ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಮೊಘಲ್ ರಾಜಕುಮಾರನ ಕನಸಿನಲ್ಲಿ ಶ್ರೀ ರಾಮಚಂದ್ರ!

March 28, 2006 - 11:43am — shreekant.mishrikoti

'ಕಸ್ತೂರಿ' ಮಾಸಪತ್ರಿಕೆಯ ಎಪ್ರಿಲ್ ೨೦೦೬ರ ಸಂಚಿಕೆ ಯುಗಾದಿ ವಿಶೇಷಾಂಕವಾಗಿ ೩೨೦ ಪುಟ (ಬೆಲೆ ೧೨ ರೂ) ಹೊಂದಿ ಬಂದಿದೆ.

ಶ್ರೀ ರಾಮಚಂದ್ರನಿಗೆ ಚಿಕ್ಕವನಿದ್ದಾಗ ತೀರ್ಥಯಾತ್ರೆ ಹೋದಾಗ ವೈರಾಗ್ಯ ಉಂಟಾಗುತ್ತದೆ . ಆಗ ವಸಿಷ್ಠ ಮುನಿಗಳು ಅವನಿಗೆ ಮಾಡಿದ ಉಪದೇಶವೇ ಯೋಗವಾಸಿಷ್ಠ. ಇದಕ್ಕೆ ವಾಸಿಷ್ಠ ರಾಮಾಯಣ ಎಂಬ ಇನ್ನೊಂದು ಹೆಸರೂ ಇದೆ. ಈ ಬಗ್ಗೆ ಒಂದು ಲೇಖನ ಇದೆ. ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿದವರು ಇದನ್ನು ನೋಡಬಹುದು. ಮೊಘಲ್ ರಾಜಕುಮಾರ ಅನೇಕ ಉಪನಿಷತ್ತುಗಳ ಜತೆ ಇದನ್ನೂ ಪರ್ಶಿಯನ್ ಭಾಷೆಗೆ ಅನುವಾದಿಸಿದ್ದಾನಂತೆ. ಅವನ ಕನಸಿನಲ್ಲಿ ಶ್ರೀ ರಾಮಚಂದ್ರನೂ ಬಂದಿದ್ದನಂತೆ.

ಚಿದಾನಂದ ಸಾಲಿಯವರ ಗಜ಼ಲ್‍ಗಳು ಈ ಇಲ್ಲಿಯೂ ಏಪ್ರಿಲ್ ತಿಂಗಳ ಮಯೂರದಲ್ಲಿಯೂ ಬಂದಿವೆ ಕವಿ ಕಡೆಯಲ್ಲಿ ತನ್ನನ್ನೇ ಉದ್ದೇಶಿಸಿ ಹೇಳುವ ಸಾಲುಗಳು ಇಲ್ಲಿಯೂ ಇವೆ. ರೋಮ್ಯಾಂಟಿಕ್ ಆಗಿ ಇವೆ.

ಜಿ.ಟಿ.ನಾರಾಯಣರಾವ್ ಅವರ ಒಂದು ವೈಜ್ಞಾನಿಕ ಲೇಖನದಲ್ಲಿ ಒಬ್ಬ ವಿಜ್ಞಾನಿ W, O, B, A, F, G, K, M, R, N, S ಈ ಅಕ್ಷರಗಳನ್ನು ಅದೇ ಕ್ರಮದಲ್ಲಿ ನೆನಪಿಟ್ಟುಕೊಳ್ಳಬೇಕಿತ್ತಂತೆ. ಅವನು ಆ ಅಕ್ಷರಗಳಿಂದ ಪ್ರಾರಂಭವಾಗುವ ಶಬ್ದಗಳ ವಾಕ್ಯವೊಂದನ್ನು ರಚಿಸಿದನಂತೆ. ನಾರಾಯಣರಾವ್ ಅವರು 'ಚೆಲುಗನ್ನಡ'ದಲಿ ಒಂದು ಸೂತ್ರವಾಕ್ಯವನ್ನು ಹೆಣೆದರು . ಓ ನನ್ನ ಬಾಳ ಬೆಳಕೇ ಆಗಮಿಸು ಫೇನಮಯ (?) ಗೋರಸ(ಹಾಲು?)ವ ಕೊಡು ನನಗೆ ಮೃದುಭಾಷಿ ರಸಿಕಮಣಿ ನಗುನಗುತ ಸಾರೆಲೇ! ನಾನೂ ಈ ರೀತಿ ಪ್ರಯತ್ನಿಸಿ ಸೋತೆ. ನೀವು? ಬಹುಶ: ಶ್ರೀವತ್ಸ ಜೋಷಿಯವರು ಯಶಸ್ವಿಯಾಗುವರು!

ಡಾ. ರಂ. ಶ್ರೀ . ಮುಗಳಿಯವರು ಮರಾಠಿಗರ ಮಧ್ಯೆ ಹೇಗೆ ಕನ್ನಡ ಭಾಷೆಯನ್ನುಳಿಸಿಕೊಂಡೇ ಮರಾಠಿಗೆ , ಮರಾಠೀ ಜನರಿಗೆ ಒಗ್ಗಿಕೊಂಡು ಬಾಳಿದರೆಂಬ ಬಗ್ಗೆ ಒಂದು ಲೇಖನ , ಸೂರ್ಯನಾಥ ಕಾಮತರ ಒಂದು ಲೇಖನ 'ಗಣ್ಯ ಸಾಂಸ್ಕೃತಿಕ ಕೇಂದ್ರವಾಗಿ ಧಾರವಾಡ ಬೆಳೆದ ಪರಿ' ಇವೆ- ಕರ್ನಾಟಕದ ಎರಡು ಸಾಂಸ್ಕೃತಿಕ ಕೇಂದ್ರಗಳಲ್ಲಿ ಮೈಸೂರು ರಾಜಾಶ್ರಯದಲ್ಲಿ ಬೆಳೆದರೆ , ಧಾರವಾಡ ಕೇವಲ ಜನಾಶ್ರಯದಿಂದಲೇ ಬೆಳೆಯಿತು. ಪತ್ರ ಸಂಸ್ಕೃತಿ ಬಗ್ಗೆ ಒಂದು ಲೇಖನ ಇದೆ. ಅಂಚೆ ವ್ಯವಸ್ಥೆ ಬರುವ ಮೊದಲು ಜನ ಸಂದೇಶವನ್ನು ಜನರ ಮೂಲಕವಾಗಿಯೆ ಕಳಿಸಬೇಕಾಗುತ್ತಿತ್ತು. ಅಂಚೆ ವ್ಯವಸ್ಥೆ ಬಂದಾಗ ಒಂದು ವಿಳಾಸ ಬರೆದು ಪತ್ರವನ್ನು ಒಂದು ಕೆಂಪು ಡಬ್ಬಿಯಲ್ಲಿ ಹಾಕಿದರೆ ಅದು ವಿಳಾಸದಾರರಿಗೆ ಮುಟ್ಟುವದು ಅಂದಿನ ಜನರಿಗೆ ಬಹಳ ಅದ್ಭುತವೆನಿಸುತ್ತಿತ್ತಂತೆ. ಫೋನು / ಮೊಬೈಲು ಬಂದ ಮೇಲೆ ಪತ್ರ ಸಂಸ್ಕೃತಿ ನಶಿಸುವದು ಸಹಜ ಅಲ್ಲವೇ? .

ಒಂದು ಹೊಸಮಾತನ್ನು ನೋಡಿದೆ- ಅಕ್ಕಿ ನಿನ್ನದು , ಅನ್ನ ನಿನ್ನದೇ?

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 721 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 29, 2006 - 12:35am — srivathsajoshi

Re: ಮೊಘಲ್ ರಾಜಕುಮಾರನ ಕನಸಿನಲ್ಲಿ ಶ್ರೀ ರಾಮಚಂದ್ರ!

srivathsajoshi's picture

shreekant.mishrikoti wrote:
ಜಿ.ಟಿ.ನಾರಾಯಣರಾವ್ ಅವರ ಒಂದು ವೈಜ್ಞಾನಿಕ ಲೇಖನದಲ್ಲಿ ಒಬ್ಬ ವಿಜ್ಞಾನಿ W, O, B, A, F, G, K, M, R, N, S ಈ ಅಕ್ಷರಗಳನ್ನು ಅದೇ ಕ್ರಮದಲ್ಲಿ ನೆನಪಿಟ್ಟುಕೊಳ್ಳಬೇಕಿತ್ತಂತೆ. ಅವನು ಆ ಅಕ್ಷರಗಳಿಂದ ಪ್ರಾರಂಭವಾಗುವ ಶಬ್ದಗಳ ವಾಕ್ಯವೊಂದನ್ನು ರಚಿಸಿದನಂತೆ. ನಾರಾಯಣರಾವ್ ಅವರು 'ಚೆಲುಗನ್ನಡ'ದಲಿ ಒಂದು ಸೂತ್ರವಾಕ್ಯವನ್ನು ಹೆಣೆದರು ... ನಾನೂ ಈ ರೀತಿ ಪ್ರಯತ್ನಿಸಿ ಸೋತೆ. ನೀವು? ಬಹುಶ: ಶ್ರೀವತ್ಸ ಜೋಷಿಯವರು ಯಶಸ್ವಿಯಾಗುವರು!

"ವಾರಕ್ಕೆ ಒಮ್ಮೆ ಬರುವ ಅಣ್ಣನಿಗೆ ಫರಂಗಿ ಗಿಡದಲ್ಲಿ ಕಾಯಿ ಮಾಗಿ ರಸಾಳವಾಗಿರಬಹುದೆಂಬ ನಿರೀಕ್ಷೆಯ ಸಡಗರ!"

( ಹಾಸ್ಟೆಲ್‍ನಲ್ಲಿರುವ ಅಣ್ಣ ವಾರಕ್ಕೊಮ್ಮೆ ಮನೆಗೆ ಬರುವ ಸಡಗರ ತಂಗಿಗೆ. ಅವರಿಬ್ಬರೂ ನೆಟ್ಟು ಬೆಳೆಸಿದ್ದ ಅನಾನಸು (= ಫರಂಗಿ) ಗಿಡದಲ್ಲಿ ಬಿಟ್ಟಿದ್ದ ಕಾಯಿ ಯಾವಾಗ ಹಣ್ಣಾಗುತ್ತದೆಯೆಂಬ ಕುತೂಹಲ. ಅದನ್ನವಳು ವರ್ಣಿಸುವ ರೀತಿ).

- ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 29, 2006 - 9:22am — ಶ್ರೀನಿಧಿ

Re: ಮೊಘಲ್ ರಾಜಕುಮಾರನ ಕನಸಿನಲ್ಲಿ ಶ್ರೀ ರಾಮಚಂದ್ರ!

ಶ್ರೀನಿಧಿ's picture

srivathsajoshi wrote:

"ವಾರಕ್ಕೆ ಒಮ್ಮೆ ಬರುವ ಅಣ್ಣನಿಗೆ ಫರಂಗಿ ಗಿಡದಲ್ಲಿ ಕಾಯಿ ಮಾಗಿ ರಸಾಳವಾಗಿರಬಹುದೆಂಬ ನಿರೀಕ್ಷೆಯ ಸಡಗರ!"

( ಹಾಸ್ಟೆಲ್‍ನಲ್ಲಿರುವ ಅಣ್ಣ ವಾರಕ್ಕೊಮ್ಮೆ ಮನೆಗೆ ಬರುವ ಸಡಗರ ತಂಗಿಗೆ. ಅವರಿಬ್ಬರೂ ನೆಟ್ಟು ಬೆಳೆಸಿದ್ದ ಅನಾನಸು (= ಫರಂಗಿ) ಗಿಡದಲ್ಲಿ ಬಿಟ್ಟಿದ್ದ ಕಾಯಿ ಯಾವಾಗ ಹಣ್ಣಾಗುತ್ತದೆಯೆಂಬ ಕುತೂಹಲ. ಅದನ್ನವಳು ವರ್ಣಿಸುವ ರೀತಿ).

- ಶ್ರೀವತ್ಸ ಜೋಶಿ


ಶ್ರೀವತ್ಸರೆ, ನಿಮ್ಮ ಕಲ್ಪನೆ ಸಕ್ಕತ್ತಾಗಿದೆ. ಫರಂಗಿ ಹಣ್ಣೆಂದರೆ ಪಪ್ಪಾಯಿ ಮಾತ್ರ ಎಂದುಕೊಂಡಿದ್ದೆ. ನಿಮ್ಮ ಕಲ್ಪನಾಲಹರಿಯಿಂದ ನನಗೆ ಮನೆಯ ತಿಂಡಿಗಳು ನೆನಪಿಗೆ ಬಂದವು. ಯಾಕೋ ಗೊತ್ತಿಲ್ಲ.

ನನಗೆ ಸ್ವಲ್ಪ ತಿಂಡಿ ಪದಾರ್ಥಗಳ ಮೇಲೆ ಆಸೆ ಹೆಚ್ಚು. (ಅಭಾವದಲ್ಲಿ ಆಸೆ ಹೆಚ್ಚಾಗುವುದಂತೆ). ಅದಕ್ಕೆ ಹೀಗೆ ಅನ್ನಿಸಿತು.
W, O, B, A, F, G, K, M, R, N, S

"ವಡೆ-ಒಬ್ಬಟ್ಟು-ಬೋಂಡಂಗಳ ಅಭಾವದಿಂ ಫಣಿಯು ಗಂಟಲುಬ್ಬಿದಂತೆಲ್ಲಾ ಕೋಡುಬಳೆಯಂ ಮುರಿಮುರಿದುದು ರಸವಂ ನಾಸಿಕಾಘ್ರದಿ ಸವಿಯಿತಿಹನು "

ಗೆಳೆಯ ಫಣಿಯು ಮನೆಯಿಂದ ದೂರ, ಪರದೇಶಕ್ಕೆ ಬಂದು ಮನೆಯ ತಿಂಡಿಗಳನ್ನೆಲ್ಲಾ ನೆನೆಪಿಸಿಕೊಳ್ಳುತ್ತಾ ಗಂಟಲುಬ್ಬಿಬಂದಾಗ ಮನೆಯಿಂದ ತಂದ ಕೋಡುಬಳೆಯನ್ನು ತಿನ್ನದೆಯೇ ಮೂಗಿನಿಂದ ಆಘ್ರಾಣಿಸುತಿದ್ದಾನೆ.

೧.ಗೆಳೆಯ ಫಣಿ, ನಿನ್ನ ಹೆಸರು ನಿನ್ನನ್ನು ಕೇಳದೆ ಬಳಸಿಕೊಂಡಿದ್ದಕ್ಕೆ ಕ್ಷಮಯಿರಲಿ.
೨.F ಅಕ್ಷರದಿಂದ ಬೇರೆ ಯಾವ ಪದ ನೆನಪಿಗೆ ಬರುತ್ತಿಲ್ಲ. ಕನ್ನಡದ ಫ ಅದಕ್ಕೆ ಅತ್ಯಂತ ಹತ್ತಿರ. ಅದನ್ನು ಬಳಸಿಕೊಳ್ಳಬಹುದು ಎಂದು ಊಹಿಸಿಕೊಂಡಿದ್ದೇನೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 29, 2006 - 8:31pm — srivathsajoshi

Re: ಮೊಘಲ್ ರಾಜಕುಮಾರನ ಕನಸಿನಲ್ಲಿ ಶ್ರೀ ರಾಮಚಂದ್ರ!

srivathsajoshi's picture

ಶ್ರೀನಿಧಿ wrote:
ನನಗೆ ಸ್ವಲ್ಪ ತಿಂಡಿ ಪದಾರ್ಥಗಳ ಮೇಲೆ ಆಸೆ ಹೆಚ್ಚು. (ಅಭಾವದಲ್ಲಿ ಆಸೆ ಹೆಚ್ಚಾಗುವುದಂತೆ). ಅದಕ್ಕೆ ಹೀಗೆ ಅನ್ನಿಸಿತು.
W, O, B, A, F, G, K, M, R, N, S

"ವಡೆ-ಒಬ್ಬಟ್ಟು-ಬೋಂಡಂಗಳ ಅಭಾವದಿಂ ಫಣಿಯು ಗಂಟಲುಬ್ಬಿದಂತೆಲ್ಲಾ ಕೋಡುಬಳೆಯಂ ಮುರಿಮುರಿದುದು ರಸವಂ ನಾಸಿಕಾಘ್ರದಿ ಸವಿಯಿತಿಹನು "

ಗೆಳೆಯ ಫಣಿಯು ಮನೆಯಿಂದ ದೂರ, ಪರದೇಶಕ್ಕೆ ಬಂದು ಮನೆಯ ತಿಂಡಿಗಳನ್ನೆಲ್ಲಾ ನೆನೆಪಿಸಿಕೊಳ್ಳುತ್ತಾ ಗಂಟಲುಬ್ಬಿಬಂದಾಗ ಮನೆಯಿಂದ ತಂದ ಕೋಡುಬಳೆಯನ್ನು ತಿನ್ನದೆಯೇ ಮೂಗಿನಿಂದ ಆಘ್ರಾಣಿಸುತಿದ್ದಾನೆ.

ಬಹಳ ಚೆನ್ನಾಗಿದೆ! ಸರ್ವಂ ತಿಂಡಿಮಯಂ ಮಾಡಿಬಿಟ್ಟು ಒಂದು ಪ್ರಾಸಬದ್ಧ ಕವನವನ್ನೇ ಕಟ್ಟಿದರೆ ಹೇಗೆ!?

ವಡೆ ಒಬ್ಬಟ್ಟು ಬೋಂಡಾ ಅತಿರಸ
ಫೇಣಿ ಗಸಗಸೆಯ ಪಾಯಸ
ಕೋಡುಬಳೆ ಮಾವಿನಹಣ್ಣಿನ ರಸಾಯನ
ನುಚ್ಚಿನುಂಡೆ ಸಪಾದಭಕ್ಷ್ಯ ಭೋಜನ!

- ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 7, 2006 - 3:58pm — shreekant.mishrikoti

ಉ: W, O, B, A, F, G, K, M, R, N, S

shreekant.mishrikoti's picture

ಭಾಪು! ಭಳಿರೆ!!

ಶ್ರೀನಿಧಿ ಮತ್ತು ಶ್ರೀವತ್ಸ ಅವರಿಗೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 7, 2006 - 4:33pm — ಮಹೇಶ ಭೋಗಾದಿ

ಅನಾನಸು

ಮಹೇಶ ಭೋಗಾದಿ's picture

ನನಗೆ ಮತ್ತೆ ಗೊಂದಲ...

ನಾವು ಅನಾನಸ್ ಎಂದರೆ pineapple ಅಂತ ತಿಳಿದಿದ್ದೇವೆ. ಇದು ನೆಲದಲ್ಲಿ ಬೆಳೆಯುವುದು.

papaya ಎಂದರೆ ಪರಂಗಿ ಹಣ್ಣು.

ಆಂಗ್ಲರು ಮಾಗಿದ ಪರಂಗಿಹಣ್ಣಿನಂತೆ ಕಂಪುಕೆಂಪಗೆ ಇರುವ ಕಾರಣದಿಂದ ತಾನೆ, ಅವರನ್ನು ಪರಂಗಿಯವರು ಎಂದು ಕೆರೆದದ್ದು? 

ಈಗ ಮರದಲ್ಲಿ ಬಿಡುವ ಅನಾನಸ್ಸು ಯಾವುದು? 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 30, 2006 - 9:02am — tvsrinivas41

ಒಳ್ಳೆಯ ಪರಿಚಯ

tvsrinivas41's picture

ನಿಮ್ಮ ಲೇಖನ ಓದುತ್ತಿದ್ದರೆ ಈ ಸಲದ ಕಸ್ತೂರಿ ವಿಶೇಷಾಂಕ ಬಹು ಅತ್ಯಮೂಲ್ಯ ಪುಸ್ತಕ ಅನ್ನಿಸುತ್ತಿದೆ. ಒಳ್ಳೆಯ ಪುಸ್ತಕವನ್ನೇ ಪರಿಚಯಿಸುತ್ತಿದ್ದೀರಿ.

ಜೋಶಿಯರನ್ನು ಕೆಣಕಿದಷ್ಟೂ ಸಂಪದಕ್ಕೆ ಒಳ್ಳೆಯದೇ. ವಜ್ರವನ್ನು ಸಾಣೆ ಹಿಡಿದ ಹಾಗೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • '೧೮ ಎಪ್ರಿಲ್ ೨೦೦೬' ರ ನನ್ನ ಓದು
  • ತೀ ನಂ ಶ್ರೀ
  • ಕನ್ನಡಿಗರು ಯಾವಾಗಲೂ ಹಿಂಬಾಲಕರಲ್ಲ
  • ಸಂಪದ ಬಗ್ಗೆ ಸುಧಾದಲ್ಲಿ ನನ್ನ ಲೇಖನ
  • ಜಿ.ಟಿ. ನಾರಾಯಣರಾವ್ -2
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
  • ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
  • ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(
  • ಓದಿದ್ದು ಕೇಳಿದ್ದು ನೋಡಿದ್ದು-8
  • ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
  • anil.ramesh
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 9:37am
  • Sunil Jayaprakash
    ಉ: ಗಣಪನ ಗಂಡಾಂತರಗಳು ಅನೇಕ
    September 5, 2008 - 9:27am
  • Sunil Jayaprakash
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 8:54am
  • Sunil Jayaprakash
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 8:53am
  • savithasr
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 8:00am
  • savithasr
    ಉ: ವಿನಾಯಕನ ಇ-ಮೇಲ್!
    September 5, 2008 - 7:48am
  • skakkilaya
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 7:39am
  • hpn
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 3:11am
  • nekkar_guru
    ಉ: "ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"
    September 5, 2008 - 2:34am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 77 ಅತಿಥಿಗಳು ಆನ್ಲೈನ್ ಇರುವರು.


ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator