ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಜೂನ್ ೨೦೦೭ ರ ಮಯೂರ - ತೇಜಸ್ವಿ ಸಂಚಿಕೆ
ಜೂನ್ ೨೦೦೭ ರ ಮಯೂರ ತೇಜಸ್ವಿ ಸಂಚಿಕೆಯಾಗಿ ಬಂದಿದೆ. ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ವೈಯುಕ್ತಿಕ ಜೀವನ ಮತ್ತು ಕೃತಿಗಳ ಕುರಿತು ಲೇಖನಗಳಿವೆ. ( ಅವರ ನಿಧನದ ಮೊದಲು ಅವರ ಕೃತಿಗಳ ಬಗ್ಗೆ ಲೇಖನಗಳು ಪತ್ರಿಕೆಗಳಲ್ಲಿ ಬಂದಿದ್ದವೋ ಇಲ್ಲವೋ ಗೊತ್ತಿಲ್ಲ ) . ( ತೇಜಸ್ವಿ ಕಥನ ಎಂಬ ಪುಸ್ತಕವೊಂದು ತೇಜಸ್ವಿಯವರ ಎಲ್ಲಾ ಸಾಹಿತ್ಯದ ಕುರಿತು ಒಂದು ಪುಸ್ತಕ ಮೊದಲೇ ಬಂದಿದೆ. ನಾನು ಓದಿಲ್ಲ). ಇತ್ತೀಚೆಗೆ ಹುಲಿಯೂರಿನ ಸರಹದ್ದು ಹೆಸರಿನ ಪುಸ್ತಕ ಕೊಂಡಿದ್ದೇನೆ.
ತೇಜಸ್ವಿ ನಿಧನದ ವಿಷಯ ಒಂದೇ ಗಂಟೆಯ ಒಳಗೆ ವಿಕೀಪೀಡಿಯದಲ್ಲಿ ಇತ್ತಂತೆ!
ವಿವಾದಾಸ್ಪದ ಕಾದಂಬರಿ 'ಆವರಣ' ಕುರಿತು ತೇಜಸ್ವಿ ಅಭಿಪ್ರಾಯ ನಿಮಗೆ ಬೇಕಾದರೆ ಈ ಸಲದ ಮಯೂರ ನೋಡಿ.
ಈ ಸಲದ ಮಯೂರದಲ್ಲಿ ಮೂರು ಒಳ್ಳೆಯ ಕತೆಗಳೂ ಇವೆ.

- shreekant.mishrikoti ರವರ ಬ್ಲಾಗ್
- Login or register to post comments
- 359 hits
- Email this blog




RSS:
ಪ್ರತಿಕ್ರಿಯೆಗಳು
ಉ: ಜೂನ್ ೨೦೦೭ ರ ಮಯೂರ - ತೇಜಸ್ವಿ ಸಂಚಿಕೆ
ಕೊಂಡಿ:
http://www.mayuraezine.com/login.php
*ಅಶೋಕ್
ಉ: ಜೂನ್ ೨೦೦೭ ರ ಮಯೂರ - ತೇಜಸ್ವಿ ಸಂಚಿಕೆ
ಈ ಸಲದ ಮಯೂರವನ್ನು ತಂದಿಟ್ಟುಕೊಂಡಿರುವೆ ಓದಲು ಪ್ರಾರಂಭಿಸಬೇಕಷ್ಟೇ...
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.