ಗೆಳೆಯನಿಗಾಗಿ
ನನ್ನಯ ಗೆಳೆಯ ಹಾಸ್ಯದ ಸರದಾರ
ತಿಳಿ ಹಾಸ್ಯ ಚುಟುಕುಗಳ ಹರಿಕಾರ
ಬಾನಂಗಳ ಕಾದ ಸುಮನಸ
ಹರಿಸುವರು ಸಂಪದದಿ ನವರಸ
ಮಾಡಿದರಿವರ ಸಹವಾಸ
ಅನ್ನುವರಿವರು ನಕ್ಕು ನಗಿಸುವುದಕೇ
ಸಮಯ ಸಾಲದಿರುವಾಗ
ದುಡುಕು ಬಿಗುಮಾನಗಳೇಕೆ ಸಖೀ
ಮತ್ತೊಮ್ಮೆ ಹೇಳುವರು
ತಡೆಯಲಾಗದೆ
ಚಿಣ್ಣರ ಸುಖವ ಕಂಡು
ಅಳಲಾಗದು ಸಖೀ…!!!
ಈ ಹಿರಿತನ ಏಕೆ ಬೇಕಿತ್ತು
ಸಾಕಿರುವರು ಮನೆಯಲಿ
ಕೋಗಿಲೆಯ ಮರಿಯ
ಗೊತ್ತಿಲ್ಲದೇ ಪಾಪ
ಅಳಿಯನೆಂಬ ಕಾಗೆ ಕಾಯುತಿದೆ
ಬರಲು ಮರಿ ಹೊರಗೆ
ಅಂದು ಅಂದರು
ನೀನಾರೋ ನಾನಾರೋ
ನಂತರದಲ್ಲಿ
ನಾನು ರವಾನಿಸೋ
ಪ್ರೀತಿಯ ಎಸ್ಸೆಮ್ಮೆಸ್ ಗಳಿಗೆ,
ನೀನು ಉತ್ತರಿಸದಿದ್ದರೂ ಚಿಂತಿಲ್ಲ,
ನನಗೆಳ್ಳಷ್ಟೂ ಬೇಸರವಿಲ್ಲ;
ಈಗ ಅಂತಾರೆ
ನೀ ನನ್ನ ಜೀವ
ನನಗೂ ಗೊತ್ತು
ಈ ಸಂಬಂಧಗಳೇ ಹೀಗೆ
ಬೆಳೆದು ಬಿಡುತ್ತವೆ ಎಲ್ಲಾದರೂ
ಮನ ಬಂದ ಹಾಗೆ
ಕಾಯುತ್ತಿರುವೆ,
ಎಂದನ್ನುವರೋ ಬಾ ಗೆಳೆಯ ನನ್ನೆದೆಯ ಅರಮನೆಗೆ
ನಿನಗಾಗಿ ತೆರೆದಿದೆ ಬಾಗಿಲು…
ನನ್ನ ಹಿರಿಯ ಗೆಳೆಯ ಆಸುಹೆಗ್ಡೆಯವರಿಗೆ ನಾನು ಬರೆದದ್ದು ಮತ್ತು ನನ್ನ ಪ್ರಥಮ ಕನ್ನಡ ಕವಿತೆ
ಇಲ್ಲಿ ಬಳಕೆಯಾಗಿರುವುದು “ಬೆಣ್ಣೆಮಸಾಲೆ ದೋಸೆ” ಲೋಹಿತರ “ಲೋಹಿತತ್ರಾಂಶ“
- sinchana's blog
- Login or register to post comments
- 304 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಗೆಳೆಯನಿಗಾಗಿ
ಸಂದೀಪ,
ನೀವೇನೋ ಕವನ ಬರೆದು ಹಾಕಿದಿರಿ ಅದು ನಿಮ್ಮ ಮರ್ಜಿ
ಹಲವರಿಗಾದೀತಿದು ಪಥ್ಯ ಇನ್ನು ಕೆಲವರಿಗಾದೀತು ಅಲರ್ಜಿ
ಆಸುಮನದ ಮಾತುಗಳನು ಸಾಕಷ್ಟು ಮೆಚ್ಚಿಕೊಂಡಂತಿದೆ ನೀವು
ನಿಮ್ಮ ನಿರೀಕ್ಷೆಯ ಈ ಮಟ್ಟದಲೇ ಉಳಿದರೆ ಸಾಕು ಸದಾ ನಾವು
ಗೆಳೆತನಕೆ ಅರ್ಥ ಬರುವುದು ಗೆಳೆಯರಂತೆ ಗೆಳೆತನಕೆ ಬೆಲೆಕೊಟ್ಟಾಗ
ಗೆಳೆತನ ಬೆಳೆಯುವುದು ಗೆಳೆಯರನ್ನೆಮ್ಮ ಹೃದಯದೊಳಗೆ ಇಟ್ಟಾಗ
- ಆತ್ರಾಡಿ ಸುರೇಶ ಹೆಗ್ಡೆ.
ಉ: ಗೆಳೆಯನಿಗಾಗಿ
ಗೆಳೆಯ,
ನಾನಿಷ್ಟೆ ಹೇಳಬಲ್ಲೆ
ಅವರವರ ಭಾವಕ್ಕೆ ಅವರವರ ಭಕುತಿಗೆ,
ಇಂತೀ ನಿಮ್ಮ ಪ್ರೀತಿಯ
ಸಂದೀಪ