ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಕನ್ನಡ , ಸಂಸ್ಕೃತ , ಇಂಗ್ಲೀಷ್ ಶಬ್ದಗಳು - ಬಿ.ಎಂ.ಶ್ರೀ. ಅವರ ವಿಚಾರಗಳು

September 14, 2006 - 12:58pm — shreekant.mishrikoti

ಕೆಲವು ಆಯ್ದ ಭಾಗಗಳು
(೧೯೧೨ರಲ್ಲಿ ಬಿ.ಎಂ.ಶ್ರೀ. ಅವರು ಮಾಡಿದ ಉಪನ್ಯಾಸದ ಮುಖ್ಯ ಅಂಶಗಳು .

೧. ಕನ್ನಡಕ್ಕೆ ಹೊಸ ಸಾಹಿತ್ಯ ಬೇಕಾಗಿದೆ.
೨. ಪ್ರಾಚೀನ ಸಾಹಿತ್ಯದ ಅಭ್ಯಾಸ ಮಾಡಿ ಭಾಷೆಯ ಹಳೆಯ ಶಬ್ದರಾಶಿಯನ್ನೂ ಪ್ರಯೋಗಗಳನ್ನೂ ಚೆನ್ನಾಗಿ ತಿಳಿದುಕೊಳ್ಳುವುದು ಹೊಸ ಬರವಣಿಗೆಗೆ ಅತ್ಯಂತ ಅವಶ್ಯಕ ಸಿದ್ಧತೆ.
೩. ಅಷ್ಟೇ ಸಾಲದು . ಹೊಸ ಬರವಣಿಗೆ ಬರೆಯುವವನು ಸಂಸ್ಕೃತದ ಪರಿಚಯ ಸಂಪಾದಿಸಿಕೊಳ್ಳಬೇಕು . ಸಂಸ್ಕೃತದ ಸಹಾಯವಿಲ್ಲದೆ ಹೊಸ ಸಾಹಿತ್ಯಕ್ಕೆ ಬೇಕಾದ ಶಬ್ದಸಾಮಗ್ರಿ ಒದಗಲಾರದು.
೪. ಆದರೆ ಹೊಸ ಕನ್ನಡ ಬರವಣಿಗೆಯಲ್ಲಿ ಸಂಸ್ಕೃತ ಪದಗಳ ಬಳಕೆ ಮಿತವಾಗಿರಬೇಕು . ನಮ್ಮ ಹಳಗನ್ನಡಕಾವ್ಯಗಳಲ್ಲಿರುವಷ್ಟು ಅತಿಯಾಗಿರಬಾರದು.
೫ ಸಂಸ್ಕೃತ ಹೇಗೆ ಅವಶ್ಯವೋ ಇಂಗ್ಲೀಷ್ ಸಾಹಿತ್ಯವೂ ಹಾಗೆ ಅವಶ್ಯಕ. ನಾವು ಹೊಸ ಹೊಸ ಭಾವನಾಧೋರಣೆಗಳನ್ನೂ ಹೊಸಹೊಸ ವಿಚಾರಧಾರೆಗಳನ್ನೂ ಇಂಗ್ಲೀಷಿನಿಂದ ಸಂಗ್ರಹಿಸಿಕೊಳ್ಳಬೇಕು. ನಮ್ಮ ಹೊಸಕನ್ನಡ ಸಾಹಿತ್ಯವು ಪ್ರಪಮ್ಚದ ನಾನಾ ಸಾಹಿತ್ಯಗಳ ಕಲ್ಪನೆಗಳನ್ನೂ ಭಾವನೆಗಳ್ನ್ನೂ ಸಮಾಲೋಚನೆಗಳನ್ನೂ ಸ್ವಾಧೀನಪಡಿಸಿಕೊಂಡು ಸಾರ್ವಲೌಕಿಕವಾಗಬೇಕು.
೬. ಹೊಸ ಕನ್ನಡ ಸಾಹಿತ್ಯದಲ್ಲಿ ನಮ್ಮ ಹಳೆಯ ಸಾಹಿತ್ಯದ ರಸಪುಷ್ಟಿ , ಓಜಸ್ಸು , ಮನೋರಂಜಕತೆ , ಭಾಷಾಶುದ್ಧಿ - ಇವುಗಳ ಜತೆಗೆ ಹೊಸಹೊಸ ಛಂದಃ ಪ್ರಯೋಗಗಳೂ ಹೊಸಹೊಸ ಪದಸಂಯೋಜನೆಗಳೂ ಹೊಸಹೊಸ ಕಥಾಪ್ರಪಂಚ ನಿರ್ಮಿತಿಗಳೂ ಸೇರಿ ನಮ್ಮ ಸಾಹಿತ್ಯವು ಜನ ಜೀವನಕ್ಕೆ ಒಂದು ಹೊಸ ಪ್ರಚೋದಕ ಶಕ್ತಿಯಾಗಬೇಕು.

ಮತ್ತೆ ಬೇರೆಡೆ
೧. ಪಾರಿಭಾಷಿಕ ಪದಕ್ಕೆ ಕನ್ನಡದಲ್ಲಿಯೋ ಸಂಸ್ಕೃತದಲ್ಲಿಯೋ ಪ್ರತಿಪದವನ್ನು ತಯಾರು ಮಾಡಿ ಉಪಯೋಗಿಸಲು ನಮ್ಮ ಆಕ್ಷೇಪವಿಲ್ಲ . ಇದು ಐಚ್ಚಿಕ ವಿಷಯ . ನಮಗೆ ಮುಖ್ಯವಾದ ಗುಣವು ಸೌಲಭ್ಯ - ಅರ್ಥದ ಸುಲಭತೆ , ಉಚ್ಚಾರಣೆಯ ಸುಲಭತೆ , ಲಿಪಿಯ ಸುಲಭತೆ .

೨. ಕನ್ನಡದಲ್ಲಿ ಎಷ್ಟೋ ಪದಪ್ರಯೋಗಗಳು ವ್ಯಾಕರಣಶಾಸ್ತ್ರದ ದೃಷ್ಟಿಯಿಂದ ತಪ್ಪೆನಿಸಿದರೂ ಬಹುಕಾಲದ ಜನರೂಢಿಯಿಂದ ತಪ್ಪೆನಿಸಿದರೂ ಬಹುಕಾಲದ ಜನರೂಢಿಯಿಂದ ಅವಸರದ ಉಪಯೋಗಕ್ಕೆ ಅನುಕೂಲವಾಗಿದೆ. ಇಂಥ ಅಸಾಧು ಪ್ರಯೋಗಗಳೂ ಇಂಗ್ಲೀಷಿನಲ್ಲಿಯೂ ಹೇರಳವಾಗಿವೆ ಅವನ್ನು " Sturdy indefensible "- ಬಲಿಷ್ಟವಾದ ಅಕ್ಷಮ್ಯಗಳು ಎಂದು ಅಂಗೀಕರಿಸಿಕೊಂಡಿದ್ದಾರೆ . ಈ ತತ್ವ ಕನ್ನಡಿಗರಿಗೂ ಅನುಕರಣೀಯವಗಿದೆ.

೩. ನಾವು ಕೂಡಿದ ಮಟ್ಟಿಗೂ ಶಬ್ದ ಸಂಪತ್ತನ್ನು ವೃದ್ಧಿಮಾಡಿಕೊಳ್ಳಬೇಕೇ ಹೊರತು ಕಡಮೆ ಮಾಡಿಕೊಳ್ಳಬಾರದು . ಇದು ತಪ್ಪು , ಅದು ಅಶುದ್ಧ , ಇದು ಗ್ರಾಮ್ಯ , ಇದು ಅನ್ಯದೇಶೀಯ ಎಂದು ಮಾತುಗಳನ್ನು ತಳ್ಳಿಹಾಕುತ್ತಾ ಹೋದರೆ ಕಡೆಗೆ ಉಳಿಯುವದು ನಮ್ಮ ಇಂದಿನ ಕೆಲಸಕ್ಕೆ ಹೇಗೆ ಸಾಕಾದೀತು? ಭಾಷಾವಿಷಯದಲ್ಲಿಯೂ ಉದಾರದೃಷ್ಟಿ ಅವಶ್ಯ .

ಶ್ರೀಕಂಠಯ್ಯನವರ 'ಕನ್ನಡ ಮಾತು ತಲೆ ಎತ್ತುವ ಬಗೆ ' ಎಂಬ ಉಪನ್ಯಾಸ ಇಂದಿಗೂ ಉಪಯುಕ್ತವಾಗಿದೆ. ಕನ್ನಡದ ಉತ್ಸಾಹಿಗಳು ಅದರಲ್ಲಿ ವಿಚಾರಾರ್ಹವಾದ ಅಂಶಗಳನ್ನು ಗಮನಿಸುವರೆಂದು ಬೇಡುತ್ತೇನೆ .

---ಡಿ.ವಿ.ಜಿ. ಯವರ ' ಹಕ್ಕಿಯ ಪಯಣ' ದಿಂದ

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 546 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 6, 2008 - 10:43am — kannadakanda

ಉ: ಕನ್ನಡ , ಸಂಸ್ಕೃತ , ಇಂಗ್ಲೀಷ್ ಶಬ್ದಗಳು - ಬಿ.ಎಂ.ಶ್ರೀ. ಅವರ ವಿಚಾರಗಳು

kannadakanda's picture

ಆದರೆ ಎಲ್ಲದರೂ ’ಱ ,ೞ, ಶ, ಷ, z, f' ಇವುಗಳನ್ನು ಬೞಸಬೇಡಿ. ಕೈ ಬಿಡಿ ಎಂದು ಹೇೞಿದ್ದಾರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 6, 2008 - 10:52am — mahesha

ಉ: ಕನ್ನಡ , ಸಂಸ್ಕೃತ , ಇಂಗ್ಲೀಷ್ ಶಬ್ದಗಳು - ಬಿ.ಎಂ.ಶ್ರೀ. ಅವರ ವಿಚಾರಗಳು

mahesha's picture

ಹು...

ಅವರ ಗುರಿ ಕನ್ನಡಕ್ಕೆ ಆದಸ್ಟು ಕಡಮೆ ಅಕ್ಕರಗಳ ಅಕ್ಕರ ಪಟ್ಟಿ ಮಾಡುವುದಾಗಿತ್ತು...

ರ/ಱ ಳ/ೞ ಶ/ಷ, ಜ/z, ಪ/f ಇವೆಲ್ಲ ಬೇಡ ಎಂಬುದು ಶಂಕರ ಬಟ್ಟರ ಅನಿಸಿಕೆ ಕೂಡ...

ಱ, ೞ ಕನ್ನಡ ವ್ಯಾಕರಣ ಕಲಿಯಲು ಬೇಕೇ ಬೇಕು.. ಮಿಕ್ಕವು ಬೇಡ.. ಆದುದರಿಂದ ಱ, ೞಗಳು ಬೞಕೆಗೆ ನನ್ನ ಒಳಬೆಂಬಲವಿದೆ.. ಮಿಕ್ಕವಕ್ಕೆ ಇಲ್ಲ..
..............................
ಅರೆದು
ಅಱಿತು ಇಲ್ಲಿ ತು ಬರಲು ಱ ಓಸುಗರ...

ಹೊಳೆದು
ಕೊೞೆತು ಇಲ್ಲ ತು ಬರಲು ೞ ಓಸುಗರ.. ಈ ವ್ಯಾಕರಣಾಂಶವನ್ನು ವಿವರಿಸಲು ನಮಗೆ ಱ, ೞಕಾರಗಳ ಅಱಿವು ಬೇಕು..
------------------------------------
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ನುಡಿಗೆ ಮುಂದಿನ ದಿಕ್ಕು
  • ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಸಂಸ್ಕೃತ ವಾರ್ತೆ
  • ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?
  • ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
  • ಕನ್ನಡ - ಸಂಸ್ಕೃತ = ತಮಿಳು
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 89 ಅತಿಥಿಗಳು ಆನ್ಲೈನ್ ಇರುವರು.


ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator