ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › sinchanabhat ರವರ ಬ್ಲಾಗ್

ಯಾವುದು ರಕ್ಷಣೆ ???

March 9, 2006 - 7:53am — sinchanabhat

ಮಂಜು ಮುಸುಕಿದ ಮಾಂತ್ರಿಕ ಕನ್ನಡಿಗೆ ಮುಖವೊಡ್ಡುವದೇ? ದೀಪದ ಜ್ವಾಲೆ ಬಿರುಗಾಳಿಗೆ ಸಿಲುಕಬಾರದಲ್ಲವೇ? ಒಟ್ಟಿನಲ್ಲಿ ಪಯಣ.ಕೊನೆಗೊಂದು ದಿನ ಸತ್ತವರ ಗೋರಿ ಮಾಡಿ ಬಧ್ರತೆಯ ಕೋಟೆ ಕಟ್ಟುವುದು.ಈಗ ಸದ್ಯಕ್ಕೆ ಕೋಟೆಯ ಕನಸು.ಮಸಣದಲ್ಲಿ ದೇಗುಲ ತಲೆ ಎತ್ತಿದೊಡನೆ ನೋವು ಮರೆಯಾಗಬಹುದೆ?ಭಕ್ತಿ ಮನೆ ಮಾಡುವುದೇ?
ಇಂದು ನಾವು ಸಾಗುತ್ತಿರುವ ದಾರಿ ನೋಡಿದರೆ ಸಿಂಗರಿಸಲು ಸನ್ನದ್ಧರಾಗುವ ಹೊತ್ತಿಗೆ ,ಸಿಂಗರಿಸಿಕೊಳ್ಳುವುದು ಕೊನೆಗೆ ಶವವೇನೋ ಅನಿಸುವಂತಿದೆ.

ಇಂದು ದೇಶದಲ್ಲಿ ಭಯೋತ್ಪಾದನೆ ಎಂಬುದು ಬರಿ ಧನಿಯೆತ್ತಿರುವದಲ್ಲಾ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.ಈಗ ಸಧ್ಯದಲ್ಲೇ ಮೊದಲು ದೆಲ್ಲಿ ಸ್ಫೋಟದಿಂದ ಹೊರಟು ಬೆಂಗಳೂರಿನ IISc ಕಡೆ ತಿರುಗಿ ಇಂದು ಕಾಶಿಯಲ್ಲಿನ ಸರಣಿ ಸ್ಫೋಟದಲ್ಲಿದೆ,ಇನ್ನು ಹಲವೆಡೆಗೆ ಕೈಚಾಚಲು ಸಿದ್ಧವಾಗಿ ನಿಂತಿರಬಹುದು. ಅಮಾನವೀಯ ಭಯೋತ್ಪಾದನಾ ಕ್ರುತ್ಯಗಳಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ.ಬದುಕಿನ ಪ್ರತಿ ಕ್ಷಣವನ್ನೂ ಸಾವಿನ ದವಡೆಯಲ್ಲಿ ನಿಂತಂತೇ ಬಾಳಬೇಕಾಗಿದೆ.

ಈ ಭಯೋತ್ಪಾದನೆ ಎಂಬುದು ಅಸಂತುಷ್ಟ ಆತ್ಮಗಳ ಕೃತ್ರಿಮ ಹೋರಾಟ.ಜಿಹಾದಿಗಳೆಂದು ಹಣೆಪಟ್ಟಿಹಾಕಿಕೊಳ್ಳುವ ಇವರು ಯೋಚಿಸಿನೋಡಿದರೆ ಧರ್ಮದಕುರಿತು 'ಅಂಧ'ರು. ಧರ್ಮವೆಂಬುದು ಕಾಯುತ್ತದೆಯೇ ಹೊರತು ಕೊಲ್ಲುವುದಲ್ಲ.ಈ ಭಯೋತ್ಪಾದಕರೆಂಬ ಧರ್ಮದ ವ್ಯಭಿಚಾರಿಗಳೊಂದಿಗೆ ನಾವು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಗೋಲಿ ಆಡುತ್ತಿದ್ದೇವೆ.ನಮ್ಮ ಸರಕಾರವೆಂಬುದು ರಕ್ತಪಾತಗಳ ಮುಚ್ಚಲು ಮಣ್ಣುಸುರಿಯುತ್ತಿದೆಯೇ ಹೊರತು ಜೀವ ಉಳಿಸುವ ಕ್ರಮ ಕೈಗೊಳ್ಳುತ್ತಿಲ್ಲ.

ಪ್ರತಿಯೊಂದು ಇಂತಹ ಭಯಾನಕ ಕೃತ್ಯಗಳಿಗೂ ಶಂಖೆಗಳೆಂಬ ಮುಖವಾಡಹಾಕಿ ಕುಳಿತಿರುವ ನಮ್ಮ ಭದ್ರತಾ ವ್ಯವಸ್ಥೆ ಎಚ್ಚರಾಗಿರುವುದು ಸತ್ತವರ ಅಂಕೆ ಸಂಖ್ಯೆ ಜನಸಾಮಾನ್ಯರಿಗೆಲ್ಲ ನೆನಪಿರುವವರೆಗೆ ಮಾತ್ರ ! ಅದಾರನ್ನೋ ಹಿಡಿದುತಂದು ಇನ್ನೇನು ಎಲ್ಲವೂ ನಮ್ಮ ಕೈಯ್ಯಲ್ಲಿದೆ ಎಂಬಂತೆ ಫೋಸುಕೊಡುತ್ತಾರೆ.ಆದರೆ ಕೊನೆಗೆ ಕೊನೆತನಕ ನಡೆಯುತ್ತಿರುವುದು ಮಂಪರು ಪರಿಕ್ಷೆ ಮಾತ್ರ.

ಇಂದು ನಾವು ಅಮೆರಿಕಾ,ಪಾಕಿಸ್ತಾನ,ಚೈನಾ ಹೀಗೆ ಹಲವು ದೇಶಗಳ ಸಂಬಂಧ ಸುದಾರಿಸಲು ಯೋಚಿಸುತ್ತಿದ್ದೇವೆ.ಇದು ಶಾಂತಿಯೆಂಬ ಮೂಲ ಮಂತ್ರಕ್ಕೆ ಏನಾದರೂ ಸಹಾಯವಾಗಬಹುದೆಂಬ ಕಲ್ಪನೆಯಿದ್ದರೂ,ಇದು ನಮ್ಮೊಳಗೆ ಹಬ್ಬುತ್ತಿರುವ ಬೆಂಕಿ ಆರಿಸಲು ಬಾವಿತೋಡುವ ಯತ್ನ.ಇಂದು ಶಾಂತಿಯೆಂಬುದು ಜಪದ ಮಾಲೆಯೊಳಗಿನ ರುದ್ರಾಕ್ಷಿಯಲ್ಲಿದ್ದಿರಬೇಕು ಅಷ್ಟೇ!

ನಾವುರಕ್ಷಾಣಾ ವ್ಯವಸ್ತೆ ಅಂದರೆ ಗಡಿ ಪ್ರದೇಶಗಳನ್ನು ಕಾಯಲೆಂದೇ ಇರುವುದೆಂದು ತಪ್ಪುತಿಳಿದಂತಿದೆ,ಹೋಗಲಿ ಅದಕ್ಕಾದರೂ ಸರಿಯಾದ ವ್ಯವಸ್ಥೆಯಿದಯೇ? ಇಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಇಲ್ಲಾ.ಅಕ್ರಮ ವ್ಯವಹಾರಕ್ಕೆ ಸೂರಾಗುವ ರಕ್ಷಣಾ ವ್ಯವಸ್ಥೆ ಇರುವ ತನಕ ನಾವು ಮುಂದುವರೆಯಲಾರೆವು ಹಳ್ಳಿಯಿಂದ ದಿಲ್ಲಿಯವರೆಗೆ ಉತ್ತಮ ರೀತಿಯ ಬದಲಾವಣೆಗಳಾಗಿ,ಪ್ರತಿ ವಿಷಯದಲ್ಲೂ ಜಾಗರೂಕರಾಗದ ಹೊರತು ಭಯೋತ್ಪಾದನೆಗೆ ಕಡಿವಾಣ ಬೀಳದು. ಪ್ರಭಲ ರಕ್ಷಣಾ ವ್ಯವಸ್ಥೆಯಿಂದ ಮಾತ್ರ ಇದನ್ನು ಸದೆಬಡಿಯಲು ಸಾದ್ಯ.

ಭಯೋತ್ಪಾದನೆ ಇಡೀ ದೇಶವನ್ನು ನುಂಗಿಹಾಕುವ ಮೊದಲು ನಾವು ಎಚ್ಚೆತ್ತುಕೊಳ್ಳಬೇಕು. ಜಿಹಾದ್ ನ ಮುಸುಕಿನೊಳಗಿನ ಭಯೋತ್ಪಾದಕರ ಸೊಕ್ಕಡಗಿಸುವ ಕಾರ್ಯವನ್ನು ಮೊದಲು ಮಾಡೋಣಾ.

  • ಪ್ರಚಲಿತ
~.~
  • sinchanabhat ರವರ ಬ್ಲಾಗ್
  • Login or register to post comments
  • 651 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 10, 2006 - 10:32am — ಶಿವ

ಪ್ರತಿಕ್ರಿಯೆ

ಶಿವ's picture

ಡಾ. ಮುಮ್ತಾಜ್ ಆಲಿ ಖಾನ್ ಅವರು ಕನ್ನಡಪ್ರಭಕ್ಕೆ ಬರೆದ ಪತ್ರ ಓದಿದ್ದೀರ. ಅದರ ಲಿಂಕ್ ಇಲ್ಲಿ ಕೊಟ್ಟಿದ್ದೇನೆ.
http://www.kannadaprabha.com/NewsItems.asp?ID=KPE20060309100545&Title=Editorial+Page&lTitle=%D1%DAM%AE%DB%A5%DAP%DE%BE%DA%DF&Topic=0&Dist=0
 

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇರಿ ಆನಂದದೇ
  • ಇರಿ ಆನಂದದೇ
  • ಕೈಯ್ಯಲ್ಲಿನ ಜಗತ್ತು
  • ಪ್ರಧಾನಿಯ ದಿಟ್ಟಹೆಜ್ಜೆ
  • ಕನ್ನಡ ದೇಸಿ ಸಂಸ್ಕೃತಿ
Syndicate content

ಲೇಖಕರು

sinchanabhat's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:51pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:48pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
  • uniquesupri
    ಉ: ಇದು ಬರಿ ಬೆಳಗಲ್ಲೋ...
    July 24, 2008 - 11:37pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:12pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator