ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೧

July 15, 2006 - 2:06pm — shreekant.mishrikoti

ಕರ್ನಾಟಕದ ಪಾಲಿಗೆ ೧೯ನೇ ಶತಮಾನದ ಮಧ್ಯಭಾಗ ಮತ್ತು ೨೦ನೇ ಶತಮಾನದ ಪ್ರಾರಂಭವನ್ನು ಸಾಮಾನ್ಯವಾಗಿ ಅಜ್ಞಾತ ಕಾಲಖಂಡ ಎಂದೂ /ಅನುಕರಣ ಯುಗವೆಂದೂ ಹೇಳುತ್ತಾರೆ . ಈ ಮಾತು ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ವಯಿಸುತ್ತದೆ.

ವಿಜಯನಗರದ ತರುವಾಯ ಕನ್ನಡ ಸಂಸ್ಕೃತಿಯ ದೋಷಗಳು ಪ್ರಧಾನವಾಗಿ ನಾಡಿಗೆ ಒಂದು ಬಗೆಯ ಸಾಂಸ್ಕೃತಿಕ ಅನಾರೋಗ್ಯವುಂಟಾಯಿತು. ಮೈಸೂರೊಂದರಲ್ಲಿ ದೃಷ್ಟಿ ಸಂಕುಚಿತವಾದರೂ ಕನ್ನಡಿಗರ ಶಕ್ತಿ ಕುಂಠಿತವಾಗಲಿಲ್ಲ . ಇನ್ನೂರು ವರ್ಷಕ್ಕೂ ಹೆಚ್ಚಿನ ಕಾಲ ಕನ್ನಡ ಜೀವನವು ದಿಗ್ಮೂಢವೂ ಅಗತಿಕವೂ ಆತ್ಮಪ್ರಜ್ಞೆ ಇಲ್ಲದುದೂ ಆಗಿ ಬಾಳಿತು .

೧೮೧೮ ರಲ್ಲಿ ಪೇಶವೆಯವರ ಆಳಿಕೆ ಮುಗಿದು ಹೋದರೂ ಉತ್ತರಕರ್ನಾಟಕವನ್ನು ಪಟವರ್ಧನ ಮನೆತನದವರು , ಭಾವೆ ಮನೆತನದವರು , ಘೋರ್ಪಡೆ ಮನೆತನದವರು ಕಾಯಿಪಲ್ಲೆ ಹಂಚಿಕೊಂದ ಹಾಗೆ ಹಂಚಿಕೊಂಡರು. ಕನ್ನಡಿಗರು ವಿಜಯನಗರ ಕಾಲಕ್ಕೇ ತಮ್ಮ ರಾಜವೈಭವವನ್ನು ಕಳೆದುಕೊಂಡಿದ್ದರು. ಅನಂತರ ಅವರು ಕಳೆದ ಜೀವನ ಹೊರಮನೆಯ ಭಾಣಸಿಗರಾಗಿಯೇ. ಮರಾಠಿಗರಾದರೋ ೧೮೧೮ ರವರೆಗೆ ರಾಜ್ಯವಾಳಿದವರು . ಹೀಗಾಗಿ ತಾವು ಆಳರಸರೆಂಬ ಪ್ರಜ್ಞೆ , ಅಹಂಕಾರ ಅವರಲ್ಲಿ ಇನ್ನೂ ಜಾಗೃತವಾಗಿದ್ದವು. ತಾವು ಆಳಲಿಕ್ಕೆ ಬಂದವರೆಂಬ ಭಾವನೆ ಅವರಲ್ಲಿ ಇತ್ತು. ಅದೂ ಅಲ್ಲದೆ ಮುಂಬೈ ಭಾರತದ ಹೆಬ್ಬಾಗಿಲಾದ್ದರಿಂದ ಬ್ರಿಟಿಷರು ಮೊದಲು ಅಲ್ಲಿ ತಳವೂರಿದರು . ತನ್ಮೂಲಕ ವಿದ್ಯೆಯ ಅವಕಾಶವೂ ಅಲ್ಲಿಯ ಜನತೆಗೇ ಮೊದಲು ಲಭಿಸಿತು. ಪುಣೆಯೂ ಸರಕಾರದ ಪೀಠಸ್ಥಾನವಾಯಿತು . ಉತ್ತರ ಕರ್ನಾಟಕದ ಜನ ತಮ್ಮ ವಿದ್ಯೆಗಾಗಿ ಪುಣೆಗೋ ಮುಂಬೈಗೋ ಹೋಗಬೇಕಾಗುತ್ತಿತ್ತು. ಹೀಗೆ ಮುಂಬೈ , ಪುಣೆಗಳಿಗೆ ಹೋಗಿ ಬಂದ ಕನ್ನಡಿಗರು ಪರದೇಶಿಗಳಾಗಿಯೇ ಬರುತ್ತಿದ್ದರು . ಅವರಲ್ಲಿ ಕೆಲವರು ಮರಾಠೀ ಹೆಣ್ಣುಮಕ್ಕಳನ್ನೂ ಕಟ್ಟಿಕೊಂಡೇ ಬರುತ್ತಿದ್ದರು. ಹೀಗಾಗಿ ಮಾತೃಭಾಷೆಯ ಸ್ಥಾನದಲ್ಲಿ ಈ ಭಾರ್ಯಾಭಾಷೆ ರಾರಾಜಿಸಹತ್ತಿತು. ಹಲವು ಜಹಗೀರುದಾರರಂತೂ ಪುಣೆಯ ನೀರಿನಿಂದ ತಮ್ಮ ಬಟ್ಟೆ ಸ್ವಚ್ಛವಾಗುತ್ತಿದ್ದುದನ್ನು ಗಮನಿಸಿ ಅಗಸರನ್ನೂ ಪುಣೆಯಿಂದಲೇ ಕರೆತಂದರು!. ಹೀಗಾಗೀ ಆರೇ ( ಮರಾಠಿ ಭಾಷೆ) ಅರಸವಾಯಿತು. ಈ ರಾಜಕೀಯ , ಸಾಮಾಜಿಕ ಹೊಡೆತಕ್ಕೆ ಕನ್ನಡಿಗ ನಿರ್ವಿಣ್ಣನಾದನು. ಸೋತ ಬಾಳು ಸಪ್ಪೆ ಬಾಳಾಯಿತು. ಮರಾಠಿಗರ ಕೃಪಾದೃಷ್ಟಿಯಲ್ಲಿ ಬಾಲ ಅಲ್ಲಾಡಿಸುವ ನಾಯಿಬಾಳು ಅವನದಾಯಿತು . ಕುರಿಯ ಹಿಂಡಿನಲ್ಲಿದ್ದ ಹುಲಿಮರಿಗೆ ಸ್ವಯಂಜ್ಞಾನವಾಗಲು ವೇಳೆ ಹಿಡಿದಂತೆ ಕನ್ನಡಿಗರಿಗೆ ತಮ್ಮ ಭಾಷೆ ಕನ್ನಡವೆಂದು ತಿಳಿದುಕೊಳ್ಳಲು ಅನೇಕ ವರುಷಗಳು ಹಿಡಿದವು . ಈ ಬಗೆಗೆ ಶ್ರೀ ದ.ರಾ.ಬೇಂದ್ರೆಯವರು ಹೀಗೆ ಬರೆಯುತ್ತಾರೆ ......
(ಮುಂದುವರೆಯುವದು)

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 746 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ
  • ಉತ್ತರ ಕರ್ನಾಟಕದಲ್ಲಿ ಕನ್ನಡದ ಕಥೆ -೩
  • ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೨
  • ಕನ್ನಡ
  • ಬಿಡುಗಡೆಯ ನಂತರದ ಬೇಡಿಗಳು (೪)
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 152 ಅತಿಥಿಗಳು ಆನ್ಲೈನ್ ಇರುವರು.


ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.

— ನಾ. ಕಸ್ತೂರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator