ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ದೇವರು ನಾಚಿಕೆಪಡಬೇಕಾದ ವಿಷಯ ! ( ಓದಿದ ಕತೆ)

November 25, 2006 - 12:25pm — shreekant.mishrikoti

ತಲೆಬರಹ ನೋಡಿ ಆಸ್ತಿಕರು ಬೇಸರಮಾಡಿಕೊಳ್ಳಬೇಡಿ. ಇದು ನಾನು ಬಹಳ ಹಿಂದೆ ಓದಿದ ಒಂದು ಕತೆ. ಮುಂದೆ ಓದಿ.

ಒಬ್ಬ ಯುವಕ ಮತ್ತು ಶ್ರೀಮಂತನ ಮಗಳು ಪರಸ್ಪರ ಪ್ರೀತಿಸುತ್ತಾರೆ. ಯುವಕ ಮದುವೆಗೆ ಶ್ರೀಮಂತನ ಅನುಮತಿ ಕೇಳುತ್ತಾನೆ. ಮಗಳು ಸುಖವಾಗಿರಬೇಕೆಂದು ಯಾವ ತಂದೆ ಬಯಸುವದಿಲ್ಲ? ಯುವಕನನ್ನು 'ಏನು ಮಾಡ್ತಿದ್ದೀಯ' ಎಂದು ಕೇಳುತ್ತಾನೆ. ಯುವಕ ' ನಾನು ಲೇಖಕ , ಬರೆಯುತ್ತೇನೆ' ಎಂದರೆ ' ಅದು ಸರಿ ; ಗಳಿಕೆ ಹೇಗೆ?' ಎಂದು ಕೇಳಿ ತಿಳಿದು, 'ಸಾಕಷ್ಟಿಲ್ಲ; ತನ್ನ ಮಗಳನ್ನು ಹೇಗೆ ಅವನು ಸಾಕಿಯಾನು?' ಎಂದು ಒಪ್ಪಿಗೆ ನ್ರಾಕರಿಸುತ್ತನೆ. ಕೊನೆಗೆ ಮಗಳ ಹಟಕ್ಕೆ ತಲೆಬಾಗಿ , ಮದುವೆ ಮಾಡಿ ಕೊಡುತ್ತಾನೆ.

ಸರಿ , ಸಂಸಾರ ಶುರುವಾಗುತ್ತದೆ. ಶ್ರೀಮಂತ ಮನೆತನದಿಂದ ಬಂದೂ ತನ್ನನ್ನು ವರಿಸಿದವಳಲ್ಲವೆ? ಅವಳು ಸುಖವಾಗಿರಲಿ ಎಂದು ಯುವಕ ಒಳ್ಳೆಯ ಮನೆಯನ್ನು ಬಾಡಿಗೆ ಹಿಡಿಯುತ್ತಾನೆ. ಆಳುಕಾಳು ಇಡುತ್ತಾನೆ. ಇದಕ್ಕೆಲ್ಲ ಹಣ ಬೇಕಲ್ಲ. ಅವನ ಆದಾಯ ಇದಕ್ಕೆಲ್ಲ ಸಾಲದು. ಹೊರಗೆ ಸಾಲ ಮಾಡುತ್ತಾನೆ. ಮಕ್ಕಳೂ ಆಗುತ್ತವೆ. ಸಾಲವನ್ನು ತೀರಿಸಲು ಹೆಚ್ಚಿನ ಸಾಲ ... ಹೀಗೆ ಕೊನೆಗೆ ಸಾಲದ ಬಲೆಯಲ್ಲಿ ಸಿಕ್ಕು ಬೀಳುತ್ತಾನೆ. ಸಾಲಗಾರರ ಕಾಟ ಅತಿಯಾಗಿ , ಪೀಡಿಸಲಾರಂಭಿಸುತ್ತಾರೆ. ಕೊನೆಗೆ ಹೆಂದತಿ ತನ್ನ ಮಕ್ಕಳನ್ನು ಕಟ್ಟಿಕೊಂಡು ತಂದೆಯ ಮನೆಬಾಗಿಲಿಗೆ ಬರಬೇಕಾಗುತ್ತಾನೆ. ಮಗಳ ಮೇಲಿನ ಅಂತ:ಕರಣದಿಂದಾಗಿ ಅವರನ್ನು ಮನೆಯೊಳಕ್ಕೆ ಸೇರಿಸಿಕೊಳ್ಳುತ್ತಾನೆ. ಅಳಿಯನನ್ನು ಸೇರಿಸಿಕೊಳ್ಳಲು ಒಪ್ಪುವದಿಲ್ಲ . ಅವನನ್ನು ತನ್ನ ಹೆಂಡತಿ ಮಕ್ಕಳನ್ನು ಭೇಟಿಯಾಗಲೂ ಅವಕಾಶ ನಿರಾಕರಿಸುತ್ತಾನೆ. 'ಎಲ್ಲ ಸಾಲ ತೀರಿಸಿ ನಿನ್ನ ಕಾಲ ಮೇಲೆ ನಿಲ್ಲುವಂತಾಗಿ , ಹೆಂಡತಿ ಮಕ್ಕಳನ್ನು ಸಾಕುವ ಶಕ್ತಿ ಬರುವವರೆಗೆ ಭೇಟಿಯೂ ಆಗಬೇಡ' ಎನ್ನುತ್ತಾನೆ . (ಮಾವನಿಗೆ ಅಳಿಯನಾದವನು ಹೆಂಡತಿ ಮತ್ತು ಮಕ್ಕಳನ್ನು ತನ್ನ ಹತ್ತಿರ ಬಿಟ್ಟು ಹೋಗುವಾಗ ಏನನ್ನಿಸುತ್ತದೆ ,ಗೊತ್ತೆ? - ತನ್ನ ಮಗಳನ್ನು ಕರೆದುಕೊಂಡು ಹೋಗಿ ಕೆಡಿಸಿ ತಂದು ಬಿಟ್ಟ ಹಾಗೆ ಅನಿಸುತ್ತದೆ) ಅಂಥ ಹೊತ್ತು ಬರಲು ೧೦-೧೫ ವರ್ಷಗಳೇ ಬೇಕಾಗುತ್ತದೆ. ಅಷ್ಟು ಹೊತ್ತಿಗೆ ಅವನು ಹಣ್ಣಾಗಿರುತ್ತಾನೆ. ಹೆಂಡತಿಗೂ ವಯಸ್ಸಾಗಿರುತ್ತದೆ. ಮಕ್ಕಳು ದೊಡ್ಡವರಾಗಿರುತ್ತಾರೆ.

ಈ ಸಹಜ ವಾಸ್ತವಿಕ ವಿಷಾದಮಯ ಕತೆ ಹೇಳುವ ಕತೆಗಾರ - (ಸಿಂಗರ್ ಅಥವಾ ಓ ಹೆನ್ರಿ - ಸರಿಯಾಗಿ ನೆನಪಿಲ್ಲ) - 'ದೇವರು ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಒಂದಿಷ್ಟು ಅಕ್ಕಿ ಮತ್ತು ಗೋಡಂಬಿ ಒದಗಿಸದಿರುವದು ನಾಚಿಕೆಗೇಡಿನ ವಿಷಯ' ಎಂದು ಮರುಕ ಪಡುತ್ತಾನೆ.

ಬಹುಶಃ ಅಕ್ಕಿ ಎಂದರೆ ಒಂದಿಷ್ಟು ಅಗತ್ಯ ವಸ್ತು . ಗೋಡಂಬಿ ಎಂದರೆ ಒಂದಿಷ್ಟು ಸುಖ. Bread and Butter ; Man does not live by bread alone . ಎನ್ನುವ ಹಾಗೆ.

ವರಕವಿ ಬೇಂದ್ರೆ ತಮ್ಮ ಜೀವನವನ್ನೆಲ್ಲ ಕಡು ಬಡತನದಲ್ಲಿ ಕಳೆದರು. ಆದರೂ ಒಂದು ಕಡೆ ಹೇಳುತ್ತಾರೆ- ಎಲ್ಲ ಕಾಲಕ್ಕೂ ದಾರಿದ್ರ್ಯ ಮನೆ ಬಾಗಿಲಲ್ಲಿ ನಿಂತು ಒಳಗೆ ಬರುತ್ತೇನೆ ಎಮ್ದು ಹೆದರಿಸುತ್ತಿತ್ತು. ಆದರೆ , ದೇವರ ದಯ, ನನಗೆ ಯಾವತ್ತು ರೊಟ್ಟಿ ಜತೆಗೆ ಸಕ್ಕರಿ , ತುಪ್ಪ ತಪ್ಪಲಿಲ್ಲ ' ಎಂದು ಸಂತೋಷ ಪಡುತ್ತಾರೆ. ( ಎಷ್ಟೆಂದರೂ ಕವಿ ಮನಸ್ಸಿಗೆ ಸಂತೋಷಕ್ಕೆ ಬೇರೇನು ಬೇಕು? ಹೂತ- (ಹೂ ಬಿಟ್ಟ ) ಹುಣಸಿಮರ ಸಾಕು ಎಂದವರಲ್ಲವೆ?)

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 687 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅವನು ಅಪ್ಪಟ ಬಂಗಾರ ನಿಜ ; ಅದರೆ ಆಭರಣಕ್ಕೆ ಬಾರದೇ ? (ಸತ್ಯಕಾಮ ಕತೆ - ಭಾಗ - ೪)
  • ಕಾಮಿಡಿಯೋ ಟ್ರ್ಯಾಜಿಡಿಯೋ- ಬೇಂದ್ರೆ ಅವರ ನಾಟಕ 'ಜಾತ್ರೆ'
  • ಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನಾರು
  • ಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನಾರು
  • ವಾಪಸ್ ಕೊಡಬೇಕಿಲ್ಲದ ಸಾಲದ ಯೋಜನೆ-ರಿವರ್ಸ್ ಮಾರ್ಟ್‍ಗೇಜ್ ಲೋನ್
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
  • uniquesupri
    ಉ: ಇದು ಬರಿ ಬೆಳಗಲ್ಲೋ...
    July 24, 2008 - 11:37pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:12pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 11:06pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 10:56pm
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:26pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 24, 2008 - 10:19pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator