ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › srinivasc ರವರ ಬ್ಲಾಗ್

ಕೆರೆ

April 8, 2008 - 3:49pm — srinivasc

ಅದೊಂದು ಪುಟ್ಟ ಹಳ್ಳಿ. ಆ ಹಳ್ಳಿಯಲ್ಲಿ ಹೆಚ್ಚುಕಡಿಮೆ ಸಮುದ್ರವೇ ಎನ್ನಬಹುದಾದಂಥ, ಆ ಪುಟ್ಟ ಹಳ್ಳಿಯನ್ನೂ ಮೀರಿಸುವಂತ ಒಂದು ಬೃಹದಾಕಾರದ ಕೆರೆ. ಅದು ಹಳ್ಳಿಯಾದರೂ ತಿರುಪತಿ ತಿಮ್ಮಪ್ಪನಿಗೆ ದಿನನಿತ್ಯ ಬರುವ ವರಮಾನಕ್ಕಿಂತ ದ್ವಿಗುಣವಾಗಿ ಸುರಿಯುವ ಹಣದ ಮಳೆ. ಕೆರೆಯ ತುಂಬಾ ತೆಪ್ಪಗಳು, ತೆಪ್ಪಗಳ ತುಂಬಾ ನಾವಿಕರು ಅಥವಾ ಬೆಸ್ತರು. ಅವರ ಕಾಲಕೆಳಗೆ ವಿಲಿವಿಲಿ ಒದ್ದಾಡುವ ಲೆಖ್ಖಕ್ಕೆ ಸಿಗದಷ್ಟು ಮೀನುಗಳು. ಆ ಬೆಸ್ತರು ಸದಾ ಕೆರೆಯೊಳಗೆ ಮನೆ ಮಾಡಿದ್ದಾರೇನೋ ಎಂಬಂತೆ ಭಾಸವಾಗುತ್ತಿತ್ತು. ಬತ್ತಲಾರದ ಕೆರೆ, ಖಾಲಿಯಾಗದ ಮೀನುಗಳು, ಸದಾ ಸುರಿಯುತ್ತಲೇ ಇರುವ ಹಣದ ಮಳೆ, ಇನ್ನೇನು ಬೇಕು ಆ ಪುಟ್ಟ ಹಳ್ಳಿಗೆ ನೆಮ್ಮದಿಯಿಂದ ಇರಲು. ಆದರೆ ಈಗ ಅಲ್ಲಿ ಬೆಸ್ತರಿಲ್ಲ, ತೆಪ್ಪಗಳಿಲ್ಲ.

* * *

ಸುಮಾರು ನೂರು ಇನ್ನೂರು ಎಕರೆಯಷ್ಟು ಸ್ಥಳದಲ್ಲಿ ಎದ್ದು ನಿಂತಿರುವ, ಆಗಸಕ್ಕೆ ಮುತ್ತಿಕ್ಕುತ್ತಿರುವಂತ ಕಟ್ಟಡಗಳು, ಸಮುಚ್ಛಯಗಳು, ಹೊಟೇಲ್, ಸಿನೆಮಾ ಥೇಟರ್‍ಗಳು, ಹತ್ತಾರು ಈಜು ಕೊಳಗಳು, ಪಬ್ ಹಾಗೂ ಡ್ಯಾನ್ಸ್ ಬಾರುಗಳು. ಸದಾ ಮದ್ದು ಗುಂಡಿನ ಮತ್ತಿನಲ್ಲಿರುವ ಗಂಡು ಮಕ್ಕಳು. ಅರೆಬೆತ್ತಲೆ ಲಲನಾಮಣಿಯರು. ಮೃತ್ಯು ಕೂಪಗಳು, ಪೊಲೀಸರ ಕೈಗಳು ಮತ್ತೂ ಹಣದ ಹೊಳೆ. ಇವಿಷ್ಟನ್ನೂ ಮೀರಿ ಇರದ ನೆಮ್ಮದಿ. ಆದರೆ ಇಲ್ಲಿರುವವರು ಸಾಫ್ಟ್‍ವೇರ್ ಇಂಜಿನಿಯರುಗಳು, ಸಿನೆಮಾ ನಟರು, ಪೊಲೀಸರು, ರಾಜಕಾರಣಿಗಳು ಮತ್ತು ಅವರ `ಕುಟುಂಬಗಳು'.

* * *

``ನಿಮ್ಮೂರಲ್ಲಿ ಹೇರಳವಾಗಿ ಹಣ ಸಂಪಾದನೆ ಮಾಡ್ತಿರೋ ಒಂದು ಕೆರೆ ಇದೆಯಂತೆ?'' ಕೇಳಿದ್ದ ವಿದೇಶಿ ವ್ಯಾಪಾರಿ.

``ಹೂಂ... ಇದೆ...'' ಎಂದ ವಿದೇಶಕ್ಕೆ ಹೋಗಿದ್ದ ಹಣಕಾಸಿನ ಸಚಿವ.

``ನಾನದನ್ನ ನೋಡಬೇಕಲ್ಲ''

``ನೋಡಿ ಏನ್ ಮಾಡ್ತೀರಿ?''

``ಎಷ್ಟು ಹಣ ಬೇಕು? ಸಂಕೋಚ ಬೇಡ ಕೇಳಿ''

ಆಗ ಹೊರಟಿತ್ತು ಇಬ್ಬರ ಮೊಗದಲ್ಲೂ ಒಂದು ಕ್ರೂರವಾದ ಮಂದಹಾಸ. ಇಬ್ಬರೂ ಗಾಜಿನ ಲೋಟಗಳಿಗೆ ವಿಸ್ಕಿ ಮತ್ತು ಸೋಡಾ ಬೆರೆಸಿಕೊಂಡು

``ಚಿಯರ್‍ಸ್'' ಎಂದಿದ್ದರು.

  • ಸಣ್ಣ ಕತೆ
~.~
  • srinivasc ರವರ ಬ್ಲಾಗ್
  • Login or register to post comments
  • 225 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 9, 2008 - 12:08pm — girish.rajanal

ಉ: ಕೆರೆ

girish.rajanal's picture

ಇದು ಬೆಂಗಳೂರಿನ ಕಥೆ ಅಂತ ಅನ್ನಿಸುತ್ತೆ (ಬಹುತೇಕ ಎಲ್ಲ ದೊಡ್ಡ ಪಟ್ಟಣಗಳ ಕಥೆನೂ ಆಗಿರಬಹುದು)
ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸ್ಮರಣೆ - ಕೆ ಪಿ ಪೂರ್ಣಚಂದ್ರ ತೇಜಸ್ವಿ: ತೇಜಸ್ವಿಯವರ ಮನೆಯ ಪಕ್ಕದಲ್ಲೊಂದು ಕೆರೆ
  • ಚಿತ್ರದುರ್ಗದ ಸಂತೆ ಹೊಂಡದ ಹೂಳುತೆಗೆಯುವ ಕಾರ್ಯ !
  • ನಾ ಸುತ್ತಿದ ಹಳ್ಳಿಗಳು
  • ಎಲೆ ತಾವರೆ, ಹೂದಾವರೆ...
  • ಹಣ - ಮಾಯ್ಸನ ವಚನ೧
Syndicate content

ಲೇಖಕರು

srinivasc's picture

ಪರಿಚಯ

ನಾನು ಶ್ರೀನಿವಾಸ ಚಂದ್ರಶೇಖರ. ನನ್ನನ್ನ ಜನ ಶ್ರೀಚಂದ್ರ ಅಂತಲೂ ಕರೀತಾರೆ. ಸಾಹಿತ್ಯ, ಚಲನಚಿತ್ರ ಮತ್ತು ರಂಗಭೂಮಿ, ಛಾಯಾಗ್ರಹಣ, ಚಾರಣ ಇವೆಲ್ಲಾ ನನ್ನ ಹುಚ್ಚು. ಇಂಡಿಯಾಇನ್ಫೋಲೈನ್‍ನಲ್ಲಿ ನಾನು ಅಕೌಂಟೆಂಟ್ ಆಗಿ ಕೆಲಸ ಮಾಡ್ತಿದ್ದೇನೆ. ಕಥೆ, ಕವನ ಹಾಗೂ ಕೆಲವು ನಾಟಕಗಳನ್ನು ಬರೆದಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
  • ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
  • ಡೈರಿಯ ಕೆಲವು ಹಾಳೆಗಳು - ಭಾಗ ೯
  • ಅವಮಾನ್ ಅಂದರೆ ಯಾರು ? He man :-)
  • ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
  • ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 607 ಅತಿಥಿಗಳು ಆನ್ಲೈನ್ ಇರುವರು.


ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದೊಡದೇನು ಕಾಲು ಕುಂಟಿರಲೇನು
ಊರ ನೆನಪೇ ಬಲವು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator