ಈ ವಚನ ನನಗೆ ಸ್ವಲ್ಪವೂ ಅರ್ಥ ಆಗ್ಲಿಲ್ಲ. ದಯವಿಟ್ಟು ವಿವರಿಸುತ್ತೀರಾ?
ಸಕಳೇಶ ಮಾದರಸನ ಈ ವಚನ ನನಗೆ ಸ್ವಲ್ಪವೂ ಅರ್ಥ ಆಗ್ಲಿಲ್ಲ. ದಯವಿಟ್ಟು ವಿವರಿಸುತ್ತೀರಾ?
ದೇವರೆದಾರಾವು ಏಳುವೆವಯ್ಯಾ, ದೇವ ಬಿದ್ದರಾವು ಬೀಳುವೆವಯ್ಯಾ,
ದೇವ ಸತ್ತಾರಾವು ಸಾವೆವಯ್ಯಾ, ದೇವ ಬದುಕಿದರಾವು ಬದುಕುವೆವಾಯ್ಯಾ,
ನಾ ಸತ್ತು , ದೇವ ಹಿನ್ದುಳಿದಡೆ ,
ಎನ್ನಿಂದ ಬಿಟ್ಟು ವ್ರತಗೇಡಿಗಳಾರು ಹೇಳಾ, ಸಕಲೇಶ್ವರದೇವಾ.

- savithru ರವರ ಬ್ಲಾಗ್
- Login or register to post comments
- 422 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಈ ವಚನ ನನಗೆ ಸ್ವಲ್ಪವೂ ಅರ್ಥ ಆಗ್ಲಿಲ್ಲ. ದಯವಿಟ್ಟು ವಿವರಿಸುತ್ತೀರಾ?
ವಚನ ಓದಿದಾಗ ನನಗೆ ಅನ್ನಿಸಿದ್ದು ಹೀಗೆ. ಶರಣರು ತಾವು ಬೇರೆ , ತಾನು ಆರಾಧಿಸುವ ಶಿವ ಬೇರೆ ಎಂದು ಯಾವತ್ತೂ ಭೇಧವನ್ನು ಕಾಣುವಂತಹವರಲ್ಲ. ತನ್ನ ಬದುಕಿಗೆ ಎಲ್ಲದಕ್ಕೂ ಶಿವನೇ ಕಾರಣ ಎಂದು ಅವರು ಭಾವಿಸುತ್ತಾರೆ. ಅದರಂತೆ ಸಕಲೇಶ ಮಾದರಸರೂ ಕೂಡ ಇಲ್ಲಿ ಈ ವಚನದಲ್ಲಿ ಹೇಳಿದ್ದಾರೆ. ಅವರಿಗೆ ತಾಧ್ಯಾತ್ಮ ಭಾವ ಅಷ್ಟೊಂದು. ಕೊನೆಯಲ್ಲಿ ಮರಣವೆಂದರೆ ಅದು ಲಿಂಗೈಕ್ಯವಾಗುವುದು, ಶಿವೈಕ್ಯವಾಗುವುದು. ಆದ್ದರಿಂದ ಕೊನೆಯಲ್ಲಿ ತಾನು ಸತ್ತು ದೇವನೂ ಹಿಂದುಳಿದರೆ ತಾನು ವ್ರತಗೇಡಿಯಾಗುವುದಿಲ್ಲವೇ ? ಎಂದು ಅವರು ಪ್ರಶ್ನಿಸಿಕೊಳ್ಳುತ್ತಾರೆ. .
ಉ: ಈ ವಚನ ನನಗೆ ಸ್ವಲ್ಪವೂ ಅರ್ಥ ಆಗ್ಲಿಲ್ಲ. ದಯವಿಟ್ಟು ವಿವರಿಸುತ್ತೀರಾ?
ಜವಳಿ ಸಾರ್ ...
ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು. ದಯವಿಟ್ಟು ನಿಮ್ಮ ಓದನ್ನು/ ತಿಳಿವನ್ನು ನಮ್ಮೊಡನೆ ಹಂಚಿ ಕೊಳ್ಳುತ್ತಾ ಇರಿ. ಆಗಾಗ್ಗೆ ವಚನಗಳನ್ನು ವಿವರಿಸುತ್ತಿರಿ.
ಈ ವಚನ ವನ್ನು ಬಹಳಷ್ಟು ಚೆನ್ನಾಗಿ ಮನದಟ್ಟು ಮಾಡಿಸಿದಿರಿ. ಶರಣರ ಅರಿವು ತಿಳಿದಷ್ಟೂ ಆಳ. ಅವರ ಚಿಂತನೆ ಅತೀ ಎತ್ತರ.
ವಂದನೆಗಳು.
ಸವಿತೃ