ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ.
ಒಬ್ಬ ಕಬ್ಬಿಣವನ್ನು ಬಂಗಾರ ಮಾಡಬಲ್ಲ ಗಿಡ ಮೂಲಿಕೆ ಹುಡುಕುತ್ತಿದ್ದಾನೆ . ಒಂದು ಅಡವಿಯಲ್ಲಿ ಕಬ್ಬಿಣದ ಸರಳನ್ನು ಹಿಡಿದು ಎಲ್ಲ ಗಿಡಮರಗಳಿಗೆ ತಾಗಿಸುತ್ತ ಹಗಲೂ ಇರುಳೂ ನಡೆಯುತ್ತಾನೆ. ಒಂದು ದಿನ ಮುಂಜಾನೆ ನೋಡಿದರೆ ಅದು ಬಂಗಾರವಾಗಿ ಬಿಟ್ಟಿದೆ. ಆದರೆ ಅದು ಯಾವ ಗಿಡ ಎಂದು ತಿಳಿಯದು!
ಅವನ ನಂಬಿಕೆಯ ಪ್ರಕಾರ ಆ ಗಿದ ಬಂಗಾರವನ್ನು ಕಬ್ಬಿಣವಾಗಿ ಮಾಡಬಲ್ಲದು. ಅದನ್ನು ಮತ್ತೆ ಮಾಡಲು ಮತ್ತೆ ಅದೇ ಬಂಗಾರದ ಸರಳನ್ನು ಹಿಡಿದು ಎಲ್ಲ ಗಿದಮರಗಳಿಗೆ ತಾಗಿಸುತ್ತ ಹಗಲೂ ಇರುಳೂ ನಡೆಯುತ್ತಾನೆ. ಒಂದು ದಿನ ಮುಂಜಾನೆ ನೋಡಿದರೆ ಅದು ಕಬ್ಬಿಣವಾಗಿ ಬಿಟ್ಟಿದೆ. ಆದರೆ ಅದು ಯಾವ ಗಿಡ ಎಂದು ಈಗಲೂ ತಿಳಿಯದು!
ಈ ಕತೆ ಆಧರಿಸಿ ಅದಾರೋ ನಾಟಕ ಬರೆಯುವ ಯೋಚನೆ ಮಾಡಿದರಂತೆ . ಈ ಕತೆ ಕೇಳಿದ ತೇಜಸ್ವಿಯವರು - ಅವ ಎಂಥಾ ದಡ್ಡ ಕಣ್ರೀ , ಅದು ಬಂಗಾರವಾದಾಗ ಸುಮ್ಮನೆ ಅಲ್ಲಿಂದ ಹೊರಟು ಬಿಡಬಾರ್ದಾ? ' ಅಂದರಂತೆ.
ಇದು ಈ ಸಲದ ಮಯೂರದಲ್ಲಿ ಬಂದಿದೆ.

- shreekant.mishrikoti ರವರ ಬ್ಲಾಗ್
- Login or register to post comments
- 365 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ.
ಈ ಸಣ್ಣ ಕತೆ ಮನುಷ್ಯನ ಸ್ವಾರ್ಥ ಬುದ್ಧಿಯನ್ನು ಹಾಗೂ ಅತಿಯಾಸೆಯನ್ನು ಸೂಚ್ಯಕವಾಗಿ ತೋರುತ್ತದೆ. ಬಂಗಾರದ ಮೊಟ್ಟೆಯ ಆಸೆಗೆ ಕೋಳಿಯನ್ನೇ ಕೊಂದವನ ಕತೆಯನ್ನು ನೆನಪಿಸುತ್ತದೆ.
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.
ಉ: ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ.
ಇದು ಮಾಡೋ ಕೆಲಸವನ್ನ ನೆಟ್ಟಗೆ ಮಾಡದಿದ್ರೆ ಏನಾಗುತ್ತೆ ಅಂತ ಹೇಳತ್ತೆ.
ಅವರು ಹೊಂಟಿದ್ದೇ ಬಂಗಾರ ಮಾಡೋ ಗಿಡ ಹುಡಿಕಿ ಅಲ್ವಾ! ಹುಡುಕುವಾಗ ನಿಗಾ ಮಾಡಬೇಕಾದುದು ಅವನ ಹೊಣೆಯಾಗಿತ್ತು. ಅದನ್ನ ಬಿಟ್ಟು ಸುಮ್ನೆ ಎಡಂದಿಡ್ಡಿ ಕೆಲಸ ಮಾಡಿದ್ರೆ ಹಿಂಗೇ ಆಗೋದು!
ತುಸು ಮೆಲ್ಲಗಾದ್ರು, ಸರಿಯಾಗಿ ತರುವಾಯಿಂದ ಮಾಡಿದ್ರೆ ಎಲ್ಲ ಸರಿಯಿರ್ತಿತ್ತು!
- ಮಾಯ್ಸ !!
ಉ: ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ.
ಸಾಮಾನ್ಯವಾದ್ದು ಅಸಮಾನ್ಯಕ್ಕೆ ತಿರುಗುವ ಘಳಿಗೆ, ಕ್ಷಣ, ಪರಿಸ್ಥಿತಿಯ ಗೂಢತೆಯನ್ನು ತುಂಬಾ ಚೆನ್ನಾಗಿ ಹೇಳುವ ಕತೆ. ಸತತತೆ ಸಾರ್ಥಕತೆಯನ್ನು ತಂದೀತೆ ಎಂಬ ಪ್ರಶ್ನೆ! ಅಲ್ಲದಿದ್ದರೂ ಸತತತೆ ಅನಿವಾರ್ಯವಲ್ಲವೆ?
ಕಬ್ಬಿಣದಂಥ ಸಾಮಾನ್ಯವನ್ನು ಬಂಗಾರದಂಥ ಅಸಮಾನ್ಯ ಮಾಡುವ ಹುಚ್ಚು ಇಲ್ಲದಿದ್ದರೆ ನಮ್ಮ ಬದುಕುಗಳು ಏನಾಗಿ ಉಳಿಯುತ್ತಿತ್ತೋ!
ಶ್ರೀಕಾಂತರೆ, ಕತೆಗಾಗಿ ವಂದನೆಗಳು.
ಉ: ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ.
ನನಗೆ ಅನ್ನಿಸಿದ್ದು ಹೀಗೆ
ನಾವು ಎಷ್ಟೋ ಸಲ - ಎಷ್ಟೋ ಸಲ ಏನು ಬಂತು? ಕೆಲವೊಮ್ಮೆ ಬಾಳಿನುದ್ದಕ್ಕೂ - ಯಾವ್ಯಾವ್ದೋ ಭ್ರಮೆಗಳನ್ನು ತಲೆಯಲ್ಲಿ ತುಂಬಿಕೊಂಡು - ಸ್ವಲ್ಪಕಾಲವೂ ಕೊಂಚವೂ ವಿಚಾರ ಮಾಡದೆ ಏನೇನನ್ನೋ ಮಾಡ್ತಾ ಹೋಗುತೇವೆ. ಕೊಂಚ ಯೋಚನೆ ಮಾಡಿದ್ದರೆ .... ಎಂಬ ವಿಚಾರ ಬರುವ ಹೊತ್ತಿಗೆ ಕೂಡ ಅದಾಗಲೇ ಬಹಳೇ ತಡವಾಗಿ ಬಿಟ್ಟಿರುತ್ತದೆ !.
ಜೀವನ ಅಂದ್ರೆ ಏನು ತಿಳಿವ ಹೊತ್ತಿಗೆ ಅದಾಗಲೇ ಜೀವನ ಮುಗಿಯಬಂದಿರುತ್ತದೆ ಎಂಬ ವಾಕ್ಯವನ್ನೂ ಇಲ್ಲಿ ನೆನೆಯಬಹುದು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"