Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಕಲ್ಲುಸಕ್ಕರೆ ಸವಿ ಬಲ್ಲವರೇ ಬಲ್ಲರು ?

July 27, 2006 - 7:13pm — shreekant.mishrikoti

ನಮ್ಮ ಓದು ಹೆಚ್ಚಿದಂತೆ , ನಮ್ಮ ತಿಳಿವಳಿಕೆಯೂ , ಅದರಿಂದ ಸಿಗುವ ಸಂತೋಷವೂ ಹೆಚ್ಚುತ್ತದೆ. ಇಲ್ಲದಿದ್ದರೆ ನಮಗೆ ಎಷ್ಟೋ ವಿಷಯಗಳು ತಿಳಿಯದೇ ಹೋಗುವವು.
ಒಂದು ನನ್ನ ಕಾಲೇಜಿನ ದಿನಗಳ ಉದಾಹರಣೆ . ಆಗ ಕಾನೂನು ಕಲಿಯುತ್ತಿದ್ದೆ. ಕಮರ್ಶಿಯಲ್ ಲಾ ದ ಕ್ಲಾಸು ನಡೆಯುತ್ತಿತ್ತು . ಹುಂಡಿ , ಚೆಕ್ಕು ಮುಂತಾದವುಗಳ ಸಂಬಂಧ ಸ್ಯಾನ್ಸ್ ರಿಕೋರ್ಸ್ ಎಂಬ ಪದ ಬಂದಿತು. ಕಾನೂನಿನಲ್ಲಿ ನಿಮಗೆ ಗೊತ್ತಿರುವ ಹಾಗೆ ಲ್ಯಾಟಿನ್ , ಗ್ರೀಕ್ ಶಬ್ದಗಳು ಬಹಳ. ಕಲಿಸುವವರಿಗೆ ಅದೇನು ನೆನಪಾಯಿತೋ ಒಂದು ಗಳಿಗೆ ನಿಂತು 'ಲಾ ಬೆಲ್ಲಾ ಡೇಮ್ ' ಎಂದುಬಿಟ್ಟು ಮೌನವಹಿಸಿ ಸುತ್ತಲೂ ನೋಡಿದರು. ಕ್ಲಾಸಿನಲ್ಲಿ ನಿಶ್ಶಬ್ದ .
ಒಂದು ಗಳಿಗೆ ನನ್ನ ಎದೆಬಡಿತ ಹೆಚ್ಚಿತು . ಏಕೆಂದರೆ ಅದು ಏನೆಂದು ನನಗೆ ಗೊತ್ತಿತ್ತು . ಅವರ ಕಣ್ಣೋಟ ನನ್ನ ದಿಕ್ಕಿನಲ್ಲಿ ಬಂದ ಕ್ಷಣ ' ಸ್ಯಾನ್ಸ್ ಮರ್ಸಿ' ಎಂದು ಬಿಟ್ಟೆ. ಅವರಿಗೆ ಒಂದು ಭಾಗ ( ತಮ್ಮ ಮನಸ್ಸಿನಲ್ಲಿನ ವಿಷಯ ಇನ್ನೊಬ್ಬರಿಗೂ ಗೊತ್ತೆಂಬ) ಸಂತೋಷವೂ , ಒಂದು ಭಾಗ ( ಅಯ್ಯೋ ನನಗಷ್ಟೇ ಅಲ್ಲ , ಬೇರೆ ಯಾರಿಗೋ ಗೊತ್ತು ಎಂಬ) ನಿರಾಶೆಯೂ ಆಯಿತು ಎಂದು ಕಾಣುತ್ತದೆ .
'ಲಾ ಬೆಲ್ಲಾ ಡೇಮ್ ಸ್ಯಾನ್ಸ್ ಮರ್ಸಿ' ಅನ್ನುವದು ಒಂದು ಹಳೇಯ ಇಂಗ್ಲಿಷ್ ಪದ್ಯ . ಮನೆಯಲ್ಲಿ ಇದ್ದ ಹಳೆಯ ' ಗೋಲ್ಡನ್ ಟ್ರೆಶರಿ' ಎಂಬ ಪುಸ್ತಕದಲ್ಲೆಲ್ಲೋ ಓದಿದ ನೆನಪು . ಕೀಟ್ಸ್ ನದಿರಬಹುದು . ಈ ಬಗ್ಗೆ ಇತ್ತೀಚೆಗೆ ಮಯೂರದಲ್ಲಿ ವಿವರಣೆಯೂ ಬಂದಿತ್ತು. ಕರುಣೆ ಇಲ್ಲದ ಸುಂದರಿ ಎಂದರ್ಥ.
--
ಇದೇ ರೀತಿಯ ಒಂದು ಘಟನೆ ಕೈಲಾಸಂ ಕುರಿತು ಇದೆ. ಕೈಲಾಸಂ ಒಂದು ಕಡೆ ಮಹಾಭಾರತದಲ್ಲಿ ಯಾರು ಯಾರು ಚಿಕ್ಕಂದಿನಲ್ಲಿ ಏನು ಪಾನೀಯ ಕುಡಿಯುತ್ತಿದ್ದರು ಎಂದು ಸ್ವಾರಸ್ಯಕರವಾಗಿ ಹೇಳುತ್ತಿದ್ದರು. ಜನರೂ ಆನಂದಿಸುತ್ತಿದ್ದರು . (ವಿವರಗಳು ನೆನಪಿಲ್ಲ . ಕೈಲಾಸಂ ಕುರಿತಾದ ಪುಸ್ತಕಗಳಲ್ಲಿ ಈ ವಿವರ ಸಿಗುತ್ತದೆ) ಯಾರೋ 'ಶಕುನಿ ಏನು ಕುಡಿಯುತ್ತಿದ್ದ?' ಎಂದು ಕೇಳಿದರು . ತಕ್ಷಣ ಕೈಲಾಸಂ ' ಬಕುಳದ ಹೂವಿನ ರಸ' ಎಂದರು . ಎಲ್ಲರೂ ಸುಮ್ಮನಿದ್ದರು. ಆಗ ಆಗ ಕುಳಿತಿದ್ದ ಸಂಸ್ಕೃತ ಪಂಡಿತರು ಬಿದ್ದು ಬಿದ್ದು ನಗಹತ್ತಿದರು . ' ಬಕುಳ'ದ ಹೂವಿಗೆ ಕನ್ನಡದಲ್ಲಿ ಪಗಡೆ ಹೂವು ಎನ್ನುತ್ತಾರೆ ಎಂಬುದು ಗೊತ್ತಿದ್ದ ಅವರೊಬ್ಬರು ಮಾತ್ರ ಈ punಡಿತರ punಅನ್ನು ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದರು.

ಅದಕ್ಕೆ ಹೇಳಿದ್ದು ಕಲ್ಲುಸಕ್ಕರೆ ಸವಿ ಬಲ್ಲವರೇ ಬಲ್ಲರು ಎಂದು .

Ornamental seperator
  • shreekant.mishrikoti ರವರ ಬ್ಲಾಗ್
  • Login or register to post comments
  • 574 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 28, 2006 - 10:31am — Sunil Jayaprakash

ಲಾ ಬೆಲ್ಲಾ ಡೇಮ್...ಸ್ಯಾನ್ಯ ಮರ್ಸಿ

Sunil Jayaprakash's picture

ನಿಮ್ಮ ಲೇಖನ ಓದಿದ ಮೇಲೆ ನನಗೆ ನೆನಪಾಗುತ್ತಿರುವುದು,
ಬಲ್ಲವನೇ ಬಲ್ಲ ಬೆಲ್ಲದ ಸವಿಯ ಮಾತು..

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಕ್ಕೊಬ್ಬನ ಕೈಲಾಸಂ ...
  • ನಾನು ಕಂಡ ಕೈಲಾಸಂ
  • ಕೈಲಾಸಂ
  • ತಂದೆಯ ದಿನ
  • ಇಲ್ಲೊಂದು ಕಲ್ಲುಸಕ್ಕರೆ -
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.

ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator