ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಜೀವನದಲ್ಲಿ ನಮ್ಮದೇ ದಾರಿ ಕಂಡುಕೊಳ್ಳಬೇಕೇ ?

January 31, 2008 - 2:30am — shreekant.mishrikoti

"ಜೀವನದಲ್ಲಿ ನಮ್ಮದೇ ದಾರಿಯನ್ನು ಹುಡುಕಿಕೊಂಡು ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳುವವವರ ಮಾತಿಗೆ ನಾನು ಸೊಪ್ಪು ಹಾಕುವದಿಲ್ಲ. ಏಕೆಂದರೆ ನಶ್ವರವಾದ ಈ ಮನುಷ್ಯ ದೇಹದ ಆಯಸ್ಸು ಬಹಳ ಎಂದರೆ ೬೦-೭೦ ವರ್ಷ. ಅದರಲ್ಲಿ ನಾವು ಸುಖಪಡಲು ಸಿಗುವ ವರ್ಷ ಬಹಳ ಎಂದರೆ ಇಪ್ಪತ್ತು. ಈ ಅಲ್ಪಕಾಲಾವಧಿಯಲ್ಲಿ ತಣ್ಣಗೆ ನಿರ್ಯೋಚನೆಯಿಂದ ಸುಖಪಡುವದು ಬಿಟ್ಟು ನಮ್ಮದೇ ದಾರಿಯನ್ನು ಹುಡುಕಿ ಅಲ್ಲಿಯ ಕಲ್ಲು ಮುಳ್ಳು ಆರಿಸುತ್ತ ಕೂಡುವದು ಯಾವ ಜಾಣತನ ಹೇಳಿ ? ಅದಕ್ಕಾಗಿಯೇ ನಾನು ಯಾವಾಗಲೂ ಸ್ವಂತ ದಾರಿಯನ್ನು ಸೃಷ್ಟಿಸಿಕೊಳ್ಳುವ ಮೂರ್ಖತನಕ್ಕೆ ಹೋಗದೆ ಬೇರೆಯವರು ರೆಡಿ ಮಾಡಿಟ್ಟಿರುವ ಸಿಮೆಂಟ್ ದಾರಿಯಲ್ಲಿ ತಣ್ಣಗೆ ನಡೆದು ನನ್ನ ಜೀವನವನ್ನು ಸುಖವಾಗಿ ಕಳೆಯಲು ನಿರ್ಧರಿಸಿದ್ದೇನೆ."

ಇತ್ತೀಚೆಗೆ ನಾನು ಎರಡು ಪುಸ್ತಕ ಓದಿದೆ. ಅವು ಎಂ. ಪಿ. ಮನೋಹರಚಂದ್ರನ್ ಮತ್ತು ಅನಂತ ಕಲ್ಲೋಳರು ಬರೆದದ್ದು ( ಪ್ರತ್ಯೇಕವಾಗಿ ಬರೆದದ್ದು , ಜತೆಯಾಗಿ ಅಲ್ಲ ). ಒಂದು ಪತ್ತೆದಾರಿ ಕಾದಂಬರಿ , ಇನ್ನೊಂದು ಹಾಸ್ಯ ಲೇಖನಗಳ ಸಂಗ್ರಹ . ಈ ಹಾಸ್ಯ ಲೇಖನಗಳ ಸಂಗ್ರಹದಲ್ಲಿ ಕಂಡ ವಿಚಾರ ಇದು. ನಿಮಗೆ ಏನಾದರೂ ಉಪಯೋಗ ಆಗಬಹುದೇನೋ ಎಂದು ಈ ವಿಚಾರ ಇಲ್ಲಿ ಹಾಕಿದ್ದೇನೆ.

  • ಚಿಂತನ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 318 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 1, 2008 - 6:45am — venkatesh

ಉ: ಜೀವನದಲ್ಲಿ ನಮ್ಮದೇ ದಾರಿ ಕಂಡುಕೊಳ್ಳಬೇಕೇ ?

venkatesh's picture

ನನ್ನದಾರಿ ನನಗೆ, ನಿಮ್ಮದಾರಿ ನಿಮಗೆ, ಇದನ್ನು ನಾವು ಯಾವಾಗಲೂ ಕೇಳುವ ಮಾತು. ಅಂದರೆ, ನಾವು ಒಮ್ಮೊಮ್ಮೆ ನಮ್ಮದಾರಿಯಲ್ಲಿ ಹೋಗಲಿಕ್ಕೆ ತವಕಸಿವುದು ಕಂಡುಬರುವುದು ಸ್ವಾಭಾವಿಕ. ಮೊದಲು ಈಗಾಗಲೇ ಸಿದ್ಧಪಡಿಸಿರುವ ರಸ್ತೆಯಮೇಲೆ ನಡೆಯೋಣ. ನಂತರ ಅದರ ಅನುಭವದಮೇಲೆ ನಾವೇ ಹೊಸದಾರಿ ನಿರ್ಮಿಸಿ ಇನ್ನೂ ಹಲವರಿಗೆ ಮಾರ್ಗದರ್ಶನ ಮಾಡೋಣ. ಇದು ಈಗಾಗಲೆ ಎಲ್ಲರಿಗೂ ಗೊತ್ತಿರುವ ಸಂಗತಿ. ಗೊತ್ತಿಲ್ಲದ ದುರ್ಗಮ ರಸ್ತೆಯಾರಿಗೂ ಮುದಕೊಡುವುದಿಲ್ಲ. ಅಲ್ಲವೆ.
ಈ ಮಾತು ಅನ್ವಯಿಸುವುದು, ಏನಾದರೂ ಹೊಸದನ್ನು ಮಾಡಹೊರಟವರಿಗೆ ಮಾತ್ರ. ಸುಮ್ಮನೆ ಕೂಡ್ರುವರಿಗಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 1, 2008 - 1:11pm — naasomeswara

ಉ: ಜೀವನದಲ್ಲಿ ನಮ್ಮದೇ ದಾರಿ ಕಂಡುಕೊಳ್ಳಬೇಕೇ ?

naasomeswara's picture

ಈ ಮಾತು ಜೀವವಿಕಾಸದ ದೃಷ್ಟಿಯಿಂದ ಸರಿಯಿಲ್ಲ.

ಮನುಷ್ಯನನ್ನು ನಾವು `ಹೋಮೋ ಸೆಪಿಯನ್ಸ್` ಎಂದು ಕರೆಯುತ್ತೇವೆ. `ಮತಿವಂತ ಮಾನವ` ಎಂದು ಇದರ ಅರ್ಥ. ಮನುಷ್ಯನನ್ನು ಮತಿವಂತ ಎಂದು ಕರೆಯಲು ಅವನ ಅನ್ವೇಷಣಾ ಮನೋಭಾವ ಮುಖ್ಯ ಕಾರಣ. ಹೊಸತನ್ನು ಹುಡುಕುವುದು ಅವನ ಹುಟ್ಟುಗುಣ. ಹಾಗೆ ಹುಡುಕಿ, ನಮ್ಮ ಅರಿವಿನ ಪ್ರಪಂಚ ಹೆಚ್ಚಿಸಿದ ಮಹನೀಯರ ಕಾರಣ ನಮ್ಮ ಬದುಕು ಸಹನೀಯವಾಗಿದೆ. ಉದಾ: ಚಕ್ರವನ್ನೇ ಕಂಡು ಹಿಡಿಯದಿದ್ಧಿದ್ದರೆ ನಮ್ಮ ಬದುಕು ಹೇಗಿರುತ್ತಿತ್ತು ಒಮ್ಮೆ ಯೋಚಿಸಿ.

ಯಾರಿಗಾದರೂ ಏನನ್ನು ಮಾಡದೆ, ಯಾವುದೇ ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗದೆ, ಬದುಕಿನ ಅರ್ಥವನ್ನು ತಿಳಿಯುವ ಗೊಡವೆಗೆ ಹೋಗದೆ, ಸುಮ್ಮನೇ ಉ.ಮ.ಹೇ ಮಾತ್ರ ಮಾಡಿಕೊಂಡು ಒಂದು ದಿವಸ ಸಾಯೋಣ ಎಂದು ಅನಿಸಿದರೆ ಅವರು ಹಾಗೆಯೇ ಮಾಡಬಹುದು. ಈ ಹಿಂದೆ ಹಾಗೆ ಮಾಡಿದ್ದಾರೆ. ಈಗಲೂ ಮಾಡುವರಿದ್ದಾರೆ. ಮುಂದೆಯೂ ಮಾಡುವವರು ಇರುತ್ತಾರೆ.
- ನಾಸೋ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 1, 2008 - 2:52pm — shreekant.mishrikoti

ಉ: ಜೀವನದಲ್ಲಿ ನಮ್ಮದೇ ದಾರಿ ಕಂಡುಕೊಳ್ಳಬೇಕೇ ?

shreekant.mishrikoti's picture

ಸೋಮಾರಿತನಕ್ಕೊಂದು ತಾತ್ವಿಕ ಸಮರ್ಥನೆ Smiling ಅಂತ ಇಲ್ಲಿ ಈ ಆಯ್ದ ಭಾಗ ಹಾಕಿದ್ದೀನಿ !

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಸ್ತಕನಿಧಿ - ಯದ್ವಾ ತದ್ವಾ - ಒಳ್ಳೆಯ ಹಾಸ್ಯ - ಅ.ನಾ.ಕಸ್ತೂರಿಯವರ ಪುಸ್ತಕ
  • ನನ್ನ ಲೇಖನಗಳ ಯಾದಿ
  • ಬಿಡುವಿನ ವೇಳೆಯಲ್ಲಿ ಒಂದಿಷ್ಟು ಕನ್ನಡ ಸೇವೆ
  • ಸ್ವಂತ ಕಾಲ ಮೇಲೆ ನಿಲ್ಲುವುದು
  • ಆಮೆ ಮತ್ತು ಮೊಲ -ಒಂದು ನೀತಿ ಕಥೆ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 165 ಅತಿಥಿಗಳು ಆನ್ಲೈನ್ ಇರುವರು.


ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ |
ಸಂದೆರಡು ವರ್ಗವರಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator