ಈಗಿನಂತೆ 5 ಸದಸ್ಯರು ಮತ್ತು 69 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಮತ್ತೆ ಕಲ್ಲಾದಳು ಅಹಲ್ಯೆ!
ramvani's picture
ವಾಣಿ
16
Nov
2010
ಲೇಖನ

ಇದು ಯಾವ ರಾಮಾಯಣದಲ್ಲೂ ಇಲ್ಲ. ಪರಿಚಯಸ್ಥರು ತಮಿಳಿನ ಪುಸ್ತಕವೊಂದರಲಿ ಓದಿದ್ದನ್ನು ಹೇಳಿದರು ‘ಮೀಡುಂ ಕಲ್ಲಾನಾಳ್ (ಮತ್ತೊಮ್ಮೆ ಕಲ್ಲಾದಳು ಅಹಲ್ಯೆ) ಅದರ ಕನ್ನಡಾನುವಾದ ಮಾತ್ರ....

ಪ್ರತಿಕ್ರಿಯೆಗಳು: 3
ಹಿಟ್ಸ್ : 948
ಕಥೆ : ವೃತ್ತಿಗೌರವ
partha1059's picture
ಪಾರ್ಥಸಾರಥಿ
17
May
2011
ಲೇಖನ

ವೃತ್ತಿಗೌರವ
ಬಾಚಣಿಗೆಯನ್ನು ಕೈಯಲ್ಲಿ ಹಿಡಿದಿದ್ದ ಕತ್ತರಿಯಿಂದ 'ಟಪ್' ಎಂದು ಬಡೆದು ಮೂಲೆಗೆ ಹೋಗಿ 'ಊಫ್...

ಪ್ರತಿಕ್ರಿಯೆಗಳು: 15
ಹಿಟ್ಸ್ : 760
ಕರ್ನಾಟಕ ಕಲಾಸಂಘ
cmariejoseph's picture
ಮರಿಜೋಸೆಫ್
14
Jan
2010
ಪುಟ

ಬೆಂಗಳೂರಿನ ಎಚ್ಎಎಲ್ ಕಾರ್ಖಾನೆಯ ಏರೋಇಂಜಿನ್ ವಿಭಾಗದಲ್ಲಿ “ಕರ್ನಾಟಕ ಕಲಾಸಂಘ”ದ ಸ್ಥಾಪನೆಯು ೧೯೬೯ರಲ್ಲಾಯಿತು.  ಅಂದು ಕಾರ್ಖಾನೆಯಲ್ಲಿದ್ದ ಅನ್ಯಭಾಷಾ ದೌರ್ಜನ್ಯವೆಂಬ...

ಪ್ರತಿಕ್ರಿಯೆಗಳು: 7
ಹಿಟ್ಸ್ : 948
ಅಚ್ಚಳಿಯದ ಪ್ರಭಾವ ಬೀರಿದ ಅಧ್ಯಾಪಕರು
Shivashankar Rao's picture
Addoor Shivashankar Rao
12
Mar
2012
ಲೇಖನ

...

ಪ್ರತಿಕ್ರಿಯೆಗಳು: 13
ಹಿಟ್ಸ್ : 370
ಕೆರೆ ಕೊಟ್ಟ ಕರೆ.......
ramaswamy's picture
ಡಿ.ಎಸ್.ರಾಮಸ್ವಾಮಿ
18
Jun
2011
ಲೇಖನ

ಕೆರೆ ಕೊಟ್ಟ ಕರೆ.. ..
ನನ್ನ ಹುಟ್ಟೂರು ತರೀಕೆರೆ. ಬದುಕಿನ ಬಹುಭಾಗ ಕಳೆದದ್ದು ಅಂದರೆ ಹೆಂಡತಿ, ಮಕ್ಕಳು ಮನೆ ಕಟ್ಟಿಸಿದ್ದು ಅರಸೀಕೆರೆ. ಈಗ ಕಾರ್ಯಾರ್ಥ ಇರುವುದು...

ಪ್ರತಿಕ್ರಿಯೆಗಳು: 4
ಹಿಟ್ಸ್ : 476
ವಿಕಲಚೇತನರು
Prabhu Murthy's picture
ಪ್ರಭುನಂದನ ಮೂರ್ತಿ
04
Mar
2011
ಲೇಖನ

ದಿನಾಲೂ ಬೆಂಗಳೂರು ನಗರ ಸಾರಿಗೆ ಬಸ್‌ನಲ್ಲಿ ಹೋಗಿಬರುವಾಗಲೆಲ್ಲಾ ‘ವಿಕಲಚೇತನ’ ಎಂಬ ಪದ ತುಂಬಾ ಮುಜುಗರ ಪಡಿಸುತ್ತದೆ. ಅದು ಕೇವಲ ನನ್ನ ಮಟ್ಟಿಗೆ ಎಂದುಕೊಂಡಿದ್ದೆ. ...

ಪ್ರತಿಕ್ರಿಯೆಗಳು: 14
ಹಿಟ್ಸ್ : 677
ಚೀನಾ, ತವಾಂಗ್, ಮತ್ತು ಬೈಲಕುಪ್ಪೆ ಟಿಬೆಟಿಯನ್ನರು
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
13
Nov
2009
ಪುಟ

  ಅರುಣಾಚಲ ಪ್ರದೇಶದ ತವಾಂಗ್‌ಗೆ ಬೌದ್ಧ ಧರ್ಮಗುರು ದಲೈ ಲಾಮಾ ಭೇಟಿ ನೀಡುವ ನಾಲ್ಕು ದಿನ ಮೊದಲು ನಾನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿರುವ ಬೈಲಕುಪ್ಪೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 1,258
ರಾಘವೇಂದ್ರ ಶರ್ಮಾ ತಲವಾಟ ಮತ್ತವರ ಜೇನು ಕೃಷಿ
palachandra's picture
ಪಾಲಚಂದ್ರ
10
Aug
2010
ಬ್ಲಾಗ್ ಬರಹ

ಕಳೆದ ವಾರಾಂತ್ಯ ಸ್ನೇಹಿತರೊಂದಿಗೆ ಮಲೆನಾಡ ಜೋಗ, ಕೆಳದಿ, ತೀರ್ಥಹಳ್ಳಿಯ ಕವಿಶೈಲಕ್ಕೆ ಭೇಟಿ ನೀಡಿ ಬಂದೆ. ತಂಗಿದ್ದು ಜೋಗದ ಬಳಿಯ ತಲವಾಟ ಎಂಬ ಹಳ್ಳಿಯ ಹೋಂ ಸ್ಟೇ ಒಂದರಲ್ಲಿ. ಅದರ...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,126
ರಷ್ಯ ಪ್ರವಾಸಕಥನ ಭಾಗ ೬: ಟೀ ಕೊಟ್ಟ ಟೀ-ನೇಜಳಿಗೆ ಟಿಪ್ಸೆ೦ಬ ಬಿಸ್ಕತ್ತು!
anilkumar's picture
ಎಚ್.ಎ. ಅನಿಲ್ ಕುಮಾರ್
08
Oct
2006
ಪುಟ
ಕ್ಲೋನೋ ಕ್ಲೋನೇ ಕ್ಲೋನು: ಇಬ್ಬರು ಒ೦ದೇ ತರಹ ಇರುವುದು ಬೇರೆ, ಪರಸ್ಪರ ಹೋಲುವುದು ಬೇರೆ. "ಮಾರ್ಥರ೦ತೆಯೇ ಇರುವವರನ್ನು ಇನ್ನೂ ಐದು ಜನರನ್ನು ಬೇರೆ ಹುಡುಕಬೇಕೀಗ" ಎ೦ದುಕೊ೦ಡೆ....
ಪ್ರತಿಕ್ರಿಯೆಗಳು: 0
ಹಿಟ್ಸ್ : 1,926
ಲಿಂಕನ್ನನು ತನ್ನ ಮಗನ ಅಧ್ಯಾಪಕರಿಗೆ ಬರೆದ ಪತ್ರ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
25
Apr
2006
ಪುಟ
ಅಮೇರಿಕದ ಅಧ್ಯಕ್ಷ ಅಬ್ರಹಾಮ್ ಲಿಂಕನ್ನನು ತನ್ನ ಮಗನ ಅಧ್ಯಾಪಕರಿಗೆ ಬರೆದ ಪತ್ರದ ಕೆಲವು ಭಾಗ. ಎಲ್ಲ ಮನುಷ್ಯರೂ ನೀತಿವಂತರಲ್ಲ ಮತ್ತು ಸತ್ಯಾಚರಣೆ ಉಳ್ಳವರಲ್ಲ ಎಂದು ಅವನು ಕಲಿಯಬೇಕು...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,761

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಈ ಮಣ್ಣ ಸತ್ಯ

ಈ ಮಣ್ಣ ಸತ್ಯ

ಈ ಮಣ್ಣ ಸತ್ಯ ಕಾಲ ಸಮಾಧಿಯ ಮೇಲೆ ಕುಳಿತು ಬಗೆ ಬಗೆಯುತ್ತಿದೆ, ಬಗೆಬಗೆಯುತ್ತಿದ್ದೆ, ಅತ್ತ್ ಹರಿವ ಹೊಳೆ-ಹೊಳೆಯುತ್ತಿತ್ತು ಹೊಳೆಹೊಳೆಯುತ್ತಿತ್ತು. ಹತ್ತೂ ಬೆರೆಳುಗಳ ಸೆಟೆಸಿ, ಹಸ್ತಗಳನ್ನೊಂದು ಮಾಡಿ ನರನಾಡಿಗಳನದರ ಗುಡಿಮಾದಿ, ಪಾದಗಳನೂರಿ ಊರುಗಳ ವೀರಮುದ್ರೆಗೆಗೀಡುಮಾಡಿ ಅಸ್ತಿತ್ವದೊಡತೆ ಮನಕೆ ನಮಿಸಿ, ಪರಿವ್ರಾಜಕನ ದಟ್ಟ ಲಕ್ಷ್ಯದ ದಿಟ್ಟ ಭ್ರೂಮಧ್ಯದ ಬೊಟ್ಟ ಹಿಡಿ ಬಂಗಾರದ ಹುಡಿಮಣ್ಣ ಬಗೆಬಗೆಯುತ್ತಿದೆ. ಕಪ್ಪೆಗೂಡಿನ ಕುಹಕವಿಹಕಗಳೆಲ್ಲಕ್ಕೂ ಹನುಮಲಂಘನ ಬೆರೆಗಿಟ್ಟ ಪದರಗಳ ಒಳಗೆಲ್ಲೋ ಕರಂಡಗಳು ಬಿಚ್ಚಿಕೊಳ್ಳುತ್ತಾ ಅವ್ವೆಯರ ಅಪ್ಪಂದಿರ ಅಜ್ಜ ಅಜ್ಜಿಗಳ ಎಲಬು ಧೂಳುಗಳ ಪ್ರವರ-ವಿವರ ವಿಸ್ತಾರದೊಳು ಕಾಣದ ಪರಕೀಯರಿಲ್ಲದಿವರೆಲ್ಲರೂ ಮಣ್ಣಾದ ಈ ಮಣ್ಣ ಬಗೆ ಬಗೆಯುತ್ತಿದ್ದೆ, ಬಗೆಬಗೆಯುತ್ತಲೇ ಇದ್ದೆ. ದಟ್ಟ ಮಣ್ಣ ವಾಸನೆಯ ಗುರುತ್ವಕ್ಕೆ ಮೂಗಹೊಳ್ಳೆಯನ್ನರಳಿಸಿ ಅಘ್ರಾಣಿಸುತ್ತಿದ್ದಂತೆ, ತಟ್ಟನೆ; ಹಸಿಮಾಂಸದ ಬಿಸಿ ರಕ್ತದ ಹೊಳೆ ಹೂಂಕರಿಸಿ ನಡುವೆ ಕೈಗೆ ಹತ್ತಿದ ಕಿಡಿ, ಬಂಗಾರದ ಹುಡಿ ಕಿರೀಟ ಛತ್ರಿ ಚಾಮರಗಳು, ಪುಳಕಿಸುವ ಬಿರುದು-ಬಾವಲಿಗಳು ಪಠಿ-ಪಠಿಸುತ್ತಿರುವ ವೀರ ಘೋಷಗಳು. ಒಳಗೆಲ್ಲೋ, ಪತಿರುಂಡಗಳ ಮಡಿಲಲ್ಲಿಕ್ಕಿದ ಸತಿಉಅರ ಆರ್ತನಾದ ಕಣ್ಣೀರು ಹೊರಹೊಮ್ಮಿಮ್ ಜಾರಿ-ಹರಿದು ಹಸಿಯಾದ ಹಸನಾದ ಈ ಮಣ್ಣ ಬಗೆ ಬಗೆಯುತ್ತಿದ್ದೆ. ಬಗೆಬಗೆಯುತ್ತಲೇ ಇದ್ದೆ. ಆಲಯಗಳ, ದೇವಾಲಯಗಳ, ನೆಲಕ್ಕೊರಗಿದ ಪ್ರಾಕಾರಗಳ ಮುಕ್ಕಾದ ಆಕಾರಗಳ ಮನಗಳೊಡೆದ ಆಂಗ್ಲರ, ಹಿಂದೆ ಮನೆಗಳೊಡೆದ ಯವನರ ಘಝನೀ, ಘೋರಿಗಳ ಹೂಣ ಹೊಣೆಗೇಡಿ ಆಕ್ರಮಣಕಾರರ ಛಳಪು ಕತ್ತಿಯ ಮೊನೆಗೆ ಎದೆಕೊಟ್ಟು ಮಲಗಿದ ಆ ಇತಿಹಾಸದಮೇಲೆ ಹುಟ್ಟಿಬೆಳೆದ ಮರಗಳು ಸತ್ತು ಮಣ್ಣಾದ ಆ ಮಣ್ಣ ಬಗೆಬಗೆಯುತ್ತಿದ್ದೆ, ಬಗೆಬಗೆಯುತ್ತಲೇ ಇದ್ದೆ. ಶಿಖೆ ಚಾಣಕ್ಯನೊಳು, ಗೂಢ-ಗೊಲ್ಲನ ನಂದ-ಗೊಂದಲದೊಳು ಭ್ರಷ್ಥ ಕೌರವರ ಚಂದ್ರಗುಪ್ತ ಪರಿವಾರದೊಳು ಪಾಂಡವರ ಶುದ್ಧ ಬೇರುಗಳ ಅನಿಷ್ಥ ಕಾಷ್ಥಗಳ ಬುಧ್ಧ-ಮಹಾವೀರ ಶಂಕರ ಮಧ್ವ ರಾಮಾನುಜರ ಸಂದೇಶ ಉಧ್ಭವಗಳ ನದೀತಟ ಸಂಸ್ಕೃತಿಗಳ ಸಮಷ್ಥಿ ಜೀವನಗಳ ವೇದ ಶಾಸ್ಥ್ರ ತತ್ವ ಸಿಧ್ಧಾಂತಗಳಿಂದ ಸಮೃದ್ಧವಾದ ಹಸಿಹಸಿಮಣ್ಣ ಬಗೆ ಬಗೆಯುತ್ತಲೇ ಇದ್ದೆ. ಘನವೆಲ್ಲ ದ್ರವವಾಗಿ. ಕೃತಿ-ಸ್ಮೃತಿ ಸಂಸ್ಕೃತಿಗಳು ಅಂತರ್ಗಾಮಿಗಳಾಗಿ ಪುರಾಣಗಳಾಗಿ ಬಗೆವ ಸ್ಥಿತಿ ತಟಸ್ಥವಾಗಿ ಸೆಟೆದ ಹತ್ತೂ ಬೆರಳುಗಳೂ ಐದರೆರಡು ಮುಷ್ಥಿಗಳಾಗಿ ಪಿಸುನುಡಿಗಳು ಪ್ರತಿಧ್ವನಿಗಳಾಗಿ ಕಾಲವಾಮನನ ಪಾದಗಳಡಿಯಲ್ಲಿ ಬಗೆಬಗೆಯ ಮಣ್ಣಾಗಿ ಎಲ್ಲವೂ ಮಣ್ಣು ಎಂಬ ಸತ್ಯದೊಳೊಂದಾಗಿದ್ದೆ. ಎಸ್.ಶಾಮಸುಂದರ
No votes yet
1332 ಹಿಟ್ಸ್

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ