನಡದವರು ಈ ತರಹದ ಸಂಗೀತ ನಮ್ಮಲ್ಲಿಯೂ ಕ್ಲಿಕ್ಕಾಗಬಹುದು ಎನ್ನುವ ಭ್ರಮೆಯಿಂದ ಅವರನ್ನೇ ಕರೆಸಿ ಕನ್ನಡದ ಸಿನಿಮಾಗಳನ್ನು ಓಡಿಸುವ(ನಿಜವಾಗಿಯೂ?)ಪ್ರಯತ್ನ ಮಾಡುವುದು. ಹೀಗಾದಾಗ ಅಮರ ಸಂಗೀತದ ಅಲೆಯೊಂದು ವಿಹರಿಸುವುದಾದರೂ ಹೇಗೆ?

ಸಂಗೀತಗಾರರನ್ನು ಭಾಷೆಯ ಚೌಕಟ್ಟಿನಲ್ಲಿ ನೋಡುವುದು ತಪ್ಪು ಎನ್ನುವ ಮಾತೇನೋ ಸರಿ. ಹಾಗೆ ನೋಡಿದಲ್ಲಿ ಕನ್ನಡದ ಸಾರಸ್ವತ ಲೋಕಕ್ಕೆ ಹೆಚ್ಚಿನ ಸೇವೆ ಸಂದಿದ್ದು ಕನ್ನಡೇತರ ಚೇತನರಿಂದಲೇ ಅಲ್ಲವೇ? ಗೊರೂರು, ಮಾಸ್ತ್ರಿ, ಬೇಂದ್ರೆ, ತರಾಸು,ಕಾರ್ನಾಡರು, ಹೀಗೆ...... ಸಂಗೀತಗಾರರೂ ಇದ್ದಾರೆ.
ಆದರೆ ಹೊಸ ಲಹರಿಯೊಂದನ್ನು ಹುಟ್ಟು ಹಾಕಲು ಕನ್ನಡಿಗರು ಅಸಮರ್ಥರೇ? ಅನ್ನುವದು ನನ್ನ ಪ್ರಶ್ನೆ.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • Email this ಪ್ರತಿಕ್ರಿಯೆ
January 29, 2007 - 6:42pm — hpn

ಉ: ಎ.ಆರ್.ರೆಹಮಾನ್ ಕನ್ನಡಕ್ಕೆ

hpn's picture

ಹಾಗೊಂದು ವೇಳೆ ಅದೇ ಹಾಡನ್ನು ಬಳಸಬೇಕು ಅಂತಿದ್ದರೆ ಅಷ್ಟು ಹಣ ಸುರಿದು ರೆಹಮಾನ್ ಅವರನ್ನು ಯಾಕೆ ಕರೆಸಬೇಕಿತ್ತು. ನಮ್ಮ ರಾಜೇಶ್ ರಾಮನಾಥ್ ಅವರು ಆ ಕಾರ್ಯದಲ್ಲಿ ನಿಸ್ಸೀಮರುWink

ಅವರು ಅಷ್ಟು ಹಣ ಸುರಿದರು ಎಂದು ಹೇಳುವಾಗ ಅವರೆಷ್ಟು ಹಣ ಸುರಿದರು ಎಂಬುದು ನಿಮಗೆ ಕರಾರುವಾಕ್ಕಾಗಿ ಗೊತ್ತೆ ಎಂದು ಕೇಳಬೇಕಾಗತ್ತೆ.
ಅವರುಗಳು ಏನು ಮಾತನಾಡಿಕೊಂಡಿರುತ್ತಾರೋ ಏನೋ. ನಿರ್ಮಾಪಕರಿಗೆ ಅದೇ ಟ್ಯೂನು ಇಷ್ಟವಾಗಿ "ಅದೇ ಮಾಡಿ" ಎಂದು ಹೇಳಿದ್ದರೂ ಹೇಳಿರಬಹುದು. ನಿಮಗೆ ನಿಜಾಂಶ ಗೊತ್ತೆ?
ಸರಿಯಾದ ಪುರಾವೆ ಇಲ್ಲದೆ ಹೀಗೆ ನೇರ ವ್ಯಕ್ತಿಗಳ ದೂಷಣೆ ಮಾಡಬಾರದು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
January 29, 2007 - 8:29pm — nayak_sathish

Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ

nayak_sathish's picture

ಏ ಆರ್ ರೆಹೆಮಾನ್ ರವರು ಸಜನಿ ಚಿತ್ರಕ್ಕಾಗೇ ಹೊಸ ಸಂಗೀತವನ್ನು ಕಾಂಪೋಸ್ ಮಾಡಿಲ್ಲ. ನಮ್ಮ ನಿರ್ಮಾಪಕರು ಹಳೆಯ ಟ್ಯೂನ್ ಗಳನ್ನೇ ಉಪಯೋಗಿಸಿ ಕೊಂಡಿದ್ದಾರೆ ಅಷ್ಟೆ. ಪ್ರಚಾರದ ದೃಷ್ಟಿಯಿಂದ "ಕನ್ನಡಕ್ಕೆ ಏ ಆರ್ ರೆಹೆಮಾನ್" ಎಂದು ಹೇಳ್ಕೋತಿದ್ದಾರೆ ಅಷ್ಟೆ.

  • Login or register to post comments
  • link
  • Email this ಪ್ರತಿಕ್ರಿಯೆ
January 30, 2007 - 12:26pm — santoshbhatta

Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ

santoshbhatta's picture

ಅವರು ಎಷ್ತು ಹಣ ಸುರಿದಿರುವರು ಎಂದು ಕರಾರುವಾಕ್ಕಾಗಿ ಗೊತ್ತಿರದಿದ್ದರೂ ರೆಹಮಾನ್ ಒಂದು ಚಿತ್ರಕ್ಕೆ ತೆಗೆದುಕೊಳ್ಳುವ ಹಣದ ಮೊತ್ತ ೧ ರಿಂದ ೩ ಕೋಟಿಗಳು. ನಮ್ಮ ಚಿತ್ರರಂಗದ ಇತರೇ ತಂತ್ರಜ್ನರ ಸಂಪಾದನೆಗೆ ಹೋಲಿಸಿದರೆ ಈ ಮೊಬಲಗು ದೊಡ್ಡದು.ನಾನು ನನ್ನ ಕಳವಳವನ್ನು ವ್ಯಕ್ತಪಡಿಸಿದನೇ ಹೊರತು ಯಾರನ್ನೂ ದೂಷಿಸಿಲ್ಲ. ನಾನು ಹೇಳಿದ್ದರಲ್ಲಿ ನಿಜಾಂಶವೂ ಇದೆಯೆಂದು ಭಾವಿಸುತ್ತೇನೆ.ನಾನು ರೆಹಮಾನ್ ಅವರಿಗೆ ಕನ್ನಡದ ಮೇಲೆ ಅಸಡ್ಡೆ ಎಂದು ನಾನು ಹೇಳಿಲ್ಲಾ. ನಮ್ಮ ನಿರ್ಮಾಪಕರು ಮತ್ತು ನಿರ್ದೇಶಕರು ಅವರಿಂದ ಹೊಸ ಟ್ಯೂನ್ ಗಳನ್ನು ಮಾಡಿಸಬಹುದಿತ್ತು ಅಂತ ಹೇಳಿದೆ

  • Login or register to post comments
  • link
  • Email this ಪ್ರತಿಕ್ರಿಯೆ
January 30, 2007 - 1:30pm — Sunil Jayaprakash

ಎಂಜಲು ಸಂಗೀತ ??????

Sunil Jayaprakash's picture

ಇದನ್ನು ಒಂದು ರೀತಿ, ಎಂಜಲು ಸಂಗೀತ ಎನ್ನೋಣವೇ ?

  • Login or register to post comments
  • link
  • Email this ಪ್ರತಿಕ್ರಿಯೆ
January 30, 2007 - 1:58pm — ಸಂಗನಗೌಡ

Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ

ಸಂಗನಗೌಡ's picture

ಹೊಸ ಟ್ಯೂನ್ ಮಾಡಿಸಿದ್ದರೆ ಚೆನ್ನಾಗಿರೋದು, ಹೊಸ ಟ್ಯೂನ್‍ಗೆ ಇನ್ನೂ ಹೆಚ್ಚಿಗೆ ದುಡ್ಡು ಕೇಳಿರಬಹುದು, ಆದರೂ ಮೂರು ಕೋಟಿ ಸುರಿದು ಕನ್ನಡಿಗರಿಗೆ ಎಂಜಲು ಹಾಡುಗಳನ್ನು ಕೇಳಿಸುತ್ತಿರುವದು ಸರಿ ಅಲ್ಲ. ;-(

  • Login or register to post comments
  • link
  • Email this ಪ್ರತಿಕ್ರಿಯೆ
January 30, 2007 - 9:31am — ಸಂಗನಗೌಡ

Re: ಎ.ಆರ್.ರೆಹಮಾನ್ ಕನ್ನಡಕ್ಕೆ

ಸಂಗನಗೌಡ's picture

ಹೊರಗಿನವರು ಕನ್ನಡದಲ್ಲಿ ಹಾಡಲಿ ಮತ್ತು ಹಾಡುಗಳನ್ನು ಕೊಡಲಿ ಬೇಡಾ ಅನ್ನಲ್ಲಾ, ಆದರೆ ನುಡಿಯ ಚೆಂದವನ್ನು ಕೆಡಿಸದೇ ಇರಲಿ.

ಮುಂಗಾರಿನ ಮಳೆಯ ಹಾಡೊಂದರಲ್ಲಿ ಶ್ರೇಯಾ ಗೋಶಾಲ್ , 'ಕಳವಳ' ಎಂಬುದನ್ನು 'ಕಳಮಳ' ಅನ್ನುತ್ತಾಳೆ. ಇಂತ ತಪ್ಪುಗಳು ಆಗಬಾರದು.

  • Login or register to post comments
  • link
  • Email this ಪ್ರತಿಕ್ರಿಯೆ
January 31, 2007 - 11:00am — santoshbhatta

Re: ಎ.ಆರ್.ರೆಹಮಾನ್ ಕನ್ನಡಕ್ಕೆ

santoshbhatta's picture

ನನ್ನ ಲೇಖನಕ್ಕೆ ಪುಷ್ಟಿ ಕೊಡುವ ಲೇಖನವೊಂದು ದಟ್ಸ್ ಕನ್ನಡ ದಲ್ಲಿ ಬಂದಿದೆ ಓದಿ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ವಚನದ ಅರ್ಥ ಹೇಳಿ ನೋಡೋಣ
  • ಕನ್ನಡದ ಒಂದು rocking ಹಾಡು
  • Apple macbook
  • ನಾನು ಒಬ್ಬ ಹೊಸ ಸಧಸ್ಯನಾಗಿದ್ದೇನೆ
  • ಸುಮ್ನೆ ನಗೋದಕ್ಕೆ: ಹಾಲಿವುಡ್ ಸಿನೆಮಾಗಳ ಕನ್ನಡ ಅವತರಣಿಕೆಗಳು
Syndicate content

ಲೇಖಕರು

santoshbhatta's picture

ಪರಿಚಯ

ನಾನು ಯೆಲ್ಲರಂತೆ ಸಾಧಾರಣ ಮನುಷ್ಯ ಅಂದ್ರೂ ಯಾರು ನಂಬೊಲ್ಲಾ Smiling

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
  • ರಾಜ ಮುದ್ದು ರಾಜ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 4:41pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 4:37pm
  • prasannasp
    ಉ: ದೊಡ್ಡದಾದ ಮಂಚ ???
    May 12, 2008 - 4:10pm
  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.

ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದೊಡದೇನು ಕಾಲು ಕುಂಟಿರಲೇನು
ಊರ ನೆನಪೇ ಬಲವು -- ಮಂಕುತಿಮ್ಮ ||

— ಡಿ.ವಿ.ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator