ಪದಗಳು ......ಮರೆಯಾಗುವ ಮುನ್ನ!
ಪದಗಳು ......ಮರೆಯಾಗುವ ಮುನ್ನ!
ಈ ಸೀರೀಸ್ ನಲ್ಲಿ ನಾನು ಈಗ ಹೆಚ್ಚಾಗಿ ಬಳಕೆಯಿಲ್ಲದ ಪದಗಳನ್ನು ದಾಖಲಿಸುವ ಪ್ರಯತ್ನ ಮಾಡುತಿದ್ದೇನೆ.
ಆತ್ಯಾರ... ( ಆದಿತ್ಯ ವಾರ = ಭಾನುವಾರ)
ಬೇಸ್ತ್ವಾರ ( ಬ್ರಿಹಸ್ಪತಿ ವಾರ = ಗುರುವಾರ)
ಮಠಕ್ಕೆ ಹೋಗು = ಸ್ಕೂಲ್ ( ಶಾಲೆ) ಗೆ ಹೋಗು.
ಮೂಡ ( ಮೂಡಣ ದಿಕ್ಕು = ಪೂರ್ವ ದಿಕ್ಕು)
ಪಡುವ ( ಪಡುವಣ ದಿಕ್ಕು = ಪಶ್ಚಿಮ ದಿಕ್ಕು)
ತೆಂಕ ( ತೆಂಕಣ =ದಕ್ಷಿಣ)
ಬಡಗಣ ( ಉತ್ತರ ದಿಕ್ಕು)
ನಾವು ಚ್ಸಿಕ್ಕವರಾಗಿದ್ದಾಗ ಬಳುಸುತ್ತಿದ್ದ ಮೂರು ರೀತಿಯ ಅಕ್ಕಿಗಳು.
1. ನೆಲ್ಲಕ್ಕಿ ( ನಾವು ಈಗ ಬಳಸುತ್ತಿರುವ ಬಿಳಿ ಅಕ್ಕಿ)
2.ಸಾವಕ್ಕಿ ( ( ಅತಿ ಸಣ್ಣ ಕಣಗಳ ರೀತಿಯಲ್ಲಿರುತ್ತದೆ ಅನ್ನಿಸುತ್ತದೆ. )
3.ನವಣೆ ಅಕ್ಕಿ ( ರಾಗಿ ಕಾಳಿನ ರೀತಿ ಚಿಕ್ಕದಾಗಿ ದುಂಡಾಗಿ ಇರುವ ಒಂದು ರೀತಿಯ ಅಕ್ಕಿ)
ಈ ಕ್ಷಣಕ್ಕೆ ನನಗೆ ನೆನಪಿಗೆ ಬಂದವು ಇಷ್ಟೇ... ನೆನಪಿಗೆ ಬಂದಂತೆ ದಾಖಲಿಸಲು ಯತ್ನಿಸುವೆ.

- savithru ರವರ ಬ್ಲಾಗ್
- Login or register to post comments
- 548 hits
- Email this blog





RSS:
ಪ್ರತಿಕ್ರಿಯೆಗಳು
ಉ: ಪದಗಳು ......ಮರೆಯಾಗುವ ಮುನ್ನ!
ಅಯ್ತವಾರ, ಬೇಸ್ತವಾರ, ನೆಲ್ಲಕ್ಕಿ, ನವಣೆ ಅಕ್ಕಿ ನಮ್ಮನೆಯಲ್ಲಿ ಇನ್ನೂ ಬಳಸುತ್ತಿದ್ದಾರೆ..
ಉ: ಪದಗಳು ......ಮರೆಯಾಗುವ ಮುನ್ನ!
ಕುಸುಬಲಕ್ಕಿ ಅಂದ್ರೇನು?
ಉ: ಪದಗಳು ......ಮರೆಯಾಗುವ ಮುನ್ನ!
ಕುಸುಬಲಕ್ಕಿ (ಇದನ್ನು ಕರಾವಳಿಯವರು ಹೆಚ್ಚಾಗಿ ಉಪಯೋಗಿಸುತ್ತಾರೆ - ಅದನ್ನು ಅವರು ಕುಚ್ಚಲಕ್ಕಿ ಎಂದೂ ಕರೆಯುತ್ತಾರೆ) ಎಂದರೆ, ಬತ್ತವನ್ನು ಬಿಸಿನೀರಿಗೆ ಹಾಕಿ ನೆನೆಸಿ ತೆಗೆದು, ಅನಂತರ ಮಾಡಿರುವ ಅಕ್ಕಿ.
-ಹಂಸಾನಂದಿ
ಉ: ಪದಗಳು ......ಮರೆಯಾಗುವ ಮುನ್ನ!
ನನಗೆ ಅವಲಕ್ಕಿ ಗೊತ್ತು.. ಕುಸುಬಲಕ್ಕಿ ಹೆಸರು ಕೇಳಿದ್ದೀನಿ. ನಮ್ಮ ಮನೆಯಲ್ಲಿ ಬಳಸಬಹುದು...
ಆದರೆ ನನ್ನ ಪ್ರಕಾರ ಕುಸುಬುಲಕ್ಕಿಯನ್ನ ಅನ್ನ ಮಾಡಲು ಬಳಸಲ್ಲ. ಆದರೆ ನಾನು ಮೇಲೆ ಬರೆದ ಮೂರು ರೀತಿಯ ಅಕ್ಕಿ ಯನ್ನು " ನೇರವಾಗಿ" ಅನ್ನ ಮಾಡಲು ( ಅಂದ್ರೆ ಸಾರಿನ ಜೊತೆ ಕಲಸಿಕೊನ್ಡು ತಿನ್ನುವ ) ಬಳಸುತ್ತಾರೆ.
ಅವಲಕ್ಕಿಯನ್ನು ತಿಂಡಿ ಮಾಡಲು ಬಳಸುತ್ತಾರೆ. ಕುಸುಬಲಕ್ಕಿಯನ್ನು ಬಹುಶಹ ಅನ್ನಕ್ಕಾಗಿ ಬಳಸಲ್ಲ. ಆದರೆ ಅವಲಕ್ಕಿ ಮತ್ತು ಕುಸುಬಲಕ್ಕಿ ಇನ್ನೂ ಬಳಕೆಯಲ್ಲಿವೆ
ಉ: ಪದಗಳು ......ಮರೆಯಾಗುವ ಮುನ್ನ!
ಮೂಡ ( ಮೂಡಣ ದಿಕ್ಕು = ಪೂರ್ವ ದಿಕ್ಕು)
ಪಡುವ ( ಪಡುವಣ ದಿಕ್ಕು = ಪಶ್ಚಿಮ ದಿಕ್ಕು)
ತೆಂಕ ( ತೆಂಕಣ =ದಕ್ಷಿಣ)
ಬಡಗಣ ( ಉತ್ತರ ದಿಕ್ಕು)
ಇನ್ನೂ ಒಂದಿಷ್ಟು:
ಆಗ್ನೇಯ (South-East)
nairutya (South-West) (kannaDadalli "nai" baruttilla adikke english)
ವಾಯುವ್ಯ (North-West)
ಈಶಾನ್ಯ (North-East)
ತಪ್ಪಿದಲ್ಲಿ ಕ್ಷಮಿಸಿ ಮತ್ತು ಸರಿದೂಗಿಸಿ.
ಉ: ಪದಗಳು ......ಮರೆಯಾಗುವ ಮುನ್ನ!
ನಾನು ಇಲ್ಲಿ ಬಳಕೆಯಿಂದ ಮರೆಯಾಗುತ್ತಿರುವ ಅಚ್ಚಗನ್ನಡದ ಪದಗಳನ್ನು ಬರೆಯಲು ಯತ್ನಿಸಿದ್ದೇನೆ. ನೀವು ಹೇಳಿದ ನಾಲ್ಕು ದಿಕ್ಕುಗಳಿಗೆ ಬಹುಶ ಕನ್ನಡದ್ದೆ ಆದ ಸ್ವಂತ ಒರೆಗಳಿಲ್ಲ ಅನ್ನಿಸುತ್ತದೆ.
ಆದರೂ ಈ ದಿಕ್ಕುಗಳ ಮೂಲ ಒಂದು ಸಂಸ್ಕೃತಿಯಾದ್ದರಿಂದ ಮತ್ತು ಆ ಸಂಸ್ಕೃತಿಯಲ್ಲಿ ನಾವಾಗಲೇ ಬೆರೆತು ಹೋಗಿರುವುದರಿನ್ದ ಅವು ಕನ್ನಡದ್ದವೇ ಎಂದು ಒಪ್ಪಿಕೊಳ್ಳಬಹುದೆ?
ಈಶಾನನ ಅಧಿಪತ್ಯವಿರುವ ದಿಕ್ಕು. ಅಗ್ನಿ ಯ ಅಧಿಪತ್ಯವಿರುವ ದಿಕ್ಕು ವಾಯುವಿನ ಅಧಿಪತ್ಯವಿರುವ ದಿಕ್ಕು. ನಿರುತ ನ ಅಧಿಪತ್ಯವಿರುವ ದಿಕ್ಕು ..........ಹೀಗೆ...
ಆದರ್ ಇಲ್ಲಿ ಈಶಾನ ಮತ್ತು ನಿರುತರ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚು ಗೊತ್ಟಿಲ್ಲ್ಲ.
ಇವರೇನು ವೇದಗಳಲ್ಲಿ ಬರುವ ದೇವತೆಗಳೇ? ನಮ್ಮ ಪ್ರಕೃತಿಯಲ್ಲಿನ ಶಕ್ತಿಗಳೇ?( ಅಗ್ನಿ ವಾಯುವಾನಿಯ ರೀತಿ )
ನಿರುತ ಮಳೆ ದೇವನೇ?! = ವರುಣ!?
ದಯವಿಟ್ಟು ತಿಳಿದವರು ಬರೆಯವಿರಾ...
ಉ: ಪದಗಳು ......ಮರೆಯಾಗುವ ಮುನ್ನ!
ಕನ್ನಡದಲ್ಲಿ ಆಡುಗನ್ನಡದಲ್ಲಿ ಈ ಈಶಾನ್ಯ, ವಾಯುವ್ಯ, ನೈರುತ್ಯ, ಆಗ್ನೇಯದ ಬಳಕೆ ಇಲ್ಲ..... ಇವು ಕನ್ನಡದ ಉಲಿಗಳೂ ಅಲ್ಲ. ಮತ್ತು ಇವು ಒಂದು ನಂಬಿಕೆಯ ನೆಲೆಯಲ್ಲಿ ಇರುವ ಹೆಸರುಗಳಾದುದರಿಂದ ಬಳಕೆಯಲ್ಲಿ ತುಸು ಎಚ್ಚರ ಬೇಕು.
ಈ ಈಶಾನ್ಯದಲ್ಲಿ ಈಶನೇ ಯಾಕೆ ಇರಬೇಕು? ಇದಕ್ಕೆ ವಿಜ್ನಾನದ ಉತ್ತರವಿದೆಯೇ?
ಉ: ಪದಗಳು ......ಮರೆಯಾಗುವ ಮುನ್ನ!
ಆದರೆ ನನ್ನ ಪ್ರಕಾರ ಕುಸುಬುಲಕ್ಕಿಯನ್ನ ಅನ್ನ ಮಾಡಲು ಬಳಸಲ್ಲ. ಆದರೆ ನಾನು ಮೇಲೆ ಬರೆದ ಮೂರು ರೀತಿಯ ಅಕ್ಕಿ ಯನ್ನು " ನೇರವಾಗಿ" ಅನ್ನ ಮಾಡಲು ( ಅಂದ್ರೆ ಸಾರಿನ ಜೊತೆ ಕಲಸಿಕೊನ್ಡು ತಿನ್ನುವ ) ಬಳಸುತ್ತಾರೆ.
---ಕರಾವಳಿಯ ಕಡೆ ಕುಸುಬಲಕ್ಕಿಯ ಅನ್ನ ಮಾಡುತ್ತಾರೆ.ಗನ್ಜಿ ಸಹ ಮಾಡುತ್ತಾರೆ.ಅಕ್ಕಿಯ ಬಣ್ಣ ಕೆಮ್ಪು.ಆನ್ಗ್ಲ ಭಾಶೆಯಲ್ಲಿ boiled rice(?)ಅನ್ನುತ್ತಾರೆ
ಉ: ಪದಗಳು ......ಮರೆಯಾಗುವ ಮುನ್ನ!
unpolished rice ಇರಬಹುದು. boiled rice ದಪ್ಪಗಿರುತ್ತೆ. ಕೇರಳದವರು ಹೆಚ್ಚಾಗಿ ಬಳಸುತ್ತಾರೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಪದಗಳು ......ಮರೆಯಾಗುವ ಮುನ್ನ!
ಹರಿಯವರೇ,
ನಿಮ್ಮ ಅಭಿಪ್ರಾಯ ಸರಿಯಾಗಿದೆ.ಆದರೆ ಕುಸುಬಲಕ್ಕಿ ಅನ್ನವನ್ನು ಕೇರಳ ಮಾತ್ರವಲ್ಲ ನಮ್ಮ ಕುಂದಾಪುರ,ಉಡುಪಿ,ಮಂಗಳೂರು ಕಡೆ ಸಹ ಬಳಸುತ್ತಾರೆ.ಅದು ದೇಹವನ್ನು ತಂಪಾಗಿಡುತ್ತದೆ.ಕರಾವಳಿಯ ಹವೆಗೆ ಅದೇ ಉತ್ತಮ.ಇಲ್ಲಿ ಯಾವುದೇ ಹೋಟೆಲ್ಗೆ ಹೋದರೂ boiled rice ಬೇಕಾ /white rice ಬೇಕಾ ಅಂತ ಕೇಳ್ತಾರೆ.ಗೊತ್ತಿಲ್ಲದಿರುವವರಿಗೆ ಗೊಂದಲವಾಗಬಹುದು!