22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ರೂಲ್ ನಂ. ೩೨ - ಒಂದು ಸಣ್ಣ ಕಥೆ ಓದಿ.

April 4, 2007 - 4:10pm
shreekant.mishrikoti
ಆ ದೇಶದಲ್ಲಿ ಎಲ್ಲವನ್ನೂ ಸರಕಾರವೇ ನಿರ್ಧರಿಸುತ್ತದೆ . ಶಿಕ್ಷಣ , ಉದ್ಯೋಗ , ಮದುವೆ, ವಸತಿ ಇತ್ಯಾದಿ ಎಲ್ಲವನ್ನೂ . ಎಲ್ಲದಕ್ಕೂ ಸರಕಾರದ ಅನುಮತಿ ಬೇಕು. ದಂಪತಿಯೊಂದು ಮಗನ ಶಾಲೆಯ ಸಂಬಂಧ ಒಂದು ಅರ್ಜಿ ಕೊಟ್ಟಿದೆ. ಆ ಸಂಬಂಧ ಸರಕಾರದ ಇಲಾಖೆ ಅವರನ್ನು ಕರೆದಿದೆ. ಮಗುವಿನ ಸಮೇತ ಅವರು ಕಛೇರಿಗೆ ನಿಗದಿತ ಸಮಯಕ್ಕೆ ಬರುತ್ತಾರೆ. ಅಲ್ಲಿ ಒಬ್ಬ ಸಹಾಯಕಳು ಮಗುವನ್ನು ಆಚೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿಯ ಅಧಿಕಾರಿ ಅವರಿಗೆ ಮದುವೆಯ ಅನುಮತಿಪತ್ರ ತೋರಿಸಲು ಹೇಳುತ್ತಾನ. ಅದನ್ನು ಪರಿಶೀಲಿಸಿ ಅವನು ಇವರನ್ನು ಕೇಳುತ್ತಾನೆ . ಈ ಲೈಸೆನ್ಸ್ ಎಲ್ಲಿ ಹೇಗೆ ಪಡೆದಿರಿ . ಇವರು ಹೇಳುತ್ತಾರೆ ' ಏಜೆಂಟ್ ಮೂಲಕ ಪಡೆದದ್ದು ' ಅಂತ . ' ನೀವು ಕಲಿತವರು, ಹೀಗೆ ಮಾಡಬಹುದೇ? ಇದು ನಕಲಿ , ನಿಮ್ಮ ಮದುವೆ ಸಿಂಧುವಲ್ಲ' ಎಂದು ಅಧಿಕಾರಿ ಹೇಳುತ್ತಾನೆ . 'ಈಗ ಏನು ಮಾಡುವದು?' ಎಂಬ ಪ್ರಶ್ನೆಗೆ , 'ಈಗ ಒಂದು ಅರ್ಜಿ ಕೊಟ್ಟಿರಿ. ನೀವಿಬ್ಬರೂ ಶಿಕ್ಷಣ ಕ್ಷೇತ್ರದಲ್ಲಿ ಇರುವದರಿಂದ ನಾವು ಸಹಾನುಭೂತಿಯಿಂದ ಪರಿಗಣಿಸುತ್ತೇವೆ. ನಿಮಗೆ ಸ್ಪೇಷಲ್ ಕೇಸು ಎಂದು ಅನುಮತಿ ಕೊಡುತ್ತೇವೆ' ಈಗ ಹೋಗಿ ೧೫ ದಿನ ಬಿಟ್ಟು ಬನ್ನಿ' ಎನ್ನುತಾನೆ. 'ಹಾಗೇ ಆಗಲಿ' ಎಂದು ಹೊರಡಲು ಅನುವಾದ ದಂಪತಿಗಳು ' ನಮ್ಮ ಮಗು ಎಲ್ಲಿ? ಕಳಿಸ್ತೀರಾ?' ಎಂದು ಕೇಳಿದರೆ ಆ ಅಧಿಕಾರಿ ಹೇಳುತ್ತಾನೆ. ... ... ... 'ನಿಮಗೆ ರೂಲ್ ನಂ. ೩೨ ಗೊತ್ತಿಲ್ಲವೇ ? .... .... ನಾವು ಆ ಮಗುವನ್ನು ಕೊಂದು ಬಿಟ್ಟೆವು!' ಹಿಂದೆಂದೋ ಮಯೂರದಲ್ಲಿ ಓದಿದ ಕತೆ . ಭಾಷೆ ಕುರಿತ ಗಂಭೀರ ಚರ್ಚೆಯಿಂದ ನಿಮಗೆ ಬೇಸರ ಆಗಿರಬಹುದೆಂದು ಈ ಕತೆ ಹೇಳಿದ್ದೇನೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Sunil Jayaprakash on
ನಾವು ಆ ಮಗುವನ್ನು ಕೊಂದು ಬಿಟ್ಟೆವು!'
ಸಾರ್, ಇದು ಕಥೆಯೇ ? ನಿಜಕ್ಕೂ ಈ ಓದನ್ನು ಜೀರ್ಣಿಸಿಕೊಳ್ಳುವುದು ತುಂಬಾ ಕಷ್ಟವಾಯಿತು. ರೂಲ್ ನಂ ೩೨ ಹೀಗಿರಬಹುದು ಎಂಬುದನ್ನು ಊಹೆಯಲ್ಲೂ ಎಣಿಸಲಿಲ್ಲ. ಯಪ್ಪಾ!!!ಕಥೆ ಬರೆದವರಿಗೆ ನಿಜಕ್ಕೂ ಗುಂಡಿಗೆಯಿದೆ. ಅಂದ ಹಾಗೆ, ಒಂದು ಸಣ್ಣ ಮಾತು. ಭಾಷೆಯ ಕುರಿತಾದ "ಗಂಭೀರ ಚರ್ಚೆಗಳಿಂದ" ಬೇಸರಕ್ಕಿಂತ ಮನಸ್ಸಿನಲ್ಲಿಯೇ ಮಂಡಿಗೆ ತಿಂದವರೇ ಹೆಚ್ಚಿರುತ್ತಾರೆ ;) ನೀವು ಚಿಂತಿಸಬೇಡಿ. ಗಣಪತಿ ಎನ್ನ ಪಾಲಿಸೋ...ಗಂಭೀರಾ :) ಅಂದಹಾಗೆ ಈ ಕಾಮೆಂಟಿನ ಮೂಲಕ ನನ್ನ ಪಾಯಿಂಟು ಸಂಗ್ರಹ ೧೫೦೦ ಮುಟ್ಟಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
ಸುನಿಲ್, ನಾನಿನ್ನೂ ಐನೂರರ ಗಡಿ ದಾಟಲೇ ಒದ್ದಾಡುತ್ತಿರುವಾಗ ನೀವಾಗಲೇ ಒಂದೂವರೆ ಸಹಸ್ರಾಧಿಪತಿಯಾದ್ದಕ್ಕೆ ಅಭಿನಂದನೆಗಳು!ನೀವು ನಿಜಕ್ಕೂ "ಅಂಕ"ಣಕಾರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಏನಿದು ೧೫೦೦?ಅಂಕ? ====== :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
ಬರಹ ಸೇರಿಸಿದಾಗ(ಲೇಖನಕ್ಕೆ ಹತ್ತು,ಪ್ರತಿಕ್ರಿಯೆಗೆ ಒಂದು ಅಂಕ ಇತ್ಯಾದಿ) ಸಿಕ್ಕುವ ಅಂಕಗಳು ಸುನಿಲ್‍ರಿಗೆ ಒಂದೂವರೆ ಸಹಸ್ರ ದಾಟಿದೆಯಂತೆ. ಮಹೇಶ್ 3 ವಾರಗಳಲ್ಲಿ 180 ಆಂಕ ಕಲೆ ಹಾಕಿ ರೆಕಾರ್ಡ್ ಮಾಡುವುದರಲ್ಲಿದ್ದಾರೆ. ಗವಾಸ್ಕರ್ ಅಂತಹ ಆಟಗಾರರು ಆಡುವಾಗ ಸ್ಕೋರ್ ನೋಡುವುದೇ ಇಲ್ಲವಂತೆ. ಹಾಗೆಯೇ ಕೆಲವರು ಬರೆದಾಗ ಬರುವ ಅಂಕ ನೋಡೋಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hpn on
[:http://sampada.net/u...|ಇಲ್ಲಿದೆ ನೋಡಿ, ಅಂಕಪಟ್ಟಿ]. ತುಂಬಾ ಗಂಭೀರವಾಗಿ ತೆಗೆದುಕೊಳ್ಳುವಂತದ್ದೇನಲ್ಲ. :) -- [:http://hpnadig.net/blog|Check my Blog] [:http://kn.wikipedia.org|Kannada wikipedia] "ಹೊಸ ಚಿಗುರು, ಹಳೆ ಬೇರು"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಸಂಗನಗೌಡ on

ಮಾಸ್ತರ್ರೇ, ಇದರೊಳಗೇನೋ ಮೋಸ ನಡದೈತ್ರಿ. ನನಗೆ ಮಾರ್ಕ್ಸ ಕಡಿಮೆ ಬಂದಾವ.

ಸಂಪದದಲ್ಲೂ ಯಾಕೋ ಯೋಗ್ಯರಿಗಿಲ್ಲ ಪುರಸ್ಕಾರ :-(

 

...

 

...

:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
ಮರುಎಣಿಕೆಗೆ ಅರ್ಜಿ ಸಲ್ಲಿಸಬಹುದೇನೋ..?:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ದುರಾದೇಷ್ಟವಶಾತ್ ನೀವು ಅಂಕವಂಚಿತರಾದಿರಿ. :) ಅದಿರಲಿ... ಈ ಎಣಿ(ನಂಬರು) ತಗೊಂಡು ಏನ್ ಮಾಡೀರಿ? ====== :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on
ಅಬ್ಬಾ ಎಂತಹ ಭಯಂಕರ ರೂಲ್ ಸಧ್ಯ ಅಂತಹ ರೂಲ್ ನಮ್ಮಲ್ಲಿ ಎಂದಿಗೂ ಬಾರದಿರಲಿ ಮನಸ್ಸು ಇನ್ನೂ ಆ ಮಗುವನ್ನು ಕೊಂದಿರಬಹುದೆಂಬ ಭಾವನೆಇಂದ ಮುಕ್ತವಾಗಿಲ್ಲ. ಏನೂ ದುಗುಡ ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ http://thereda-mana.... ರೂಪ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.