ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಕನಸಿನ ಬೆನ್ನು ಹತ್ತಿ ಹೋದವನ ಕಥೆ ( ನಾನು ಓದಿದ ಒಳ್ಳೆಯ ಕಥೆ)

November 9, 2006 - 5:50pm — shreekant.mishrikoti

ಇದು ನಥೇನಿಯಲ್ ಹ್ಯಾಥೊರ್ನ್ ಎಂಬ ಲೇಖಕ ಬರೆದ ಕಥೆ .

ನಮ್ಮ ಕಥಾನಾಯಕ ಚಿಕ್ಕವನಿದ್ದಾಗ ಒಂದು ಕನಸು ಆಗಾಗ ಬೀಳುತ್ತಿತ್ತು. ಅದು ಹೀಗೆ- ಒಂದು ಕೆಳಮುಖವಾದ ಬಾಣದ ಗುರುತು . 'ಇಲ್ಲಿ ಅಗೆ' ಎಂಬ ಬರಹ . ಅಲ್ಲಿ ಅಗೆದಾಗ ನಿಧಿಯು ಸಿಗುತ್ತದೆ. ಮತ್ತು ಋಷಿ ತರಹದ ಜನರು ಹಿರಿಯರಿಂದೊಡಗೂಡಿ ಬಂದು ನಮ್ಮ ರಾಜ್ಯಕ್ಕೆ ರಾಜನಾಗು ಎಂದು ಕಿರೀಟ ಒಪ್ಪಿಸಿ ಬೇಡಿಕೊಳ್ಳುವರು. ಹಾಗೂ ಸುಂದರಿ ರಾಜಕುಮಾರಿಯೊಬ್ಬಳು ನನ್ನನ್ನು ಮದುವೆಯಾಗು ಎಂದು ಕೇಳಿಕೊಳ್ಳುವಳು.
ಈ ಕನಸನ್ನು ಅವನು ಮನಸ್ಸಿಗೆ ಬಹಳ ಹಚ್ಚಿಕೊಳ್ಳುತ್ತಾನೆ.ಅದು ತನ್ನ ಭವಿಷ್ಯ ಸೂಚಕ ಎಂದು ನಂಬಿ ಅದನ್ನು ನಿಜಮಾಡಲು ಹೊರಡುತ್ತಾನೆ. ಆ ಬಾಣದ ಗುರುತು , ಋಷಿ ತರಹದ ಜನರು , ರಾಜಕುಮಾರಿ ಎಲ್ಲಿ ಹೇಗೆ ದೊರೆಯುವರು ಎಂಬ ಸುಳಿವು ಇಲ್ಲ. ಇವನ್ನೆಲ್ಲ ಹುಡುಕಿ ಕಾಡುಮೇಡು , ದೇಶ ವಿದೇಶ , ಖಂಡಾತರ ಅಲೆದೂ ಅಲೆದೂ ಅನೇಕ ವರ್ಷಗಳನ್ನು ಕಳೆಯುತ್ತಾನೆ. ಕೊನೆಗೆ ದಣಿದು , ಸೋತು ಬರಿಗೈಯಲ್ಲಿ ನಿರಾಶನಾಗಿ ತನ್ನ ಹಳ್ಳಿಗೆ ಹಿಂತಿರುಗುತ್ತಾನೆ.
ಮಾಡಲು ಉದ್ಯೋಗವಿಲ್ಲ . ಅವನ ಹೊಲಗಳು ಹಾಳು ಬಿದ್ದಿವೆ. ಹೊಲದ ಅಂಚಿನ ಗಿಡಗಳ ಬೊಡ್ಡೆಗಳ ಮೇಲೆ ಇವನು ಬಾಲ್ಯದಲ್ಲಿ ಕೆತ್ತಿದ್ದ ಬಾಣದ ಗುರುತು ಮತ್ತು 'ಇಲ್ಲಿ ಅಗೆ' ಎಂಬ ಬಾಣದ ಗುರುತು ಅವನನ್ನು ಅಣಕಿಸುತ್ತಿದೆ. ಅವನ ಬಾಲ್ಯದ ಗೆಳತಿ ಇನ್ನೂ ಮದುವೆಯಾಗದೇ ಇದ್ದಾಳೆ.
ಊರಿನ ಜನರೆಲ್ಲ ವಿದೇಶ ಸಂಚಾರ ಮಾಡಿ ಬಂದ ಇವನ ಅನುಭವ ಕೇಳಲು ಇವನನ್ನು ಸುತ್ತುವರೆಯುತ್ತಾರೆ.
ಉದ್ಯೋಗವಿಲ್ಲದೆ ಪಾಳು ಬಿದ್ದ ಹೊಲಗಳನ್ನು ಸಾಗುವಳಿ ಮಾಡಲಾರಂಭಿಸುತ್ತಾನೆ . ಇದು ಅವನ ಪಾಲಿನ ನಿಧಿ!
ಕೆಲದಿನಗಳ ನಂತರ ಊರಿನ ಹಿರಿಯರು ಇವನನ್ನು ಭೇಟಿಯಾಗಿ ನಮ್ಮ ಊರಿನ ಶಾಲೆಗೆ ಮುಖ್ಯ ಅಧ್ಯಾಪಕರಿಲ್ಲ . ನೀನು ಬಹಳ ತಿಳಿವಳಿಕಸ್ಥನಿದ್ದು ನೀನೇ ಸೂಕ್ತ ಮನುಷ್ಯ . ದಯವಿಟ್ಟು ಒಪ್ಪಿಕೋ ಎಂದು ಕೇಳಿಕೊಳ್ಳುತ್ತಾರೆ. ಹಳ್ಳಿಗೆ ಅದು ಬಹಳ ಪ್ರತಿಷ್ಠೆಯ ಪದವಿ. ಅವರಿಗೂ ಕನಸಿನಲ್ಲಿ ಕಂಡ ಋಷಿಗಳಿಗೂ ಸಾಮ್ಯವಿರುತ್ತದೆ! .
ಬಾಲ್ಯದ ಗೆಳತಿ ಇವನಿಗೆ ಸಿಕ್ಕು ನಿನಗಾಗಿ ಮದುವೆಯಾಗದೆ ಕಾದಿದ್ದೇನೆ. ನನ್ನನ್ನು ಮದುವೆಯಾಗು ಎಂದು ಕೇಳಿಕೊಳ್ಳುತ್ತಾಳೆ. ಇವಳೇ ಕನಸಿನಲ್ಲಿ ಕಂಡ ರಾಜಕುಮಾರಿಯೇನೋ?!
ಹೀಗೆ ಒಂದು ಕನಸನ್ನು ನಂಬಿ ಜಗತ್ತನ್ನೆಲ್ಲ ಅಲೆದು ಹಳ್ಳಿಯನ್ನು ಸೇರಿ ಸಣ್ಣ ಪ್ರಮಾಣದ ಬದುಕಿನಲ್ಲಿ ತನ್ನ ಕನಸನ್ನು ನಿಜ ಮಾಡಿಕೊಳ್ಳುತ್ತಾನೆ.

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 509 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 19, 2007 - 5:41am — Santhu

Re: ಕನಸಿನ ಬೆನ್ನು ಹತ್ತಿ ಹೋದವನ ಕಥೆ ( ನಾನು ಓದಿದ ಒಳ್ಳೆಯ ಕಥೆ)

Santhu's picture

Paulo Coelhoನ ಕ್ರತಿ "ಅಲ್ಕೆಮಿಷ್ಟ್" ಸಹಾ ನೀವು ಮೇಲೆ ಸೂಚಿಸಿದ ಕಥೆಯನ್ನೆ ಹೋಲುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲಾಟರಿಯ ಗುಟ್ಟು ಜಾಲಾಡಿದಾಗ-ರಘೋತ್ತಮ್ ಕೊಪ್ಪರ
  • ಮುಂಗಾರು ಮಳೆ v/s ಚಿಗುರಿದ ಕನಸು
  • ಕೊನೆಯ ಮಾತು
  • ಒಂದು ಅರ್ಜಿ
  • ಕತೆ ಹೇಳಿದ ಕತೆ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕೊನೆಗೂ ಕುಮಾರಸ್ವಾಮಿ ರಾಮನಗರಕ್ಕೆ ಭೇಟಿ ನೀಡಿದರು!
  • ಓದಿದ್ದು ಕೇಳಿದ್ದು ನೋಡಿದ್ದು-2
  • ನೀನು ಯಾರೆ
  • ಚೈನಾ ೧೦೦ ನಾವು ೦
  • ಹರುಷ ತಂದ ಆರು ದಿನಗಳು (ನಮ್ಮೂರೇ ನನಗೆ ಮೇಲು| ಈ ಊರಿಗೆ ಕರೆದು ತಂದಿರುವುದು ಹಣದ ಗೀಳು|)
  • ಆರದ ದೀಪ
  • ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
  • ಈಗ "ನನ್ನ ವಯಸ್ಸೆಷ್ಟು?" ಹೇಳಿ
  • ಹುಡುಗಿಯಿಂದ ಆಯ್ತು
  • ಸುಭಾಷಿತ: ಐದು ಮರಗಳ ಸ್ವರ್ಗ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 8:12am
  • mahesha
    ಉ: ನೀನು ಯಾರೆ
    August 29, 2008 - 8:08am
  • mahesha
    ಉ: ಚೈನಾ ೧೦೦ ನಾವು ೦
    August 29, 2008 - 8:04am
  • amg
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 29, 2008 - 7:55am
  • mahesha
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 7:35am
  • mahesha
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 7:32am
  • mahesha
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 7:31am
  • mahesha
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 7:30am
  • mahesha
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 7:29am
  • rajeshks
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 6:56am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 129 ಅತಿಥಿಗಳು ಆನ್ಲೈನ್ ಇರುವರು.


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator