ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › shashikannada ರವರ ಬ್ಲಾಗ್

ವಿಶ್ವಮಾನವ - ಕನ್ನಡದೊಳ್ ಭಾವಿಸಿದ ಜನಪದಂ

'ವಿಶ್ವಮಾನವ' ಎಂದಾಕ್ಷಣ ನಮಗೆ ನೆನಪಾಗುವುದು ನಮ್ಮ ರಾಷ್ಟ್ರಕವಿ ಶ್ರೀಕುವೆಂಪು. 'ಮನೆಯನೆಂದೂ ಕಟ್ಟದಿರು, ನೆಲೆಯನೆಂದೂ ಮುಟ್ಟದಿರು, ನೀ ಅನಂತವಾಗಿರು,' 'ಓ ನನ್ನ ಚೇತನ, ಆಗು ನೀ ಅನಿಕೇತನ', 'ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು', ಎಂದು ಕರೆ ನೀಡುವ ಮೂಲಕ ಇಡೀ ಕನ್ನಡ ವಿಶ್ವಕ್ಕೆ 'ವಿಶ್ವಮಾನವ' ಸಂದೇಶವನ್ನು ನೀಡಿದ ಈ ಶತಮಾನದ ಸಾಹಿತ್ಯ ಶಿಖರ ಅವರು. ಅವರ 'ವಿಶ್ವಮಾನವ' ಸಂದೇಶವನ್ನು ನಾವೆಲ್ಲರೂ ನಡೆ,ನುಡಿಯಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಹಾಗಾಗಿ, ಜಾತಿ, ಮತ, ಧರ್ಮ ಎಲ್ಲಾ ಜೊಳ್ಳುಗಳ ಹೊಟ್ಟು ತೂರಿ 'ವಿಶ್ವಮಾನವ'ನಾಗುವ ನನ್ನ ಪ್ರಯತ್ನದ ಒಂದು ಅಭಿವ್ಯಕ್ತಿಯೇ ಈ ಜಾಲತಾಣ.

ಹಾಗೆಯೇ, ತಮ್ಮ ಉನ್ನತ ಬದುಕಿನ ಮೂಲಕ ಮಾನವ ಕುಲಕ್ಕೇ ಬೆಳಕು ತೋರಿದ ಬುದ್ಧ, ಮಹಾವೀರ, ಅಲ್ಲಮ, ಬಸವರಾದಿಯಾಗಿ, ನಮ್ಮೆಲ್ಲಾ ವಚನಕಾರರು, ಆಧುನಿಕ ಭಾರತದ ಸಂತರೆಂದೇ ಹೇಳಬಹುದಾದ ಶ್ರೀರಾಮಕೃಷ್ಣ, ಶ್ರೀರಮಣ, ಶ್ರೀ ಅರವಿಂದರು, ಶ್ರೀ ಸ್ವಾಮಿ ವಿವೇಕಾನಂದರು, ಜಿಡ್ಡು ಕೃಷ್ಣಮೂರ್ತಿ, ಗಾಂಧಿ, ಓಶೋ ಮುಂತಾದ ಮಹನೀಯರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಾ ನನ್ನ ಅನುಭವಕ್ಕೆ ಬರುವುದರಲ್ಲಿ ನಾನು ಅಭಿವ್ಯಕ್ತಗೊಳಿಸಬಹುದಾದವನ್ನು ಸಹೃದಯ ಓದುಗ ಮಿತ್ರರೊಂದಿಗೆ ಹಂಚಿಕೊಳ್ಳುವ ಒಂದು ಚಿಕ್ಕ ಪ್ರಯತ್ನವಾಗಿ ರೂಪುಗೊಂಡಿರುವ ಈ ಬ್ಲಾಗನ್ನು ಸಮಸ್ತ ಕನ್ನಡ ಬಾಂಧವರಿಗೆ ಅರ್ಪಿಸುತ್ತಿದ್ದೇನೆ.

ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!

July 15, 2008 - 4:38pm — shashikannada

ಬೆಂಗಳೂರಿನ ಬಾಂಧವರೇ,

ಇತ್ತೀಚೆಗೆ ಬಂದ ಸುದ್ದಿಯೊಂದರ ಪ್ರಕಾರ ಬೆಂಗಳೂರಿನೆಲ್ಲೆಡೆ ಇನ್ನೂ 2-3 ದಿನಗಳ ಕಾಲ ಬರ ಉಂಟಾಗಲಿದೆ.

ಕಾವೇರಿ 4ನೇ ಹಂತದಲ್ಲಿ ಪ್ರಮುಖ ನೀರು ಪೂರೈಕೆ ಲೈನನ್ನು ಮರುಜೋಡಿಸುವ ಕೆಲಸ ನಡೆಯಲಿರುವುದರಿಂದ ಉಚ್ಚನ್ಯಾಯಾಲಯದ ನಿರ್ದೇಶನದಂತೆ ನೀರು ಪೂರೈಕೆಯನ್ನು ನಿಲ್ಲಿಸಲಾಗುವುದು ಎಂದು ತಿಳಿದುಬಂದಿದೆ.

ಉತ್ತರಹಳ್ಳಿ-ಕೆಂಗೇರಿ ರಸ್ತೆಯಲ್ಲಿ ಚನ್ನಸಂದ್ರದ ಬಳಿ ಬೆಂಗಳೂರು-ಮೈಸೂರು ಇನ್ಪ್ರಾಸ್ಟ್ರಕ್ಚರ್ ಕಾರಿಡಾರ್ ಬಳಿ ಹಾದುಹೋಗುವ ಈ ಪೂರೈಕೆ ಮಾರ್ಗವನ್ನು ಒಪ್ಪಿತ ಕಾರಿಡಾರ್ ಜೋಡಣೆಯಂತೆ ಈಗಾಗಲೇ ನಿಗದಿಯಾಗಿರುವಂತೆ ಸ್ಥಳಾಂತರಿಸಲಾಗುವುದು. ಈ ವ್ಯಾಜ್ಯವು ಬಹಳ ದಿನಗಳ ಕಾಲದಿಂದ ನಡೆಯುತ್ತಿದ್ದು, ಉಚ್ಚನ್ಯಾಯಾಲಯವು BWSSBಗೆ ಈ ಪೂರೈಕೆ ಮಾರ್ಗವನ್ನು ಮರುಜೋಡಿಸುವಂತೆ ನಿರ್ದೇಶಿಸಿದೆ.

ಈ ವರ್ಗಾವಣೆಗೆ ಈಗಾಗಲೇ ಇರುವುದರ ಜೊತೆಗೆ ಹೊಸ ಮಾರ್ಗವನ್ನು ಜೋಡಿಸುವ ಅಗತ್ಯವಿದೆ. ಈ ಉದ್ದೇಶಕ್ಕಾಗಿ, ಮೂರು ದಿನಗಳ ಕಾಲ ಪಂಪುಗಳನ್ನು ನಿಲ್ಲಿಸಲಾಗುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

BWSSB ಸಾರ್ವಜನಿಕರು ಸಾಕಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಸೂಚನೆ ನೀಡಿದೆ. ಜುಲೈ 20ರಿಂದ ಎಂದಿನಂತೆ ನೀರು ಪೂರೈಕೆಯಾಗಲಿದೆ.

ನೀರು ಪೂರೈಕೆ ವ್ಯತ್ಯಯ ಉಂಟಾಗುವ ಪ್ರದೇಶಗಳೆಂದರೆ:

ಉತ್ತರ ವಿಭಾಗ: ಸಹಕಾರ ನಗರ, ಬ್ಯಾಟರಾಯನಪುರ, ಯಲಹಂಕ, ವಿದ್ಯಾರಣ್ಯಪುರದ ಕೆಲ ಭಾಗಗಳು, ದಾಸರಹಳ್ಳಿ, ಜಾಲಹಳ್ಳಿ ಕೆಲ ಭಾಗಗಳಿ, ಸಿದ್ಧಾರ್ಥನಗರ, ಬಿಐಎಎಲ್

ದಕ್ಷಿಣ ವಿಭಾಗ: ಬಿಟಿಎಂ ಬಡಾವಣೆ, ಜೆಪಿ ನಗರ, ಮಾರುತಿನಗರ, ವಿಜಯಬ್ಯಾಂಕ್ ಬಡಾವಣೆ, ಎಲೆಕ್ಟ್ರಾನಿಕ್ಸ್ ಸಿಟಿ

ದಕ್ಷಿಣ-ಪೂರ್ವ ವಿಭಾಗ: ನಂಜರೆಡ್ಡಿ ಕಾಲೋನಿ , ಮುರುಗೇಶ್ ಪಾಳ್ಯ, ವಿನಾಯಕ ಬಡಾವಣೆ, ದೊಮ್ಮಲೂರು, ಅಮರಜ್ಯೋತಿ ಬಡಾವಣೆ, ಇಸ್ರೋ ಬಡಾವಣೆ, ಎನ್ಎಎಲ್, ಕೋಡಿಹಳ್ಳಿ,ಮ ಐಐಎಂ ವಿಮಾನನಿಲ್ದಾಣ, ಕೋರಮಂಗಲ ಮೊದಲನೇ ಬ್ಲಾಕ್, ಟೀಚರ್ಸ್ ಕಾಲೊನಿ, ಜಕ್ಕಸಂದ್ರ ಬಡಾವಣೆ, ಸಿಪಿಡಬ್ಲುಡಿ ಕ್ವಾರ್ಟ್ರಸ್, ಕೆಎಸ್ಆರ್ಪಿ ಕ್ವಾರ್ಟ್ರಸ್ (4ನೇ ಬ್ಲಾಕ್ ವರೆಗೆ), ಎಚ್ ಎಸ್ ಆರ್ ಬಡಾವಣೆ

ಕೇಂದ್ರ ವಿಭಾಗ: ಓಕಳೀಪುರಂ

ಪೂರ್ವ ವಿಭಾಗ: ಕೊನೇನ ಅಗ್ರಹಾರ, ಬಿಡಿಎ ಬಡಾವಣೆ, ಎ ಎಚ್ ಎಲ್ ಫ್ಯಾಕ್ಟರಿ, ಮಾರತಹಳ್ಳಿ ಡಿಫೆನ್ಸ್ ಕ್ವಾರ್ಟ್ರಸ್, ಆಕಾಶ್ ವಿಹಾರ್ ಕೆಲ ಭಾಗಗಳು, ಎ ಇ ಸಿ ಎಸ್ ಬಡಾವಣೆ, ಗರುಡಾಚಾರ್ ಪಾಳ್ಯ, ಮಹಾದೇವಪುರದ ಕೆಲ ಭಾಗಗಳು, ಬಿ-ನಾರಾಯಣಪುರ, ಕೆಐಎಡಿಬಿ ಪ್ರದೇಶ, ಐಟಿಪಿಎಲ್.

ಪಶ್ಚಿಮ ವಿಭಾಗ: ನಾಗರಬಾವಿ (ಎಲ್ಲಾ ಹಂತಗಳು), ಚಂದ್ರ ಬಡಾವಣೆ, ವಿಜಯನಗರ, ಹಂಪಿನಗರ, ಆರ್ ಆರ್ ನಗರ, ಕೆಂಗೇರಿ, ಡಬ್ಲುಸಿಆರ್ 2ನೇ ಹಂತ, ಮಹಾಲಕ್ಷ್ಮಿ ಬಡಾವಣೆ, ಮಾಗಡಿ ರಸ್ತೆ

  • ನೀರು
  • ಪೂರೈಕೆ
  • ಬೆಂಗಳೂರು
~.~
  • shashikannada ರವರ ಬ್ಲಾಗ್
  • Login or register to post comments
  • 201 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 15, 2008 - 5:05pm — hpn

ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!

hpn's picture

ಇದರ ಜೊತೆಗೆ ಕರೆಂಟು ಕೂಡ ಹೋಗುತ್ತಿದೆ ಮತ್ತೆ ಮತ್ತೆ. ಲೋಡ್ ಶೆಡ್ಡಿಂಗ್ ಅಂತೆ! Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 15, 2008 - 5:15pm — shashikannada

ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!

shashikannada's picture

ನಮಸ್ಕಾರ hpn ಅವರಿಗೆ. ಇತ್ತೀಚೆಗೆ ಕರೆಂಟು ತುಂಬಾ ತೆಗೀತಿದ್ದಾರೆ. ಆದ್ರೆ, ಇದು ಪರೀಕ್ಷೆ ಸಮಯ ಅಲ್ವಲ್ಲ ಆದ್ರೂ ಯಾಕೆ ಕರೆಂಟು ತೆಗೀತಿದ್ದಾರೆ ಅಂತ ಗೊತ್ತಾಗ್ತಿಲ್ಲ! ನಿನ್ನೆಯಂತೂ 2 ಗಂಟೆ ಕಾಲ ಗಾಢಾಂಧಕಾರದಲ್ಲಿ ಮುಳುಗಿದ್ವಿ. ಕರೆಂಟು ಇಲ್ಲ ಅಂದ್ರೆ ಅಟ್ ಲೀಸ್ಟ್ ಮಲಗ್ಬೋದು. ಆದ್ರೆ, ನೀರಿಲ್ಲ ಅಂದ್ರೆ ಏನ್ ಮಾಡೋದು? ಸಂಪದ ಬಳಗದೋರಿಗೋಸ್ಕರ ನೀವೇ ಏನಾದ್ರೂ ವ್ಯವಸ್ಥೆ ಮಾಡಿ ಪ್ಲೀಸ್.

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 15, 2008 - 6:33pm — vikashegde

ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!

vikashegde's picture

ಹರಿಯವರು ಮನಸು ಮಾಡಿದರೆ ಸಂಪದದಲ್ಲಿ ನೀರು ಡೌನ್ ಲೋಡಿಂಗ್ ವ್ಯವಸ್ಥೆ ಮಾಡಬಹುದೇನೋಪಾ Smiling

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2008 - 2:37pm — shashikannada

ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!

shashikannada's picture

ಹೌದೌದು. ಸಂಪದಿಗರಿಗೋಸ್ಕರ ಹರಿಯವರು ನೀರು, ವಿದ್ಯುತ್ ಮುಂತಾದ ಮೂಲಸೌಕರ್ಯದ ವ್ಯವಸ್ಥೆಯನ್ನು ಒದಗಿಸಬೇಕು. ಯಾಕಂದ್ರೆ, ನಾವು(ಸಂಪದಿಗರು) "ಭಕ್ತ ಪ್ರಹ್ಲಾದ"ನ ಹಾಗೆ "ಹರಿ"ಯನ್ನೇ ನಂಬಿಕೊಂಡಿದ್ದೇವೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 15, 2008 - 7:43pm — yuvapremi

ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!

yuvapremi's picture

ಓ...!! ನೀರನ್ನು ಡೌನ್ಲೋಡ್ ಮಾದುವ ವ್ಯವಸ್ತೆ ಸಂಪದದಲ್ಲಿ ?

ಹೌದು, ಎಣ್ಣೆ, ಬೆಣ್ಣೆ ಇಲ್ಲವಾದರೊ ಪರವಿಲ್ಲ. ನೀರಿಲ್ಲದಿದ್ದರೆ ಅಂತಹ ಸ್ತಿತಿ ಅನುಭವಿಸಿದವರಿಗೇ ಗೊತ್ತು. Sad
ಇದಕ್ಕೆ ನಾವುಗಳೆಲ್ಲ "ವಾಟರ್ ಪೊಲಿಂಗ್" ಮಾಡಬಹುದು ಅಲ್ಲವೆ ???

ಏನಿಲ್ಲ, ನಮ್ಮ ಮನೆಯ ಬೀದಿಯಲ್ಲಿನ ಹತ್ತರಲ್ಲಿ ಎರಡು ಮನೆಯಲ್ಲಿ ಒಂದು ಭೋರ್ (electric bore well) ಇದ್ದೇ ಇರುತ್ತದೆ. ನೀರು ಕಡಿಮೆ ಇರುವಂತವರು ಅಂತವರ ಮನೆಯಲ್ಲಿ ನೀರು ತೆಗೆದುಕೊಳ್ಳಿ.

ನಂತರ ನೀರಿನ ವ್ಯವಸ್ತೆ ಮೊದಲಿನಂತಾದಾಗ ಅಷ್ಟೇ ನೀರನ್ನು ಮತ್ತೆ ವಾಪಸ್ ಕೊಡುವುದು. ಇದರಿದ ನೀರಿಲ್ಲದೆ ಪಡುವ ವ್ಯಥೆ ದೊರಮಾಡಬಹುದು. ಅಲ್ಲವೆ. Smiling

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2008 - 1:58pm — madhava_hs

ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!

madhava_hs's picture

ಸಂಪದದ ಮೂಲಕ ನೀರಿನ ವ್ಯವಸ್ಥೆ ಹೇಗೆ?

ಒಂದೆರಡು ’ಕರುಳು ಸಿರೀಸ್’ ಕಥೆಗಳನ್ನು ಹಾಕಿ ಸಂಪದಿಗರು ಕಣ್ಣೀರ್ಗರೆಯುವಂತೆ ಮಾಡುವುದು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2008 - 2:39pm — shashikannada

ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!

shashikannada's picture

"ಕರುಳು ಸೀರೀಸ್ ಕತೆ"ಗಳನ್ನ ಹೆಣೆಯೋಕೆ ಹರಿಯವರು ಅನುಮತಿ ನೀಡಲಾರರೇನೋ! ಯಾಕಂದ್ರೆ, ಸಂಪದದ ಪುಟಗಳೆಲ್ಲ ನೆಂದು ಹೋದ್ರೆ ಅವರಿಗೇ ಸಮಸ್ಯೆಯಲ್ವ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2008 - 2:33pm — shashikannada

ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!

shashikannada's picture

ನಮಸ್ಕಾರ ಯುವಪ್ರೇಮಿಯವರಿಗೆ,

ಹಾಗಾದ್ರೆ ನಾನು ಇನ್ಮೇಲೆ ನಮ್ಮನೇಲಿ ನೀರಿಗೆ ತಾಪತ್ರಯ ಆದಾಗಲೆಲ್ಲ ನಿಮ್ಮ ಮನೆಗೆ ಸ್ನಾನಕ್ಕೆ ಬರ್ತೇನೆ. ಸೇರಿಸ್ತೀರಲ್ವ? ನಾನು ಬೆಳಗ್ಗೆ ನೀರು ಬರ್ತದೋ ಇಲ್ವೋ ಅಂತ ಕಳೆದ ರಾತ್ರಿ 11 ಗಂಟೆಗೆ ಸ್ನಾನ ಮಾಡಿದೆ.

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2008 - 8:43pm — yuvapremi

ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!

yuvapremi's picture

ಕಂಡಿತಾ ಶಶಿಕನ್ನಡ ರವರೆ,

ನಮಗೆ ಬೋರಪ್ಪನ (borewell ) ದಯೇ ಇದೆ, ಅದಕ್ಕೆ ನೀರಿಗೆ ತೊಂದರೆ ಇಲ್ಲ. Smiling
ನೀವು ಯಾವಾಗ ಬೇಕಿದ್ದರು ಬರಬಹುದು. ಬರುವಾಗ ನಿಮ್ಮ ID ಕಾರ್ಡ್ ತಗೊಂಡುಬನ್ನಿ, ಸಾಕು. Eye-wink

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೆಲಗೇರಿ ಕೆರೆ ಹಿಂಬದಿಯಲ್ಲಿ. ಮುಂಬದಿಯಲ್ಲಿ ಅದನ್ನು ಕಲುಷಿತಗೊಳಿಸಲು ಅಣಿಯಾಗಿ ನಿಂತಿರುವ ಬಡಾವಣೆ. ಚಿತ್ರ:ಜೆ.ಜಿ.ರಾಜ್.
  • ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?...
  • ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?...
  • ವಿಷಯ : ದತ್ತಿ ಉಪನ್ಯಾಸ-೨೦೦೮ " ಸಾಹಿತ್ಯ ಮತ್ತು ಜೀವನದ ಇತರ ಮೌಲ್ಯಗಳು "
  • ಸಂಪದದಲ್ಲಿ ಹೊಸತು: ಆಯ್ದ ಸುದ್ದಿ ವಿಭಾಗ
Syndicate content

ಲೇಖಕರು

shashikannada's picture

ಪೂರ್ಣ ಹೆಸರು
ಶಶಿಕುಮಾರ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕೊನೆಗೂ ಕುಮಾರಸ್ವಾಮಿ ರಾಮನಗರಕ್ಕೆ ಭೇಟಿ ನೀಡಿದರು!
  • ಓದಿದ್ದು ಕೇಳಿದ್ದು ನೋಡಿದ್ದು-2
  • ನೀನು ಯಾರೆ
  • ಚೈನಾ ೧೦೦ ನಾವು ೦
  • ಹರುಷ ತಂದ ಆರು ದಿನಗಳು (ನಮ್ಮೂರೇ ನನಗೆ ಮೇಲು| ಈ ಊರಿಗೆ ಕರೆದು ತಂದಿರುವುದು ಹಣದ ಗೀಳು|)
  • ಆರದ ದೀಪ
  • ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
  • ಈಗ "ನನ್ನ ವಯಸ್ಸೆಷ್ಟು?" ಹೇಳಿ
  • ಹುಡುಗಿಯಿಂದ ಆಯ್ತು
  • ಸುಭಾಷಿತ: ಐದು ಮರಗಳ ಸ್ವರ್ಗ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 8:29am
  • mahesha
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 8:12am
  • mahesha
    ಉ: ನೀನು ಯಾರೆ
    August 29, 2008 - 8:08am
  • mahesha
    ಉ: ಚೈನಾ ೧೦೦ ನಾವು ೦
    August 29, 2008 - 8:04am
  • amg
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 29, 2008 - 7:55am
  • mahesha
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 7:35am
  • mahesha
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 7:32am
  • mahesha
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 7:31am
  • mahesha
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 7:30am
  • mahesha
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 7:29am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 104 ಅತಿಥಿಗಳು ಆನ್ಲೈನ್ ಇರುವರು.


ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator