ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಪುಸ್ತಕನಿಧಿ(೨) -- ತಮಿಳರು ಹೇಗೆ ? ಏಕೆ ? ಇತ್ಯಾದಿ ---ತಪ್ಪದೆ ಕಣ್ಣಾಡಿಸಿ
ತಮಿಳು ತಲೆಗಳ ನಡುವೆ ಬಿ. ಜಿ. ಎಲ್. ಸ್ವಾಮಿಯವರ ಪುಸ್ತಕ .
ತಮಿಳರ ಇತಿಹಾಸ , ಸಂಸ್ಕೃತಿ , ದುರಭಿಮಾನ , ಇತ್ಯಾದಿ ಕುರಿತ ಒಳ್ಳೆಯ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ . ಮೊಂಡುತನ , ಹಠ ಸಾಧಿಸುವಿಕೆ , ವಿರೋಧದ ಹುಟ್ಟಡಗಿಸುವಿಕೆ , ತಮ್ಮ ಮೊಲಕ್ಕೆ ಮೂರು ಕೊಂಬೆಂಬ ಹುಚ್ಚು ಹಠ ಇತ್ಯಾದಿ ಬಗ್ಗೆ ಆಕರ್ಷಕವಾಗಿ ಬರೆದಿದ್ದಾರೆ ತಪ್ಪದೆ ಕಣ್ಣಾಡಿಸಿ .
ಅದು ಅಂತರ್ಜಾಲದಲ್ಲಿ ಇಲ್ಲಿದೆ.

- shreekant.mishrikoti ರವರ ಬ್ಲಾಗ್
- Login or register to post comments
- 637 hits
- Email this blog




RSS:
ಪ್ರತಿಕ್ರಿಯೆಗಳು
ಉ: ಪುಸ್ತಕನಿಧಿ(೨) -- ತಮಿಳರು ಹೇಗೆ ? ಏಕೆ ? ಇತ್ಯಾದಿ
ಬಿ ಜಿ ಎಲ್ ರವರ ಈ ಕೃತಿ ಓದಲು ತಮಾಷೆಯಾಗಿದೆ. ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ: ಎಲ್ಲ ತಮಿಳರೂ ಹೀಗಿರುವುದಿಲ್ಲ. ಮೊಂಡುತನ, ಹಠ ಸಾಧಿಸುವಿಕೆ, ವಿರೋಧದ ಹುಟ್ಟಡಗಿಸುವಿಕೆ - ಇವೆಲ್ಲ ಮನುಷ್ಯನ ಗುಣಗಳು. ಯಾವ ತಮಿಳಿಗರಿಗೂ, ಕನ್ನಡಿಗರಿಗೂ ಇದು ಸೀಮಿತವಲ್ಲ ಹಾಗೆಯೇ ಯಾವ ಭಾಷೆಯವರೂ ಇದರಿಂದ ಹೊರತಲ್ಲ (ಅಂದರೆ ಎಲ್ಲ ಭಾಷೆಯವರಲ್ಲೂ ಮೊಂಡತನ, ಹಠ ಸಾಧಿಸುವಿಕೆ ಇತ್ಯಾದಿ ಇದ್ದೇ ಇರುತ್ತದೆ)
*****
ಬಿ ಜಿ ಎಲ್ ಸ್ವಾಮಿಯವರ ಈ ಪುಸ್ತಕವನ್ನು PDF ರೂಪದಲ್ಲಿ ಸಂಪದಕ್ಕೆ ಅಪ್ಲೋಡ್ ಮಾಡಿರುವೆ. ಆಸಕ್ತರು ಅದನ್ನು ಇಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಉ: ಪುಸ್ತಕನಿಧಿ(೨) -- ತಮಿಳರು ಹೇಗೆ ? ಏಕೆ ? ಇತ್ಯಾದಿ
ನಾಡಿಗ್ ಅವರೆ,
ಪಿಡಿಎಫ಼್ ಮಾಡಿ ಹಾಕಿದ್ದಕ್ಕೆ ಧನ್ಯವಾದಗಳು. ಸುಮಾರು ಹತ್ತು ವರ್ಷಕ್ಕೂ ಹಿಂದೆ ಈ ಪುಸ್ತ್ತಕವನ್ನು ಓದಿದ್ದೆ. ಸ್ವಾಮಿ ಅವರ ಎಲ್ಲ ಪುಸ್ತ್ಕಕಗಳಂತೆ ಇದೂ ನವಿರಾದ ಹಾಸ್ಯದಿಂದ ಕೂಡಿದೆ.
ನಿಮ್ಮ ಹೆಚ್ಚುವರಿ ಸೂಚನೆ ಕೂಡ ಚೆನ್ನಾಗಿದೆ - ಒಂದು ಭಾಷೆಯಾಡುವ ಎಲ್ಲರನ್ನೂ ಒಟ್ಟಿಗೆ ಸಮೀಕರಿಸಿ ಹೇಳುವುದು ಬಹಳ ಕಷ್ಟದ ವಿಷಯ. ಇದನ್ನು ನಾವು ಮರೆಯಬಾರದು.
ಈ ಪುಸ್ತಗಗಳನ್ನು ಡಿಜಿತಲ್ ಲೈಬ್ರರಿಯಲ್ಲಿ ಓದಲು ಸಾಧ್ಯವಾಗಲಿಲ್ಲ. ಪ್ರತೀ ಪುಟವನ್ನೂ ಬೇರೆಬೇರೆಯಾಗಿ save ಮಾಡಬೇಕಾಗುವಂತೆ ತೋರುತ್ತದೆ. ಅಥವ ಬೇರೆಯಾವ ರೀತಿಯಲ್ಲಿ ಓದಬಹುದು ತಿಳಿಸಿ. ನಾನು ಇಂಟರ್ನೆಟ್ ಎಕ್ಸ್ಪ್ಲೋರರ್ ಉಪಯೋಗಿಸುತ್ತೇನೆ.
-ಹಂಸಾನಂದಿ
ಅನಿಸಿಕೆ: ಪುಸ್ತಕನಿಧಿ(೨) - ನಗೋದಿಲ್ಲ ಅಂತ ಪಂದ್ಯ ಕಟ್ಟಿದರೆ ಸೋಲುತ್ತೀರಾ
ಈ ಪುಸ್ತಕವನ್ನು ಈಗಾಗಲೇ ಓದದೇ ಇರುವವರು ತಪ್ಪದೇ ಓದಿ. ಇದನ್ನು ಎಲ್ಲ ತಮಿಳರಿಗೂ ಸಾರ್ವತ್ರೀಕರಿಸಿ ಹೇಳಲು ಸಾಧ್ಯವಿಲ್ಲ ಎನ್ನುವ ಮಾತು ನಿಜವಾದರೂ ಕೂಡಾ, ಇದರಲ್ಲಿನ ತಿಳಿಹಾಸ್ಯದಿಂದ ಕೂಡಿದ ಬರಹದ ಶೈಲಿ ಬಹಳ ಚೆನ್ನಾಗಿದೆ.
ಅದರಲ್ಲೂ, "ಪಾಂಡ್ಯ ಅರಸರ ಪರಾಕ್ರಮಗಳು" ಮತ್ತು "ಪುರಂದರದಾಸರ ಪುಣ್ಯವಿಶೇಷ" ಈ ಭಾಗಗಳನ್ನಂತೂ, "ನಾನು ಏನೇ ಆದರೂ ನಗೋದಿಲ್ಲ" ಅಂತ ಪಂದ್ಯ ಕಟ್ಟಿ ಓದೋದಕ್ಕೆ ಕುಳಿತರೆ ಖಂಡಿತ ಸೋಲುತ್ತೀರಾ, ಹುಷಾರ್!
- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)