Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು

January 15, 2008 - 3:33pm — shreekant.mishrikoti

ಒಂದು ವಾರ ರಜ ಹಾಕಿ ನನ್ನೂರಿಗೆ ಹೋದಾಗ ಅಲ್ಲಿ ಇನ್ನಷ್ಟು ಪುಸ್ತಕ ಖರೀದಿ ಮಾಡಿದೆ .
೧.ವಸುಧೇಂದ್ರ ಅವರ ’ಯುಗಾದಿ’ ಕತೆಗಳ ಪುಸ್ತಕ .
೨.ಜಾನಕಿ ಕಾಲಂ -
೩. ಜೋಗಿ ಕತೆಗಳು - ಸುಮಾರು ೩-೪ ಪುಟಗಳ ಕತೆಗಳಿವೆ. ವಿಚಿತ್ರ ಆಗಿವೆ . ಬರವಣಿಗೆ ಚೆನ್ನಾಗಿದೆ . ಅನೆಕ ಕತೆಗಳು ತಿಳಿಯೋದೇ ಇಲ್ಲ . ಆ ಕವನದ ಅರ್ಥ ಏನು / ಈ ಕವನದ ಅರ್ಥ ಏನು ಎಂದೆಲ್ಲ ಪದ್ಯಗಳನ್ನು ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನಿಸ್ತೇವೆ. ಅದರೆ ಸರಳ ಗದ್ಯಾನೇ ಅನೇಕ ಸಲ ಅರ್ಥ ಆಗೋಲ್ವಲ್ಲ ? ಯಾವಾಗಲಾದರೂ ನಿಮಗೂ ಹಾಗೆ ಅನಿಸಿದೆಯೇ ? ಇಂಥ ಕತೆಗಳ ಬಗ್ಗೂ ಚರ್ಚೆ ಮಾಡೋಣ್ವೇ ?
೪. ಬೆಸ್ಟ್ ಆಫ್ ಕೇ.ಫ . - ಬಹಳ ದಿನದಿಂದ ಹುಡುಕ್ತಿದ್ದೆ
೫. ಬೆಸ್ಟ್ ಆಫ್ ಬಿ.ಜಿ.ಎಲ್. ಸ್ವಾಮಿ
೬. ಹೊಸಗನ್ನಡ ವ್ಯಾಕರಣ ( ಯಾರೋ ಅರಳಗುಪ್ಪಿ ಅಂತೆ )
೭. ಹಿಂದೆ ಯಾವಾಗಲೋ ಹಳೆಗನ್ನಡದ ವ್ಯಾಕರಣ ಎಂತಹದು ಎಂದೇನೋ ಶಂಕರ ಭಟ್ಟರ ಒಂದು ಪುಸ್ತಕ ನೋಡಿದ್ದೆ . ಅದು ಸಿಗಲಿಲ್ಲ ; ಬದಲಾಗಿ ಇಂಗ್ಲೀಷ್ ಹೆಸರಿನ ಒಂದು ಹಳೆ ಕನ್ನಡ ವ್ಯಾಕರಣ ಪುಸ್ತಕ ಸಿಕ್ತು .
೮. ನನ್ನ ಅವ್ವನಿಗಾಗಿ ’ಮರುಳ ಮುನಿಯನ ಕಗ್ಗದ ವಿವರಣೆ’ ಪುಸ್ತಕ
೯. ಗೌರಿ ಲಂಕೇಶರ - ದರವೇಶಿ ಕತೆಗಳು . ಇದು ಸೂಫಿ ಕತೆಗಳ ಸಂಗ್ರಹ . ಒಂದು ಅಥವಾ ಎರಡು ಪುಟಗಳ ಕತೆಗಳಿವೆ.
೧೦. ಶ್ರೀನಿವಾಸ ವೈದ್ಯ ಅವರ ಇನ್ನೊಂದು ಕಥಾಸಂಗ್ರಹ - ಅಗ್ನಿಕಾರ್ಯ
ಈ ಎಲ್ಲ ಪುಸ್ತಕದ ಬೆಲೆ ಸುಮಾರು ನೂರು ನೂರು ರೂಪಾಯಿಗಳು

ಆಮೇಲೆ ಫರ್ಸ್ಟ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲೇ ಯಾವ್ದೋ ಕಾಲಕ್ಕೆ ಪ್ರಿಂಟಾದ ಪುಸ್ತಕಗಳು ಇದ್ದವು . ಅವನ್ನೂ ೧೦/೧೫/೨೦ ರೂಪಾಯಿಗೆ ತಗೊಂಡೆ ! .

  • ಪುಸ್ತಕಗಳು
Ornamental seperator
  • shreekant.mishrikoti ರವರ ಬ್ಲಾಗ್
  • Login or register to post comments
  • 275 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 15, 2008 - 4:08pm — kpbolumbu

ಉ: ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು

kpbolumbu's picture

'ಮರುಳ ಮುನಿಯನ ಕಗ್ಗದ ವಿವರಣೆ' ಕವಿತಾಕೃಷ್ಣರ ಅನುವಾದವೇ?
______
ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
January 15, 2008 - 4:55pm — shreekant.mishrikoti

ಉ: ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು

shreekant.mishrikoti's picture

ಅಲ್ಲ ; ಯಾರೋ ಶ್ರೀಕಾಂತ್ ಅಂತೆ ( ಅವನು ನಾನಲ್ಲ Smiling ) ನಿಟ್ಟೂರು ಶ್ರೀನಿವಾಸ್ರಾಯರ ಮುನ್ನುಡಿ ಇದೆ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
January 17, 2008 - 6:12pm — madhava_hs

ಉ: ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು

madhava_hs's picture

ಬೈರಪ್ನೋರ ಪುಸ್ತಕಗಳನ್ನು ಖರೀದಿಸ್ಲಿಲ್ವೇನ್ರೀ? ಅಥವಾ ಆಗಲೇ ಓದಿ ಮುಗಿಸಿದ್ದೀರಾ?

ಬೈರಪ್ಪನವರ ’ಆವರಣ’ ವನ್ನು ಕೆಲ ವಾರಗಳಹಿಂದೆ ಓದಿದೆ. ೫ ವರ್ಷಗಳೂ ಬಹಳ ಕಷ್ಟಪಟ್ಟು ಮಾಹಿತಿಗಳನ್ನು ಕಲೆಹಾಕಿ ಬರೆದಿದ್ದಾರಂತೆ. ಬಹಳ ಉತ್ತಮ ಕಾದಂಬರಿ.

ನಾನು ವ್ಯಾಸರಾಯಬಲ್ಲಾಳರ ಸಮಗ್ರ ಕಥೆಗಳ ಪುಸ್ತಕವನ್ನು ಹುಡುಕಾಡಿದ್ದೆ, ಆದರೆ ಸಿಕ್ಕಿಲ್ಲ!.
ಅವರ ಕಥೆಘಳೂ ಚೆನ್ನಾಗಿರ್ತವೆ ಅಂತ ಕೇಳಿದ್ದೇನೆ.

ಬೈರಪ್ಪನವರಿಂದ ಕನ್ನಡ ಸಾಹಿತ್ಯ ಶ್ರೀಮಂತಿಗೆ ಹೆಚ್ಚಿದೆ. ಯಾವುದೇ ಆಡಂಬರಗಳಿಲ್ಲದೆ ಎಲೆ ಮರೆ ಕಾಯಿಯಂತೆ ತಮ್ಮ ಸಾಹಿತ್ಯ ಕೃಶಿಯನ್ನು ಮಾಡುತ್ತಿರುವ ಬೈರಪ್ಪನವರಿಂದ ಇನ್ನಷ್ಟು ಕೃತಿಗಳನ್ನು ನಿರೀಕ್ಷಿಸೋಣವೇ?

ನನಗೆ ಕಾದಂಬರಿಗಳಿಗಿಂತ ಸಣ್ಣ ಸಣ್ಣ ಕಥೆಗಳನ್ನೋದುವುದೇ ಅಭ್ಯಾಸ. ಏಕೆಂದರೆ ೨೦೦-೩೦೦-೪೦೦ ಪುಟಗಳನ್ನೋದಿ ಒಂದು ಕಥೆ ತಿಳಿದುಕೊಳ್ಳುವ ಸಹನೆ ಏಕೋ ನನಗೆ ಹೊರಟು ಹೋಗಿದೆ. ಕಾಲೇಜು ದಿನಗಳಲ್ಲಿ ಯಂಡಮೂರಿ ವೀರೇಂದ್ರ ನಾಥ್, ಹಾಗೂ ಇನ್ನಿತರ ಪ್ರಸಿದ್ದ ತೆಲುಗು ಲೇಖಕರ ಕಾದಂಬರಿಗಳ ಕನ್ನಡ ಅವತಣಿಕೆಯನ್ನೋದುತ್ತಿದ್ದೆವು. ಆಗಿದ್ದ ಸಹನೆ ಈಗಿಲ್ಲ. ಏಕೋ ಗೊತ್ತಿಲ್ಲ. ಅದಕ್ಕೇ ಏನೋಪ್ಪ ಒಂದು ಧಾರಾವಾಹಿಗಳನ್ನು ನೋಡಲೂ ಮನಸಾಗುವುದಿಲ್ಲ. ಎಂತಹ ಟಿ.ಎನ್.ಸೀತಾರಾಮ್ ಸೀರಿಯಲ್ಲು ದಿನವೂ ಮನೆಯಲ್ಲಿ ಎಲ್ಲರೂ ನೋದ್ಡುತ್ತಿದ್ದರೂ ನಾನು ಮಾತ್ರ ಒಂದು ಎಪಿಸೋಡನ್ನೂ ನೋಡಿಲ್ಲ.

ಅದೇ ಸುಧಾ, ತರಂಗಗಳಲ್ಲಿ ಬರುವ ಕಥೆಗಳನ್ನು ಓದುತ್ತೇನೆ. ಏಕೆಂದರೆ ೧೦-೧೫ ನಿಮಿಷದಲ್ಲಿ ಮುಗಿಯುತ್ತದಲ್ಲ!!

ಉತ್ತಮ ಕಥಾಸಂಕಲನಗಳು ನಿಮಗೆ ಗೊತ್ತಿರುವಂಥವನ್ನು ತಿಳಿಸಿ.

  • Login or register to post comments
  • link
  • Email this ಪ್ರತಿಕ್ರಿಯೆ
January 18, 2008 - 11:52am — shreekant.mishrikoti

ಉ: ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು

shreekant.mishrikoti's picture

೧. ನನಗೂ ನಿಮ್ಮ ಹಾಗೇ ಕಾದಂಬರಿ ಓದಲು ಸಹನೆ ಇಲ್ಲ , ಚಂದಮಾಮ , ಝೆನ್ , ಚಮತ್ಕಾರದ ಕತೆಗಳು , ದೃಷ್ಟಾಂತ ಕತೆಗಳು ಇತ್ಯಾದೀ ಸಣ್ಣ ಕತೆಗಳೇ ಇಷ್ಟ ;
ನಮ್ಮಿಂದ ಬಯಸುವ ಸಮಯ ಕಡಿಮೆ , ಕೊಡುವ ಸಂತೋಷ ತಿಳುವಳಿಕೆ ಹೆಚ್ಚು .

೨. ಬೈರಪ್ಪ ಕಾದಂಬರಿಗಳನ್ನು ೨೫ ವರ್ಷದ ಹಿಂದೆ ಓದಿದ್ದೆಷ್ಟೋ ಅಷ್ಟೇ , ಕತೆಗಿಂತ ಅವರ ಪುಸ್ತಕದಲ್ಲಿ ಪ್ರಬಂಧ, ಭಾಷಣ ಜಾಸ್ತಿ ಅಂತ ನನ್ನ ಅನಿಸಿಕೆ . ಅದಕ್ಕೇ ಭೈರಪ್ಪ ಬರಹದಿಂದ ದೂರ ಇದ್ದೀನಿ .

೩. ಮಾಸ್ತಿ ಕತೆಗಳನ್ನು ಓದಿ , ಜಯಂತ ಕಾಯ್ಕಿಣಿಗಳನ್ನೂ ಓದಿ , ಶ್ರೀನಿವಾಸ ವೈದ್ಯರ ’ಮನಸುಖರಾಯರ ಮನಸ್ಸು’ , ಕುಂ. ವೀ. ಅವರ ’ಭಳಾರೆ ವಿಚಿತ್ರಂ’ ಓದಿ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಇತ್ತೀಚಿನ ಪುಸ್ತಕ ಖರೀದಿ ಮತ್ತು ಓದು- ಮತ್ತೆ ಸಿಕ್ಕ ವಜ್ರ ?
  • ಪುಸ್ತಕ ನಿಧಿ - ಮಾಸ್ತಿ ವೆಂಕಟೇಶ ಅಯ್ಯಂಗಾರರ ಅದ್ಭುತ ಕತೆಗಳು
  • ನನ್ನ ಇತ್ತೀಚಿನ ಓದು
  • ಪುಸ್ತಕ ಬಿಡುಗಡೆ
  • ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 11 ಅತಿಥಿಗಳು ಆನ್ಲೈನ್ ಇರುವರು.

ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator