Satyaprakash.H.K. ರವರ ಬ್ಲಾಗ್
ಪಾಲೀಶ್ ಮಾಡಿದ ಅಕ್ಕಿ "ಆಸಿಡ್" ಮಯ.
April 19, 2006 - 12:54am — Satyaprakash.H.K.ಆರೋಗ್ಯಸತ್ಯ ಪ್ರಕೃತಿ ಕೇಂದ್ರ
ಪಾಲೀಶ್ ಮಾಡಿದ ಅಕ್ಕಿ "ಆಸಿಡ್" ಮಯ.
ಪ್ರಕೃತಿ ನಮಗೆಲ್ಲ ಜನ್ಮ ಕೊಟ್ಟಿರುವುದು ನಮಗೆಲ್ಲಾ ತಿಳಿದೇ ಇದೆ. ಪ್ರಕೃತಿ ನಮಗೆ ಏನೇನು ಆಹಾರಗಳನ್ನು ಕೊಟ್ಟಿದೆಯೋ ಅದನ್ನೆಲ್ಲಾ ಸಂಸ್ಕರಿಸದೆ ಅದು ಕೊಟ್ಟಿರುವ ರೂಪದಲ್ಲೇ ಅಂದರೆ ಉದಾಹರಣೆಗೆ: ಅಕ್ಕಿಯನ್ನು ಅದರ ಮೇಲಿನ ಭತ್ತವನ್ನು ಮಾತ್ರ ತೆಗೆದು ಬರುವ ಮುಂದೆ ಓದಿ »

- Login or register to post comments
- 730 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ನಾರಿನಿಂದ ಕ್ಯಾನ್ಸರ್ ಗೆ ತಡೆ.
April 19, 2006 - 12:51am — Satyaprakash.H.K.ನಾರಿನಿಂದ ಸ್ತನ ಕ್ಯಾನ್ಸರ್ ಗೆ ತಡೆ
ಬಾಲಕಿಯರು ಬೇಗನೇ ಋತುಮತಿಯಾಗುವುದಕ್ಕೂ ಸ್ತನ ಕ್ಯಾನ್ಸರ್ ಗೂ ಏನಾದರೂ ಸಂಬಂಧವಿದೆಯಾ ? ಮುಂದೆ ಓದಿ »

- Login or register to post comments
- 599 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಧಾನ್ಯಗಳ ಹೊಟ್ಟು
April 19, 2006 - 12:47am — Satyaprakash.H.K.ಹೊಟ್ಟು(ಫೈಬರ್)
ಹೊಟ್ಟು ಎಂದರೆ ಭತ್ತ ಮಾತ್ರ ತೆಗೆದ ತಕ್ಷಣ ಒಳಗಡೆ ಒಂದು ಕವಚವಿರುತ್ತದೆ. ಅದೇ ಮುಖ್ಯವಾದ ಹೊಟ್ಟು. ಆ ಕವಚವನ್ನು ತೆಗೆದು ತಿಂದರೆ ನಾನಾ ರೋಗಗಳು ಉಂಟಾಗುವುವು. ಈಗ ಹಾಲಿ ಸಿಕ್ಕುತ್ತಿರುವುದೆಲ್ಲಾ ಆ ಕವಚ ತೆಗೆದಿರುವ ಅಕ್ಕಿಯೇ. ಆ ಕವಚಕ್ಕೆ ಇಂಗ್ಲೀಷಿನಲ್ಲಿ ಕರ್ನಲ್ ಎಂದೂ ಕರೆಯುತ್ತಾರೆ. ಹೊಟ್ಟು ತಿನ್ನುವವರು ೧೦೦ ರಿಂದ ೧೨೦ ವರ್ಷಗಳವರೆಗೂ ಯಾವುದೇ ರೋಗ ರುಜಿನಗಳಿಲ್ಲದೆ ಸಂತೋಷವಾಗಿ ಬಾಳಬಹುದು. ಎಲ್ಲಾ ಧಾನ್ಯಗಳಲ್ಲೂ ಹೊಟ್ಟು ಇರುತ್ತದೆ. ಹೊಟ್ಟು ದೇಹಕ್ಕೆ ಬಹಳ ಅತ್ಯಗತ್ಯ ವಸ್ತುವಾಗಿರುತ್ತದೆ. ಈ ಹೊಟ್ಟಿನಲ್ಲಿ ಬೇಕಾದಷ್ಟು ಪೌಷ್ಟಿಕಾಂಶ ಇರುತ್ತದೆ. ಹೊರಗಡೆ ಯಾವುದೇ ಔಷಧಿಗಳಲ್ಲಿ ಅಥವಾ ಲೇಹಗಳಲ್ಲಿ ಸಿಗದೇಇರುವ ಪೌಷ್ಟಿಕಾಂಶಗಳು ಈ ಹೊಟ್ಟಿನಲ್ಲಿ ಇರುತ್ತವೆ. ಕೆಂಪು ಅಕ್ಕಿಯ ಹೊಟ್ಟೇ ಅತ್ಯಂತ ಶಕ್ತಿದಾಯಕ ಮತು ತಂಪುಕಾರಕ ಗುಣವನ್ನು ಹೊಂದಿರುವಂಥಾದ್ದು. ಕೆಂಪು ಅಕ್ಕಿಯ ಹೊಟ್ಟಿನಲ್ಲಿ ರೈಸ್ ಬ್ರಾನ್ ಆಯಿಲ್ ತಯಾರುಮಾಡುತ್ತಾರೆ. ಇದಕ್ಕೆ ಹಾರ್ಟ್ ಆಯಿಲ್ ಎಂದೂ ಕರೆಯುತ್ತಾರೆ. ಇದನ್ನು ದೇಶವಿದೇಶಗಳಲ್ಲಿ ಹಾರ್ಟ್ ಅಟ್ಯಾಕ್ ಆಗದಿರಲಿ ಎಂದು ಡಾಕ್ಟರರು ಶಿಫಾರಸು ಮಾಡುತ್ತಾರೆ. ಗೋಧಿಯ ಹೊಟ್ಟು ಉಷ್ಣವನ್ನುಂಟು ಮಾಡುತ್ತದೆ. ಕೆಂಪು ಅಕ್ಕಿ ಮತ್ತು ರಾಗಿ ಮಾತ್ರ ದೇಹಕ್ಕೆ ತಂಪನ್ನು ಉಂಟುಮಾಡುತ್ತದೆ ಮತ್ತು ಇಡೀ ದಿನ ದೇಹ ಮತ್ತು ಮನಸ್ಸನ್ನು ಚುರುಕಾಗಿಟ್ಟಿರುತ್ತದೆ. ಕೆಂಪು ಅಕ್ಕಿ, ಗೋಧಿ, ರಾಗಿ ಮತ್ತು ಎಲ್ಲ ಧಾನ್ಯಗಳಲ್ಲಿ ಈ ಹೊಟ್ಟು ಬೇಕಾದಷ್ಟು ಇರುತ್ತದೆ. ನೀವು ಎಷ್ಟು ಸಲ ತಿಂಡಿ, ಊಟ ಮಾಡುತ್ತೀರೋ ಅಷ್ಟು ಸಲವೂ ಹೊಟ್ಟಿನಿಂದ ಕೂಡಿದ ಆಹಾರವನ್ನೇ ತಿನ್ನಿ. ಇದು ನಿಮ್ಮನ್ನು ೧೦೦ ಕ್ಕೆ ೧೦೦ ರಷ್ಟು ಆರೋಗ್ಯವನ್ನು ಕೊಡುತ್ತದೆ. ಇಡೀ ದಿನ ದೇಹ ಮತ್ತು ಮನಸ್ಸು ಉಲ್ಲಾಸಮಯವಾಗಿರುತ್ತದೆ. ಸ್ವಲ್ಪವೂ ಸಂಕಟವಾಗುವುದಿಲ್ಲ, ಗ್ಯಾಸ್ ಆಗುವುದಿಲ್ಲ, ಗ್ಯಾಸ್ಟ್ರ್ಐಟಿಸ್ ಆಗುವುದಿಲ್ಲ, ಹೊಟ್ಟೆ ಭಾರವಾಗುವುದಿಲ್ಲ, ಹೊಟ್ಟೆಯು ಮಲ್ಲಿಗೆ ಹೂವಿನಂತಿರುತ್ತದೆ, ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ ಬರುತ್ತದೆ, ಮಲಬದ್ಧತೆಯ ಸುಳಿವೇ ಇರುವುದಿಲ್ಲ, ಕರುಳಿನಲ್ಲಿ ಕಟ್ಟಿಕೊಂಡಿರುವ ಅತ್ಯಂತ ಕಟ್ಟಕಡೆ ಪಾಚಿಯೂ ಸಹ ಕೊಚ್ಚಿಕೊಂಡು ಹೊರಟುಹೋಗುತ್ತದೆ. ಮಲವಿಸರ್ಜನೆಯ ನಂತರ ಮನಸ್ಸು ಆನಂದಮಯವಾಗುತ್ತದೆ. ಹೊಟ್ಟು (ಬ್ರಾನ್ ಅಥವ ಕರ್ನಲ್) ಇರುವ ಕೆಂಪು ಅಕ್ಕಿ ಸಿಗದೇಇದ್ದಲ್ಲಿ ಫುಡ್ ವರ್ಲ್ಡ್ ಅಥವಾ ದೊಡ್ಡ ಡಿಪಾರ್ಟ್ ಮೆಂಟ್ ಸ್ಟೋರ್ಸ್ ಗಳಲ್ಲಿ ಸಿಗುವ ಸೀರಿಯಲ್(ಧಾನ್ಯಗಳ) ಮತ್ತು ಗೋಧಿಯ ಹೊಟ್ಟು ಸಿಗುತ್ತದೆ. ಇದನ್ನು ಪ್ರತಿದಿನದ ತಿಂಡಿ, ಊಟಗಳ ಜೊತೆಗೆ ಅಥವಾ ಊಟದ ನಂತರ ೩ ರಿಂದ ೬ ಟೀ ಚಮಚದವರೆಗೆ ನೀರಿನಲ್ಲಿ ಮಿಕ್ಸ್ ಮಾಡಿ ಕುಡಿದು ಮೇಲೆ ಒಂದು ದೊಡ್ಡ ಗ್ಲಾಸ್ ನೀರು ಕುಡಿಯಿರಿ. ಅದರ ಆನಂದವನ್ನು ಸ್ವಲ್ಪ ಹೊತ್ತಿನಮೇಲೆ ಅನುಭವಿಸಿರಿ. ಇದಲ್ಲದೆ ಜ್ಯೂಸ್, ಕುದಿಸಿದ ನೀರು, ಹಾಲು, ಮೊಸರು, ಉಪ್ಪಿಟ್ಟು, ಒಗ್ಗರಣೆ ಅವಲಕ್ಕಿ, ಚಿತ್ರಾನ್ನ, ಪಾಯಸ, ಯಾವುದೇ ರೀತಿಯ ಭಾತ್ ಗಳು, ರಾಯತ ಇತ್ಯಾದಿಗಳಿಗೆ ಮಿಕ್ಸ್ ಮಾಡಿ ಉಪಯೋಗಿಸಿ. ಹೊಟ್ಟಿಲ್ಲದೆ ಒಂದು ತುತ್ತನ್ನೂ ತಿನ್ನಬೇಡಿ. ಹೊಟ್ಟು ಜೀವರಕ್ಷಕ ಔಷಧಿಯಾಗಿರುತ್ತದೆ, ಮಲಬದ್ಧತೆಗೆ ಒಳ್ಳೇ ಪ್ರಾಕೃತಿಕ ಆಹಾರ. ನಿಮ್ಮ ದೇಹದಲ್ಲಿರುವ ಎಲ್ಲ ತರಹದ ವಿಷಪದಾರ್ಥಗಳನ್ನು ಹೊಡೆದೋಡಿಸುತ್ತದೆ. ನಿಮ್ಮ ದೇಹಕ್ಕೆ ಅತ್ಯಧಿಕ ಶಕ್ತಿಯನ್ನೂ ಸಹಾ ಕೊಡುತ್ತದೆ. ಹೊಟ್ಟುಳ್ಳ ಪದಾರ್ಥಗಳನ್ನು ಸೇವಿಸುತ್ತಿದ್ದರೆ ಯಾವುದೇ ರೋಗವಿಲ್ಲದೇ ೧೦೦ ರಿಂದ ೧೨೦ ವರ್ಷ ಬಾಳಬಹುದು. ಈಗ ನಾನಾ ರೀತಿಯ ರೋಗ ರುಜಿನಗಳಿಂದ ನರಳುತ್ತಿರುವವರೂ ಸಹಾ ಇದರ ಉಪಯೋಗ ಪಡೆದು ಆರೋಗ್ಯವನ್ನು ಸಂಪಾದಿಸಬಹುದು. ಹೊಟ್ಟು "ಅತ್ಯಾಶ್ಚರ್ಯಕರ ಆಹಾರ", ಅತ್ಯಾಶ್ಚರ್ಯಕರ ಶಕ್ತಿವರ್ಧಕ", "ಅತ್ಯಾಶ್ಚರ್ಯಕರ ಔಷಧಿ", "ಅತ್ಯಾಶ್ಚರ್ಯಕರ ಮಲವಿಸರ್ಜಕ". ಮುಂದೆ ಓದಿ »

- Login or register to post comments
- 656 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಬೇಸಿಗೆ ಬಂದಿದೆ :
April 6, 2006 - 1:10pm — Satyaprakash.H.K.೦೬-೪-೨೦೦೬ - ಗುರುವಾರ - ಮಧ್ಯಾನ್ಹ ೧-೦೦ ಗಂಟೆ
ಆತ್ಮೀಯ ಸಂಪದದ ಸ್ನೇಹಿತರೇ,
ಬೇಸಿಗೆ ಬಂದಿದೆ. ಆಹಾರದಲ್ಲಿ ಎಚ್ಚರ ವಹಿಸಿ. ಹೊರಗಡೆ ಏನನ್ನೂ ತಿನ್ನಲು ಹೋಗಬೇಡಿ. ಅದರಲ್ಲೂ ಎಣ್ಣೆ ಹಾಕಿದ ತಿಂಡಿಗಳು, ಮಸಾಲೆ ದೋಸೆ ಇತ್ಯಾದಿ, ಪಾನೀ ಪೂರಿ ಇತ್ಯಾದಿ, ಐಸ್ ಕ್ರೀಂ ಇವನ್ನೆಲ್ಲಾ ತಿನ್ನಲು ಹೋಗಬೇಡಿ. ಧಾರಾಳವಾಗಿ ಸಿಹಿ ಹಣ್ಣಿನ ರಸ ಕುಡಿಯಿರಿ. ಶುದ್ಧವಾದ ನೀರು ಯಥೇಚ್ಚವಾಗಿ ಕುಡಿಯಿರಿ. ಇಲ್ಲದಿದ್ದರೆ ಚೆನ್ನಾಗಿ ಕಾಯಿಸಿ ಆರಿಸಿರುವ ನೀರನ್ನೂ ಬೇಕಾದರೂ ಕುಡಿಯಬಹುದು. ಹೊಟ್ಟು ಸಮೇತ ಇರುವ ಧಾನ್ಯಗಳನ್ನು, ಅಂದರೆ ಪಾಲೀಶ್ ಮಾಡದಿರುವ ಕೆಂಪಕ್ಕಿ, ಹೊಟ್ಟು ತೆಗೆಯದೆ ಇರುವ ಗೋಧಿ, ಹೆಸರು ಕಾಳು, ಕಡ್ಲೆ ಕಾಳು ಇತ್ಯಾದಿ, ಎಲ್ಲಾ ತರಹದ ಮೊಳಕೆ ಬರಿಸಿದ ಕಾಳುಗಳ ಸೇವನೆಯನ್ನು ಮಾಡಿರಿ. ಪಾಲೀಶ್ ಮಾಡದೇ ಇರುವ ಕೆಂಪಕ್ಕಿ ಯನ್ನು ಊಟ ಮಾಡಿದರೆ ಈ ಕಡು ಬಿಸಿಲ ಬೇಗೆಯನ್ನು ಖಂಡಿತವಾಗಿ ಎದುರಿಸಬಹುದು. ಸುಸ್ತಾಗುವುದಿಲ್ಲ ಮತ್ತು ಸಂಕಟವಾಗುವುದಿಲ್ಲ. ಮುಂದೆ ಓದಿ »

- Login or register to post comments
- 608 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
Comments
March 27, 2006 - 9:11am — Satyaprakash.H.K.೨೭-೩-೨೦೦೬ - ೦೯-೦೦ ಗಂಟೆ - ಸೋಮವಾರ
ಆತ್ಮೀಯ ಸಂಪಾದಕರಿಗೆ,
ನನ್ನ ಆಯ್ದ ಲೇಖನಗಳ ಪ್ರಕಟನೆಗಳ ಮೇಲೆ ಮಾಡಿರುವ ಟೀಕೆಗೆ ಸುಸ್ವಾಗತ. ಈತರಹ ನನಗೆ ಉತ್ತರಗಳು ಬರುತ್ತಿದ್ದರೆ ತುಂಬಾ ಸಂತೋಷವಾಗುತ್ತದೆ. ಆದರೆ ನಾನು ತಿಳಿಸಬಯಸುವುದೇನೆಂದರೆ ತುಂಬಾ ಜನಗಳ ವಿಷಯಗಳು ಈ ರೀತಿ ಪ್ರಕಟನೆಯಾಗಿರುವುದರಿಂದ, ನಾನೂ ಆ ತರಹ ಮಾಡಬಹುದು ಎಂದು ಪ್ರಕಟಿಸಿದೆ.(ವಿಜಯಕರ್ನಾಟಕದ ಆಯ್ದ ಭಾಗಗಳ ವಿಷಯ). ಆಯಿತು ಇನ್ನು ಮೇಲೆ ನನ್ನದೇ ಆದಂತಹ ಲೇಖನಗಳನ್ನು ಪ್ರಕಟಿಸುವೆ. ಮುಂದೆ ಓದಿ »

- Login or register to post comments
- 815 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: