ಆಲಾಪ
ಮನದ ನಾದಕ್ಕೆ ಶ್ರುತಿಯ ಸಾಥ್
ಬಿಸಿಲ ಹಣ್ಣು
ಮೂರಲ್ಲ ನೂರಲ್ಲ
ಮುನ್ನೂರು ಜೊತೆ ಕಣ್ಣು
ನೆಟ್ಟಿದ್ದು ಮಾತ್ರ
ಎರಡು ಜೊತೆ
ನೆರಿಗೆ ಕೆನ್ನೆ, ಮುದುಡಿದ ಮೈ
ಥೇಟ್ ಚಂಪಕ್ಕಜ್ಜಿ ಹಾಗೇ...
ಆ ದಡಿಸೆರಗಿನ ಅಡಿಗೊಮ್ಮೆ ಮೂಗರಳಿಸುವಾ?
ತೇಲಿತೇನೋ ಅರಳಿಟ್ಟು, ಮೆಂತೆಹಿಟ್ಟಿನ ಘಮಲು
ಓಹ್ ಹಳದಿ ಪೇಟಾ?
ಎಷ್ಟು ದಿನವಾಯಿತಲ್ಲವೇ-
ತಂಬಾಕಿನ ಪರಿಮಳ
ಬೀಡಿ ಕಟ್ಟುವ ಮೋಡ ನೋಡಿ
ಜೊತೆಗೆ ಬೆವರ ಸಾಲುಗಳ. . .
ಏನೇ ಹೇಳಿ,
ಕರಿಬೂಟಿನ ಮಧ್ಯೆಯೂ
ಆ ದೂಲ್ಗಾಳಿನ ಗತ್ತೇ ಗತ್ತು.
ಅಂಗಿಗಂಟಿದ
ಕವಳದ ಕಲೆ
ಉಸಿರಿಗಂಟಿದ
ಕಮಟು ಸೆರಗೇ
ಅಚ್ಚು-ಮೆಚ್ಚು...
-ಶ್ರೀದೇವಿ ಕಳಸದ

- shreedevikalasad ರವರ ಬ್ಲಾಗ್
- Login or register to post comments
- 271 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಬಿಸಿಲ ಹಣ್ಣು
ಕವನ ತುಂಬ ಚೆನ್ನಾಗಿದೆ ಶ್ರೀದೇವಿ. ತುಂಬ ಅರ್ಥಪೂರ್ಣವಾಗಿದೆ. ನೆನವರಿಕೆಯಲ್ಲೇ ಮುಳುಗತ್ತಾ ವರ್ತಮಾನದ ವಿಷಾದ ವ್ಯಕ್ತಪಡಿಸಿದೆ.
ಇದಕ್ಕಿಂತ ಸರಳವಾಗಿ ಹೇಳಬೇಕೆಂದರೆ, ನನಗೂ ಮೆಂತ್ಯ ಹಿಟ್ಟಿನ ವಾಸನೆ ಬಂದಂತಾಯಿತು. ದೂಳ್ಗಾಲಿನ ಗತ್ತು, ಕವಳದ ಕಲೆ, ತಂಬಾಕಿನ ಪರಿಮಳ, ಬೀಡಿ ಕಟ್ಟುವ ಮೋಡಿ ಎಲ್ಲ ಉಂಟು ಧಾರವಾಡದಲ್ಲಿ.
ಬಿಸಿಲು ಹೋದರೂ ಹಣ್ಣುಗಳು ಬರುತ್ತಿರಲಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಬಿಸಿಲ ಹಣ್ಣು
ಪಲ್ಲವಿಯವರೇ, ‘ಬಿಸಿಲ ಹಣ್ಣಿ’ ಗೆ ಕಮೆಂಟಿಸಿದ್ದಕ್ಕೆ ಧನ್ಯವಾದ. ನಿಮ್ಮ ‘ಮೊದಲ ದಿನ ಮೌನ’ ಓದಿ ಕೆಲ ಕ್ಷಣ ಮೌನ ಆವರಿಸಿತು. ಮೊದಮೊದಲು ಬರಹ ಲಘು ಹರಟೆಯಂತೆ ಕಂಡಿತಾದರೂ ಮುಗಿಯುವ ಹೊತ್ತಿಗೆ ಸೀರಿಯಸ್ಸಾದ ಸಂದೇಶವನ್ನ ಅದು ಹೇಳಿತು. ಸರಳವಾದರೂ ಅಷ್ಟೇ ಆಪ್ತವಾಗುತ್ತಾ ಹೋಗುವುದೇ ನಿಮ್ಮ ನಿರೂಪಣಾ ಶೈಲಿಯ ವಿಶೇಷತೆ. ಅಂದ ಹಾಗೆ ನೀವೂ ಧಾರವಾಡದವರಲ್ಲವೇ? ಸಧ್ಯಕ್ಕೆ ಏನು ಮಾಡ್ಕೊಂಡಿದ್ದೀರಿ? - ಶ್ರೀದೇವಿ ಕಳಸದ
ಉ: ಬಿಸಿಲ ಹಣ್ಣು
ಪಲ್ಲವಿಯವರೇ, ‘ಬಿಸಿಲ ಹಣ್ಣಿ’ ಗೆ ಕಮೆಂಟಿಸಿದ್ದಕ್ಕೆ ಧನ್ಯವಾದ. ನಿಮ್ಮ ‘ಮೊದಲ ದಿನ ಮೌನ’ ಓದಿ ಕೆಲ ಕ್ಷಣ ಮೌನ ಆವರಿಸಿತು. ಮೊದಮೊದಲು ಬರಹ ಲಘು ಹರಟೆಯಂತೆ ಕಂಡಿತಾದರೂ ಮುಗಿಯುವ ಹೊತ್ತಿಗೆ ಸೀರಿಯಸ್ಸಾದ ಸಂದೇಶವನ್ನ ಅದು ಹೇಳಿತು. ಸರಳವಾದರೂ ಅಷ್ಟೇ ಆಪ್ತವಾಗುತ್ತಾ ಹೋಗುವುದೇ ನಿಮ್ಮ ನಿರೂಪಣಾ ಶೈಲಿಯ ವಿಶೇಷತೆ. ಅಂದ ಹಾಗೆ ನೀವೂ ಧಾರವಾಡದವರಲ್ಲವೇ? ಸಧ್ಯಕ್ಕೆ ಏನು ಮಾಡ್ಕೊಂಡಿದ್ದೀರಿ? - ಶ್ರೀದೇವಿ ಕಳಸದ