ಘೃತಮುಮಂ ತೈಲಮುಮಂ
ಸಕ್ಕದಮಂ ಪೇಱ್ವೊಡೆ ನೆೞೆ
ಸಕ್ಕದಮಂ ಪೇಱ್ಗೆ ಸುದ್ದಗನ್ನಡದೊಳ್ತಂ
ದಿಕ್ಕುವುದೇ ಸಕ್ಕದಮಂ
ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ
...............ನಯಸೇನ "ಧರ್ಮಾಮೃತ"
ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡರೆ ಸಾಲದೆ? ಸಂಸ್ಕೃತದಲ್ಲಿನ್ನೇನು
.........................ಮಹಾಲಿಂಗರಂಗ " ಅನುಭವಾಮೃತ"
ಕನ್ನಡ ಸಕ್ಕದಗಳ ಸಂಬಂದದ ಬಗ್ಗೆ ಇಲ್ಲಿನ ನಿಲುವ ತುಂಬ ಆಸಕ್ತಿಕರವಾಗಿದೆ.
ಕೇವಲ ಪಾಂಡಿತ್ಯ ಪ್ರದರ್ಶನದ ಭಾಷೆಗಿಂತ ಅರ್ಥವಾಗುವ ಭಾಷೆ ಜನರ manava muTTuttade.

- savithru ರವರ ಬ್ಲಾಗ್
- Login or register to post comments
- 266 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಘೃತಮುಮಂ ತೈಲಮುಮಂ
ಸವಿತ್ರು,
ಮಹಾಲಿಂಗರಂಗನ ಸಾಲುಗಳಿಗೆ ನನ್ನಿಗಳು. ಈತ ಯಾರು ವಚನಕಾರನೆ? ಈತನ ಬಗ್ಗೆ ಹೆಚ್ಚು ಅರಿಮೆ ಕೊಡಿ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಘೃತಮುಮಂ ತೈಲಮುಮಂ
ಮಹಾಲಿಂಗರಂಗನ ಅನುಭವಾಮೃತದ ಬಗ್ಗೆ ಈ ಕೊಂಡಿಯಲ್ಲಿ ಚರ್ಚೆಯಾಗಿತ್ತು. ಆ ಪುಸ್ತಕದ ಕೊಂಡಿಯೂ ಕೂಡ ಆ ಎಳೆಯಲ್ಲಿ ಸಿಗುತ್ತದೆ.