ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಸಂಪದ ಆರ್ಕೈವಿನಿಂದ

shashikannada ರವರ ಬ್ಲಾಗ್

ಬಂಗಾರದ ಮನುಷ್ಯನಿಗೆ ನುಡಿನಮನ 'ಬಾ ಇಲ್ಲಿ ಸಂಭವಿಸು, ಇಂದೆನ್ನ ಹೃದಯದಲಿ ...'

 ಹೋದ ವರ್ಷ ಇದೇ ಅಣ್ಣಾವ್ರ ಹುಟ್ಟುಹಬ್ಬದಂದು ನಾನು 'ಸಾವಿರದ ಶರಣ'ರಾಜ್ ನೆನಪಿಗೆ ನುಡಿ ನಮನ (http://sampada.net/blog/shashikannada/24/04/2009/19512) ಅರ್ಪಿಸಿದ್ದೆ. ಈ ವರ್ಷ ಏನು ಬರೆಯಲಿ ಎಂದು ಯೋಚಿಸುವಷ್ಟು ಪುರುಸೊತ್ತು ಇಲ್ಲದಾಗಿದೆ. ಬರೆಯುವುದಕ್ಕೇನೋ ಸಾಕಷ್ಟಿದೆ. ಆದರೆ,ಒಂದೆಡೆ ಕೂತು ಬರೆಯುವ ವ್ಯವಧಾನವೇ ಇಲ್ಲವಾಗಿದೆ. ಅಂದು ಬ್ಲಾಗ್ ಬರೆಯುವುದನ್ನು ನಿಲ್ಲಿಸಿದ್ದ ನನಗೆ ಅಂದಿನಿಂದ ಮೊನ್ನೆಯವರೆಗೂ ಏನನ್ನೂ ಬರೆಯಲಾಗಿರಲಿಲ್ಲ.ಯಾವುದಾದರೂ ವಿಚಾರದ ಬಗ್ಗೆ ಬರೆಯುವ ಹಾಗೆ ಅಣ್ಣಾವ್ರ ಬಗ್ಗೆ ಬರೆಯಲಾಗದು. ಅಷ್ಟು ಎತ್ತರದ ವ್ಯಕ್ತಿತ್ವ ಅವರದು.ಕನ್ನಡ ನಾಡು, ನುಡಿ, ಸಂಸ್ಕೃತಿಯ ಪ್ರತಿನಿಧಿಯಾಗಿದ್ದ ಅವರು ಇಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದ ಸಂದರ್ಭದಲ್ಲಿ ನಮ್ಮೊಂದಿಗಿಲ್ಲದಿರುವುದು ಏನನ್ನೋ ಕಳೆದುಕೊಂಡ ಭಾವವನ್ನು ನೀಡಿದೆ.ಏಕೆಂದರೆ, ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಹೋರಾಟವಿರಲಿ ರಾಜ್ ಮುಂಚೂಣಿಯಲ್ಲಿರುತ್ತಿದ್ದರು.  ಮುಂದೆ ಓದಿ »

ಶಾಸ್ತ್ರೀಯ ಕನ್ನಡ ಯೋಜನೆಗಳು: ಸಂವಾದ

(ಪ್ರಿಯ ಸಂಪದ ಬಂಧುಗಳೇ,

ನಮಸ್ಕಾರ. ಕಾರಣಾಂತರಗಳಿಂದ ಹೆಚ್ಚೂ ಕಮ್ಮಿ ಒಂದು ವರುಷದಿಂದ ಸಂಪದದಲ್ಲಿ ಕಾಣಿಸಿಕೊಳ್ಳಲಾಗಲಿಲ್ಲ. ಈಗ ಮತ್ತೆ ಸಂಪದದ ಅಂಗಳಕ್ಕೆ ಕಾಲಿರಿಸಿದ್ದೇನೆ. ಸಂಪದ ಬಂಧುಗಳು ಎಂದಿನಂತೆ ಓದಿ ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಪ್ರೀತಿಯಿಂದ,
ಶಶಿ)

ಕನ್ನಡಕ್ಕೆ  ಶಾಸ್ತ್ರೀಯ ಸ್ಥಾನಮಾನ ದೊರೆತು ವರುಷವೇ ಕಳೆದಿದೆ. ಕನ್ನಡ 'ಶಾಸ್ತ್ರೀಯ ಭಾಷೆ'ಎಂದು ಘೋಷಣೆಯಾದ ಬಳಿಕ ಒಂದು ಕನ್ನಡ ರಾಜ್ಯೋತ್ಸವ ಕಳೆದು ಮತ್ತೊಂದು  ಕನ್ನಡ ರಾಜ್ಯೋತ್ಸವಕ್ಕೆ ಕರ್ನಾಟಕ ಸಜ್ಜಾಗಲಿದೆ. ಆದರೆ, ಹಲವಾರು ತಾಂತ್ರಿಕ ಕಾರಣಗಳಿಂದಾಗಿ ಕನ್ನಡ ಶಾಸ್ತ್ರೀಯ ಸ್ಥಾನಮಾನದ ಪಟ್ಟದಿಂದಾಗಿ ಸಿಗಬೇಕಾದ ಸವಲತ್ತುಗಳನ್ನು ಸಂಪೂರ್ಣವಾಗಿ ಇನ್ನೂ ಪಡೆಯಲಾಗಲಿಲ್ಲ. ಇದಕ್ಕೆ ಕನ್ನಡಿಗರ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮುಖ್ಯವಾದ ಕಾರಣವಾದರೂ, ತಮಿಳುನಾಡಿನಲ್ಲಿ ಗಾಂಧಿ ಎಂಬ ವ್ಯಕ್ತಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿರುವುದರ ವಿರುದ್ಧ ಹೂಡಿದ್ದ ಮೊಕದ್ದಮೆಯೂ ಕಾರಣವಾಗಿತ್ತು. ಕೇಂದ್ರದಲ್ಲಿ ಹೊಸ ಸರಕಾರ ರಚನೆಯಾದ ನಂತರ, ಸರಕಾರ ರಚಿಸಿದ ಯುಪಿಎನಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿರುವವರು ಕನ್ನಡಿಗರೇ ಆಗಿರುವುದು ಕನ್ನಡಕ್ಕೆ ಒಂದು ರೀತಿಯ ವರವಾಗಿದೆ. ಹಾಗಾಗಿಯೇ, ಇಂದು ಶಾಸ್ತ್ರೀಯ ಕನ್ನಡಕ್ಕೆ ಸಂಬಂಧಿಸಿದ ಯೋಜನೆಗಳನ್ನು ಮುಂದುವರಿಸಲು ಕೇಂದ್ರ ಸರಕಾರ ಸಂಬಂಧಿಸಿದ ಇಲಾಖೆಗೆ ಹಸಿರು ನಿಶಾನೆ ತೋರಿಸಿದೆ.

ಈ ಯೋಜನೆಗಳನ್ನು ಮುಂದುವರಿಸುವ ಸಲುವಾಗಿಯೇ ಶಾಸ್ತ್ರೀಯ ಕನ್ನಡ ಯೋಜನೆಗಳು ಕುರಿತು ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಏಪ್ರಿಲ್ 19&20ರಂದು 2 ದಿನಗಳ ಕಾಲ ಐತಿಹಾಸಿಕ ಸಮಾವೇಶ ನಡೆಯಿತು. ನಾಡಿನ ಬೇರೆ ಬೇರೆ ಮೂಲೆಗಳಿಂದ ಹಳೆ ತಲೆಮಾರಿನ ಹಳೆಗನ್ನಡ ವಿದ್ವಾಂಸರು ಹಾಗೂ ಹೊಸ ತಲೆಮಾರಿನ ಕನ್ನಡ ವಿದ್ವಾಂಸರು ಎಲ್ಲರೂ ಈ ಸಮಾವೇಶದಲ್ಲಿ ನೆರೆದಿದ್ದರು. ಪ್ರಮುಖವಾಗಿ ಕನ್ನಡಕ್ಕೆ ಶಾಸ್ತ್ರೀಯ ಕನ್ನಡ ಪಟ್ಟ ದೊರೆಕಿಸಿಕೊಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದ ಡಾ.ಎಂ.ಚಿದಾನಂದ ಮೂರ್ತಿಯವರು ಸಮಾವೇಶದ ಪ್ರಮುಖ ಆಕರ್ಷಣೆಯಾಗಿದ್ದರು. ಇವರೊಂದಿಗೆ ನಾಡಿನ ಪ್ರಮುಖ ಹಳೆಗನ್ನಡ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಯವರು ಕೂಡ ಸೇರಿದ್ದರು. ಇವರು ಈಗಾಗಲೇ ಕನ್ನಡ ಅಭಿಜಾತ ಸಾಹಿತ್ಯ - ಅಧ್ಯಯನದ ಅವಕಾಶಗಳು ಆಹ್ವಾನಗಳು ಪುಸ್ತಕ ರಚಿಸಿದ್ದು, ಕನ್ನಡ ವಿಶ್ವವಿದ್ಯಾಲಯ,ಹಂಪಿಯು ಪ್ರಕಟಿಸಿದೆ. ಆದರೆ,ಕನ್ನಡವನ್ನು 'ಶಾಸ್ತ್ರೀಯ ಭಾಷೆ'ಎಂದು ಪಟ್ಟ ಹಿಡಿದು ನಮ್ಮ ನಾಡಿನಲ್ಲಿ ಹಾಗೂ ದೆಹಲಿಯಲ್ಲಿ ಹಲವು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ ನಾಡೋಜ ದೇಜಗೌ ಅನಾರೋಗ್ಯದ ಕಾರಣ ಸಮಾವೇಶಕ್ಕೆ ಬಂದಿರಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಮನು ಬಳಿಗಾರ್ ಹಾಗೂ ಕಾರ್ಯದರ್ಶಿಗಳಾದ ಶ್ರೀ ಜಯರಾಮ ರಾಜೇ ಅರಸ್ ಕೂಡ  ಭಾಗವಹಿಸಿದ್ದರು. ಹಿರಿಯ ಭಾಷಾತಜ್ಞ, ನಾಟಕಕಾರ ಹಾಗೂ ಕನ್ನಡಕ್ಕೆ  ಶಾಸ್ತ್ರೀಯ ಸ್ಥಾನಮಾನ ಸಿಗಲು ಅಧಿಕೃತವಾಗಿ ಶ್ರಮಿಸಿದ ಪ್ರೊ.ಲಿಂಗದೇವರು ಹಳೆಮನೆ ಸಮಾವೇಶವನ್ನು ಸಂಯೋಜಿಸಿದ್ದರು.ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಪ್ರಭಾರ ನಿರ್ದೇಶಕರಾದ ಡಾ.ರಾಜೇಶ್ ಸಚ್ ದೇವ್ ಕೂಡ ಸಮಾವೇಶದಲ್ಲಿ ಹಾಜರಿದ್ದು, ಕನ್ನಡೇತರರಾಗಿದ್ದರೂ ಕನ್ನಡದಲ್ಲಿಯೇ ಮಾತನಾಡಿ ಹಲವಾರು ವರುಷಗಳ ಕಾಲ ಮೈಸೂರಿನಲ್ಲಿ ವಾಸವಾಗಿರುವುದರಿಂದ ಕನ್ನಡದೊಂದಿಗೆ ತಾವು ಹೊಂದಿರುವ ಒಡನಾಟವನ್ನು ತೋರಿಸಿದರು.  ಮುಂದೆ ಓದಿ »

'ಸಾವಿರದ ಶರಣ' ರಾಜ್ ನೆನಪಿಗೆ ನುಡಿ ನಮನ

Courtesy: wikipedia

ಇಪ್ಪತ್ತನೇ ಶತಮಾನದ ಭಾಷೆಯೆಂದೇ ಜನಪ್ರಿಯವಾದ ಸಿನಿಮಾದೊಂದಿಗೆ ಮನುಷ್ಯ ತನ್ನನ್ನು ಯಾವ ರೀತಿಯಲ್ಲಿ ಗುರುತಿಸಿಕೊಂಡಿದ್ದಾನೆಂದರೆ, ತಾನು ಮೊದಲು ನೋಡಿದ ಚಿತ್ರ, ನನ್ನ ಗೆಳೆಯನೊಂದಿಗೆ, ಗೆಳತಿಯೊಂದಿಗೆ, ಪ್ರೇಯಸಿಯೊಂದಿಗೆ, ಮದುವೆಯಾದ ನಂತರ ನೋಡಿದ್ದು, ನನ್ನ ಮಗನೊಂದಿಗೆ ನೋಡಿದ ಮೊದಲ ಚಿತ್ರ ಹೀಗೆ...ಜೀವನದ ಪ್ರತಿಯೊಂದು ಅಮೂಲ್ಯ ಕ್ಷಣವನ್ನೂ ಸಿನಿಮಾದೊಂದಿಗೆ ಬೆಸೆಯುವಷ್ಟು. ಹಾಗಾಗಿ, ಸಿನಿಮಾ ಎಂದಾಕ್ಷಣ ನನ್ನ ಕಣ್ಣ ಮುಂದೆ ಮೊದಲಿಗೆ ಕಾಣಿಸಿಕೊಳ್ಳುವುದು ಡಾ.ರಾಜ್ ಕುಮಾರ್. ಅವರಿಲ್ಲದ ಸಿನಿಮಾ ಪ್ರಪಂಚವನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಇಂದು ರಾಜ್ ಕುಮಾರ್ 80ನೇ ಹುಟ್ಟುಹಬ್ಬ. ಆದರೆ, ಅವರು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲ, ನಿಜ. ಆದರೆ, ಕನ್ನಡ ಚಿತ್ರ ರಸಿಕರ ಮನದಾಳದಲ್ಲಿ ಸದಾ ಕಾಲ ಜೀವಂತವಾಗಿರುತ್ತಾರೆ. ಕನ್ನಡ ನಾಡು ನುಡಿ ಸಂಸ್ಕೃತಿ ಜೀವಂತವಾಗಿರುವವರೆಗೂ ಚಿರಂಜೀವಿಯಾಗಿರುತ್ತಾರೆ. ಆ ಚಿರಂಜೀವಿ ರಾಜ್ ಕುಮಾರನಿಗೆ ನನ್ನ ಈ ನುಡಿ ನಮನ.  ಮುಂದೆ ಓದಿ »

ಯುಗ ಯುಗಾದಿ ಕಳೆದರೂ...

Ugadi

ನಮಸ್ಕಾರ. ಯುಗಾದಿಯ ಶುಭಾಶಯಗಳು. ಈ ಯುಗಾದಿಯು ಸಂಪದಿಗರೆಲ್ಲರಿಗೂ "ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ ಜೀವಕಳೆಯನು ತರಲಿ" ಎಂದು ಹಾರೈಸುತ್ತೇನೆ.  ಮುಂದೆ ಓದಿ »

ನಿನ್ನ ಇಡೀ ವ್ಯಕ್ತಿತ್ವವೇ ನನ್ನ ನೆಮ್ಮದಿ...(ಭಾಗ 2)

ಪ್ರೀತಿ ಎಂದರೇನು? ಜೀವನ ಎಂದರೇನು? ಎಂಬುದನ್ನು ಪದಗಳಲ್ಲಿ ಹಿಡಿದಿಡುವಷ್ಟೇ ಕಷ್ಟವಾದ ಕೆಲಸ ಪ್ರೀತಿ ಎಂದರೇನು ಎಂಬುದನ್ನು ವಿವರಿಸುವುದು. ಜೀವನವೇ ಪ್ರೀತಿ. ಪ್ರೀತಿಯೇ ಜೀವನ. ಅದಕ್ಕಾಗಿಯೇ ಹಿರಿಯರು "ಒಲವೇ ಜೀವನ ಸಾಕ್ಷಾತ್ಕಾರ" ಎಂದಿರುವುದು. ಪ್ರೀತಿಯ ಮೊದಲ ಪಾಠ ಎಂದರೆ ಪ್ರೀತಿಗಾಗಿ ಕೇಳದಿರುವುದು. ಬರೀ ನೀಡುವುದು. ನೀಡುವುದನ್ನು ಕಲಿತರೆ, ಪ್ರೀತಿಸುವುದನ್ನು ಕಲಿತಂತೆ. ಆದರೆ, ಈಗ ನಡೆಯುತ್ತಿರುವುದು ಅದಕ್ಕೆ ವಿರುದ್ಧ. ಅವರು ನೀಡುವಾಗಲೂ ಅದು ವಾಪಸ್ಸು ಬರುತ್ತದೆಯೋ ಇಲ್ಲವೋ ಎಂದು ಆಲೋಚಿಸಿಯೇ ನೀಡುತ್ತಾರೆ. ಅದಕ್ಕೆ ಅದು ಚೌಕಾಸಿಯಾಗಿರುವುದು. ಜನ ಪ್ರೀತಿಯನ್ನು ಹಂಚಿಕೊಳ್ಳುವುದಿಲ್ಲ. ಮುಕ್ತವಾಗಿ ಹಂಚಿಕೊಳ್ಳುವುದಿಲ್ಲ. ಅವರು ಷರತ್ತಿನ ಮೇಲೆ ಹಂಚಿಕೊಳ್ಳುತ್ತಾರೆ. ಅವರು ತಾವು ನೀಡಿದ್ದು ತಮಗೆ ವಾಪಸ್ಸು ಬರುವುದೋ ಇಲ್ಲವೋ ಎಂದು ಕಾಯುತ್ತಾ ಕುಳಿತಿರುತ್ತಾರೆ.  ಮುಂದೆ ಓದಿ »

Syndicate content