ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ನೆನಪಿನಲ್ಲುಳಿದ ಚಿತ್ತಾಲರ ಕಥೆ - ಅಪಘಾತ
ಬಹಳ ಹಿಂದೆ ನಾನು ಓದಿ , ಇನ್ನೂ ನೆನಪಿನಲ್ಲುಳಿದ ಕಥೆ.
ಇವತ್ತು ಈ ಬಗ್ಗೆ
http://kannada-kathe.blogspot.com/2007/02/blog-post.html
ಇಲ್ಲಿ ಓದಿದೆ . ತಂತ್ರಗಳು ಇತ್ಯಾದಿ ಸಾಹಿತ್ಯಕ ವಿಷಯಗಳನ್ನು ನಾನು ಅರಿಯೆನಾದರೂ ಬರಿಯ ಕಥೆಯಾಗಿ - ವಿಚಿತ್ರ ಕಥೆಯಾಗಿ , ಮಾನವ ಸಂಬಂಧಗಳ ಕುರಿತು ಅದು ಹೊಳೆಯಿಸುವ ಬದುಕಿನ ಸತ್ಯದಿಂದಾಗಿ - ನನ್ನ ನೆನಪಿನಲ್ಲಿ ಉಳಿದಿದೆ .
ಅಲ್ಲಿಯ ನಾಲ್ಕು ಸಾಲನ್ನು ಅನಾಮತ್ತಾಗಿ ಇಲ್ಲಿ ಎತ್ತಿ ಹಾಕಿ , ನಾನು ಮುಂದುವರೆಸಿದ್ದೇನೆ. ಈಗ ಕಥೆ ಕೇಳಿ .
"ಈ ಕಥೆ ಪ್ರಾರಂಭವಾಗುವುದು ಒಂದು ಅಪಘಾತದಲ್ಲಿ ತೀರಿಕೊಂಡರೆನ್ನಲಾದ ಒಂದು ಶವವನ್ನು ಗುರುತಿಸಬೇಕೆಂದು ಪೋಲೀಸನೊಬ್ಬನ ಕೋರಿಕೆಯಿಂದ. ಆ ಶವದಲ್ಲಿ ಎಸ್.ವಿ.ಕುಲಕರ್ಣಿ ಎಂಬವರ ರೈಲ್ವೆ ಪಾಸು ದೊರೆತದ್ದರಿಂದ ಅದು ಅವರದೇ ಶವ ಅನ್ನುವ ಗುಮಾನಿ. ಆದರೆ ಪೋಲೀಸಿನವ ಬರುವ ಮನೆಯಲ್ಲಿ ಮೂವರು ಎಸ್.ವಿ.ಕುಲಕರ್ಣಿಗಳಿದ್ದಾರೆ [ಸುರೇಶ, ಸುಭಾಶ, ಸುಧಾಕರ].. "
ಮೂವರೂ ಹೊರಗೆ ಹೋಗಿದ್ದಾರೆ . ಅವರು ಮರಳಿ ಮನೆಗೆ ಬರುವವರೆಗೆ ಅಥವಾ
ಯಾರು ಸತ್ತವರು ಎಂಬುದು ತಿಳಿಯುವವರೆಗೆ ಮನೆಯ ಯಾರೆಲ್ಲ ಹೇಗೆ ಹೇಗೆ ವಿಚಾರ ಮಾಡುತ್ತಾರೆ ? ಅವರವರ ಹೆಂಡಂದಿರು ಸತ್ತವನು ತಮ್ಮ ಗಂಡನಾಗಿರದೇ ಮೈದುನರಲ್ಲಿ ಯಾರಾಗಿರಲಿ ಎಂದು ಯೋಚಿಸಿದರೆ , ತಾಯಿ ? ಅವಳಿಗೆ ಎಲ್ಲ ಮಕ್ಕಳೂ ಅಷ್ಟೇ . ಆಗಿರುವದಾದರೂ ಏನು ? ಸತ್ತವರು ಯಾರು? ಸಿಕ್ಕರೆ ಕತೆ ಓದಿ.

- shreekant.mishrikoti ರವರ ಬ್ಲಾಗ್
- Login or register to post comments
- 323 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: