ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಪುಣ್ಯಕೋಟಿ ದುಷ್ಟ ಆಕಳೇ ? ಹುಲಿಯು ಪಾಪದ ಪ್ರಾಣಿಯೇ ? ಮತ್ತೆ ನಾವೂ, ನೀವೂ ?

January 15, 2008 - 2:42pm — shreekant.mishrikoti

ನಮ್ಮ ನಿಮ್ಮೆಲ್ಲರ ಗೋವಿನ ಹಾಡಿನ ಪಠ್ಯ ಇಲ್ಲಿದೆ . http://sampada.net/article/1553
’ಗೋವಿನ ಹಾಡು-ಕನ್ನಡತನವನ್ನು ಎರಕ ಹೊಯ್ದ ಪ್ರತಿಮೆ’ ಎಂಬ ಶ್ರೀ ಕೆ.ವಿ.ಸುಬ್ಬಣ್ಣ ಅವರ ವಿಚಾರವನ್ನು ಇಲ್ಲಿ ಓದಬಹುದು. ( http://sampada.net/article/1552 )
'ಕೊಟ್ಟ ಭಾಷೆಗೆ ತಪ್ಪಲಾರೆನು'- ಪುಣ್ಯಕೋಟಿಯ ಕುರಿತು ಇನ್ನೊಂದು ಲೇಖನವನ್ನು http://sampada.net/blog/shreekant_mishrikoti/10/07/2006/1923 ಇಲ್ಲಿ ಓದಬಹುದು . ಆಗಲೇ ’ಉಉನಾಶೆ’ ಎಂಬವರು ಒಂದು ಟಿಪ್ಪಣಿ ಹಾಕಿ ’ಗೋವಿನ ಹಾಡಿನ ಬಗ್ಗೆ ಛಂದ ಪ್ರಕಾಶನದ ಜಾನಕಿ ಕಾಲಮ್ ನಲ್ಲಿರುವ "ಹಾರಿ ಪ್ರಾಣವ ಬಿಟ್ಟಿತು" ಲೇಖನ ಓದಿ.ಪುಣ್ಯಕೋಟಿಯನ್ನು ಶೋಷಕರ ಪ್ರತಿನಿಧಿಯನ್ನಾಗಿ, ಹುಲಿಯನ್ನು ಶೋಷಿತರ ಪ್ರತಿನಿಧಿಯನ್ನಾಗಿ ಬಿಂಬಿಸಿದ ಒಂದು ವಿವರಣೆ ಅಲ್ಲಿದೆ." ಎಂದಿದ್ದರು .
ಈಗ ಆ ಪುಸ್ತಕ ನೋಡಿದೆ . ಅಲ್ಲಿನ ಬರಹ ಹೀಗಿದೆ .

ಗೋವಿನ ಹಾಡುನೈತಿಕತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿದಿದ್ದರು . ಈಗ ನೈತಿಕತೆಯನ್ನು ಹೆಚ್ಚಿಸುವದು ಎಂದರೆ ಶೋಷಣೆಯನ್ನು ಹೆಚ್ಚಿಸುವದು ಅಂತೆ . ಹೊಸ ಚಿಂತನಕಾರರ ಪ್ರಕಾರ ಗೋವಿನ ಹಾಡು ಶೋಷಿತರನ್ನು ಮತಷ್ಟು ಶೋಷಿಸುವ , ಆಳುವವರನ್ನು ಮತ್ತಷ್ಟು ಬಲಪಡಿಸುವ ಪುರೋಹಿತಶಾಹೀ ರಚನೆ ! ....
ಪುಣ್ಯಕೋಟಿ ಎಂದರೆ ಆಳುವ ವರ್ಗ ಪುರೋಹಿತಶಾಹಿಗಳು. ಹುಲಿ ಶ್ರಮಿಸುವ ವರ್ಗ . ಅವರಿಗೆ ಗೋವಿನ ಕುಟೀಲೋಪಾಯಗಳು ಗೊತ್ತಿಲ್ಲ . ಗೋವು ಸತ್ಯದ ಹೆಸರಿನಲ್ಲಿ ಹುಲಿಯನ್ನು ಕೊನೆಗೂ ಕೊಂದು ಹಾಕುತ್ತದೆ . ಇದು ಕ್ರೌರ್ಯ ತನದಿಂದ ಬಲಶಾಲಿಯಾದ ಹುಲಿಯನ್ನು ಹಸುವು ಸತ್ಯವೆಂಬ ಆಯುಧ ಬಳಸಿ ಕೊಲ್ಲುತ್ತದೆ . ಹಸುವಿನ ವ್ಯಂಗ್ಯ, ಚುಚ್ಚುವ ಶೈಲಿ ನೋಡಿ . ’ನೀನು ಚಂಡವ್ಯಾಘ್ರ , ಕ್ರೂರಿ ಕಣಯ್ಯಾ ’ ಅಂದು ಇದನ್ನೆಲ್ಲ ತಿಂದು ಸುಖವಾಗಿರು ಅಂತ ವ್ಯಂಗ್ಯವಾಗಿ ಅನ್ನತ್ತೆ .
ಇದು ಒಳಿತು ಕೆಡಕು ನಡುವಿನ ಸಂಘರ್ಷದ ಕತೆ . ಆದರೆ ಒಳ್ಳೇದು ಯಾವದು ? ಕೆಟ್ಟದ್ದು ಯಾವದು ?
...
ಹುಲಿ ತ್ಯಾಗಜೀವಿ .
ಹುಲಿಯನ್ನು ಕೊಂದದ್ದು ಪುಣ್ಯಕೋಟಿಯ ಒಳ್ಳೇತನವೇ ? ಹುಲಿಯ ಹುಂಬತನವೆ? ಅಥವಾ ಸತ್ಯವೆಂಬ ಅಯುಧವೆ?
.........

ಇವು ಅಲ್ಲಿಯ ಲೇಖನದ ಆಯ್ದ ಸಾಲುಗಳು.
( ಈ ಜಾನಕಿ ಯಾರೋ ? ವಿವರ ಅಲ್ಲಿಲ್ಲ . .. ಆದರೆ ಇವರೂ ಸೊಲ್ಪ ನನ್ಹಾಗೇ ! ಮುಂದಿನ ಜನ್ಮದಲ್ಲಾದರೂ ನಿರಕ್ಷರಿಯಾಗಿ ನನ್ನನ್ನ ಹುಟ್ಟಿಸಪ್ಪಾ, ದೇವರೇ ! ಅಂತ ಬೇಡ್ಕೊಳ್ತಾರಂತೆ ! )

ಪುಣ್ಯಕೋಟಿಯ ಬಗ್ಗೇ ( ಆದರ್ಶ ವ್ಯಕ್ತಿಗಳ ಬಗ್ಗೇ -- ಅವರ ಹೆಸರು ಹೇಳಲ್ಲ -- ಯಾಕಂದ್ರೆ ಅವರ ಬಗ್ಗೇ ಚರ್ಚೆ ಶುರು ಆದೀತು) ಹೀಗೆಲ್ಲ ಟೀಕೆ ಬರಬೇಕಾದರೆ ನಮ್ಮ ನಿಮ್ಮ ಬಗ್ಗೆ ಏನಾದರೂ ಟೀಕೆ ಬಂದ್ರೆ - ತಲೆಗೆ ಹಚ್ಕೋಬೇಡಿ - ನಾವು ನೀವು ಯಾವ ಗಿಡದ ತೊಪ್ಪಲು ? ಅಂದ್ಕೊಂಡು ನಿಶ್ಚಿಂತೆಯಾಗಿರಿ .

ಯಾರದೋ ಟೀಕೆಗೆ ಅಕಾರಣ ಒಳಗಾಗಿ ಬೇಜಾರು ಮಾಡ್ಕೊಂಡಿದ್ದ ನಂಗೆ ಈ ಪುಸ್ತಕ ಸಕಾಲಕ್ಕೆ ಸಿಕ್ಕು , ಈ ಲೇಖನ ಓದಿ, ಒಂಥರಾ ಸಮಾಧಾನ ಆಯ್ತು !

ಅಂದ ಹಾಗೆ ಪು.ತಿ.ನ , ಮೊಗಳ್ಳಿ ಗಣೇಶ್ ಇವರುಗಳೂ ಪುಣ್ಯಕೋಟಿ ಕತೆ ಬಗ್ಗೆ ಏನೋ ಬರೆದಿದ್ದಾರಂತೆ ? ನಿಮಗೇನಾದರೂ ಗೊತ್ತಾ?

  • ಗೋವಿನ ಹಾಡು
  • ಪುಣ್ಯಕೋಟಿ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 266 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 15, 2008 - 2:56pm — Sunil Jayaprakash

ಉ: ಪುಣ್ಯಕೋಟಿ ದುಷ್ಟ ಆಕಳೇ ? ಹುಲಿಯು ಪಾಪದ ಪ್ರಾಣಿಯೇ ? ಮತ್ತೆ ನಾವೂ, ನೀವೂ ?

Sunil Jayaprakash's picture

ನಿರಕ್ಷರಿ ಅಷ್ಟೇ ಸಾಕೆ, ಮಿಶ್ರಿಕೋಟಿ. ನನ್ನನ್ನು "ಕುರುಡ, ಕುಂಟ, ಚೊಂಚ, ಕಿವುಡ ಮಾಡಯ್ಯ ತಂದೆ" ಅಂತ ಒಂದು ಹಾಡಿದೆಯಲ್ಲ ಅದನ್ನೂ ನೆನಪಿಗೆ ತಂದುಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 15, 2008 - 8:18pm — poornimas

ಉ: ಪುಣ್ಯಕೋಟಿ ದುಷ್ಟ ಆಕಳೇ ? ಹುಲಿಯು ಪಾಪದ ಪ್ರಾಣಿಯೇ ? ಮತ್ತೆ ನಾವೂ, ನೀವೂ ?

poornimas's picture

ಜಾನಕಿ = ಜೋಗಿ, ಕನ್ನಡಪ್ರಭದಲ್ಲಿ ಬರೆಯುತ್ತಾರೆ. ಅವರದ್ದು ’ಜೋಗಿಮನೆ’ ಅಂತ ಬ್ಲಾಗ್ ಇದೆ. ನೀವು ಹೇಳಿದ ಲೇಖನ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿತ್ತು.
http://thatskannada.oneindia.in/literature/article/270207govinahadu_revi...

ಅದಕ್ಕೆ ವಿಕ್ರಮ್ ಹತ್ವಾರ್ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ, ನೋಡಿ
http://thatskannada.oneindia.in/literature/article/060307govinahadu_vikr...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೋವಿನ ಹಾಡು-ಕನ್ನಡತನವನ್ನು ಎರಕ ಹೊಯ್ದ ಪ್ರತಿಮೆ
  • 'ಕೊಟ್ಟ ಭಾಷೆಗೆ ತಪ್ಪಲಾರೆನು'- ಪುಣ್ಯಕೋಟಿಯ ಕುರಿತು ಇನ್ನೊಂದು ಲೇಖನ .
  • ಪುಣ್ಯಕೋಟಿ ಎಂಬ ಹುಲಿಯು.....
  • ಧರಣಿ ಮಂಡಲ ಮಧ್ಯದೊಳಗೆ... ಸಾಹಿತ್ಯ ಇದೆಯಾ?
  • ಗೋವಿನ ಹಾಡು
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:51pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:48pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ

— ದೇವರ ದಾಸಿಮಯ್ಯ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator