ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ

— --- ಟಿ.ಪಿ.ಕೈಲಾಸಂ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

shreekant.mishrikoti ರವರ ಬ್ಲಾಗ್

ನಾನು ನೋಡಿದ ಕನ್ನಡ ಬ್ಲಾಗುಗಳು - ೧

ನಾನು  ಈ ತನಕ ನೋಡಿರುವ ಕನ್ನಡ ಬ್ಲಾಗುಗಳ ಪಟ್ಟಿ  , ಕಿರು ವಿವರಣೆಯೊಂದಿಗೆ ಮತ್ತು  ನನ್ನದೇ  ಆದ ರೇಟಿಂಗ್  ಜತೆ ಇಲ್ಲಿದೆ . 

ಒಂದು ಅಥವಾ ಎರಡು  ವಿಷಯಗಳಿಗೆ ಮಾತ್ರ ಮೀಸಲಾಗಿದ್ದು     ಸತತವಾಗಿಯೂ   ಒಳ್ಳೆಯವಾಗಿಯೂ   ಬರಹಗಳು ಇರುವ  ಬ್ಲಾಗಿಗೆ   *****  ಕೊಟ್ಟಿದ್ದೇನೆ !  ಮುಂದೆ ಓದಿ »

ದರೋಡೆಕೋರನ ಧರ್ಮ ?

ಇದೆಲ್ಲ  ನಿಮಗೆ ಗೊತ್ತು.  ವಾಲ್ಮೀಕಿ ಮೊದಲು ದರೋಡೆಕೋರನಿದ್ದದ್ದು, ಒಂದ್ಸಲ  ನಾರದರು ಸಿಕ್ಕು 'ನೀನು ಮಾಡುತ್ತ ಇರುವದು ಹಿಂಸೆ, ಪಾಪ. ನೀನು ಇದನ್ನ ನಿನ್ನ ತಾಯ್ತಂದೆ , ಹೆಂಡತಿ ಮಕ್ಕಳಿಗಾಗಿ ಮಾಡ್ತಾ ಇದ್ದೀಯಲ್ಲ ,  ಅವರು ನಿನ್ನ ಗಳಿಕೆಯಲ್ಲಿ ಪಾಲು  ತಕೊಳ್ಳುವ ಹಾಗೆ ನಿನ್ನ ಪಾಪದಲ್ಲೂ ಪಾಲು ತೆಗೆದುಕೊಳ್ಳುವರೇ?'   ಅಂತ ಕೇಳಿದಾಗ,  ಅವನು ಹೋಗಿ ಅವರನ್ನು ಕೇಳಿದಾಗ, ಅವರು 'ಇಲ್ಲ ; ನಮ್ಮನ್ನು ಸಾಕೋದು ನಿನ್ನ ಕರ್ತವ್ಯ' ಅಂತ ಹೇಳಿದ್ದು ಕೇಳಿ  ಅವನಿಗೆ ಒಂತರಾ ಜ್ಞಾನೋದಯ ಆದದ್ದು , ಕೊಲೆಸುಲಿಗೆ ಬಿಟ್ಟು   ತಪಸ್ಸಿಗೆ ಕೂತಿದ್ದು .   ಮುಂದೆ ಓದಿ »

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ PDF ರೂಪಕ್ಕೆ ಪುಸ್ತಕ ಇಳಿಸಿಕೊಳ್ಳುವುದು

( ಇದು  ಲೀನಕ್ಸ್  ಕಾರ್ಯಕಾರಿ ವ್ಯವಸ್ಥೆಯಲ್ಲಿ ಕೆಲಸಮಾಡುತ್ತದೆ - ವಿಂಡೋಸ್ ನಲ್ಲಿ   ಅಲ್ಲ  ಎಂಬುದನ್ನು  ಗಮನದಲ್ಲಿಟ್ಟುಕೊಳ್ಳಿ  )

ಹಿಂದೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಕೊಂಡಿಗಳು ಸಿಕ್ಕ ಕೂಡಲೇ ಅಲ್ಲಿದ್ದ ಪುಸ್ತಕಗಳ ಪಟ್ಟಿಯನ್ನು ನೋಡಿ ಇಟ್ಟುಕೊಂಡಿದ್ದೆ , ಕಂಡ ಕೆಲವು ಒಳ್ಳೆಯ ಪುಸ್ತಕಗಳ ಕೊಂಡಿಯನ್ನೂ ನಿಮಗೆ ಈ ಬ್ಲಾಗ್ ಮೂಲಕ ಕೊಟ್ಟಿದ್ದೆ .
ಅಲ್ಲಿರೋ ಪುಸ್ತಕ ಓದಲು ಒಂದೊಂದೇ ಪುಟ ಕ್ಲಿಕ್ ಮಾಡುತ್ತಾ ಓದುತ್ತಾ ಹೋಗಬೆಕಾಗುತ್ತದೆ .  ಒಂದೇ ಸಲಕ್ಕೆ ಅನೇಕ ಪುಟ ಇಳಿಸಿಕೊಂಡು   ಪೀಡೀಎಫ್ ಗೆ ಬದಲಿಸಿ   ಇಟ್ಟುಕೊಳ್ಳಲು   ನಾನು ಹಾಕ್ಕೊಂಡಿರೋ ಉಬುಂಟು ಲೈನಕ್ಸಿನಲ್ಲಿ ಒಂದು ವ್ಯವಸ್ಥೆ ಮಾಡಿಕೊಂಡಿದ್ದೀನಿ . ಇದು ಚೆನ್ನಾಗಿ ಕೆಲಸ ಮಾಡ್ತಾ ಇದೆ.

ಎರಡು ಕಡತ ಮಾಡ್ಕೊಂಡಿರುವೆ ,

ಒಂದು dli.pl . ಅದರೊಳಗೆ ಇರೋದು ಈ ಸಾಲುಗಳು .

$file=$ARGV[0];

$start=$ARGV[1];
$end=$ARGV[2] ;  ಮುಂದೆ ಓದಿ »

'ನನ್ನ ಪ್ರೀತಿಯ ಭಾರತ' - ಜಿಮ್ ಕಾರ್ಬೆಟ್ ಪುಸ್ತಕ

ಜಿಮ್   ಕಾರ್ಬೆಟ್    ವನ್ಯಪ್ರಾಣಿಗಳ  ಕುರಿತು   ಬಹಳ  ಪುಸ್ತಕಗಳನ್ನು  ಬರೆದಿದ್ದು ಜನಪ್ರಿಯರಾಗಿದ್ದಾರೆ  .     'ನನ್ನ   ಪ್ರೀತಿಯ ಭಾರತ'  ಪುಸ್ತಕದಲ್ಲೂ  ಅಡವಿಯ ಪ್ರಾಣಿಗಳ ಬಗ್ಗೆ  ಬರೆದಿರುವರಾದರೂ  ಈ  ಪುಸ್ತಕದ ಮುಖ್ಯ ವಸ್ತು  ನಮ್ಮ ದೇಶದ ಹಳ್ಳಿಗಾಡಿನ  ಜನರು. ಭಾರತದ ದೀನದಲಿತರ ಸರಳ ಜೀವನ , ಅವರ ಸಹಜ ಪ್ರಾಮಾಣಿಕತೆ , ನಿಷ್ಠೆ  , ಮಾನವೀಯತೆಗಳಿಗೆ ಮಾರುಹೋದ    ಕಾರ್ಬೆಟ್   ತಮ್ಮ ಜೀವನದ ಕೆಲವು ಘಟನೆಗಳ  ಮೂಲಕ   ತುಂಬ ಸಹಾನುಭೂತಿಯಿಂದ ಮತ್ತು  ಪ್ರೀತಿಯಿಂದ ಅವರ ಬದುಕನ್ನು    ಚಿತ್ರಿಸಿದ್ದಾರೆ .   

ಸಮರ್ಥ ಬೇಟೆಗಾರರಾದ ಅವರು ಜನರನ್ನು ಮತ್ತು ಪ್ರಾಣಿಗಳನ್ನು       ಪ್ರೀತಿಸಿದರು. ಮನುಷ್ಯರ  ರಕ್ತದ ರುಚಿಕಂಡು  ಮನುಷ್ಯರ  ಮೇಲೆರಗುವ  ನರಭಕ್ಷಕಪ್ರಾಣಿಗಳನ್ನು    ಮಾತ್ರ   ಕೊಲ್ಲಲಾರಂಭಿಸಿದರು. ಪ್ರಾಣಿಗಳನ್ನು ಕೊಲ್ಲಲೇಬೇಕಾಗಿ ಬಂದಾಗಲೂ   ಅವುಗಳಿಗೆ ನೋವಾಗದಂತೆ  ಕ್ಷಣಮಾತ್ರದಲ್ಲಿ ಕೊಲ್ಲಬೇಕು ಎಂಬುದು ಅವರ ನೀತಿ.

ಅವರು  ಈ  ಪುಸ್ತಕದ  ಅರ್ಪಣೆಯಲ್ಲಿ   ಹೇಳುತ್ತಾರೆ-  ನಾನು  ಬದುಕಿ ಬಾಳಿದ ಭಾರತದಲ್ಲಿ  ಶೇಕಡ ೯೦  ಮಂದಿ  ಸರಳಸ್ವಭಾವದವರು, ಪ್ರಾಮಾಣಿಕರು, ಧೈರ್ಯವಂತರು ಹಾಗೂ  ನಿಷ್ಠಾವಂತರಾಗಿದ್ದು   ಕಷ್ಟಪಟ್ಟು  ದುಡಿಯುವವರು . ದೇವರಲ್ಲಿ   ಮತ್ತು ಅಧಿಕಾರದಲ್ಲಿರುವ  ಯಾವುದೇ ಸರಕಾರಕ್ಕೆ  ಇವರ ಪ್ರಾರ್ಥನೆಯೆಂದರೆ   ತಮ್ಮ ಜೀವ ಮತ್ತು ಆಸ್ತಿಪಾಸ್ತಿಗಳ    ರಕ್ಷಣೆಯೊಂದಿಗೆ  ತಮ್ಮ  ದುಡಿಮೆಯ  ಫಲ ದ  ಅನುಭೋಗಕ್ಕೆ  ಅವಕಾಶ  ಕೋರುವುದಷ್ಟೇ , ನಿಸ್ಸಂಶಯವಾಗಿ ಬಡವರಾಗಿರುವ,  'ಹಸಿವಿನಿಂದ  ಕಂಗಾಲರಾಗಿರುವ ಭಾರತದ  ಜನಕೋಟಿ ' ಎಂದೇ  ಕರೆಯಲ್ಪಡುವ ಈ ಜನರ ನಡುವೆ ನಾನು ಜೀವನ ನಡೆಸಿದ್ದೇನೆ. ನಾನು ಪ್ರೀತಿಸುವ ಇವರನ್ನು  ಕುರಿತು ಹೇಳಲು   ಈ ಕೃತಿಯಲ್ಲಿ   ಪ್ರಯತ್ನಿಸಿದ್ದೇನೆ.ನನ್ನ  ಆತ್ಮೀಯರಾದ ಭಾರತ ಬಡಜನತೆಗೆ  ಈ ಕೃತಿಯನ್ನು   ವಿನೀತನಾಗಿ ಅರ್ಪಿಸುತ್ತೇನೆ.'  ಮುಂದೆ ಓದಿ »

ಕೇ.ಫ.ರ ಶೌರಿಯ ಹೊಟ್ಟೆಪಾಡು ಮತ್ತು ಪುಸ್ತಕ

ಕೇ.ಫ.ರ  ಶೌರಿ  ನಿಮಗೆ ಗೊತ್ತಿರಬಹುದು . ಇಲ್ಲದಿದ್ದರೆ   P.G. Wodehouse  ರ  ಜೀವ್ಸ್    ಗೊತ್ತಿರಬಹುದು .  ಈ   ಶೌರಿ  ಜೀವ್ಸ್   ನ   ಅನುಕರಣೆ . ನಾನು   ಜೀವ್ಸ್ ಸರಣಿ ಓದಿಲ್ಲ . ಕನ್ನಡದಲ್ಲಿ  ಕೇ.ಫ.ರ ಪುಸ್ತಕ ಓದಿದ್ದೇನೆ.   ಶೌರಿ  ಯಾರು ? ಎಂಥವನು ಅಂತ    ಹೆಚ್ಚು    ಹೇಳುವ ಮೊದಲು  ಶೌರಿಯ ನ್ನು  ಪರಿಚಯಿಸುವ   ಈ   ಘಟನೆ ಓದಿ .  
 ಮುಂದೆ ಓದಿ »

Syndicate content