ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಪುಸ್ತಕ ನಿಧಿ - ಮಾಸ್ತಿ ವೆಂಕಟೇಶ ಅಯ್ಯಂಗಾರರ ಅದ್ಭುತ ಕತೆಗಳು
ಈ ಪುಸ್ತಕದಲ್ಲಿ ನೀವು ಸ್ವಲ್ಪ ಮೋಸ ಹೋಗುವ ಸಾಧ್ಯತೆಗಳಿವೆ . ಇದು ನಿಜಕ್ಕೂ ಅನೇಕ ಕಥಾಸಂಕಲನಗಳ ಸಂಕಲನ . ಒಂದು ಪುಸ್ತಕ ಮುಗಿಯಿತು ಎಂದು ತಿಳಿಯಬಹುದು . ನಂತರ ಒಂದೆರಡು ಖಾಲಿ ಪುಟಗಳ ನಂತರ ಇನ್ನೊಂದು ಶುರುವಾಗುತ್ತದೆ ಆಯಾ ಭಾಗದ ಪರಿವಿಡಿಗಳೂ ಬೇರೆ. ಒಟ್ಟು ೫೬೭ ಪುಟಗಳ ಪುಸ್ತಕ ಎಂಬುದನ್ನು ಮರೆಯಬೇಡಿ.
ಮಾಸ್ತಿಯವರ ಬರವಣಿಗೆಯೇ ಸುಖಕರ . ಏನು ತಿಳಿವಳಿಕೆ , ಏನು ವಿಶಾಲಹೃದಯ , ಏನು ಕರುಣೆ? . ನಾನು ಎಂದೂ ಮರೆಯದ ಅನೇಕ ಕತೆಗಳು ಇಲ್ಲಿವೆ . ಪರಿವಿಡಿಗಳು ೧೨ , ೧೮೦ , ೨೬೪ , ೩೨೭ , ೪೨೬ ಪುಟಗಳಲ್ಲಿವೆ ಎಂಬುದನ್ನು ಮರೆಯದಿರಿ.
ನನ್ನ ಮೆಚ್ಚಿನ ಕತೆಗಳು ಇವು .
೧. ರಂಗಸ್ವಾಮಿಯ ಅವಿವೇಕ
೨. ಬಾದಷಹನ ದಂಡನೆ
೩. ಮಸುಮತ್ತಿ
೪. ಸಾರಿಪುತ್ರನ ಕಡೆಯ ದಿನಗಳು
೫. ಜೋಗ್ಯೊರ ಅಂಜಪ್ಪನ ಕೋಳಿ ಕತೆ
೬. ಮಲೆನಾಡಿನ ಒಂದು ಪಿಶಾಚ - ನಿಮ್ಮ ಗುಂಡಿಗೆ ಗಟ್ಟಿ ಇದ್ದರೆ ಓದಿ
೭ ಹೇಮಕೂಟದಿಂದ ಬಂದ ಮೇಲೆ
ಎಲ್ಲ ಕತೆಗಳನ್ನು ಓದಿದರೆ ಒಳ್ಳೇದು . ಆದರೆ ಇವನ್ನು ಮಾತ್ರ ಓದಲೇಬೇಕು ಎಂದು ನನ್ನ ಶಿಫಾರ್ಸು! ಈ ಪುಸ್ತಕ ಇಲ್ಲಿದೆ.

- shreekant.mishrikoti ರವರ ಬ್ಲಾಗ್
- Login or register to post comments
- 535 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಪುಸ್ತಕ ನಿಧಿ - ಮಾಸ್ತಿ ವೆಂಕಟೇಶ ಅಯ್ಯಂಗಾರರ ಅದ್ಭುತ ಕತೆಗಳು
ಹೌದು, ಈ ಎಲ್ಲ ಕಥೆಗಳೂ ಖಂಡಿತ ಓದಬೇಕಾದವೇ. ಮಾಸ್ತಿ ನನಗೆ ಇಷ್ಟವಾಗುವುದು ಅವರ ದೂರದಿಂದ ನಿಂತು ನೋಡಿ ಹೇಳುವಂತಹ, ಸಂತೋಷವಾಗಲೀ ಕಷ್ಟವಾಗಲೀ ಯಾವುದನ್ನೂ ವೈಭವೀಕರಿಸದೆ ಹೇಳುವ ಗುಣ. ಯಾವ ಪಾತ್ರವನ್ನೂ ಅವರು ಅಳೆದು-ಸುರಿದು ಇವರು ತಪ್ಪು ಇವರು ಸರಿ ಎಂಬ ಮಾತೇ ಇಲ್ಲದಂತೆ, ಚಿತ್ರಿಸುತ್ತಾರೆ. ಅವರ ಕಾದಂಬರಿಗಳು ಎರಡೂ (ಚೆನ್ನಬಸವನಾಯಕ, ಚಿಕವೀರರಾಜೇಂದ್ರ) ಇದಕ್ಕೆ ದೃಷ್ಟಾಂತ.
ಇವುಗಳ ಜೊತೆಗೆ ನನಗೆ ನೆನಪಾದ ಇನ್ನೊಂದೆರಡು ಉತ್ತಮ ಕಥೆಗಳು - ರಂಗನಹಳ್ಳಿ ರಾಮ, ಪಂಡಿತನ ಮರಣಶಾಸನ ( ಹೆಸರು ತಪ್ಪಿರಬಹುದು, ಮೈಸೂರು ರಾಜರ ಕಾಲದ ಕಥೆ), ಪೆನುಕೊಂಡೆಯ ಕೃಷ್ಣಮೂರ್ತಿ, ಚೆಟ್ಟೆಕಾರನ ಹೆಂಡತಿ ಮೊದಲಾದವು.
ಇಡೀ ಪುಸ್ತಕವನ್ನು ಓದಿ ಎನ್ನುವುದು ನನ್ನ ಶಿಫಾರಸು.
-ಹಂಸಾನಂದಿ