ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಎಣ್ಣೆ ಹೊಯ್ಯಮ್ಮ ದೀಪಕ್ಕೆ!

June 2, 2006 - 1:20pm — shreekant.mishrikoti

ಅನ್ಯ ಸಂಸ್ಕೃತಿಯ ಆಕ್ರಮಣ ಕುರಿತಾದ ಶ್ರೀ ಸೇಡಿಯಾಪು ಕೃಷ್ಣಭಟ್ಟರು ೧೯೬೦ರಲ್ಲಿ ರಚಿಸಿದ , ಆದರೆ ಇಂದಿಗೆ ಹೆಚ್ಚು ಪ್ರಸ್ತುತವಾದ ಈ ಕವನ ಜೂನ್ ೨೦೦೦೬ ತಿಂಗಳ ಮಯೂರದಲ್ಲಿದೆ . ಅವರ ಬಗ್ಗೆ ಮಾಹಿತಿ ಮತ್ತು 'ಎಣ್ಣೆ ಹೊಯ್ಯಮ್ಮ ದೀಪಕ್ಕೆ' ಕವನದ ಬಗ್ಗೆ ವಿಶ್ಲೇಷಣೆ ಇಲ್ಲಿದೆ.
ಮೊದಲ ಪ್ಯಾರ ಹೀಗಿದೆ .
ಎಣ್ಣೆ ಹೊಯ್ಯಮ್ಮ ದೀಪಕ್ಕೆ!
ಬತ್ತಿಯೊಣಗುತಿದೆ, ಬೆಳಕು ಬಾಡುತಿದೆ ,
ಕತ್ತಲೆ ಮುಂದೆ ಮುಂದೊತ್ತುತಿದೆ
ಅತ್ತಲಿಂದತ್ತಲು ಕಂಡಿಯೊಳಗೆ ನುಗ್ಗಿ
ಒತ್ತರದಲಿ ಗಾಳೀ ಬೀಸುತ್ತಿದೆ.
ಎಣ್ಣೆ ಹೊಯ್ಯಮ್ಮ ದೀಪಕ್ಕೆ!

ನಮ್ಮ ಸಂಪದವೆಂಬ ಕನ್ನಡದ ದೀಪಕ್ಕೂ ಎಣ್ಣೆ ಹೊಯ್ಯಬೇಕಿದೆ. ನಾನು ಒಂದು ತೊಟ್ಟು ಹಾಕಿದ್ದೇನೆ. ನೀವೂ ಒಂದು ತೊಟ್ಟು ಹಾಕಲಾರಿರಾ ? ಸಂಪದದಂತಹ ತಾಣ ಉಳಿದು ಬೆಳೆಯಬೇಕಲ್ಲವೇ ?

ಜಾಗತೀಕರಣಗೊಳ್ಳುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಸುಧಾ , ಮಯೂರ ಗಳೂ ಕೂಡ ಜಾಗತಿಕ ಮಟ್ಟದ ಸಾಹಿತ್ಯ/ಚಲನಚಿತ್ರ / ಮಾಹಿತಿ ಮುಂತಾದವನ್ನು ನೀಡುತ್ತಿವೆ. ಮುಖ ಪುಟ ಹಿಂಬದಿ ಪುಟಗಳು ಕೂಡ ವಿದೇಶೀಯರ ಚಿತ್ರಗಳಿವೆ! ಡಾ. ರ್‍ಆಜ್ ಅವರಿಗೇಕೊ ಒಳಪುಟದಲ್ಲಿ ಜಾಗ ಮಾಡಲಾಗಿದೆ.( ಇದೂ ಕೂಡ ಸ್ಥಳೀಯ ಸಂಸ್ಕೃತಿಯನ್ನು ಬದಿಗೊತ್ತುವ
ಜಾಗತೀಕರಣದ ಪರಿಣಾಮ ಅಲ್ಲ ತಾನೆ? )
ಪದಗತಿ ವಿಭಾಗದಲ್ಲಿ ಓದುವುದು ಎಂದರೇನು ಎಂಬ ವೈಚಾರಿಕ ಲೇಖನ ಬಂದಿದೆ. ಓದತಕ್ಕುದಾಗಿದೆ. ತ್ರಿವೇಣಿಯವರ 'ತಾವರೆಕೊಳ' ಕಾದಂಬರಿ , ದಿವಾಕರ್ ಅವರ 'ನಾಪತ್ತೆಯಾದ ಗ್ರಾಮಫೋನು ಮತ್ತು ಇತರ ಪ್ರಬಂಧಗಳು' ಕುರಿತ ಲೇಖನಗಳು , ಪುಸ್ತಕಲೋಕ, ಗ್ರಂಥಲೋಕ ಇತ್ಯಾದಿ ಪುಸ್ತಕ ಪರಿಚಯಕ್ಕೆ ಮೀಸಲಾದ ಪತ್ರಿಕೆಗಳನ್ನು ಪ್ರಬುದ್ಧಕರ್ನಾಟಕ, ಜಯಂತಿ, ದೇಶಕಾಲ , ರುಜುವಾತು , ಸಂಕ್ರಮಣ ಇತ್ಯಾದಿ ಮತ್ತು ಸಾಹಿತ್ಯಕ ಪತ್ರಿಕೆಗಳನ್ನು ಕುರಿತ ಲೇಖನಗಳಿವೆ. ಜುಂಜಪ್ಪನ ಕಥೆ ಮತ್ತು ಶ್ರೇಷ್ಠ ವಿದೇಶಿ ಚಲನ್ಚಿತ್ರವೊಂದರ ಪರಮರ್ಶೆ ಮತ್ತು ಸಾಕಷ್ಟು ಕವನಗಳಿಂದ ಸಮೃದ್ಧವಾಗಿ ಮಯೂರ ನಲಿಯುತ್ತ ಬಂದಿದೆ.

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 618 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 2, 2006 - 4:01pm — tvsrinivas41

ಸಂಕ್ಷಿಪ್ತ ರೂಪ

tvsrinivas41's picture

೧೦೦ ಪುಟಗಳ ಒಂದು ಹೊತ್ತಿಗೆಯ ಸಂಕ್ಷಿಪ್ತ ರೂಪವನ್ನು ಬಹಳ ಚೆನ್ನಾಗಿ ರೂಪಿಸಿದ್ದೀರಿ. ಸೇಡಿಯಾಪರ ಕವನದ ಪೂರ್ಣ ಭಾಗವನ್ನು ಕೊಡಬಹುದಿತ್ತೇನೋ?

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದೇಣಿಗೆ
  • ಜೂನ್ ೨೦೦೭ ರ ಮಯೂರ - ತೇಜಸ್ವಿ ಸಂಚಿಕೆ
  • ಕನ್ನಡದಲ್ಲಿ ಇಂಗ್ಲೀಷ್ ಪದಗಳು (ಕಂಗ್ಲೀಷ್)- ಕಸಿವಿಸಿ ಏಕೆ?
  • ಎಣ್ಣೆ ಬೆಲೆಯು ಏರುತಿಹುದು ಬೆಣ್ಣೆಯ೦ತ ದಾರಿ ಮು೦ದಿಲ್ಲಣ್ಣಾ.
  • ದೀಪದ ಹಬ್ಬಕ್ಕೆ ಅಕ್ಷರದ ಹಣತೆ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
  • ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 102 ಅತಿಥಿಗಳು ಆನ್ಲೈನ್ ಇರುವರು.


ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator