ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಒಳ್ಳೆಯ ವ್ಯಂಗ್ಯಚಿತ್ರಗಳು

May 6, 2006 - 11:43am — shreekant.mishrikoti

ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ , ಒಳ್ಳೆಯ ವ್ಯಂಗಚಿತ್ರಗಳ ಸಮೃದ್ಧಿಯಿತ್ತು. ಆಗ ಸುಧಾ , ಮಯೂರ , ತುಷಾರಗಳಲ್ಲಿ ಕೆ. ಆರ್. ಸ್ವಾಮಿ ,ನಾಡಿಗ್ , ಶ್ರೀಧರ್ , ರಾವ್ ಬೈಲ್ ಮುಂತಾದವರ ಶ್ರೇಷ್ಠ ವ್ಯಂಗ್ಯಚಿತ್ರಗಳು ಕಾಣಸಿಗುತ್ತಿದ್ದವು . ಪ್ರಜಾವಾಣಿಯಲ್ಲಿ ಆರ್‍.ಕೆ. ಮೂರ್ತಿಯವರ ರಾಜಕೀಯ ವ್ಯಂಗ್ಯಚಿತ್ರಗಳಿರುತ್ತಿದ್ದವು . ಈಗ ಅವರೆಲ್ಲ ಎಲ್ಲಿ ಹೋದರೋ ? ಹೊಸಬರು ಏಕೆ ಬರಲಿಲ್ಲವೋ ? ಈಗ ವ್ಯಂಗ್ಯಚಿತ್ರಗಳಲ್ಲಿ ಸಾಧಾರಣ ಎಂಬ ಮಟ್ಟದ್ದೂ ಕಾಣುವದಿಲ್ಲ.
ನಮ್ಮ ಮನೆಯಲ್ಲಿ ವರ್ಷಗಟ್ಟಲೆಯ ಮಯೂರ / ತುಷಾರ ಸಂಚಿಕೆಗಳಿದ್ದವು . ಆದರೆ ಒಂದು ಸಲ ನಾನು ಬೇರೆ ಊರಿಗೆ ಹೋದಾಗ ಎಲ್ಲವನ್ನೂ ಮನೆಯವರು ರದ್ದಿ ಹಾಕಿಬಿಟ್ಟಿದ್ದರು. ಒಂದು ಥರ ನನಗೆ 'ತುಂಬಲಾಗದ ನಷ್ಟ' ಉಂಟಾಯಿತು.
ಆದರೆ ನಾಡಿಗರ ವ್ಯಂಗ್ಯಚಿತ್ರಗಳ ಸಂಗ್ರಹವೊಂದು 'ನಾಡಿಗರ ನಗೆ ಕಾರಂಜಿ' ಎಂಬ ಹೆಸರಿನಲ್ಲಿ ಮಾರಾಟಕ್ಕೆ ಲಭ್ಯವಿದೆ . ಚೆನ್ನಾಗಿದೆ. ನೀವೂ ಕೊಂಡು ಸಂತಸಪಡಿರಿ.
ಇಂಗ್ಲೀಷಿನಲ್ಲಿ ಆರ್.ಕೆ.ಲಕ್ಷ್ಮಣರ ವ್ಯಂಗ್ಯಚಿತ್ರಗಳ ಬಹಳಷ್ಟು ಪುಸ್ತಕಗಳು ಲಭ್ಯ ಇವೆ.

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 773 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 6, 2006 - 10:05pm — hpn

ವ್ಯಂಗ್ಯಚಿತ್ರಗಳು

hpn's picture

ಹರಿಣಿ, ಜನಾರ್ಧನ ಸ್ವಾಮಿಯವರು ಬರೆದಿರುವ ವ್ಯಂಗಚಿತ್ರಗಳನ್ನು ನೋಡಿದ್ದೀರ?

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 10, 2006 - 7:35am — venkatesh

ಶ್ರೀ. ನಾಡಿಗರ ವ್ಯಂಗ್ಯ ಚಿತ್ರಗಳು !

venkatesh's picture

ಶ್ರೀ. ನಾಡಿಗರ ವ್ಯಂಗ್ಯ ಚಿತ್ರಗಳು ನಿಜಕ್ಕೂ ಚೆನ್ನಾಗಿವೆ. ನಾವು ಎಲ್ಲಾ ಚಿತ್ರಕಾರರನ್ನೂ ಆರ್.ಕೆ.ಲಕ್ಷ್ಮಣ್ ಜೊತೆಗೆ ಹೋಲಿಸಬಾರದು ! ನಾಡಿಗರು ಇನ್ನೂ ಸ್ಪಷ್ಟವಾಗಿ ಸ್ವಲ್ಪ ದೊಡ್ಡ ಗಾತ್ರದಲ್ಲಿ ಬರೆದರೆ ಒಳ್ಳೆಯದು ! ಪ್ರತಿ ವ್ಯಕ್ತಿಯ ಸೂಕ್ಷ್ಮ ರೇಖೆಯ ಎಳೆಗಳು ಇನ್ನೊಬ್ಬರನ್ನು ಹೋಲುವುದಿಲ್ಲ. ನನ್ನ ಆಪ್ತ ಗೆಳೆಯ ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರೂ ಒಳ್ಳೆಯ ಚಿತ್ರಕಾರರಾಗಿದ್ದರು. ಅದನ್ನು ಅವರು ಸ್ವಲ್ಪ ಬದಿಗೆ ಸರಿಸಿ ಸಾಹಿತ್ಯದಮೇಲೆ ಒತ್ತು ಕೊಟ್ಟರು. ಏನೆ ಆಗಲಿ, ಒಬ್ಬ ವ್ಯಂಗ ಚಿತ್ರಕಾರನಿಗೆ ಅವನು ಕೆಳಗೆ ಬರೆಯುವ ವಿವಿರಣೆಯೂ ಅವನ ವರ್ಚಸ್ಸನ್ನು ಹೆಚ್ಚಿಸುತ್ತದೆ.ಸ್ಪಷ್ಟತೆಯ ಅರಿವಾಗುತ್ತದೆ. ಅಭ್ಯಾಸ ಮಾಡಬೇಕುಅಷ್ಟೆ !

ವೆಂಕಟೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 10, 2006 - 1:20pm — ismail

ಆರ್ ಕೆ ಲಕ್ಷ್ಮಣರ ವ್ಯಂಗ್ಯ ಚಿತ್ರಗಳು

ismail's picture

ಆರ್. ಕೆ. ಲಕ್ಷ್ಮಣ್ ಬಹಳ ದೊಡ್ಡ ವ್ಯಂಗ್ಯ ಚಿತ್ರಕಾರರು ಎಂಬುದು ಸರಿ. ಅವರನ್ನು ಗೌರವಿಸುತ್ತಲೇ ಕೆಲವು ಅಡ್ಡ ಮಾತುಗಳನ್ನೂ ಆಡಬೇಕಾಗುತ್ತದೆ. ವ್ಯಂಗ್ಯ ಚಿತ್ರಕಾರ ರವಿಶಂಕರ್ ಹೇಳಿದ ಮಾತನ್ನು ಇಲ್ಲಿ ಉಲ್ಲೇಖಿಸಿದರೆ ಆರ್ ಕೆ ಲಕ್ಷ್ಮಣ್ ರ ವ್ಯಂಗ್ಯ ಚಿತ್ರಗಳ ಮಿತಿ ಏನೆಂಬುದು ತಿಳಿಯುತ್ತದೆ. `ಲಕ್ಷ್ಮಣ್ ಬರೆದದ್ದು ಎರಡೇ ವ್ಯಂಗ್ಯ ಚಿತ್ರ. ಒಂದು-ನಾಲ್ಕೂ ಚಕ್ರಗಳು ಇಲ್ಲದಿರುವ ವಾಹನ. ಎರಡು-ಎರಡು ದಿಕ್ಕಿಗೆ ಸ್ಟಿಯರಿಂಗ್ ಇರುವ ವಾಹನ.'

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 10, 2006 - 1:52pm — venkatesh

ಆರ್.ಕೆ.ಲಕ್ಷ್ಮಣ್ ಅವರು ಭಾರತ ಕಂಡ ಒಬ್ಬ ಶ್ರೇಷ್ಟ ವ್ಯಂಗ್ಯ ಚಿತ್ರಕಾರರು !

venkatesh's picture

ಶ್ರೀ ಇಸ್ಮೈಲ್ ರವರಿಗೆ,
ನಮಸ್ಕಾರ. ನೀವು ಕೊಟ್ಟ ಹೇಳಿಕೆ ಸರಿಯಾಗಿದೆ. ಲಕ್ಷ್ಮಣ್ ರ ಅರ್ಧ ಶತಮಾನದ ಕೊಡುಗೆಯನ್ನು ನೋಡಿದರೆ, ಅವರಷ್ಟು ವೈವಿಧ್ಯಮಯ ವ್ಯಂಗ್ಯ ಚಿತ್ರಕಾರರು ಬೆರೆಳೆಣಿಸುವಷ್ಟುಮಾತ್ರ ಇದ್ದಾರೆಂಬುದು ಆ ಕ್ಷೇತ್ರದಲ್ಲಿರುವ ಘಟಾನುಘಟಿಗಳ ಅಭಿಪ್ರಾಯ !ಆರ್.ಕೆ.ಲಕ್ಷ್ಮಣ್ ಅವರು ಭಾರತ ಕಂಡ ಒಬ್ಬ ಶ್ರೇಷ್ಟ ವ್ಯಂಗ್ಯ ಚಿತ್ರಕಾರರು ಎಂಬುದರಲ್ಲಿ ಎರಡು ಮಾತಿಲ್ಲ !
ಅವರು ಮುಂಬೈಗೆ ಬರುವಮೊದಲು ಶ್ರೀ ಬಾಲ್ ಠಾಕರೆಯವರು
ಅನಭಿಶಕ್ತ ದೊರೆಯಾಗಿದ್ದರು ! ಆರ್.ಕೆ.ಲಕ್ಷ್ಮಣ್ ಬಂದಮೇಲೆ ಈಗ ಕಳೆದ ಸುಮಾರು 50 ವರ್ಷಗಳಲ್ಲಿ ಮೇರುಪರ್ವತದಂತೆ ಬೆಳೆದಿದ್ದಾರೆ. ಪ್ರಥಮಬಾರಿ ಭಾರತದ ರಾಷ್ಟ್ರಪತಿಯವರು ಲಕ್ಷ್ಮಣ್ ಮನೆಗೆ ಭೇಟಿಮಾಡಿ ಅವರ ಹಸ್ತಾಕ್ಷರ ಪಡೆದ ವಿಷಯ ನೀವು ಓದಿರಬಹುದು ! (ಟೈಮ್ಸ್ ಆಫ್ ಇಂಡಿಯ ಪೇಪರ್ ನಲ್ಲಿ)

ವೆಂಕಟೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2006 - 11:30am — shreekant.mishrikoti

ಇಲ್ಲಿ ಬಹುಶ: ವ್ಯಕ್ತಿಯೇ ಬದಲಾಯಿಸಿದೆ !! ನಾಡಿಗ್ ವ್ಯಂಗ್ಯ ಚಿತ್ರ ಕುರಿತು

shreekant.mishrikoti's picture

ಇದು ಪತ್ತೇದಾರಿ ಕಾದಂಬರಿಕಾರ ಟಿ. ಕೆ. ರಾಮರಾವ್ ಅವರ ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ವಾಕ್ಯ . ನಾನು ಬರೆದಿದ್ದು ಸುಮಾರು ೫೦ ವರ್ಷಗಳಿಂದ ವ್ಯಂಗ್ಯ ಚಿತ್ರಗಳನ್ನು ಬರೆಯುತ್ತಿರುವ ( ಈಗಲೂ ಉದಯವಾಣಿ, ತರಂಗ. ತುಷಾರ ಪತ್ರಿಕೆಗಳಲ್ಲಿ ಅವರ ವ್ಯಂಗ್ಯಚಿತ್ರಗಳು ಅಪರೂಪಕ್ಕೆ ಕಾಣುವದುಂಟು) ಶ್ರೀ ಎಸ್. ಕೆ. ನಾಡಿಗ್ ಅವರ ಬಗ್ಗೆ . ಅವರ ವ್ಯಂಗ್ಯ ಚಿತ್ರಗಳು ಬಹಳ ಚೆನ್ನಾಗಿವೆ . 'ನಗೆ ಕಾರಂಜಿ' ಎಂಬ ಅವರ ಆಯ್ದ ಚಿತ್ರಗಳ ಸಂಗ್ರಹವನ್ನು ನವಕರ್ನಾಟಕ ಪಬ್ಲಿಕೇಶನ್ಸ್ ಪ್ರಕಟಿಸಿದೆ. ಬೆಲೆ ಕೇವಲ ನಲವತ್ತು ರೂಪಾಯಿ ಮಾತ್ರ. ಬಹುಶ: ವೆಂಕಟೇಶ್ ಅವರು ನಮ್ಮ ಸಂಪದದ ಎಚ್.ಪಿ. ನಾಡಿಗ್ ಅವರ ಬಗ್ಗೆ ಬರೆದಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಿಗರ ಭವ್ಯ ಇತಿಹಾಸ - ಇಂಗ್ಲೀಷ್ ನಮ್ಮ ಅಭಿವ್ಯಕ್ತಿಯ ಮಾದ್ಯಮ ?-'ನಾನೇಕೆ ನಾಸ್ತಿಕ ?
  • ವ್ಯಂಗ್ಯಚಿತ್ರಗಳ, ಕಲಸುಮೇಲೋಗರ !
  • ಜೂನ್ ೨೦೦೭ ರ ಮಯೂರ - ತೇಜಸ್ವಿ ಸಂಚಿಕೆ
  • ಎಣ್ಣೆ ಹೊಯ್ಯಮ್ಮ ದೀಪಕ್ಕೆ!
  • ನಮ್ಮ "ಸಂಪದ" ಎತ್ತರಎತ್ತರಕ್ಕೆ ಏರುತ್ತಿದೆ !
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸಹಾಯ ಬೇಕಾಗಿದೆ
  • Attitude
  • ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 5:31am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 13, 2008 - 5:28am
  • venkatesh
    ಉ: ಪರ್ಯಟಕ ಮಿತ್ರರ ಜೊತೆಯಲ್ಲಿ !
    October 13, 2008 - 4:54am
  • ವರ್ಣನಾಥ ಎನ್. ವೆ...
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 13, 2008 - 1:37am
  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:16am
  • anil.ramesh
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 12, 2008 - 11:59pm
  • ಗಣೇಶ
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:50pm
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:27pm
  • anil.ramesh
    ಉ: ಅವರು ಯಾರಿರಬಹುದು?
    October 12, 2008 - 11:26pm
  • ಗಣೇಶ
    ಉ: ಮತಾಂತರ ಏನು ಎತ್ತ
    October 12, 2008 - 11:22pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 68 ಅತಿಥಿಗಳು ಆನ್ಲೈನ್ ಇರುವರು.


ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator