ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ನಾನು ಸೋಲುವೆನೋ ? ಕಂಪ್ಯೂಟರ್ ಸೋಲುವದೋ ?
ಸದ್ಯದಲ್ಲಿ ಕನ್ನಡ ಸಾಹಿತ್ಯ ಡಾಟ್ ಕಾಮ್ನಲ್ಲಿನ ಲೇಖನಗಳಲ್ಲಿನ ತಪ್ಪುಗಳನ್ನು ತಿದ್ದುತ್ತಿದ್ದೇನೆ. ಹೀಗಾಗಿ ಬ್ಲಾಗ್ ಬರೆದಿಲ್ಲ . ಜತೆ ಜತೆಗೇ ಪದಪರೀಕ್ಷಕ ( ಸ್ಪೆಲ್ಲ್ ಚೆಕ್ಕರ್) ಗೆ ಶಬ್ದಗಳನ್ನು ಸೇರಿಸುತ್ತಿದ್ದೇನೆ. . ಈಗಾಗಲೇ ಐವತ್ತು ಸಾವಿರಕ್ಕೂ ಹೆಚ್ಚು ಪದಗಳು ಸೇರ್ಪಡೆಯಾಗಿವೆ . ನಾನು ಸೋಲುವೆನೋ ; ಬೇಸತ್ತು ಕೈ ಬಿಡುವೆನೋ ; ಅಥವಾ ಕಂಪ್ಯೂಟರ್ ಸೋಲುವದೋ ನೋಡೋಣ ; ಏನೇ ಆಗಲಿ ನಿಮಗೆಲ್ಲ ತಿಳಿಸುವೆ ;

- shreekant.mishrikoti ರವರ ಬ್ಲಾಗ್
- Login or register to post comments
- 1014 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಗೆಲುವು ನಿಮ್ಮದೆ
ಹಾಗೆಂದು ನನ್ನ ಹಾರೈಕೆ.
ಒಂದು ತಲೆಹರಟೆ:
"ಕಂಪ್ಯೂಟರ್ ಸೋಲುವದೋ ?" ಅಲ್ಲ "ಕಂಪ್ಯೂಟರ್ ಸೋಲುವುದೋ ?"
ಉದಾ:
ಮಾಡುವನು / ಮಾಡುವನೋ
ಮಾಡುವಳು / ಮಾಡುವಳೋ
ಮಾಡುವರು / ಮಾಡುವರೋ
ಮಾಡುವುದು / ಮಾಡುವುದೋ?
ನಪುಂಸಕಲಿಂಗದಲ್ಲಿ ಕ್ರಿಯಾಪದಗಳನ್ನು ನೋಡಿ
ಮಾಡಿದನು / ಮಾಡಿತು
ಮಾಡಿದ್ದನು / ಮಾಡಿತ್ತು
ಮಾಡುತ್ತಿದ್ದನು / ಮಾಡುತ್ತಿತು
ಮಾಡಿವನು / ಮಾಡಿವುದು
ಮಾಡುತ್ತಿದ್ದಾನೆ / ಮಾಡುತ್ತಿದೆ
ಮಾಡಿಯಾನು / ಮಾಡೀತು
ಮಾಡನು / ಮಾಡದು
ಪುಲ್ಲಿಂಗ/ಸ್ತ್ರೀಲಿಂಗ/ ಬಹುವಚನ (ಪುಲ್ಲಿಂಗ ಮುತ್ತು/ಇಲ್ಲವೆ ಸ್ತ್ರೀಲಿಂಗ )/ ಮತ್ತು ನಪುಂಸಕಲಿಂಗದ ಬಹುವಚನ ಈ ೪ ಬಗೆಗಳು ಬರಿ ಕ್ರಿಯಾರೂಪದ ಕೊನೆಯ ಅಕ್ಕರದಲ್ಲಿ ವ್ಯತ್ಯಾಸ ಹೊಂದುವುವು
ಮಾಡಿದನು/ಳು/ರು/ವು
ಮಾಡಿದ್ದನು/ಳು/ರು/ವು
ಮಾಡುತ್ತಿದ್ದನು/ಳು/ರು/ವು
ಮಾಡುತ್ತಿದ್ದಾನೆ/ಳೆ/ತೆ - ಮಾಡುತ್ತಿವೆ ( ಮಾಡುತ್ತಿದ್ದಾವೆ, ಎನ್ನುವರೆ?(ನನಗೆ ಗೊಂದಲ) )
ಮಾಡಿಯಾನು/ಳು/ರು/ವು
ಮಾಡನು/ಳು/ರು/ವು
ಮಾಡುವನು/ಳು/ರು - ಮಾಡುವುದು/ಮಾಡುವುವು (ಮಾಡುವವು, ಇದು ಸರಿಯೆ?)
ಚೆಲುವಗಲು,
ಮಹೇಶ
ವಿರುದ್ಧ ಪದಗಳ ರೂಪಗಳು
ಬಹು ಹಿಂದೆಯೇ ಸಂಪದಿಗರು ತೀರ್ಮಾನಿಸಿದಂತೆ. ತಪ್ಪುಗಳನ್ನು ಆದಷ್ಟೂ ಸರಿಪಡಿಸಿೆಕೊಳ್ಳೋಣ. ನಿಮ್ಮ ವಿವರಣೆ, ಕ್ರಿಯಪದಗಳು ಲಿಂಗಗಳ ಜೊತೆಗೂಡಿದಾಗ ಯಾವ ರೀತಿ ಬದಲಾವಣೆ ಹೊಂದುತ್ತವೆ ಎಂಬುದನ್ನು ಸೂಕ್ತರೀತಿಯಲ್ಲಿ ತಿಳಿಸುತ್ತಿದೆ.
ಹೇಳುವನು (ಅನು)
ಹೇಳುವಳು (ಅಳು)
ಹೇಳುವುದು(ಉದು)
ಈ ಅನು, ಅಳು, ಉದು ಮುಂತಾದವು ಕ್ರಿಯಾಪದಗಳ ವಿಭಕ್ತಿ ಪ್ರತ್ಯಯಗಳು ಎಂದು ಶಬ್ದಮಣಿದರ್ಪಣದಲ್ಲಿ ದಾಖಲಾಗಿವೆಯೇ? ಅಥವಾ
ಕುತೂಹಲದ ಪ್ರಶ್ನೆ. ಸಂಪದಿಗರಲ್ಲಿ ಯಾರಾದರು ಶಬ್ದಮಣಿದರ್ಪಣವನ್ನು ಅಭ್ಯಾಸ ಮಾಡಿರುವರೆ? ನಾನಂತೂ ಮಾಡಿಲ್ಲ.
ಹಾ!. ಅಂದಹಾಗೆ ಶುಭಾಶಯಗಳು ಶ್ರೀಕಾಂತರವರಿಗೆ ೫೦ ಸಾವಿರ ಪದಗಳನ್ನು ಕನ್ನಡ ಭಂಡಾರಕ್ಕೆ ಸೇರಿಸಿದ್ದಕ್ಕೆ.
ಚಲುವಗಲು ಅಂದರೆ ಏನು?
ಚೆಲುವಗಲು,
ಮಹೇಶ
ಅಹೋರಾತ್ರ
ಚೆಲುವಗಲು, ನಲ್ವಗಲು
ಇದನ್ನು ನಮ್ಮ ಶ್ರೀಕಾಂತ ಮಿಶ್ರಿಕೋಟಿಗಳು ನಮಗೆ ಪರಿಚಯಿಸಿದ್ದು. ವಿವರಗಳಿಗೆ ಅವರ ಒಂದು ಬ್ಲಾಗ್ ನೋಡಿ.
ಸವಿಯೊದಗು.
ಚೆಲು + ಪಗಲು
ಚೆಲು + ಪಗಲು(ಹಗಲು) = ಚೆಲುವಗಲು
ನಲ್ + ಪಗಲು(ಹಗಲು) = ನಲ್ವಗಲು
ಇದು ಕನ್ನಡದ ಸಂಧಿರೂಪಗಳು.
ಉದಾ:
ಹೆಬ್ಬಾವು = ಹೆಮ್ + ಪಾವು(ಹಾವು).
ಗಮನಿಸಿ:
ಹೆಮ್ + ಮೆ = ಹೆಮ್ಮೆ
ಒಲು + ಮೆ = ಒಲುಮೆ
ಬಲ್ + ಮೆ = ಬಲ್ಮೆ
ಜಾಣ್ + ಮೆ = ಜಾಣ್ಮೆ ಮುಂತಾದವು
ಮುಂದಲೆ = ಮುಂ + ತಲೆ
ಬೆಲೆವೆಣ್ಣು = ಬೆಲೆ + ಪೆಣ್ಣು(ಹೆಣ್ಣು)
ಕಿಸುವೊೞಲ್ = ಕಿಸು + ಪೊೞಲ್(ಹೊಳಲ್)
ಚೆಲು = ಚೆಲುವು
ಸವಿಯೊದಗೆ,
ಮಹೇಶ
ಚೆಲುವು+ಅಗಲು=?
ಹಾಗಾದರೆ ಚೆಲುವು+ಅಗಲು[ಗುಣ ಸಂಧಿ]= ಏನಾಗುತ್ತದೆ ಮಹೇಶರೆ?
ಅಹೋರಾತ್ರ
ಚೆಲುವ್ಹೊಗಲು
ಇಲ್ಲಿ ಎರಡು ಅಂಶಗಳನ್ನು ಗಮನಿಸುತ್ತಾ, ನಮ್ಮ ಸಮಸ್ಯೆಯನ್ನು ತಿಳಿಯಾಗಿಸಿಕೊಳ್ಳುವ ಪ್ರಯತ್ನ ಮಾಡೋಣ.
೧. ಚೆಲುವಗಲಿಗೆ ಸಂಧಿಯ ರೂಪದ ಬದಲು ಸಮಾಸದ ರೂಪದಲ್ಲಿ ಅರ್ಥಮಾಡಿಕೊಂಡರೆ ನಮ್ಮ ಸಮಸ್ಯೆ ಸ್ವಲ್ಪ ತಿಳಿಯಾಗುುವುದು.
) ಆಗುವುದಿಲ್ಲ, ಸರಿ ಹೊಂದುವುದಿಲ್ಲ.
೨. ಚೆಲುವು + ಹಗಲು. ಇದನ್ನು ಗುಣ ಸಂಧಿಯ ಪ್ರಕಾರ ಕೂಡಸಲು ಬರುವುದಿಲ್ಲ ಎಂಬುದು ನನ್ನ ಅನಿಸಿಕೆ. ಏಕೆಂದರೆ ಚೆಲುವು ಮತ್ತು ಹಗಲು ಎರಡೂ ಕೂಡ ಕನ್ನಡ ಪದಗಳು. ಕನ್ನಡ ಮೂಲದ ಪದಗಳಿಗೆ ಸಂಸ್ಕೃತ ಸಂಧಿಗಳು set(ಈ ಜಾತಕಗಳನ್ನು ಕೂಡಿಸುವಾಗಿ ಹೇಳುತ್ತಾರಲ್ಲ. ಆ ರೀತಿಯಲ್ಲಿ.
ಇಲ್ಲದಿದ್ದಲ್ಲಿ ಅದು ಚೆಲುವ್ಹೊಗಲು ಎಂದಾಗಬೇಕು. ಏಕೆಂದರೆ ಗುಣ ಸಂಧಿಯಲ್ಲಿ ಸ್ವರಗಳಲ್ಲಿ ಮಾತ್ರ ವ್ಯತ್ಯಾಸವಾಗುತ್ತದೆ. ವ್ಯಂಜನಗಳಲ್ಲಿ ಆಗುವುದಿಲ್ಲ.
ನಾವು ಇನ್ನೂ ಸೂಕ್ಷ್ಮವಾಗಿ ನೋಡಿದರೆ ಗುಣ ಸಂಧಿಯ ಪ್ರಕಾರ ಚೆಲುವ್ಹೊಗಲು ಮಾಡಲು ಬರವುದಿಲ್ಲ ಎಂಬುದು ಗೊತ್ತಾಗುತ್ತದೆ.
ನೀವೆಲ್ಲರೂ ಏನು ಹೇಳುವಿರಿ.?
ಕನ್ನಡ ಸಂಧಿಗಳು
ಕನ್ನಡ ಸಂಧಿಗಳು ಮೂರೇ ಮೂರು.
೧)ಆಗಮ = ಹೆಚ್ಚಿಗೆ ಅಕ್ಕರಗಳು ಬರುವುದು
೨)ಲೋಪ = ಇರುವ ಅಕ್ಕರಗಳು ಬಿಟ್ಟು ಹೋಗುವುದು
೩)ಆದೇಶ = ಒಂದರ ಬದಲು ಮತ್ತೊಂದು ಬರುವುದು.
ಸಂಸ್ಕೃತದ ಅಲ್ಲಿ ಸುಮಾರು ೧೦ಕ್ಕಿಂತ ಹೆಚ್ಚು ಸಂಧಿಗಳಿವೆ.
ಗುಣ vs ಕನ್ನಡದ ಆದೇಶ ಸಂಧಿ.
ಗುಣ ಸಂಧಿಯಲ್ಲಿ ಪೂರ್ವಪದದ(ಮೊದಲನೆ ಪದ) ಕೊನೆಯಕ್ಕರ ಬದಲಾವಣೆ ಹೊಂದುವುದು.
ಹಳೆಬಳಕೆ : ವಾಗೀಶ = ವಾಕ್ + ಈಶ. ಇಲ್ಲಿ ಕ್ ಹೋಗಿ ಗ್ ಬಂತು.
ಗುಣ ಸಂಧಿಯ ಸೂತ್ರ: ಪೂರ್ವಪದದ ಕೊನೆಯಲ್ಲಿನ ಕ್, ಚ್, ಟ್, ತ್, ಪ್(ಕರ್ಕಶ ವರ್ಗೀಯ ವ್ಯಂಜನಗಳು) ಬದಲು ( ಗ್, ಜ್, ಡ್, ದ್, ಬ) ( ಮೃದು ವರ್ಗೀಯ ವ್ಯಂಜನಗಳು) ಬರುವುವು. ಹಾಗೆಯೆ ಮಹಾ ಪ್ರಾಣಕ್ಕೂ ಕೂಡ.
ಆದೇಶ ಸಂಧಿಯಲ್ಲಿ ಉತ್ತರಪದದ(ಎರಡನೆ ಪದದ) ಮೊದಲ ಅಕ್ಕರ ಬದಲಾಗುವುದು.
ಹಳೆಬಳಕೆ: ಕೆಂದಾವರೆ = ಕೆಂ + ತಾವರೆ.
ಇಲ್ಲಿ ಎರಡೆಪದವಾದ(ಉತ್ತರ ಪದ) ತಾವರೆಯ ಮೊದಲ ಅಕ್ಕರ "ತ"ಬದಲು "ದ" ಬಂತು.
ಹೇಗೆ: ಹಳೆಗನ್ನಡ, ಸಿರಿಗನ್ನಡ, ಮುಂತಾದವು
ಸವಿಯೊದಗೆಗಳು,
ಮಹೇಶ
ಉ : ಸಂಧಿ ಸಮಾಸ
ಹಳೆಬಳಕೆ: ಕೆಂದಾವರೆ = ಕೆಂ + ತಾವರೆ.
ಸಂಪದದ ಆಶಯ ಈಡೇರುತ್ತಿದೆಯೇನೋ ಎಂದನಿಸುತ್ತಿದೆ. ಅಂತರ್ಜಾಲದಲ್ಲಿ ಕನ್ನಡವನ್ನು ಬಳಸಿ ನಡೆಯುವ ಚರ್ಚೆಗಳು ಹೆಚ್ಚಾಗಬೇಕೇ? ಎಂದು ಒಂದು ಜನಮತ(poll) ಹಾಕಿದ್ದೆವು. ಅದು ಸಾಕಾರಗೊಳ್ಳುತ್ತಿದೆ.
ಇರಲಿ ವಿಷಯಕ್ಕೆ ಬರೋಣ. ಸಂಧಿ ಮಾಡುವಾಗ, ಪೂರ್ವ ಪದ ಮತ್ತು ಉತ್ತರಪದ ಎರಡಕ್ಕೂ ಅರ್ಥವಿರಲೇಬೇಕು ಎಂದು ನಮ್ಮ ಉಪಾಧ್ಯಾಯರು ಹೇಳಿದ್ದರು. ಸಂಧಿಯ ನಿಯಮವೇ ಹಾಗೆ, ಎರಡು ಪದಕ್ಕೂ ಅರ್ಥವಿರಬೇಕು.
ಕೆಂದಾವರೆಯನ್ನು, ಕೆಂ + ತಾವರೆ ಎಂದು ಬಿಡಿಸಲು ಬಾರದು. ಏಕೆಂದರೆ 'ಕೆಂ' ಎನ್ನುವುದಕ್ಕೆ ಯಾವ ಅರ್ಥವೂ ಇಲ್ಲ. ಕೆಂದಾವರೆಗೆ ಸಮಾಸದಿಂದ ಮಾತ್ರವೇ ಅರ್ಥಕಲ್ಪಿಸಲು ಸಾಧ್ಯ. ಒಂದು ಪದಕ್ಕೆ ಸಂಧಿ ಹಾಗು ಸಮಾಸ ಎರಡೂ ಇರಬೇಕು ಎಂಬ ಯಾವ ನಿಯಮವೂ ಇಲ್ಲ.
ಕೆಂಪಾದ ತಾವರೆ - ಕೆಂದಾವರೆ. ಇದನ್ನು ಕೆಂ + ತಾವರೆ ಎಂದು ಬಿಡಿಸಬಾರದು. ನೀವು ಏನು ಹೇಳುವಿರಿ? ಹಾಗೆಯೇ ಚೆಲ್ವಗಲು.
ಅಂದ ಹಾಗೆ, ಈ ಚೆಲುವಗಲು ಪದಕ್ಕೆ ಅರ್ಥ ಹುಡುತ್ತಿರವಾಗ ಹೊಳೆಯಿತು. ಅಗಲು ಎಂದರೆ ತುದಿ ಎಂದನಿಸುತ್ತದೆ.
ಚೆಲುವು + ಅಗಲು = ಚೆಲುವಗಲು ( ಲೋಪ ಸಂಧಿ) - ಚೆಂದವಾದ (ಅಥವಾ ಮಚ್ಚು, ಚಾಕು ಮುಂತಾದ ಶಸ್ತ್ರಗಳಿಗಗಾದರೆ ಚೂಪಾದ ) ತುದಿ ಎಂದು ಅರ್ಥವಿರಬಹುದಲ್ಲವೇ.
ಅಗಲು ಪದಕ್ಕೆ ಕನ್ನಡ ಕಸ್ತೂರಿ ಯ ಸಹಾಯ ಪಡೆಯೋಣ ಎಂದರೆ ಅದು ಏಕೋ ನನ್ನ ಮೇಲೆ ಮುನಿಸಿಕೊಂಡಿದೆ.
ಸವಿಯೊದಗು.
ಅಗಲು= ಬೇರೆಯಾಗು
ಚೆಲುವಿನಿಂದ ಬೇರೆಯಾಗು ಎನ್ನುವ ಅರ್ಥ ಬರುತ್ತದೆ.
ಅಹೋರಾತ್ರ
ಚೆಲುವಗಲು = good bye ಮಾಡೋಣ.
ನನಗೆ ಇಂದು ಜಾಸ್ತಿ ಕೆಲಸವಿದೆ
ಚೆಲ್ವಗಲು = good day/morning ಆಗಲಿ
ಚೆಲುವಗಲು/ಸವಿಯಗಲು/ಸವಿಯಗಲಿಕೆ/ಒಲವಗಲಿಕೆ = good bye/tata ಆಗಲಿ
ಸವಿಯೊದಗೆ:
ಸರಿ. ಸವಿಯೊದುಗುಗಳು ಎನ್ನಿ.
ಸವಿನೆರವು = ಸವಿಯಾದ ನೆರವು ... ಇದು ಆಗಬಹುದೇನೋ..
ಅವಸರದಲ್ಲಿದ್ದೇನೆ ಇಂದು.
ಸವಿಯೊದಗೆ,
ಮಹೇಶ
ಕೆಂ, ಮುಂ, ಹಿಂ, ಹೆರ್ .. ಇವನ್ನು ಕನ್ನಡ ಉಪಸರ್ಗಗಳೆನ್ನಬಹುದೆ?
ಸುನಿಲರೆ,
ನಾನು ನಿಮ್ಮ ಟಿಪ್ಪಣಿಯ ಮೇಲೆ ಯೋಜಿಸುತ್ತಾ, ಸಂಸ್ಕೃತ ಸಂಧಿಗಳ ಕುರಿತು ಕೆಲವು ಉದಾಹರಣೆಗಳನ್ನು ನೆನಪಿಸಿಕೊಳ್ಳಿತ್ತಿರುವಾಗ "ಸೂರ" ಎಂಬ ಪದ ಹೊಳೆಯಿತು.
ಸೂರ = ಸು + ಉರ ( ಒಳ್ಳೆಯ ಎದೆ, ಹೃದಯವುಳ್ಳವನು) (ಸೂರ್ಯ).
ಇಲ್ಲಿ ನೋಡಿ, "ಸು" ಇದು ಉಪಸರ್ಗ, ಇದಕ್ಕೆ ಸ್ವತಂತ್ರ ಬಳಕೆಯಿಲ್ಲ. ಅಂದರೆ ನಾವೆಂದು ಬರಿ "ಸು" ವೆಂದು ಬಳಸೆವು. ಬದಲಿಗೆ, "ಸಾಧು" "ಸುಂದರ" ಎಂದು ಬಳಸುವೆವು.
ಅಂದರೆ ಉಪಸರ್ಗ+ಪದ ವಾದಾಗಲೂ ಸಂಧಿಯಾಗುವುದು.
ಉದ:
ಸತ್ + ಭಾವ = ಸದ್ಭಾವ
ಸಂ + ಮತಿ = ಸಮ್ಮತಿ
ವಿ + ಆಪ್ತಿ = ವ್ಯಾಪ್ತಿ
ವಿ + ಅಕುಲ = ವ್ಯಾಕುಲ
ಹೀಗೆಯೆ...
ಕೆಂ, ಮುಂ, ಹಿಂ, ಹೆರ್, ಮುಂತಾದವು ಕನ್ನಡ ಉಪಸರ್ಗಗಳೆನ್ನಬಹುದೆ?
ನಮ್ಮಕೆಡೆ "ಕೆಂದೆಳ್ಳೀರು" ಎಂದು ಕೆಂಪು ಎಳನೀರಿಗೆ ಹೇಳುವರು.
ಇದು ಹೇಗೆ ಬಂತು ಅಂತ ಮಾತ್ರ ಗೊತ್ತಾಗುತ್ತಿಲ್ಲ.!
ಚೆಲ್ವಗಲು,
ಮಹೇಶ
ಸಮಾಸದ ರೂಪ
ಚೆಲ್ವಗಲು ಹಾಗು ನಲ್ವಗಲಿಗೆ ಸಂಧಿಯ ರೂಪದ ಬದಲು ಸಮಾಸದ ರೂಪ ಕೊಟ್ಟರೆ ಚೆನ್ನ ಎನಿಸುತ್ತಿದೆ ನನಗೆ.
ಚೆಲುವಾದ ಹಗಲು - ಚೆಲ್ವಗಲು
'ಹ'ಕಾರ 'ವ'ಕಾರ ವಾಗುವುದು.
ನಲ್ವಗಲು - ನಲಿವಿನಿಂದ ಕೂಡಿರುವ ಹಗಲು
'ಹ'ಕಾರ 'ವ'ಕಾರ ವಾಗುವುದು.
ಹಾಗಾಗಿ, ನಲ್ವಗಲು ಎಂದು ಹಾರೈಸಿದರೆ, ನಿಮ್ಮ "ಹಗಲು ಪೂರ್ತಿ ನಲಿವಿನಿಂದ ಕೂಡಿರಲಿ" ಎಂದು ಹಾರೈಸಿದಂತೆ.
ನಾನಂತೂ ಈ ನಡುವೆ ಈ ಪದವನ್ನು ಹೆಚ್ಚು ಬಳಸುತ್ತಿರುವೆನು, ಕೇಳಿದವರು ಏನದು ಏನದು ಅಂತ ಕೇಳುತ್ತಾರೆ, ಆಗ ನನಗೆ ಅವರೊಡನೆ ಹರಟಲು ಬಹಳಷ್ಟು ವಿಷಯಗಳು ಸಿಗುತ್ತವೆ.
ಮಿಶ್ರಿಕೋಟಿಗಳಿಗೆ ಸಿಹಿಿಯೊದಗೆಗಳು.
ಚೆಲ್ವಗಲು ಬೇರೆ ಚೆಲುವಗಲು ಬೇರೆ.
ಆದರೂ ಇದರ ಬಗ್ಗೆ ಸ್ವಲ್ಪ ಉತ್ಖನನ ಬೇಕಾಗಿದೆ ಸುನಿಲರೆ.
ಅಹೋರಾತ್ರ
ಚೆಲ್ವಗಲು
ಚೆಲ್ವಗಲು = ಚೆಲುವಗಲು. ಆಗದಿರ ಬಹುದು.!
ಚೆಲುವು + ಅಗಲು = ಚೆಲುವಗಲು ಆಗಬಹುದು.
ಚೆಲ್ವಗಲು,
ಮಹೇಶ
ಧನ್ಯವಾದ ಮಹೆಶರೆ
ಈಗ ಹೇಳಿ ಶುಭೋದಯಕ್ಕೆ ಚಲ್ವಗಲು, ನಲ್ವಗಲು ಎಂದಿರಿ, ಶುಭ್ಹ ಸಂಜೆ ಮತ್ತು ಶುಭರಾತ್ರಿಗೆ ಏನಂತೀರಿ?
ಹಾಗೆಯೆ 'ಒದಗು'ವಿನ ಬಹುವಚನ ಒದಗೆಗಳು ಅಲ್ಲ. ನೀವು ಸವಿಯೋದಗೆಗಳು ಅಂತೀರಿ ಸ್ವಲ್ಪ ಯೋಚಿಸಿ, ತಪ್ಪಿದ್ದರೆ ಮನ್ನಿಸಿ.
ಅಹೋರಾತ್ರ
ಶುಭ್ಹ ಸಂಜೆ ಮುಂತಾದವು
ನಲ್ವಗಲು ಚೆಲ್ವಗಲು
ಸೊಗಸ್ಸಂಜೆ
ಸೊಗದಿರುಳು ನಲ್ವಿರುಳು. ಬಹಳ ಸಂತೋಷವಾಗುತ್ತಿದೆ.
ಸಂಧಿ/ಸಮಾಸ
ಸುನಿಲರೆ,
ಅಕ್ಕರಗಳಲ್ಲಿ ವ್ಯತ್ಯಯವಾದರೆ ಸಂಧಿ.(ಹೊಸತಕ್ಕರ ಬರುವುದು, ಕಾಣೆಯಾಗುವುದು, ಬದಲಾವುದು ಮುಂತಾದವು).
ಅರ್ಥವ್ಯತ್ಯಾಸವಾದರೆ ಸಮಾಸ.
ಹಳೆಬಳಕೆ:(ಉದಾಹರಣೆ)
ಬಾಂದಳ = ಬಾನ್ + ತಳ. ಇಲ್ಲಿ "ದ", "ತ" ಬದಲಾಗಿ ಬಂತು. ಇದು ಸಂಧಿ(ಆದೇಶ)
ಬಾನಿನ ತಳ ಎಂದು ವಿಗ್ರಹವಾಕ್ಯ( ಬಿಡಿಸಿದ ವಾಕ್ಯ, ವಿಗ್ರಹ ಅಂದರೆ ಬೇರ್ಪಡಿಸು, ಸಂಧಿ ಅಂದರೆ ಕೂಡಿಸು, ಒಗ್ಗೂಡಿಸು) ಮಾಡಬಹುದು
ಬಾನು = ಆಗಸ
ತಳ = ಕೆಳಭಾಗ.
"ಬಾಂದಳ" ಎಂದು ಒಂದು ಹೊಸತರ್ಥವನ್ನು ನೀಡುವುದು. ಇದು ಸಮಾಸ( ಬಹುಶಃ ಕರ್ಮಧಾರಾಯ ಸಮಾಸ , ನೆನೆಪಿಲ್ಲ).
ಸವಿಯೊದಗೆ,
ಮಹೇಶ
ಸಂಸ್ಕೃತ ಸಂಧಿ ಗುಣ ಅಲ್ಲ ಜಸ್ತ್ವ
ಅಂತರ್ಜಾಲದಲ್ಲಿ ಒಂದು ಒಳ್ಳೆ ಪುಟ ಸಿಕ್ತು. ಕನ್ನಡ ಮತ್ತು ಸಂಸ್ಕೃತ ಎರಡು ಭಾಷೆಗಳ ವ್ಯಾಕರಣ ಇಂಗ್ಲಿಷಿನಲ್ಲಿ ವಿವರಿಸಿದೆ.
http://ccat.sas.upenn.edu/plc/salrc/upload/109_Schiffman.pdf
ಇಂಗ್ಲಿಷ್ ಪುಸ್ತಕದ ಕೊಂಡಿ ಕೊಟ್ಟಿದಕ್ಕೆ ಬೆಸರ ಪಡಬೇಡಿ. ಒಂದು ದಿನ ಇಂಗ್ಲಿಷ್ ನವರು ಕೂಡ ಕನ್ನಡ ಪುಟಗಳ ಕೊಂಡಿ ಕೊಡುವಷ್ಡು ಪುಟಗಳನ್ನ ನಾವು ತಯಾರಿಸೋಣ.
ಪ್ರಶಾಂತ.
ಜಸ್ತ್ವ ಮತ್ತು ಆದೇಶ
ನಿಜವಾಗಲು ಬಹಳ ಬಳಕೆಯ ಕೊಂಡಿಯದು.
ಸವಿಯೊದಗೆಗಳು(ಧನ್ಯವಾದ) ನಾನು ಗೊಂದಲಕ್ಕೀಡಾಗಿದ್ದೆನು.
ಅದು ಜಸ್ತ್ವವೆ.
-ಮಹೇಶ
ಸವಿ : ಜಸ್ತ್ವ ಮತ್ತು ಆದೇಶ
ಸವಿಯೊದಗೆಗಳು ಕೋಟ ಅವರಿಗೆ.
ಈ ಚರ್ಚಾ ಕೊಂಡಿಯ ಮೂಲಕ ಈ ಕೆಳಗಿನವುಗಳ ಬಗ್ಗೆ ಕೆಲವು ಸಂಗತಿಗಳನ್ನು ತಿಳಿದುಕೊಂಡೆವು.
೧. ಜಸ್ತ್ವ ಮತ್ತು ಆದೇಶ ಸಂಧಿಗಳ ಬಗ್ಗೆ ಸ್ಪಷ್ಟಣೆ.
೨. ಚೆಲುವು, ಚೆಲ್ವಗಲು, ಚೆಲುವಗಲು ಗಳ ಸ್ಪಷ್ಟಣೆ.
೩. ಸಮಾಸ ಮತ್ತು ಸಂಧಿಗಳು(??)