ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

srinivasps ರವರ ಬ್ಲಾಗ್

’ಮಿಲೇ ಸುರ್’ ಹಾಡಿಗೊಂದು ಹೊಸ ಸ್ವರ-ಹೊಸ ನುಡಿ...

೧೯೮೮ರಲ್ಲಿ ’ಮಿಲೇ ಸುರ್ ಮೇರಾ ತುಮ್ಹಾರ’ ಎಂಬ ಹಾಡು ಟಿ.ವಿಯಲ್ಲಿ ಬರುತ್ತಿದ್ದಂತೆ ನಾವುಗಳೆಲ್ಲಾ ಗೋಡೆಗೆ ಅಂಟುವ ಹಲ್ಲಿಗಳಂತೆ ಟಿ.ವಿಗೆ ಅಂಟಿಕೊಂಡು ಬಿಡುತ್ತಿದ್ದೆವು. ಹಾಡಿನಲ್ಲಿ ಕನ್ನಡವನ್ನು ಕೇಳಿದಾಗಲಂತೂ ಮೈ-ಪುಳುಕ. ಚಿಕ್ಕ ಮಕ್ಕಳಾಗಿದ್ದ ನಮಗೆ, ಭಾರತದ ಸಂಸ್ಕೃತಿಯ ಕನ್ನಡಿಯಂತಿದ್ದ ಈ ಹಾಡು ಕಣ್ಣಿಗೆ ಹಬ್ಬವೇ ಸರಿ.  ಮುಂದೆ ಓದಿ »

ಕೊರೆತ

 

ಕಡಲ ಕೊರೆತಕೇನೋ
ಇಡಬಹುದು ಬಂಡೆಗಳ...
ನಿನ್ನ ಮೌನದಿಂದ
ಹೃದಯದಲುಂಟಾಗುವ ಕೊರೆತಕೆ
ಏನು ಮಾಡಲಿ, ಹೇಳೇ ಸಖೀ???

--ಶ್ರೀ

 

ಬಯ್ಗುಳ ತಿನ್ನುವುದು ಯಾರಿಗೆ ಮೆಚ್ಚು?

ಚೋಟು ಹುಡುಗನ ಕೇಳಿ ಬಯ್ಗುಳದ ಮೋಜನ್ನು!
ತುಂಟಾಟವಾಡುವ ತಂಟೆಕೋರನ ಕೇಳಿ...
ತಡೆಯಬಲ್ಲಿರೇ ನೀವು ಪುಟ್ಟ ಪೋರನ ದಾಳಿ?
ನೂರಾರು ಬಾರಿ ಬಯ್ಗಳವ ತಿಂದರೂ
ಕೆಣಕುವನು ನಿಮ್ಮನ್ನು ಮತ್ತೊಂದು ಬಾರಿ, ಮಗದೊಂದು ಬಾರಿ!

--ಶ್ರೀ
(೧-ಡಿಸೆಂಬರ್-೨೦೦೯)

ನುಡಿ ಸಿಡಿಲು

ಕಟಕಿಯಾಡಿದ
ಹುಡುಗನ
ನಡುಬೀದಿಯಲಿ
ಹಿಡಿಶಾಪ ಹಾಕಿದರೂ, ಅವ
ನುಡಿದ ಮಾತುಗಳು
ಗುಂಡಿಗೆಯಲಿ
ಗುಡುಗಿತ್ತು...

--ಶ್ರೀ
(೧೪ - ನವಂಬರ್ - ೨೦೦೯ )

ಓ ’ಸಾಥಿ’ ರೇ, ತೇರೆ ಬಿನಾ ಭಿ ಕ್ಯಾ ಜೀನಾ!

ಕಿಶೋರ್ ಕುಮಾರ್ ಹಾಡಿರುವ ಅಚ್ಚುಮೆಚ್ಚಿನ ಹಾಡುಗಳಲ್ಲಿ ಈ ಹಾಡೂ ಒಂದು...

ಹಾಗೂ ’ಗೀತಾ’ ಚಿತ್ರದ ’ಜೊತೆ ಜೊತೆಯಲಿ’ ಹಾಡೂ ಅಂದ್ರೆ ನನಗೆ ತುಂಬಾನೇ ಇಷ್ಟ!  ಮುಂದೆ ಓದಿ »

Syndicate content