sharath
ನಮಸ್ಕಾರ
ಯೋಗ್ಯರಿಗಿಲ್ಲ ಪುರಸ್ಕಾರ!!!
-
ನಮ್ಮ ಕನ್ನಡ ಸಾಹಿತ್ಯದ ಒಂದು ದುರಂತದ ಸಂಗತಿಯೆಂದರೆ,ಯಾರು ಯೋಗ್ಯರೋ,ಅತ್ತ್ಯುತ್ತಮ ಸಾಹಿತಿಗಳೋ ಅವರಿಗೆ ರಾಜ್ಯಮಟ್ಟದಲ್ಲಾಗಲಿ,ರಾಷ್ತ್ರಮಟ್ಟದಲ್ಲಾಗಲಿ,ಪ್ರಶಸ್ತಿ-ಪುರಸ್ಕಾರಗಳು ದೊರಕುವುದಿಲ್ಲ.ಬಹುಶಃ ಇಂದು ರಾಜಕೀಯ ಪ್ರಭಾವವಿಲ್ಲದೆ ಯಾವುದೇ ಪ್ರಶಸ್ತಿಗಳು ದೊರಕುವುದಿಲ್ಲ.ದುರಾದೃಷ್ಟವಶಾತ್ ಇದರಿಂದ ಅನೇಕ ಉತ್ತಮ ಸಾಹಿತಿಗಳು ವಂಚಿತರಾಗುತ್ತಿದ್ದಾರೆ.ಎಸ್.ಎಲ್.ಭ್ಯೆರಪ್ಪ,ನಿನ್ನೆ ತಾನೆ ನಮ್ಮನ್ನಗಲಿದ ತೇಜಸ್ವಿಗಳಂತಹ ಮಹಾನ್ ಸಾಹಿತಿಗಳು ಇದಕ್ಕೆ ಉದಾಹರಣೆ.ಯಾವುದೇ ದೇಶವಾದರೂ ಹೊಂದಲು ಹೆಮ್ಮೆಪಡಬಹುದಾದಂತಹ ಸಾಹಿತಿಗಳು ಇವರು.ಇಂತಹ ಶ್ರೇಷ್ಟರಿಗೆ ನಾವು ಸಲ್ಲಿಸಿದ ರಾಷ್ಟ್ರಮಟ್ಟದ ಗವ್ ರವವಾದರೂ ಏನು?ಪಾಶ್ಚಾತ್ಯರಿಂದ ಕದ್ದ ಸರಕನ್ನೇ ತಂದು ಇಲ್ಲಿ ಹೊಸದೆಂದು ಬರೆದವರನ್ನು ಸನ್ಮಾನಿಸಿ ಹೆಮ್ಮೆ ಪಡುವ ನಮ್ಮ ಕಣ್ಣು ತೆರೆಯುವುದಾದರೂ ಎಂದಿಗೆ?

- sharathchandra ರವರ ಬ್ಲಾಗ್
- Login or register to post comments
- 594 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಯೋಗ್ಯರಿಗಿಲ್ಲ ಪುರಸ್ಕಾರ
ಪುರಸ್ಕಾರವೇ ಗೌರವವಾಗಬೇಕಿಲ್ಲ. ಎಲ್ಲರೂ ಪುರಸ್ಕಾರ ಬಯಸೋದಿಲ್ಲ. ತಮ್ಮ ಕೆಲಸದಲ್ಲಿ ಮೂಡಿದ ಸಂತೃಪ್ತಿಯನ್ನೇ ಪುರಸ್ಕಾರ ದೊರಕಿದ್ದಕ್ಕಿಂತ ಹೆಚ್ಚಾಗಿ ನೋಡುವವರಿದ್ದಾರೆ (ಅಂತಹ ಕೆಲವರು ಗಣ್ಯರು ನಮ್ಮೆಲ್ಲರೊಂದಿಗೆ ಸಂಪದದಲ್ಲೇ ಇದ್ದಾರೆ).
ನಿನ್ನೆ ಟಿವಿ೯ ರಲ್ಲಿ ಎಚ್ ಎಸ್ ವೆಂಕಟೇಶಮೂರ್ತಿ ಮತ್ತು ಲಕ್ಷ್ಮಿನಾರಾಯಣಭಟ್ಟರು ತೇಜಸ್ವಿಯವರ ಬಗ್ಗೆ ಮಾತನಾಡುತ್ತ "ಪುರಸ್ಕಾರ, ಪ್ರಶಸ್ತಿಗಳ ಬಗ್ಗೆ ಮಾತನಾಡಿದರೆ ನಕ್ಕುಬಿಡುತ್ತಿದ್ದರು. ಅವರಿಗೆ ನಾಡೋಜ ಪ್ರಶಸ್ತಿ ಪಡೆಯೋ ಹಾಗೆ ಮಾಡೋದಕ್ಕೆ ಎಷ್ಟೆಲ್ಲ ಪ್ರಯಾಸಪಟ್ಟೆವು" ಎಂದು ಹೇಳುತ್ತಿದ್ದರು.
ನನ್ನ ಅನಿಸಿಕೆ ಇದು: ತೇಜಸ್ವಿಯವರ ವ್ಯಕ್ತಿತ್ವದಂತವರಿಗೆ ಪುರಸ್ಕಾರ ಕೊಟ್ಟು ಕೈ ಮುಗಿದು ಮರೆತುಬಿಡುವುದಕ್ಕಿಂತ ಅವರು ತುಡಿಯುತ್ತಿದ್ದ ವಿಷಯಗಳ ಬಗ್ಗೆ, issues ಬಗ್ಗೆ ಕಾಳಜಿವಹಿಸಿ ಎತ್ತುಕೊಂಡು, ಮುಂದುವರೆಸಿಕೊಂಡು ಹೋಗುವುದು. ಮೀಸಲಾತಿ ಬಗ್ಗೆ ಅವರ ಚಿಂತನೆಗಳು, ಪರಿಸರದ ಬಗ್ಗೆ ಅವರ ಕಾಳಜಿ, ಕನ್ನಡದ ಕಂಪ್ಯೂಟಿಂಗ್ ಕುರಿತ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವುದು ಅಂತಹ ಕೆಲವು.
ಅವರು ಒಮ್ಮೆ ಹೇಳಿದಂತೆ "action is more important"
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
’ತಕ್ಕ’ ಎಂಬ ತೀರ್ಪು?
ತಕ್ಕುಮೆ(ಯೋಗ್ಯತೆ)ಯನ್ನು ಒಬ್ಬರು ತೀರ್ಪು ಈಯ್ಯಬರದು. ಇಲ್ಲವೇ ಒಂದು ಗುಂಪೂ ಕೊಡಬರದು.
"ಇದು ತಕ್ಕುಮೆ/ತಕ್ಕ" ಎಂದು ಹೆಚ್ಚಿನವರು, ಅದರಲ್ಲೂ ಬಿರುದು ಕೊಡಲು ಆರ್ಪು(ಶಕ್ತಿ) ಇರುವವರು ಒಪ್ಪಲೇಬೇಕು. ಅವರು ಒಪ್ಪಲಿಲ್ಲ ಎಂದರೆ ಅದಕ್ಕೆ ಏನೋ ಗಟ್ಟಿಯಾದ ಕಾರಣವಿರಲೇ ಬೇಕೆಂದೇ ನಂಬಬರುವುದು.
ಒಬ್ಬರಿಗೆ ಒಂದು ಬಿರುದು ಬರಲಿಲ್ಲವೆಂದು, ಅದನ್ನು ಮೋಸ(ವಂಚನೆ) ಎನ್ನುವುದು ಸರಿಯಲ್ಲ. ಇದರ negation ಬಿರುದು ಬಂದವರೆಲ್ಲ(ಇಲ್ಲ ಹೆಚ್ಚಿನವರು) ಮೋಸದಿಂದ ಪಡೆದವರೇ, ತಕ್ಕಮೆ ಇಲ್ಲದವರೇ(?), ಎಂಬ ಮಾತು ಎತ್ತಲೂ ಬರುವುದು.
"ನಾನು ಇವರನ್ನು ಮೆಚ್ಚಿದ್ದೇನೆ. ಅವರೇ ಮೇಲು. ಅವರ ತಕ್ಕುಮೆಯೇ ಮೇಲು" ಎಂದು ಕೊಂಡರೆ, ಅದಕ್ಕೆ ಏನು ಹೇಳೋಣ. ಅಂದುಕೊಂಡವರೆ ತಮ್ಮ ಅನಿಸಿಕೆಯನ್ನು ಮರುನೋಡಬೇಕು.
ಅವರಿಗೆ ಒಂದು ಬಿರುದು ಬರದೇ ಇರಲೂ ಹಲವು ಕಾರಣಗಳು ಇದ್ದೇ ಇರುತ್ತವೆ. ಆ ಕಾರಣಗಳನ್ನು ಅವರೇ ಮಾಡಿಕೊಂಡಿರುತ್ತಾರೆ, ಹುಟ್ಟಿಸಿಕೊಂಡಿರುತ್ತಾರೆ; ಅವರ ಮಾತು-ಕೆಲಸದಿಂದ ಅವು ಹುಟ್ಟಿರುತ್ತವೆ.
ಹೀಗೆ ನೋಡಿದರೆ ಪುತಿನ, ಕೆ.ಎಸ್.ನ, ತರಾಸು, ...... etc etc ಹೀಗೆ ಉದ್ದವಾದ ಪಟ್ಟಿ ಮಾಡಬಹುದು
Re: ಯೋಗ್ಯರಿಗಿಲ್ಲ ಪುರಸ್ಕಾರ!!!
ಇದು ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಡಾ. ಪಿ.ಬಿ.ಶ್ರೀನಿವಾಸರು ಒಂದು ಉತ್ತಮ ಉದಾಹರಣೆ.