ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಈ ಸಿನೇಮಾ ಯಾವದು ?
ಇವತ್ತು ಶನಿವಾರ , ೧೯ ಜನವರಿ ೨೦೦೮, ಚಂದನ ಚಾನೆಲ್ಲಿನಲ್ಲಿ ಒಂದು ಕನ್ನಡ ಸಿನೆಮಾ ಬರ್ತಾ ಇದೆ , ಮಲೆನಾಡಲ್ಲಿ ೨೦ ವರ್ಷ ಹಿಂದೆ ತೀರಿಕೊಂಡೋನು ಬಯಲುಸೀಮೆಯಲ್ಲಿ ಪುನರ್ಜನ್ಮ ಎತ್ತಿದ್ದಾನೆ , ಹಿಂದಿನ ಜನ್ಮದ ಅಪ್ಪ , ಅಮ್ಮ , ಇತರ ಜನ ತೀರಿಕೊಂಡೋನೇ ಇವನು ಅಂತ ಒಪ್ಕೊಂಡಿದ್ದಾರೆ , ಹೆಂಡತಿ ತಲೆ ಬೋಳಿಸಿಕೊಂಡು ವಿಧವೆಯ ಬಾಳು ಬದುಕುತ್ತಿದ್ದು , ಈಗ ಸಂಕಷ್ಟಕ್ಕೆ ಸಿಲುಕಿದ್ದಾಳೆ , ವೈಶಾಲಿ ಕಾಸರವಳ್ಳಿಯವರ ಮಗಳು , ಮತ್ತೆ ಸುನೀಲ್ ಪುರಾಣಿಕ್ ಈ ಚಿತ್ರದಲ್ಲಿದ್ದಾರೆ , ಈ ಸಿನೇಮಾದ ಹೆಸರು , ನಿರ್ದೇಶಕರು , ಕತೆಗಾರರು ,ಮತ್ತೇನಾದ್ರೂ ಹೆಚ್ಚಿನ ವಿವರ ಗೊತ್ತಿದ್ರೆ ತಿಳಿಸ್ತೀರಾ?

- shreekant.mishrikoti ರವರ ಬ್ಲಾಗ್
- Login or register to post comments
- 246 hits
- Email this blog




RSS:
ಪ್ರತಿಕ್ರಿಯೆಗಳು
ಉ: ಈ ಸಿನೇಮಾ ಯಾವದು ?
ಕಥೆಯ ಜಾಡನ್ನು ಕೇಳಿದ್ರೆ ಭೈರಪ್ಪ ಅವರ ನಾಯಿ ನೆರಳಿನ ತರಹ ಇದೆ. ಅದೇ ಆಗಿದ್ರೆ, ನಿರ್ದೇಶಕರು ಗಿರೀಶ್ ಕಾಸರವಳ್ಳಿ.
-ಹಂಸಾನಂದಿ
ಉ: ಈ ಸಿನೇಮಾ ಯಾವದು ?
ಹಂಸಾನಂದಿಯವರು ಸರಿಯಾಗಿ ಕಂಡುಹಿಡಿದರು.
ಭೈರಪ್ಪನವರ ಕಾದಂಬರಿ "ನಾಯಿ ನೆರಳು"ವಿನ ಮೇಲೆ ಅಧಾರಿತ ಚಲನಚಿತ್ರದ ನಿರ್ದೇಶಕ ಗಿರೀಶ್ ಕಾಸರವಳ್ಳಿ. ( ೨೦೦೫- ೦೬ ನೇ ಸಾಲಿನ ಅತ್ಯುತ್ತಮ ಚಿತ್ರ) ಹಾಗೆಯೇ ೨೦೦೬ರಲ್ಲಿ ಓಶಿಯನ್ ಸಿನಿಫ್ಯಾನ್ ಏಶಿಯಾ ಚಿತ್ರೋತ್ಸವದ ವಿಶೇಷ ಜ್ಯೂರಿ ಪ್ರಶಸ್ತಿ ಕೂಡ
ತಾಯಿ ವೆಂಕಟಲಕ್ಷ್ಮಿಯ ಪಾತ್ರದಲ್ಲಿ ಪವಿತ್ರಾ ಲೋಕೇಶ್ ( ಅತ್ಯುತ್ತಮ ನಟಿ ). ಮಗಳು ರಾಜಲಕ್ಷ್ಮಿಯ ಪಾತ್ರದಲ್ಲಿ ಗಿರೀಶ್ ಕಾಸರವಳ್ಳಿ ಪುತ್ರಿ ಅನನ್ಯ ಅಭಿನಯಿಸಿದ್ದಾರೆ.
ಕ್ಯಾಮೆರಾ ಶ್ರೀ ರಾಮಚಂದ್ರ ಐತಾಳರದ್ದು.
ಈ ಕೆಳಗಿನ ಕೊಂಡಿಯಲ್ಲಿ "ದಿ ಹಿಂದೂ" ಪತ್ರಿಕೆಯ ಪುಟ ನೋಡಿ.
http://www.hindu.com/mag/2006/08/06/stories/2006080600090500.htm
-ನವರತ್ನ ಸುಧೀರ್
ಉ: ಈ ಸಿನೇಮಾ ಯಾವದು ?
ಎನ್ನಾರೆಸ್ ಅವರಿಗೂ ಹಂಸಾನಂದಿ ಅವರಿಗೂ ಧನ್ಯವಾದಗಳು. ಸಿನೇಮಾ ಚೆನ್ನಾಗಿತ್ತು .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಈ ಸಿನೇಮಾ ಯಾವದು ?
ಸಿನಿಮಾಗಿಂತ ಕಾದಂಬರಿ ಓದಿ. ಇನ್ನು ಸಕ್ಕತ್ತಾಗಿದೆ.
ಕಾದಂಬರಿ ಮೊದಲೆ ಓದಿದ್ದ್ದ ನನಗೆ ಸಿನಿಮ ಹಿಡಿಸಲಿಲ್ಲ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಈ ಸಿನೇಮಾ ಯಾವದು ?
ಕಾಸರವಳ್ಳಿಯವರು ಅದನ್ನು ವೆಂಕಟಲಕ್ಷ್ಮಿಯ ದೃಷ್ಟಿಯಿಂದ ತೋರಿಸಿದ್ದಾರೆ. ಕಾದಂಬರಿಯಲ್ಲಿ ವೆಂಕಟಲಕ್ಷ್ಮಿ ಗಂಡನನ್ನು ಸಂಪೂರ್ಣ ನಂಬುತ್ತಾಳೆ. ಸಿನಿಮಾದಲ್ಲಿ ಅವಳು ನಂಬುವುದಿಲ್ಲ, ಆದರೆ ನಂಬಿದಂತೆ ನಟಿಸುವುದರಿಂದ ತನ್ನನ್ನು ಸಮಾಜ ನೋಡುವ ರೀತಿ ಬದಲಾದೀತೇನೋ ಎಂಬ ಆಸೆಯಿಂದ ನಂಬುವಂತೆ ಕಾಣಿಸುತ್ತಾಳೆ. ಅವಳು ಕೊನೆಗೂ ತನ್ನ ಅಸ್ತಿತ್ವವನ್ನು ಹೇಗೆ ಕಂಡುಕೊಳ್ಳುತ್ತಾಳೆ ಎನ್ನುವುದೇ 'ನಾಯಿನೆರಳು' ಸಿನಿಮಾ.
______
ಬೊಳುಂಬು
ಉ: ಈ ಸಿನೇಮಾ ಯಾವದು ?
ಸುಮಾರಾಗಿ, ಎಲ್ಲ ಕಾದಂಬರಿ ಆಧಾರಿತ ಚಿತ್ರಗಳದ್ದೂ ಇದೇ ಪಾಡು; ನಾನು ಗೃಹಭಂಗ, ನಾಯಿನೆರಳು ಚಿತ್ರಗಳನ್ನು ನೋಡಿಲ್ಲ - ಆದರೆ, ಅವೂ ವಂಶವೃಕ್ಷದ, ಕಾಡು ಮೊದಲಾದ ಚಿತ್ರಗಳ ಹಾದಿ ಹಿಡಿದಿದ್ದರೆ, ಕಾದಂಬರಿ ಓದಿದವರಿಗೆ ನಿರಾಶೆಯಾಗುವುದರಲ್ಲಿ ಸಂಶಯವಿಲ್ಲ. ಹ್ಯಾರಿ ಪಾಟರ್ ಚಿತ್ರವನ್ನು ನೋಡಿದಾಗಲೂ ನನಗೆ ಇದೇ ರೀತಿ ನಿರಾಸೆಯಾಯಿತು.
ಓದುವಾಗ ನಮ್ಮ ಮನಸ್ಸಿನಲ್ಲಿ ಕಲ್ಪನೆಗಳು ಗರಿಕೆದರಬಹುದು. ನೋಡುವಾಗ ಹಾಗಾಗುವುದಿಲ್ಲವಲ್ಲ? ಆದರೆ, ಚಿತ್ರವನ್ನು ನೋಡಿದಾಗ, ಓದದಿದ್ದವರು ಆ ಕತೆ/ಕಾದಂಬರಿಯನ್ನು ಓದಬೇಕೆನ್ನಿಸುವಷ್ಟು ಆಸೆ ತಂದರೆ, ಅದು ಯಶಸ್ವಿ ಎಂದು ನನ್ನ ಎಣಿಕೆ. (ಹೀಗೆ, ಕಳೆದವರ್ಷ ಸಿಂಗಾರವ್ಬ ಮತ್ತು ಅರಮನೆ ಚಿತ್ರ ನೋಡಿದಾಗ, ಮೂಲವನ್ನು ಓದದ ನನಗೆ ಅದನ್ನು ಓದಲೇಬೇಕೆನ್ನಿಸಿ, ಓದಿದೆ)
-ಹಂಸಾನಂದಿ