ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

August 27, 2007 - 4:47pm — shreekant.mishrikoti

ಮಹಾಭಾರತ ಯುದ್ಧದ ಕೊನೆಗೆ ದುರ್ಯೋಧನನು ಭೀಮನಿಂದ ತೊಡೆಯನ್ನು ಮುರಿಸಿಕೊಂಡು ಸಾಯುತ್ತ ಬಿದ್ದಿದ್ದಾನೆ . ಆಗ ಅಲ್ಲಿಗೆ ಅವನ ಚಿಕ್ಕ ಮಗ ಬರುತ್ತಾನೆ. ಎಳೆಯ ವಯಸ್ಸಿನ ಆ ಮಗು ಅಭ್ಯಾಸದಂತೆ ಅವನ ತೊಡೆಯ ಮೇಲೆ ಕೂತುಕೊಳ್ಳಲು ಹೋಗುವದು . ಆಗ ದುರ್ಯೋಧನನು ಅವನಿಗೆ ’ ಈ ಜಾಗ ಇನ್ನು ಮುಂದೆ ನಿನಗೆ ಇಲ್ಲದಂತಾಗುವದು ’ ಎನ್ನುತ್ತಾನೆ . ಈ ಮಾತಿನ ಮರ್ಮವನ್ನು ಅರಿಯದ ಮಗು ಯಾಕೆಂದು ಕೇಳಿದಾಗ ’ನಾನು ಬಹಳ ದೂರ ಹೋಗುತ್ತಿದ್ದೇನೆ’ ಎನ್ನುತ್ತಾನೆ . ಮಗು ಸಹಜವಾಗಿ ’ ನಾನೂ ಬರುತ್ತೇನೆ ’ ಎನ್ನುವದು . ಆಗ ದುರ್ಯೋಧನನು ’ನಿಮ್ಮ ಚಿಕ್ಕಪ್ಪನನ್ನು ಕೇಳು ; ಅವನು ನಿನ್ನನ್ನೂ ಅಲ್ಲಿಗೆ ಕಳಿಸಿಯಾನು ’ ಎನ್ನುತ್ತಾನೆ . ( ಭೀಮ ಆ ಮಗುವಿಗೆ ಚಿಕ್ಕಪ್ಪ)

ಇದು ಭಾಸನ ಊರುಭಂಗದಲ್ಲೋ , ರನ್ನನ ಗದಾಯುದ್ಧದಲ್ಲೋ , ಅಥವಾ ಎರಡೂ ಕಡೆಗಳಲ್ಲಿ ಬಂದಿದೆ.

  • ಮಹಾಭಾರತ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 388 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 27, 2007 - 5:29pm — mahesha

ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

mahesha's picture

ರೀ ಇದು ಶ್ಲೇಷಾಲಂಕಾರ ಅಲ್ವಾ!!

ಭಾಸ ರನ್ನ ಇಬ್ರೂ ಸಕ್ಕತ್!

ನನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2007 - 6:20pm — anivaasi

ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

anivaasi's picture

ಭಾಸನ ಊರುಭಂಗದ ಎಸ್.ವಿ.ಪರಮೇಶ್ವರ ಭಟ್ಟರ ಕನ್ನಡ ರೂಪ ಹಿಂದೆ ಓದಿದ್ದೆ.
ಇಲ್ಲಿ ತೊಡೆ ಮುರಿದಿದ್ದು ಬೇರೆ ಬೇರೆ ಅರ್ಥಗಳನ್ನು ಹೊಳೆಸುತ್ತದೆ ಅಂತ ನೆನಪು. ಪ್ರೀತಿಯ ಮಗನನ್ನು ಕೂರಿಸಿಕೊಳ್ಳಲು ಆಗುವುದಿಲ್ಲ, ಮಗನ ಭವಿಷ್ಯದ ಪಟ್ಟ ಭಂಗವಾಗಿದೆ ಮತ್ತು ತನ್ನ ಚಕ್ರಾಧಿಪತ್ಯ/ರಾಜ್ಯ ಮುರಿದಿದೆ ಎಂದೆಲ್ಲಾ ಧ್ವನಿಸುತ್ತದೆ ಅಲ್ಲವೆ? ಆ ಅರ್ಥ ಬರುವ ಒಂದು ಸಾಲು ಇತ್ತೆಂದು ನೆನಪು.
ಊರುಭಂಗವಂತೂ ಇವತ್ತಿಗೂ ರೆಲೆವಂಟಾಗುವಂತೆ ಆಡಬಹುದು ಅಂತ ನನಗೆ ಆಗಾಗ ಅನಿಸುತ್ತದೆ. ಯುದ್ಧದ ದಾರುಣತೆಯ ಬಗ್ಗೆ ದುರ್ಯೋಧನನೂ ದುಃಖಪಡುತ್ತಾನೆ ಕೊನೆಯಲ್ಲಿ!
ಇವೆಲ್ಲಾ ನೆನಪಿಸಿದ್ದಕ್ಕೆ ಥ್ಯಾಂಕ್ಯು ಮಿಶ್ರಿಕೋಟಿಯವರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2007 - 6:44pm — mahesha

ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

mahesha's picture

"ಊರುಭಂಗವಂತೂ ಇವತ್ತಿಗೂ ರೆಲೆವಂಟಾಗುವಂತೆ ಆಡಬಹುದು ಅಂತ ನನಗೆ ಆಗಾಗ ಅನಿಸುತ್ತದೆ. ಯುದ್ಧದ ದಾರುಣತೆಯ ಬಗ್ಗೆ ದುರ್ಯೋಧನನೂ ದುಃಖಪಡುತ್ತಾನೆ ಕೊನೆಯಲ್ಲಿ!"

ಮುಂದಿನ ಸರದಿ ಊರುಭಂಗಕ್ಕಾ? Smiling

ನಾನೆಲ್ಲೋ ಈ 'ಗೃಹಭಂಗ' ಇದೆಯಲ್ಲ ಹಾಗೆ '.ಊರು.ಭಂಗ' ಅಂತ ಹೊಸ ಇದೆ ಅಂದುಕೊಂಡಿದ್ದೆಂ. Smiling

ಈ ಊರು ಉಡು ಕೆಳಗಿನ, ತೊಡೆ!! Smiling

ಒಟ್ಟಿನಲ್ಲಿ ಅಲ್ಲೂ ತೊಡೆಮುರಿತವೋ, ಊರುಹಾಳೋ ಎರಡು ಹೊಂದುವುದು!!

ಮಾಬಾರತದ ಬವರದಿಂದ ಬಿದ್ದವರೂ, ಗೆದ್ದವರೂ ಇಬ್ರೂ ಎಕ್ಕುಟ್ಟು ಹೋದ್ರು! ಅವರ ಜೊತೆ, ಆ ನೆಲವೂ ಎಕ್ಕುಟ್ಟೇ ಹೋಯ್ತು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2007 - 6:31pm — muralihr

ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

muralihr's picture

ಪ೦ಪ ವಿಕ್ರಾಮಾರ್ಜುನನಿಗೆ ಪಟ್ಟ ಕಟ್ಟುವ ಅವಸರದಲ್ಲಿ, ದುರ್ಯೋಧನನ್ನು ಹೊಡೆದು ಉರುಳಿಸಿ ಅಲ್ಲಿಯೇ ಮರೆತು ಹೋಗಿದ್ದಾನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2007 - 9:15pm — ಸಂಗನಗೌಡ

ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

ಸಂಗನಗೌಡ's picture

ಹತ್ತನೆಯ ತರಗತಿಗಿರುವ "ಕುರುಕುಲಾರ್ಕನುಂ ಅರ್ಕನುಂ ಅಸ್ತಂ ಗೆಯ್ದಿದರ್" ಗದ್ಯ ನೆನಪಾಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2007 - 9:33pm — mahesha

ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

mahesha's picture

ಸಂಗನ

ಅದು ನಮಗೆ ಇತ್ತು..

ಕುರುಕುಲಾರ್ಕನುಮರ್ಕನುಮಸ್ತಮೇಯ್ದಿದರ್‍..!!

ನಿಬಿಡವೂರುಮಂಡಲಮಾರುಡಿದರ್‍ ಫಣಿರಾಜಕೇತನಾ!! ಹೀಗೆ ಅಶ್ವತ್ಥಾಮ ಕೇಳ್ತಾನೆ! ಅಲ್ವಾ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2007 - 9:37pm — ಸಂಗನಗೌಡ

ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

ಸಂಗನಗೌಡ's picture

ಹತ್ತನೆ ತರಗತಿಯ ಗದ್ಯಗಳು ತುಂಬಾ ಚೆನ್ನಾಗಿದ್ದವು, ಈಗ ಎಲ್ಲಾ ಮರೆತು ಹೋಗಿದೆ, ಏನು ಆ ಸಾಲಿನ ತಿಳಿವು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2007 - 10:01pm — mahesha

ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

mahesha's picture

ಕುರುಕುಲಾರ್ಕನುಂ = ಕುರುಕುಲದ ಅರ್ಕನು = ಕುರುಕುಲದ ನೇಸರುನು
ಅರ್ಕನುಂ = ನೇಸರು = ದಿಟದ ನೇಸರನು
ಅಸ್ತಂ = ಮುಳುಗನ್ನು, ಪಡುವನ್ನು
ಎಯ್ದಿದರ್‍ = ಹೊಂದಿದರು? ( ಮರೆತು ಹೋಗಿದೆ )

ನಿಬಿಡೂರುಮಂಡಲ = ನಿಬಿಡವಾದ/ಒತ್ತೊತ್ತಾಧ ಊರುಮಂಡಲ/ತೊಡೆಗುಂಪು
ಆರು =ಯಾರು
ಉಡಿದರ್‍ = ಒಡೆದರ್‍( ಉಡಾಯಿಸು! Smiling )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2007 - 2:09am — anivaasi

ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

anivaasi's picture

ಸಂಗನಗೌಡರೆ,
"ಕುರುಕುಲಾರ್ಕನುಂ" ಗದ್ಯದ ಸಾಲಾದರೂ, ಅದು ಬರುವುದು ಗದ್ಯ-ಪದ್ಯ ಮಿಶ್ರಿತ ಚಂಪೂ ಕಾವ್ಯ ಅಂತ ಹೇಳೋ ಒಂದು ಪ್ರಕಾರದಲ್ಲಿ. ಅಂದರೆ ಗದ್ಯದಲ್ಲೂ, ಪದ್ಯದಲ್ಲೂ ಎರಡರಲ್ಲೂ "ಕಾವ್ಯ" ಇರುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇನ್ನೊಂದು ಒಳೆಯ ಝೆನ್ ಕಥೆ :- ಒಮ್ಮೊಮ್ಮೆ ಹಾಗಾಗುತ್ತದೆ!
  • ಹಿಟ್ಟಿನ ಹುಂಜ-ಗಿರೀಶ್ ಕಾರ್ನಾಡರ ನಾಟಕದ ಕಥೆ
  • ನಂದ ಕಿಶೋರನ ಹುಟ್ಟುಹಬ್ಬ!
  • ಸ್ಟೈನ್ಬೆಕ್ಕನ 'ದಿ ಪರ್ಲ್'; ಒಂದು ಮುತ್ತಿನ ಕಥೆ
  • ಅಮ್ಮ ನಿನಗೆ ಗೊತ್ತೇನಮ್ಮ, ನೀನಿಲ್ಲದಿದ್ದರೆ ಹೆದರಿಕೆಯಮ್ಮ...
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
  • ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 169 ಅತಿಥಿಗಳು ಆನ್ಲೈನ್ ಇರುವರು.


ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator