ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಕನ್ನಡ ಮತ್ತು ಕರ್ನಾಟಕ ಮತ್ತು ರಾಜ್ಯೋತ್ಸವ; ನೀವು ಏನು ಮಾಡುತ್ತಿದ್ದೀರಿ?
೧. ಮೊದಲು ಈ ವಾರದ ಸುಧಾ ಕೊಂಡುಕೊಳ್ಳಿ ಇಲ್ಲವೆ ಅಂತರ್ಜಾಲದಲ್ಲಿ ಓದಿ (www.sudhaezine.com) . ರಾಜ್ಯೋತ್ಸವ ನಿಮಿತ್ತ ಒಳ್ಳೆಯ ಲೇಖನಗಳಿವೆ. ( ಅದೇಕೋ ಕನ್ನಡ ಕರ್ನಾಟಕ ಕುರಿತಾದ ಲೇಖನಗಳು ತರಂಗ ದಲ್ಲಿಲ್ಲ . ಕರ್ಮವೀರ ಸಿಗಲಿಲ್ಲ . ಕಸ್ತೂರಿಯಲ್ಲೂ ಇಲ್ಲ .)
ಸಾಮಾನ್ಯವಾಗಿ ಈ ಬಗೆಯ ಲೇಖನಗಳು ಆಗಾಗ ಸುಧಾ/ಮಯೂರ/ಪ್ರಜಾವಾಣಿಗಳಲ್ಲಿ ಮಾತ್ರ.
ಸುಧಾದಲ್ಲಿ ಭುವನೇಶ್ವರಿಯ ತೈಲಚಿತ್ರದ ಪ್ರತಿ ಇದೆ .
ನನಗೆ ಗೊತ್ತಿರಲಿಲ್ಲ , ಹಿಂದಿಯಂತೆ ಇಂಗ್ಲೀಷಿಗೂ ತನ್ನದೇ ಆದ ಲಿಪಿ ಇಲ್ಲ ! ಅದುಅ ಬಳಸುತ್ತಿರುವದು ಲ್ಯಾಟಿನ್ ಲಿಪಿ?
೨. ಕನ್ನಡದ ಏಳಿಗೆ ಕನ್ನ್ಡ ಜನರಿಂದ ಮಾತ್ರ ಸಾಧ್ಯ - ಸರಕಾರ / ಸಾಹಿತಿ/ಕಲಾವಿದರಿಂದಲ್ಲ. ಕನ್ನಡಮ್ಮನ ರಥಕ್ಕೆ ಕನ್ನಡಿಗರೇ ಸಾರಥಿಗಳು . ಎಂಬ ಲೇಖನ ಪ್ರಜಾವಾಣಿಯಲ್ಲಿದೆ. (೨೮-೧೦-೨೦೦೬). ಪ್ರತಿಯೊಬ್ಬ ಕನ್ನಡಿಗನೂ ಕನ್ನಡವನ್ನು ಬದುಕಿನ ಪ್ರತಿಹಂತದಲ್ಲೂ ಬಳಸಬೇಕು.
೩. ಶಿಕ್ಷಣರಂಗದಲ್ಲಿ ಕನ್ನಡವನ್ನು ಉಳಿಸಿದರೆ ಮಾತ್ರ ಕನ್ನಡ ಉಳಿಯುವುದು - ಬರಗೂರರ ಅಭಿಪ್ರಾಯ
೪. ತಂತ್ರಜ್ಞಾನಕ್ಕೆ ಕನ್ನಡ ತರುವದು ಇಂದಿನ ಅಗತ್ಯ. ( ಐ.ಟಿ. ಮೇಳದಿಂದ) .
ಇದನ್ನು ನಾನು ಕೈಲಾದ ಮಟ್ಟಿಗೆ ಮಾಡುತ್ತಿದ್ದೇನೆ. ಲೈನಕ್ಸಿನ ಕನ್ನಡೀಕರಣದಲ್ಲಿ ತೊಡಗಿದ್ದೇನೆ. ಮತ್ತು ಕಂಪ್ಯೂಟರ್ ಕಲಿಕೆ ಸರಣಿಯನ್ನು ಸಂಪದದಲ್ಲಿ ಅರಂಭಿಸಿದ್ದೇನೆ.
ನೀವು ಏನು ಮಾಡುತ್ತಿದ್ದೀರಿ?
ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು .
ಕನ್ನಡವನ್ನು ಬಳಸಿ , ಕನ್ನಡವನ್ನು ಉಳಿಸಿ.

- shreekant.mishrikoti ರವರ ಬ್ಲಾಗ್
- Login or register to post comments
- 1243 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ರಾಜ್ಯೋತ್ಸವ......
ಸುಧ ಪತ್ರಿಕೆಯಲ್ಲಿ ಕನ್ನಡವನ್ನು ಉಳಿಸಿ ಎನ್ನುವ ಬದಲು ಕನ್ನಡ ಬಳಸಿ--ಎನ್ನುವ ಮಾತು ಎಷ್ಟು ಅನ್ವರ್ಥ ವಾಗಿದೆ! ಇದನ್ನು ಬರಿ ರಾಜ್ಯೋತ್ಸವದ ದಿನ ಮಾಡಿ ಬಿಡುವುದಲ್ಲ. ಪ್ರತಿದಿನವೂ ಇದನ್ನು ಅನುಸ್ಠಾನಕ್ಕೆ ತರಲು ಯತ್ನಿಸ ಬೇಕು. ಕನ್ನಡದ ಬಗ್ಗೆ ಪ್ರೀತಿಯನ್ನು ಬೆಳಸಿಕೊಳ್ಳಲು 'ದಿನ' ಆಚರಿಸುವಂತಹ 'ಆಪತ್ತು 'ಯಾವ ಭಾಷಾಭಿಮಾನಿಗೂ ಬರದಿರಲಿ. ಹಿಂದಿ(ಕನ್ನಡದಂತೆ ಅದೂ ಒಂದು ರಾಷ್ಟ್ರಭಾಷೆ) ದಿನ ಆಚರಣೆಯೂ ಇದೇತರಹ ಇರುತ್ತೆ !
ಇದಕ್ಕೆ ಯಾರ ಗವಾಹನೆಯ (ಸಾಕ್ಷಿಯ) ಅಗತ್ಯವಿದೆಯೆ ?
ಸದ್ಯಕ್ಕೆ ಇಷ್ಟು ಮಾಡೋಣ ಅಂತ ಇದ್ದೀನಿ
೧. ವಂಶವೃಕ್ಷ ಕಾದಂಬರಿಯಲ್ಲಿ ಬರುವ ಗಟ್ಟಿತನದಿಂದ ಕೂಡಿರುವ ಮಾತುಗಳ ಬಗ್ಗೆ ಗೆಳೆಯನೊಡನೆ ಚರ್ಚಿಸಬೇಕು.
೨. ಪರ್ವ ಕಾದಂಬರಿಯ ಕನಿಷ್ಟ ೩೫೦ ಪುಟಗಳನ್ನಾದರೂ ಓದಬೇಕು. ಒಟ್ಟು ಸರಿಸುಮಾರು ೬೨೫ ಪುಟಗಳಿವೆ ಅದರಲ್ಲಿ.
೩. ರಂಗ ಶಂಕರದಲ್ಲಿ ನಾಟಕ ನೋಡಬೇಕು.
೪. ಯಾರೊಡನೆಯಾದರು ಕನ್ನಡದಲ್ಲಿ ಜಗಳವಾಡಬೇಕು.
೫. ಮಾರನೆಯ ದಿನ ನಮ್ಮ ಮನೆಯಲ್ಲಿ ತಿಥಿಯಿರುವುದರಿಂದ ಹಣ್ಣು, ಕಾಯಿಪಲ್ಲೆ(ಅದೇ ತರಕಾರಿ)ಗಳನ್ನು ತರಬೇಕು.
೬ ಒಂದಷ್ಟು ಮಂದಿಗೆ ಕನ್ನಡ ರಾಜ್ಯೋತ್ಸವ ಎಂದರೇನು ತಿಳಿಸಿಕೊಡಬೇಕು. ಅದನ್ನು ಈಗಾಗಲೇ ಬೇರೆದೇಶದ ನಮ್ಮ ಸಹೋದ್ಯೋಗಿಗಳಿಗೆ ಹೇಳಿದ್ದೇನೆ.
ಸ್ವಾಮೀ ಬೇಡ !!!!
ರಾಜ್ಯೋತ್ಸವದ ಇಷ್ಟು ಮಾಡೋಣ ಅಂತಿದ್ದೀನಿ ಅನ್ನುವ ಸೂತ್ರದಲ್ಲಿ ಯಾಕೋ ನಾಕಣೆ (ಪ್ರಾಸಕ್ಕಾಗಿ ಮಾತ್ರ ಯಾವದೇ ಬೇರೆ ಅರ್ಥ ಇಲ್ಲ! ಇದ್ದರೂ ಸ್ವಾಗತ!!) ಅಂಕಣದ ಆಸೆ ಯಾಕೋ ನಾಕಾಣೆ! ಜಗಳ ಆಡುವದಕ್ಕೂ ಸಹ ಸರೀಕರಲ್ಲಿ ಜಗಳ ಆಡಬೇಕು ನಿಮಗೆ ನಾನಂತು ಸಿಗುವದಿಲ್ಲ!! ಬೇರೆಯವರಿಗೆ ಪುರುಸೊತ್ತಿಲ್ಲದಿದ್ದಲ್ಲಿ ಆಸೆ ಆಸೆ ಯಾಗಿಯೇ ಉಳಿಯುವ ಅಪಾಯವಿದೆ. ಮತ್ತೊಮ್ಮೆ ಯೋಚಿಸಿ ಸ್ವಾಮಿ !!!
ಆಸೆ ಆಸೆಯಾಗಿಯೇ ಉಳಿಯಿತು
ಗೆಳೆಯರೆ, ಜಗಳವನ್ನಾಡಬೇಕೆಂಬೆನ್ನಾಸೆಯು ಸಾಕಾರಗೊಳ್ಳಲಿಲ್ಲ. ಆದರೆ ಸಮಾಧಾನದ ಸಂಗತಿಯೆಂದರೆ ನನ್ನೊಬ್ಬ ಗೆಳೆಯನು ಜಗಳವನ್ನಾಡಿದನು, ಕನ್ನಡದಲ್ಲಿ.
ಸದ್ಯಕ್ಕೆ ಇಷ್ಟು ......
ಯಾರಾದರೊಬ್ಬರ ಜೊತೆ ಕನ್ನಡದಲ್ಲಿ ಜಗಳವಾಡಬೇಕು. ನೆನಪಾಯಿತು ನೋಡಿ - "ಎಮ್ಮೆ ತಮ್ಮಣ್ಣ" ಚಿತ್ರನೋಡಿ. ಅದರಲ್ಲಿ ಮಂಜುಳಾ ಬೌಗುಳು ನಿಮಗೆ ಮುದ ತರಬಹುದು. ನನಗಂತೂ ಅದು ಅತಿ ಪ್ರಿಯವಾದ ಚಿತ್ರ. ರಾಜ್ ಕೂಡ ಎನ್ಕಡಿಮೆಯಿಲ್ಲ !
ನನ್ಮನೆ ಕಾಯ್ವಾಗ. ಬೇ...ನ್...ನೆ . ಓಗೊ ಎಲ್ಲಾ ನಂ ಗೊತ್ತೈತೆ. ಮು....ಇತ್ಯಾದಿ.
ನಾನೇನ್ ಸುಮ್ನೆ ಬುಟ್ಟೇನಾ ..ಓಗೆ ಓಗೆ....ಇತ್ಯಾದಿ.
ಪ್ರಯತ್ನ ಪ್ರಯತ್ನ ಪ್ರಯತ್ನ
"ಕನ್ನಡಕ್ಕಾಗಿ ಹೋರಾಡಲು ನಿರ್ಧಾರ ಕೈಗೊಳ್ಳುವ ಬಗ್ಗೆ ಯೋಚಿಸುತ್ತೇವೆ ಅಂತ ಭರವಸೆ ನೀಡುತ್ತೇವೆ" ಎಂದು ಹೇಳುವವರ ಸಂಖ್ಯೆಯನ್ನು ಲೆಕ್ಕವಿಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ.
-ಅಸತ್ಯ ಅನ್ವೇಷಿ
ಲೆಕ್ಕವಿಟ್ಟುಕೊಳ್ಳುವುದು ಹಾಗಿರಲಿ
"ಲೆಕ್ಕವಿಟ್ಟುಕೊಳ್ಳುವ ಪ್ರಯತ್ನವನ್ನು ಯಾವಾಗ ಒಡರ್ಚಬೇಕು ಅಂದರೆ ಯಾವಾಗ ಆರಂಭಿಸಬೇಕು" ಅಂತ ಯೋಚಿಸಲು ಪ್ರಾರಂಭಿಸುತ್ತೀರಾ ಎಂಬ ಭರವಸೆ ನೀಡುವಿರಾ ?