ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ನನ್ನ 'ಸಂಪದ' ಬ್ಲಾಗ್

ಪರೋಪಕಾರಾರ್ಥಮಿದಂ ಶರೀರಂ...?!

July 1, 2007 - 8:34pm — Anonymous User

ನಿನ್ನೆ ಅವರನ್ನು ನೋಡಿದೆ...

ಪೂರ್ವಾಗ್ರಹವಿಲ್ಲದೆ ನೋಡಿದರೆ ಆತ್ಮೀಯವೆನಿಸುವ ಹಿರಿಯ ವ್ಯಕ್ತಿತ್ವ. ನಾವು ನೀವು ಕಲಿಯಬೇಕಾದುದು ಅವರಲ್ಲಿ ಇನ್ನೂ ಬೇಕಾದಷ್ಟಿದೆ.
ನಾನು ನೋಡಿದಾಗ ಅವರು ಇನ್ನೊಬ್ಬ ಹಿರಿಯರ ಹತ್ತಿರ ಇತ್ತೀಚೆಗೆ ತಾವು ಅನುಭವಿಸಿದ್ದನ್ನು ಹೇಳಿಕೊಳ್ಳುತ್ತಿದ್ದರು.
ತಮ್ಮ ಸುತ್ತ ಮುತ್ತಿದ ಆಕ್ರೋಶದ ಭಾರಕ್ಕೆ ಮಾತುಗಳು ತೂಕತಪ್ಪಿ ಉದುರಿದ್ದಿರಬೇಕು.
ಬಹುಶಃ ಇದಕ್ಕೇ ಕಾಯುತ್ತಿದ್ದ ಕನ್ನಡ ಮಾಧ್ಯಮವೊಂದರಲ್ಲಿ ಯಾವುದೇ ಮುಲಾಜಿಲ್ಲದೆ ಅವರ ಮಾನ ಹರಾಜಿಗೆ ಬಿದ್ದಿತ್ತು.
ನೀರಿಗೆ ಬೀಳೆಂದು ಸುತ್ತಮುತ್ತ ನಿಂತು ಕೂಗಿ, ನೀರಿಗೆ ತಳ್ಳಿ ಕಷ್ಟಕಾಲದಲ್ಲಿ ಜತೆಗಿರದವರ ಬಗ್ಗೆ ಅವರಲ್ಲಿ ಬೇಸರವಿತ್ತು.
ಅವರ ಪರಿಸ್ಥಿತಿಯನ್ನು ಕಂಡು ಕಸಿವಿಸಿಯಾಯಿತು...

****************

ನಮ್ಮಜ್ಜ ಕೂಡಾ ಹೀಗೇ ಇದ್ದರು. ಊರಿಗೆಲ್ಲಾ ಉಪಕಾರ ಮಾಡುತ್ತಿದ್ದರು. ಅವರ ಪರೋಪಕಾರದ ಮಟ್ಟ ಮೇರೆ ಮೀರಿ ಹರಿದು, ಕೊನೆಗೆ ಹೇಗಾಯಿತೆಂದರೆ, ಯಾರಿಗಾದರೂ ಏನಾದರೂ ಆಗಬೇಕೆಂದರೆ, ತಳ್ಳಿ ಅರ್ಜಿ, ಮೂಕರ್ಜಿಗಳನ್ನು ಕೊಡಬೇಕೆಂದರೆ ಓಡಿಕೊಂಡು ನಮ್ಮಜ್ಜನ ಹತ್ತಿರ ಬರುತ್ತಿದ್ದರು. ಕೊನೆಗೆ ಎಲ್ಲಿಯೋ ಸಿಕ್ಕಿಹಾಕಿಕೊಳ್ಳಬೇಕಾದ ಪರಿಸ್ಥಿತಿ ಬಂದಾಗ ಮಾತ್ರ ನಮ್ಮಜ್ಜನ ಜತೆಗೆ ಯಾರೂ ಇರುತ್ತಿರಲಿಲ್ಲ. ಅವರು ಸಾಯುವ ಹಂತದಲ್ಲಿದ್ದಾಗಲೂ ಅವರು ಮಾಡಿದ ಪುಣ್ಯಕಾರ್ಯಗಳ ಬಗ್ಗೆ ನೆನಪಿಸಿಕೊಳ್ಳುವ ಉಪಕೃತರ್ಯಾರೂ ಇರಲಿಲ್ಲ.

****************

ಸ್ವಲ್ಪ ದಿವಸ ನನ್ನ ಕಥೆಯೂ ಇದೇ ಆಗಿತ್ತು. ಅನ್ಯಾಯವಾಯಿತೆಂದರೆ, ಯಾಕೆ ತೆಪ್ಪಗೆ ಸಹಿಸಿಕೊಳ್ಳಬೇಕು ಎನ್ನುವ ಮನೋಭಾವ. ನ್ಯಾಯ ಸಿಗಲೇಬೇಕೆಂಬ ಹಠ. ಇದು ಎಲ್ಲಿಯವರೆಗೆ ಹೋಯಿತೆಂದರೆ, ಯಾರಿಗೇನೇ ಅನ್ಯಾಯವಾದರೂ ನನ್ನ ಹತ್ತಿರವೇ ಅದು ಬರುತ್ತಿತ್ತು, ಬಂದಾಗ ನಾನು ಅದರ ಪರವಾಗಿ ನಿಂತು ಮಾತಾಡಬೇಕೆಂಬ ಆಶಯವೂ ಇರುತ್ತಿತ್ತು. ಗೆಲುವು ಸಿಕ್ಕಿದಾಗ ಗೆಳೆಯ-ಗೆಳತಿಯರೆಲ್ಲ ಜತೆಗಿರುತ್ತಿದ್ದರು. ಸೋಲಾಯಿತೆಂದರೆ ನಾನೊಬ್ಬಳೇ ಅದನ್ನು ಜೀರ್ಣಿಸಿಕೊಳ್ಳಬೇಕಿತ್ತು.

ಅವರವರಿಗೆ ಏನು ಬೇಕೋ ಅವರವರಿಗೆ ಚೆನ್ನಾಗಿ ತಿಳಿದಿರುತ್ತದೆ, ಬೇರೆಯವರ ಸಹಕಾರದಿಂದ ತಮಗೆ ಬೇಕಾದುದು ಮಾಡಿಕೊಳ್ಳುವ ಮಂದಿಗೆ ನಾನಲ್ಲದಿದ್ದರೆ ಇನ್ನೊಬ್ಬರು ಸಿಕ್ಕೇ ಸಿಗುತ್ತಾರೆ ಅಂತ ತಿಳಿದ ನಂತರ ನನ್ನ ಪರೋಪಕಾರದ ಪುಣ್ಯಕಾರ್ಯ ಕಡಿಮೆಯಾಯಿತು...

****************

ಬ್ರಿಟಿಷರು ಒಂದು ಕಾಲದಲ್ಲಿ ಭಾರತವಾಳಿದರೆಂದು ಬ್ರಿಟಿಷರನ್ನೆಲ್ಲ ವೈರಿಯೆಂದು ತಿಳಿದರೆ ಸರಿಯೇ? ಸ್ಕೂಲಿನಲ್ಲಿ ಮಾಸ್ತರು ತಪ್ಪು ಮಾಡಿದಾಗ ಕೈಗೆ ಏಟು ಕೊಟ್ಟರೆಂದು ಅವರು ಕಲಿಸಿದ್ದನ್ನೆಲ್ಲ ಮರೆತುಬಿಡುತ್ತೇವೆಯೆ? ಒಬ್ಬ ಲೇಖಕ ಯಾವುದೋ ಲಹರಿಯಲ್ಲಿ ಓದುಗರಿಗೆ ಇಷ್ಟವಾಗದ್ದು ಬರೆದರೆ, ಒಂದು ಕಾಲದಲ್ಲಿ ಆತ ಬರೆದಿದ್ದು ಓದುಗರಿಗೆ ಇಷ್ಟವಾಗಿರುವುದು ಸುಳ್ಳಾಗುವುದಿಲ್ಲವಲ್ಲ? ಆತನ ಕೊಡುಗೆ ಸುಳ್ಳಾಗುವುದೆ?

ವ್ಯಕ್ತಿಗಳು, ವಿಚಾರಗಳು ಕಪ್ಪು-ಬಿಳುಪು ಬಣ್ಣದಲ್ಲಿ ಎಂದೂ ಇರುವುದಿಲ್ಲ. ವ್ಯಕ್ತಿಗಳಲ್ಲಿ ಒಳ್ಳೆಯದು, ಕೆಟ್ಟದು - ಎಲ್ಲವೂ ಇರುತ್ತದೆ, ಸಾರ್ವಜನಿಕವಾಗಿ ವಿಚಾರಗಳ ಬಗ್ಗೆ ಚರ್ಚಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಇದರ ಜತೆ ಮಾತುಗಳು ತೂಕತಪ್ಪಿದಾಗ ವಿಚಾರಗಳನ್ನು ಖಂಡಿಸುವುದರ ಜತೆಗೆ ವ್ಯಕ್ತಿಯನ್ನು ಅರ್ಥಮಾಡಿಕೊಂಡು ವಾದಕ್ಕೊಂದು ಕೊನೆಹಾಡುವ ಸಹೃದಯತೆಯೂ ಇರಬೇಕು. ವಿಚಾರಗಳಿಗೋಸ್ಕರ ವ್ಯಕ್ತಿಗಳ ಚಾರಿತ್ರ್ಯವಧೆ ಮಾಡುವ ಕೀಳು ಮಟ್ಟಕ್ಕಿಳಿದಿದ್ದೇವೆ ನಾವು. (ಬೇರೆಯವರಿಗೆ ಉಪಕಾರವೊಂದನ್ನು ಬಿಟ್ಟು) ಇನ್ನೂ ಏನೇನು ಮಾಡುತ್ತೇವೋ...?

~.~
  • ರವರ ಬ್ಲಾಗ್
  • Login or register to post comments
  • 244 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂದು ಭಯಂಕರ ಜೋಕು ಓದಿ.
  • ಏ.ಟಿ.ಎಂ ನ ಸರದಿಯಲ್ಲಿ ನಿಂತಾಗ-ರಘೋತ್ತಮ್ ಕೊಪ್ಪರ
  • ಭಾವನ ತ೦ಗಿ!
  • ನಾವೆಂಥಾ ಜನ!
  • ಒಂದು ಕಹಿ ಅನುಭವ
Syndicate content

ಲೇಖಕರು

Anonymous User's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 138 ಅತಿಥಿಗಳು ಆನ್ಲೈನ್ ಇರುವರು.


ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator