21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಬರೀ ತರ್ಲೆ ಅಲ್ಲ, ಸಿಕ್ಕಾಪಟ್ಟೆ ತರ್ಲೆ ಜೋಕ್ಸ್!

February 22, 2011 - 2:18pm
shashikannada

 
 (ನನ್ನ ಗೆಳೆಯ ವಿನಯ್ ಇ-ಅಂಚೆಯಲ್ಲಿ ಕಳಿಸಿದ್ದು)
 
ವಿ.ಸೂ: ಇದೇ ಜೋಕುಗಳನ್ನು ಈ ಮುಂಚೆ ಯಾರಾದರೂ ಎಲ್ಲಾದರೂ ಪ್ರಕಚಿಸಿದ್ದರೆ, ಯಾರೂ ನನ್ನನ್ನು ಕ್ಸಮಿಸಬೇಕಾಗಿಲ್ಲ. ಮತ್ತೊಮ್ಮೆ ಅದೇ ಜೋಕನ್ನು ಓದಿ ಮಜಾ ಮಾಡಿ)
 
ಟೀಚರ್ (ಸಿಟ್ಟಿನಿಂದ) : ಲೇ ಗುಂಡ, ನೀನು ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟು.
ಗುಂಡ (ಮನಸ್ಸಿನಲ್ಲೇ) : ನೀವು ಮುಂದಿನ ಜನ್ಮದಲ್ಲಿ ಲೈಟ್ ಕಂಬವಾಗಿ ಹುಟ್ಟಿ, ಆವಾಗ ನೋಡ್ಕೋತೀನಿ.

***

ಗುಂಡ : ನಿನಗೆ ಪ್ರೀತಿ ಮುಖ್ಯನಾ, ಸ್ನೇಹ ಮುಖ್ಯನಾ? ಸರಿಯಾಗಿ ಆಲೋಚನೆ ಮಾಡಿ ಹೇಳು.
ತಿಮ್ಮ : ನನಗೆ ಪ್ರೀತಿ ಮುಖ್ಯ, ನಿನಗೆ?
ಗುಂಡ : ನನಗೆ ಸ್ನೇಹ ಮುಖ್ಯ. ಯಾಕೆಂದ್ರೆ, ಪ್ರೀತಿಗೆ ಮದುವೆಯಾಗಿದೆ. ಸ್ನೇಹ ಇನ್ನು ಡಿಗ್ರಿ ಓದುತ್ತಿದ್ದಾಳೆ.

***


ಅಮೆರಿಕನ್ನರ ಜೀವನದ ಶೈಲಿ...
ಮಗಳು : ಸಾರಿ ಡ್ಯಾಡ್, ನನಗೆ ನಿನ್ನೆ ಮದುವೆ ಆಯಿತು. ನಿನಗೆ ಹೇಳಲು ಮರೆತು ಹೋಯಿತು. ಡೋಂಟ್ ಫೀಲ್ ಬ್ಯಾಡ್.
ತಂದೆ : ಇಟ್ಸ್ ಓಕೆ, ಬಟ್ ನೆಕ್ಸ್ಟ್ ಟೈಮ್ ಮಾತ್ರ ಮರೀ ಬೇಡ!

***

ಟೀಚರ್ : ವಿದ್ಯಾರ್ಥಿಗಳು ಒಳ್ಳೆ ಮನಸ್ಸಿನಿಂದ ಪ್ರಾರ್ಥನೆ ಮಾಡಿದರೆ ದೇವ್ರು ಯಾವ ವರ ಬೇಕಾದರೂ ಕೊಡ್ತಾನೆ.
ಗುಂಡ : ಅಯ್ಯೋ ಸುಮ್ನಿರಿ ಟೀಚರ್, ಅದು ನಿಜಾನೆ ಆಗಿದ್ರೆ ಇಷ್ಟೊತ್ತಿಗೆ ನೀವು ನನ್ನ ವೈಫ್ ಆಗಿರ್ತಿದ್ರಿ!

***

ಹುಡುಗಿರ ಲೈಫ್ ನೀರಿನ ತರಹ...
ಹುಡುಗರ ಲೈಫ್ ಮೊಬೈಲ್ ತರಹ...
ಮೊಬೈಲ್ ನೀರಿಗೆ ಬಿದ್ದರೂ ಅಥವಾ ನೀರು ಮೊಬೈಲ್ ಮೇಲೆ ಬಿದ್ದರೂ.. ಹಾಳಾಗುವುದು ಮೊಬೈಲ್ ಮಾತ್ರಾ!

***

ನಾಯಿಯೊಂದು ಬೆಕ್ಕನ್ನು ಅಗಾಧವಾಗಿ ಪ್ರೀತಿಸಲು ಆರಂಭಿಸಿತು..
ತನ್ನ ಪ್ರೀತಿಯ ವಿಷಯವನ್ನು ಮನೆಯವರ ಬಳಿ ತೋಡಿಕೊಂಡಿತು..
ನಾಯಿಯ ಮನೆಯವರು ಈ ಸಂಬಂಧವನ್ನು ನಿರಾಕರಿಸಿದರು..
ಏನಕ್ಕೆಂದರೆ.. ಛೆ.. ಹುಡುಗಿಗೆ ಮೀಸೆ ಇದೆ!

***

ಒಬ್ಬ ಹುಡುಗ ರಜನೀಕಾಂತ್ ಮನೆ ಮುಂದೆ ಕ್ರಿಕೆಟ್ ಆಡುತ್ತಿದ್ದ..
ಹುಡುಗ ಹೊಡೆದ ರಭಸಕ್ಕೆ ರಜನೀಕಾಂತ್ ಮನೆಯ ಕಿಟಕಿ ಒಡೆದು ಹೋಯಿತು..
ರಜನಿ ಬಾಲ್ ಹಿಡಿದು ಹುಡುಗನಿಗೆ ನಿಧಾನವಾಗಿ ಆಡು ಎಂದು ಉಪದೇಶಿಸಿದರು..
ಆ ಹುಡುಗ ಮತ್ಯಾರೂ ಅಲ್ಲ.. ರಾಹುಲ್ ದ್ರಾವಿಡ್!
--
ಮಜನೂ ಡಾರ್ಲಿಂಗ್, ಪ್ರೀತಿ ಹುಟ್ಟಿದ್ದು ಎಲ್ಲಿಂದ?
 

ಲೈಲಾ : ಮಜನೂ ಡಾರ್ಲಿಂಗ್, ಪ್ರೀತಿ ಹುಟ್ಟಿದ್ದು ಎಲ್ಲಿಂದ ಗೊತ್ತಾ?
ಮಜನೂ : ಅಷ್ಟೂ ಗೊತ್ತಿಲ್ವೇನೆ ಲೈಲಿ... ಚೀನಾದಿಂದ.
ಲೈಲಾ : ಅದ್ಹೇಗೆ ಅಷ್ಟು ನಿಖರವಾಗಿ ಹೇಳ್ತೀಯಾ?
ಮಜನೂ : ಯಾಕಂದ್ರೆ ಪ್ರೀತಿಗೆ ಗ್ಯಾರಂಟಿ ಮತ್ತು ವಾರಂಟಿ ಎರಡೂ ಇರುವುದಿಲ್ಲ!

***

ಗುಂಡಣ್ಣ : ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಬಸ್ ಕಂಡಕ್ಟರ್ ನಡುವಿನ ಸಾಮ್ಯತೆ ಏನು?
ಟಿಂಗಣ್ಣ : ಏನೋಪ್ಪಾ? ನೀನೇ ಹೇಳಿಬಿಡು.
ಗುಂಡಣ್ಣ : ಸಿಂಪಲ್, ಅವರಿಬ್ಬರು ಜಪಿಸುವ ಮಂತ್ರ ಒಂದೇ, ಅದು 'ಚೇಂಜ್ ಬೇಕು'!

***

ಗುಂಡನ ಮಡದಿ ಅವಳಿ ಮಕ್ಕಳಿಗೆ ಜನ್ಮವಿತ್ತಳು
ಗುಂಡ ಇಡೀ ರಾತ್ರಿ ನಿದ್ದೆ ಮಾಡದೆ ಆಲೋಚಿಸುತ್ತಿದ್ದ..
ಗುಂಡ ಏನು ಆಲೋಚನೆ ಮಾಡುತ್ತಿದ್ದಾಂದರೆ... ಎರಡನೇ ಮಗುವಿನ ತಂದೆ ಯಾರಿರಬಹುದು ಎಂದು!

***

ರಾಜಕಾರಿಣಿಯ ಮಗ ಸ್ಕೂಲ್ ನಲ್ಲಿ ಓದುತ್ತಿದ್ದ...
ಟೀಚರ್ : ನಿಮ್ಮ ಮಗ ಫೈಲ್ ಆಗಿದ್ರೂ ನೀವು ಯಾಕೆ ಸಿಹಿ ಹಂಚುತ್ತಿದ್ದೀರಾ ಎಂದು ನನಗೆ ಅರ್ಥವಾಗುತ್ತಿಲ್ಲ.
ರಾಜಕಾರಿಣಿ : ಟೀಚರ್, ಕ್ಲಾಸ್ ನಲ್ಲಿ 50 ಜನರ ಪೈಕಿ 40 ವಿದ್ಯಾರ್ಥಿಗಳು ಫೈಲ್, ಹಾಗಿದ್ದ ಮೇಲೆ ಬಹುಮತ ನನ್ನ ಮಗನ ಕಡೆಗೆ ಇದ್ದ ಹಾಗೆ ತಾನೇ!

***

ಗುಂಡನಿಗೆ ಈಜು ಬರುತ್ತಿರಲಿಲ್ಲ. ಒಂದು ದಿನ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದ, ನೀರಿನಲ್ಲಿ ಮುಳುಗಬೇಕಾದರೆ ಕೈಗೆ ಸಿಕ್ಕಿದ ಒಂದು ಮೀನನ್ನು ದಡಕ್ಕೆ ಎಸೆದು ಹೇಳ್ತಾನೆ... ನಾನಂತೂ ಬದುಕೊಲ್ಲ.. ನೀನಾದ್ರೂ ಬದುಕ್ಕೋ ಹೋಗು.
***

ನಿಜವಾದ ಗೆಳೆತನದ ಪರಮಾವಧಿ...
ತಡರಾತ್ರಿ ಮನೆಗೆ ಬಂದ ಮಗನನ್ನು ಅಪ್ಪ ಪ್ರಶ್ನಿಸುತ್ತಾನೆ.
ಅಪ್ಪ: ಎಲ್ಲಿಗೆ ಹೋಗಿದ್ದೆ ಇಷ್ಟು ಹೊತ್ತು?
ಮಗ: ಸ್ನೇಹಿತನ ಮನೆಯಲ್ಲಿದ್ದೆ ಅಪ್ಪಾ.
ಅಪ್ಪ ಅವನ 10 ಜನ ಸ್ನೇಹಿತರಿಗೆ ಫೋನ್ ಮಾಡಿ ವಿಚಾರಿಸಿದಾಗ..
ಹತ್ತು ಜನ ಸ್ನೇಹಿತರಲ್ಲಿ ಆರು ಜನ ಇಲ್ಲೇ ಇದ್ದಾ ಅಂಕಲ್ ಅಂದರು.
ಮೂರು ಜನ, ಈಗಷ್ಟೆ ಹೊರಟ ಅಂಕಲ್ ಹೇಳಿದರು.
ಇನ್ನೊಬ್ಬ, ಇಲ್ಲೇ ಇದ್ದಾನೆ ಅಂಕಲ್ ಫೋನ್ ಕೊಡ್ಲಾ ಅಂದಾಗ ಅಪ್ಪ ಹೌಹಾರಿದ..

***

ಗುಂಡ ರೈಲ್ವೆ ಟಿಸಿಯ ಬಳಿ ವಿಚಾರಿಸುತ್ತಾನೆ..
ಗುಂಡ: ಎಕ್ಸ್ ಪ್ರೆಸ್ ಟ್ರೈನ್ ಎಷ್ಟು ಗಂಟೆಗಿದೆ?
ಟಿಸಿ: ಒಂದು ಗಂಟೆಗೆ
ಗುಂಡ: ಲೋಕಲ್ ಟ್ರೈನ್?
ಟಿಸಿ: 9 ಗಂಟೆಗೆ
ಗುಂಡ: ಗೂಡ್ಸ್ ಗಾಡಿ..?
ಟಿಸಿ: ನಿನಗೆ ಎಲ್ಲಪ್ಪಾ ಹೋಗಬೇಕು?
ಗುಂಡ: ಎಲ್ಲೂ ಇಲ್ಲಾ.. ಹಳಿ ದಾಟಬೇಕಿತ್ತು.
***
ಪುಸ್ತಕ ಓದುತ್ತಿದ್ದ ವೈದ್ಯ ಡಿಸ್ಮಿಸ್ ಆದ!
 

ಆಸ್ಪತ್ರೆಯ ಗ್ರಂಥಾಲಯದಲ್ಲಿ ಪುಸ್ತಕವೊಂದನ್ನು ಓದುತ್ತಿದ್ದ ವೈದ್ಯನೊಬ್ಬನನ್ನು ಆಡಳಿತ ಮಂಡಳಿ ಕೆಲಸದಿಂದ ಡಿಸ್ ಮಿಸ್ ಮಾಡಿತು.
ಆ ವೈದ್ಯ ಯಾವ ಪುಸ್ತಕ ಓದುತ್ತಿದ್ದಿದ್ದಕ್ಕಾಗಿ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿತು ಹೇಳಿ? ಉತ್ತರ ಹೊಳೀತಾ?
ಆ ವೈದ್ಯ ಓದುತ್ತಿದ್ದ ಪುಸ್ತಕ "30 ದಿನಗಳಲ್ಲಿ ವೈದ್ಯನಾಗುವುದು ಹೇಗೆ?!"

***

ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕಾಲೇಜು ಜೀವನದ ಮೊದಲ ದಿನ. ಒಬ್ಬ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ನಡುವಿನ ಸಂವಾದ...
ವಿದ್ಯಾರ್ಥಿ : ನಿನ್ನ ಹೆಸರೇನು?
ವಿದ್ಯಾರ್ಥಿನಿ : ಎಲ್ಲರೂ ನನ್ನನ್ನು " ಅಕ್ಕ' ಅಂತಾರೆ.
ವಿದ್ಯಾರ್ಥಿ : ವಾವ್, what a co-incident. ಎಲ್ಲರೂ ನನ್ನನ್ನ "ಬಾವ" ಅಂತಾರೆ!

***

ಅಪ್ಪ : ಲೇ ಗುಂಡ, ನಿನ್ನ ಪರೀಕ್ಷೆ ಫಲಿತಾಂಶ ಏನಾಯಿತು?
ಗುಂಡ : ಅಪ್ಪಾ, ನಾನು ಮತ್ತೆ ಫೇಲ್ ಆದೆ.
ಅಪ್ಪ : ಇನ್ನು ಮುಂದೆ ನನ್ನನ್ನು ಅಪ್ಪಾ ಅಂತ ಕರೀಬೇಡ.
ಗುಂಡ : ಓ.. ಕಮಾನ್ ಅಪ್ಪಾ.. ನಾನು ಹೇಳ್ತಾ ಇದ್ದಿದ್ದು ನನ್ನ ಸ್ಕೂಲ್ ಟೆಸ್ಟ್ ಬಗ್ಗೆ, ಡಿಎನ್ಎ ಟೆಸ್ಟ್ ಬಗ್ಗೆ ಅಲ್ಲ.

***

ಮಗ : ಅಪ್ಪಾ ನಮ್ ಟೀಚರ್ ಸೂಪರ್ ಆಗಿದ್ದಾರೆ.
ಅಪ್ಪ : ಹಾಗೆಲ್ಲ ಹೇಳಬಾರದು ಮಗು, ಟೀಚರ್ ಅಮ್ಮನಿಗೆ ಸಮಾನ.
ಮಗ : ಹೋಗಪ್ಪಾ ನೀನು, ಯಾವಾಗ್ಲೂ ನಿಂಗೇ ಸೆಟ್ ಮಾಡ್ಕೋಳೋಕೆ ನೋಡ್ತೀಯಾ.

****
ನಿಮ್ಮ ಕವನ ಅಂದರೆ ನನಗೆ ಬಹಳ ಇಷ್ಟ ಸರ್!
 
ಗುಂಡ : ನಿಮ್ಮ ಕವನ ಅಂದರೆ ನನಗೆ ಬಹಳ ಇಷ್ಟ ಸರ್.
ಕವಿ : ನನ್ನ ಯಾವ ಕವನ ನಿನಗೆ ಇಷ್ಟಪ್ಪಾ?
ಗುಂಡ : ಅದೇ ಸಾರ್... ನಿಮ್ಮ ಎರಡನೇ ಮಗಳು.. ಕವನ.

***

ಅಂದು 1947ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀ ದುಡಿದರು ದೇಶಕ್ಕಾಗಿ.
ಇಂದು 2010ರಲ್ಲಿ ನಾವು ದುಡಿಯುತ್ತಿರುವುದು ಗಾಂಧೀ ನೋಟಿಗಾಗಿ.

***

ಸರ್ದಾರ್ಜಿ ಮತ್ತು ಕಪ್ಪೆ ನಡುವೆ ವಾಗ್ಯುದ್ದ ನಡೆಯಿತು.
ಕಪ್ಪೆ : ನೀವು ಸರ್ದಾರ್ಜಿಗಳು ಮುಠಾಳರು.
ಸರ್ದಾರ್ಜಿ : ಇಲ್ಲಾ ನಾವು ಮುಠಾಳರಲ್ಲ.
ಕಪ್ಪೆ : ನಿನ್ನ ಜೊತೆ ಮಾತನಾಡುವುದು ವೇಸ್ಟ್, ಸುಮ್ನೆ ಸಮಯ ವ್ಯರ್ಥ (ಎಂದು ಬಾವಿಗೆ ಹಾರಿತು)
ಸರ್ದಾರ್ಜಿ : ಛೇ.. ಇದರಲ್ಲಿ ಕಪ್ಪೆ ಆತ್ಮಹತ್ಯೆ ಮಾಡಿಕೊಳ್ಳುವಂತದ್ದೇನಿದೆ?

***

ಮನಮುಟ್ಟುವ ಕನ್ನಡ ಸಂದೇಶಗಳು

ಮನಸಿಗೆ ನೋವಾಗುವಂತೆ ಮಾತಾಡಿ ನಾವು ಕೆಲವರನ್ನು ಕಳ್ಕೊತೀವಿ
ಹಾಗೆ ಏನೂ ಮಾತಾಡದೇ ಕೆಲವರನ್ನು ಕಳ್ಕೊತೀವಿ
ಏನೆ ಆಗಲಿ ಮನಸ್ಸು ಬಿಚ್ಚಿ ಮಾತಾಡಿ, ಜಸ್ಟ್ ಮಾತ್ ಮಾತಲ್ಲಿ.

***

Love is blind ಅಂತಾರೆ ಏನಕ್ಕೆ ಗೊತ್ತಾ?
ನಮ್ಮ ಮುಖ ನೋಡುವ ಮುಂಚೆನೇ ಅಮ್ಮ ನಮ್ಮನ್ನು ಪ್ರೀತಿಸಲು ಶುರುಮಾಡಿರುತ್ತಾರೆ.

***

ಸುಂದರವಾದ ಹುಡುಗಿ ಸಿಕ್ಕಿದ ಕೂಡಲೇ ಆಕೆಯನ್ನು ಪ್ರೀತಿಸಬೇಡ
ಆಕೆಗಾಗಿ ನಿನ್ನ ನಿದ್ದೆಯನ್ನು ಹಾಳು ಮಾಡಿಕೊಳ್ಳಬೇಡ
ಎರಡು ದಿನ ಖುಷಿ ಖುಷಿಯಾಗಿ ನಿನ್ನನ್ನು ಭೇಟಿಯಾಗಿ..

ಮೂರನೇ ದಿನ ಎನ್ನುವಳು "ನನಗಾಗಿ ಕಾಯಬೇಡ"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (78 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Krishna Kulkarni on

ಬೆಳಿಗ್ಗೆ ಬೆಳಿಗ್ಗೆ ಓದಿ ಮನಸ್ಸು ಹಗುರವಾಯಿತು.
ದಿನವೆಲ್ಲ ಉಲ್ಲಾಸ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shashikannada on

ಪ್ರಿಯರೇ,

ನಮಸ್ಕಾರ. ನಿಮ್ಮ ಮನಸ್ಸನ್ನು ಈ ಜೋಕುಗಳು ಹಗುರವಾಗಿಸಿದ್ದರೆ, ನಾನು ಇವನ್ನು ಇಲ್ಲಿ ಹಾಕಿದ್ದಕ್ಕೂ ಸಾರ್ಥಕ.

ನಲ್ಮೆಯ,
ಶಶಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.