ಸೇಡು!
ದಡವ ಅಪ್ಪಿ ಹರಿವ ನದಿಯ ಎದೆಯಲ್ಲಿ
ಮೀನುಗಾರಾನ್ಯಾರೋ ಎಂದೋ
ಊರಿದ ಬೆಂಕಿ ಇಂದು ಸಣ್ಣ ಎರೆಹುಳುಗಳಾಗಿ
ಮೀನುಗಳನ್ನು ಗಾಳಕ್ಕೆ ಸಿಕ್ಕಿಸುತ್ತಿವೆ....

- sprasad ರವರ ಬ್ಲಾಗ್
- Login or register to post comments
- 374 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ದಡವ ಅಪ್ಪಿ ಹರಿವ ನದಿಯ ಎದೆಯಲ್ಲಿ
ಮೀನುಗಾರಾನ್ಯಾರೋ ಎಂದೋ
ಊರಿದ ಬೆಂಕಿ ಇಂದು ಸಣ್ಣ ಎರೆಹುಳುಗಳಾಗಿ
ಮೀನುಗಳನ್ನು ಗಾಳಕ್ಕೆ ಸಿಕ್ಕಿಸುತ್ತಿವೆ....




ಪ್ರತಿಕ್ರಿಯೆಗಳು
ಉ: ಸೇಡು!
ಗಾಣ ಅಲ್ಲ..ಗಾಳ. ಮತ್ತೆ ನನ್ಗೆ ಇಲ್ಲಿ ಯಾರ ಸೇಡು ಯಾರ ಮೇಲೆ ಅಂತ ಗೊತ್ತಾಗ್ಲಿಲ್ಲ.ಬೇಜಾರು ಮಾಡಿಕೊಳ್ಳದೆ ಬಿಡಿಸಿ ಹೇಳಿ ಪ್ರಸಾದ್..
ಉ: ಸೇಡು!
ಅಶ್ಮ್ಯಾ!
ಥ್ಯಾಂಕ್ಸ್, ತಿದ್ದಿದ್ದೇನೆ!
ಇಲ್ಲಿ ಸೇಡು ಅನ್ನುವುದು ಯಾವುದರ ವಿರುದ್ದ ಬೇಕಾದರೂ ಆಗಬಹುದು, ನೀರಿಗೆ ಬೆಂಕಿ ಇಡಲು ಬಿಟ್ಟ ಮೀನುಗಳ ವಿರುದ್ದವಾಗಿರಬಹುದು, ಎರೆಹುಳುಗಳಾಗಿರುವ ಬೆಂಕಿಯ ವಿರುದ್ದವಿರಬಹುದು ಅಥವಾ ಇನ್ನೆನೋ.. ಕವನವೆಂದರೆ ಅಷ್ಟೆ ಅಲ್ಲವೆ ನೀರಿನಂತೆ, ನಮ್ಮ ಮನಸ್ಸೆಂಬ ಪಾತ್ರೆಯ ಆಕಾರವನ್ನು ಬಣ್ಣವನ್ನೂ ಪಡೆದುಕೊಳ್ಳುತ್ತದೆ. ನಮ್ಮ ಓದಿಗೆ, ನಿಲುಕಿಗೆ ಎಷ್ಟು ನಿಲುಕುತ್ತದೋ ಅಷ್ಟು! ನಾನು ಬರೆಯುವಾಗ ಇದೆಲ್ಲವನ್ನೂ ಖಂಡಿತಾ ಯೋಚಿಸಿರಲಿಲ್ಲ. ಅಥವ ಯೋಚಿಸಿ ಬರೆದಿರಲಿಲ್ಲ.. ಎಲ್ಲಾ ಒಂದು ಕ್ಷಣಗಳಲ್ಲಿ ನಡೆದು ಹೋಗಿದ್ದ, ಒಂದು ಫೋಟೋದಂತೆ!
ಇನ್ನೂ ಪ್ರಯತ್ನಪಟ್ಟರೆ ಇನ್ನೇನೋ ಹೊಳೆಯಬಹುದು... ಸಾಕು ಇಲ್ಲಿಗೆ ನಿಲ್ಲಿಸುತ್ತೇನೆ!!
ನಿಮಗೆ ಏನಾದರೂ ಹೊಸತು ಹೊಳೆದರೆ ನನಗೂ ತಿಳಿಸಿ...
ಉ: ಸೇಡು!
ಕವಿತೆ ಅನ್ನೋದು ಮನಸ್ಸಿಗೆ ಥಟ್ ಎಂದು ಹೊಳೆದ ವಿಚಾರ. ತುಂಬ ಯೋಚಿಸಿ, ತಿದ್ದಿ ಬರೆದರೆ ಅದು ಕವಿತೆಯಾಗದೇ ಗದ್ಯವಾಗುತ್ತದೆ.
ಪ್ರತಿಭಾ ನಂದಕುಮಾರ್ ಪ್ರಕಾರ, ತುಂಬ ಯೋಚಿಸಿ ಬರೆದರೆ ಅದು ಕವಿತೆಯಾಗುವುದಿಲ್ಲ. ಕತೆಯಾಗಬಹುದು, ಭಾವನೆಯ ಗದ್ಯವಾಗಬಹುದೇ ಹೊರತು ಕಾವ್ಯವಾಗುವುದಿಲ್ಲ. ಬರೆದಾದ ನಂತರ ಒಂದಿಷ್ಟು ತಿದ್ದಬಹುದು. ಆದರೆ ಮೂಲ ಬದಲಾಯಿಸಲು ಆಗದು.
ಅನಿಸಿದಂತೆ ಬರೆಯಿರಿ, ಕಾಗುಣಿತ ದೋಷಗಳಾಚೆ ನಿಜವಾದ ಕಾವ್ಯದ ಸೊಗಸು ಹುದುಗಿರುತ್ತದೆ. ಅದು ಕಚ್ಚಾಕಚ್ಚಾ ಆಗಿದ್ದರೇ ಅಚ್ಛಾ!
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...