ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಒಂದು ಹುಚ್ಚುಹುಚ್ಚಾದ, ಆದ್ರೆ ಅರ್ಥಪೂರ್ಣ ಕತೆ

December 21, 2007 - 1:48pm — shreekant.mishrikoti

ಒಂದು ರೈಲುನಿಲ್ದಾಣ; ಒಬ್ಬ ಸೂಟ್‍ಕೇಸಿನೊಂದಿಗೆ ಅಲ್ಲಿಗೆ ಬಂದು ಅಲ್ಲಿ ಇರೋನ್ನ ಕೇಳಿದ.
-ಕ್ಷಮಿಸಿ , ರೈಲು ಆಗಲೇ ಹೊರಟು ಹೋಯಿತೆ?
-ನೀವು ಈ ದೇಶಕ್ಕೆ ಹೊಸಬರಂತ ಕಾಣ್ತದೆ , ಒಂದ್ ಕೆಲ್ಸ ಮಾಡಿ , ತಕ್ಷಣ ಒಂದು ಹೋಟೆಲ್ಲಿನಲ್ಲಿ ರೂಮ್ ಹಿಡೀರಿ , ತಿಂಗಳ ಲೆಕ್ಕಕ್ಕೆ ಆದ್ರೆ ತುಂಬ ಸೋವಿ ಆಗುತ್ತೆ.
-ನಿಮಗೇನು ಹುಚ್ಚಾ ? ನಾನು ಈ ಊರಲ್ಲಿ ಇರೋದಿಕ್ಕೆ ಬಂದಿಲ್ಲ ; ನಾಳೆ ಹೊತ್ತಿಗೆ ನಾನು ಟೀಸಿಟೀನಲ್ಲಿರಬೇಕು.
-ನಾನು ನಿಮ್ಮನ್ನ ನಿಮ್ಮ ಪಾಡಿಗೆ ಬಿಡಬೋದು , ಆದ್ರೆ ಒಂದಿಷ್ಟು ವಿಷ್ಯ ಹೇಳ್ಬೇಕು.
-ದಯಮಾಡಿ ಅದೇನು ತಿಳಿಸಿ
-ಈ ದೇಶದ ರೈಲು ವ್ಯವಸ್ಥೆ ಇನ್ನೂ ಪರಿಪೂರ್ಣ ಆಗಿಲ್ದಿದ್ರೂ ಟೈಮ್-ಟೇಬಲ್ ಪ್ರಕಟಿಸೋದ್ರಲ್ಲಿ ಮತ್ತು ಟಿಕೆಟ್ ಕೊಡೋದ್ರಲ್ಲಿ ಬಹಳ ಮುಂದುವರಿದಿದೆ. ರೈಲ್ ವೇಳಾಪಟ್ಟಿಯಲ್ಲಿ ದೇಶದ ಎಲ್ಲಾ ನಗರಗಳೂ ಹಳ್ಳಿಗಳೂ ಸಂಪರ್ಕ ಹೊಂದಿವೆ. ಎಲ್ಲಿಂದ ಎಲ್ಲಿಗೆ ಬೇಕಾದರೂ ಟಿಕೆಟ್ ಸಿಗುತ್ತದೆ . ಆದರೆ ಟ್ರೇನುಗಳು ಮಾತ್ರ ಸರಿಯಾಗಿ ಇಲ್ಲ ; ಜನ ಪ್ರಗತಿ ಆಗುತ್ತೆ ಅನ್ನೋ ಭರವಸೆ ಇಟ್ಕೊಂಡಿದಾರೆ , ಈ ನಡುವೆ ಅವರು ರೈಲು ಸೇವಾವ್ಯವಸ್ಥೆಯಲ್ಲಿರುವ ವ್ಯತ್ಯಯಗಳನ್ನೆಲ್ಲಾ ಒಪ್ಪಿಕೊಂಡು ಬಿಟ್ಟಿದಾರೆ. ಇದಕ್ಕೆ ಅವರ ದೇಶಪ್ರೇಮವೇ ಕಾರಣ ;
-ಅಂದ್ರೆ? ಈ ಊರಿನ ಮೂಲಕ ಟ್ರೇನು ಓಡಾಡುತ್ವೆ ತಾನೆ?
-ಇಲ್ಲಿ ಹಳಿಗಳಾದ್ರೂ ಇವೆ , ಬೇರೆ ಊರಲ್ಲಿ ಸೀಮೆಸುಣ್ಣದಲ್ಲಿ ನೆಲದ ಮೇಲೆ ಎರಡು ಗೆರೆ ಎಳ್ದಿರ್ತಾರೆ ; ಅವೇ ಹಳಿಗಳು . ಪರಿಸ್ಥಿತೀನ ಗಮನಿಸಿದ್ರೆ ಇಲ್ಲಿ ಯಾವ ಟ್ರೇನೂ ಬರಬೇಕಾಗಿಲ್ಲ . ಆದ್ರೆ ಇಲ್ಲಿ ಯಾವಾಗಲೋ ಒಮ್ಮೆ ಟ್ರೇನು ಬರೋದಂತೂ ನಿಜ. ನೀವು ಸಾಕಷ್ಟು ಸಮಯ ಕಾದರೆ ಒಂದು ಒಳ್ಳೇ ಅನುಕೂಲಕರ ಡಬ್ಬಿಯೊಳಗೆ ಸೀಟೂ ಸಿಗಬಹುದು.
- ಆ ಟ್ರೇನಿನಲ್ಲಿ ನಾನು ಟೀಸಿಟೀಗೆ ಹೋಗ್ಬಹುದಾ?
- ನಿಮಗೆ ಟೀಸಿಟೀಗೇ ಹೋಗ್ಬೇಕನ್ನೋ ಹಟ ಯಾಕೆ? ಯಾವ್ದೋ ಒಂದು ಟ್ರೇನು ಸಿಕ್ರೆ ಸಾಕು ಅಂತ ಜನ ಕಾದಿದಾರೆ? ಅದು ಎಲ್ಲಿಗೆ ಹೋದ್ರೆ ಏನು? ನಿಮಗೆ ಮುಖ್ಯ, ಸಂತೃಪ್ತ ಭಾವನೆ ಇರಬೇಕು.
- ಅಲ್ಲಾ, ಯಾಕೆ ಕೇಳ್ದೆ ಅಂದ್ರೆ , ನಾನು ಹೋಗ್ಬೇಕಿರೋದು ಟೀಸಿಟೀಗೆ , ಅಲ್ಲಿಗೆ ಹೋಗೋಕೆ ಟಿಕೇಟ್ಟೂ ತಗೊಂಡಿದೀನಿ
- ಟಿಕೆಟ್ ವಿಷ್ಯ ಏನ್ ಹೇಳ್ತೀರಾ? ಇಲ್ಲಿ ರಾಶಿರಾಶಿ ಟಿಕೆಟ್ ತಕೊಂಡೋರಿದ್ದಾರೆ, ಜಾಣರಾದವರು ದೇಶದಲ್ಲಿರೋ ರೈಲುಮಾರ್ಗಗಳ ಎರಡೂ ಕಡೇಲಿರೋ ಎಷ್ಟು ಸಾಧ್ಯವೋ ಅಷ್ಟು ಸ್ಟೇಶನ್ನಿಗೆ ಟಿಕೆಟ್ ತಗೊಂಡಿರ್ತಾರೆ. ಟಿಕೆಟ್ ಮೇಲೆ ಅಪಾರ ಆಸ್ತಿಪಾಸ್ತಿ ಖರ್ಚು ಮಾಡಿರೋರೂ ಇದ್ದಾರೆ, ಗೊತ್ತಾ? ಒಬ್ಬ ಅಂತೂ ಟಿಕೆಟ್ ಮೇಲೆ ಎಷ್ಟು ಹಣ ಖರ್ಚು ಮಾಡಿದ್ದಾನೆ ಅಂದ್ರೆ ಆ ಹಣದಲ್ಲೇ ಅವನಿಗೆ ಬೇಕಾದ ಸ್ಥಳಕ್ಕೆ ರೈಲು ಲೈನ್ ಹಾಕಿ , ನಡುವೆ ಬೇಕಾಗೋ ಸೇತುವೆ , ಸುರಂಗ ಕೂಡ ಮಾಡಿ , ಒಂದು ರೈಲನ್ನೇ ಖರೀದೀನೂ ಮಾಡ್ಬಹುದಿತ್ತು .
- ಟೀಸಿಟೀಗೆ ಹೋಗೋ ರೈಲು ....
- ಟ್ರೇನುಗಳೇನೋ ಅಗಾಗ ಬರುತ್ವೆ ಆದ್ರೆ ಅವನ್ನ ನಂಬೋ ಹಾಗಿಲ್ಲ ಅನ್ನೋದನ್ನ ಮರೀಬೇಡಿ . ಒಂದು ಟ್ರೇನಿಗೆ ನೀವು ಹತ್ಕೊಂಡ್ರಿ ಅಂತ ತಿಳ್ಕೊಳ್ಳಿ . ಆದ್ರೆ ಅದು ನಿಮಗೆ ಬೇಕಾದ ಸ್ಥಳಕ್ಕೆ ನಿಮ್ಮನ್ನ ಮುಟ್ಟಿಸತ್ತೆ ಅಂತ ನೀವು ನಿರೀಕ್ಷೆ ಮಾಡ್ಬಾರ್ದು.

.....(ಇನ್ನೂ ಇದೆ)
.....ಇದೆಲ್ಲ ಏನಪ್ಪಾ ಅಂತ ಇದೀರಾ? ತಡೀರಿ , ಪೂರ್ತಿ ಕತೆ ಕೇಳೋರಂತೆ . ಆಮೇಲೆ ಹೇಳ್ತೀನಿ.

(ಮುಂದಿನ ಭಾಗ ಇಲ್ಲಿದೆ - http://www.sampada.net/blog/shreekantmishrikoti/22/12/2007/6749 )

  • ಅಸಂಗತ ಕತೆ
  • ಕತೆ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 303 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಂದುವರಿದ ಹುಚ್ಚುಹುಚ್ಚಾದ ಕತೆ
  • ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ"...
  • ರೈಲು ಪಯಣದ ಮಧುರಾನುಭವ
  • ಒಂದಿಷ್ಟು ಒಣ ತರಲೆ
  • ಗರೀಬ್ ರಥ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 89 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator